ಟಿವಿ ನ್ಯೂಸ್ ಚಾನೆಲ್‌ಗಳ ಲೋಗೊ ಬಳಸಿ ನಕಲಿ ಸುದ್ದಿಗಳನ್ನು ಹರಡುತ್ತಿದ್ದ ಭಾರತದ 18, ಪಾಕ್ ಮೂಲದ 4 ಯೂಟ್ಯೂಬ್ ಚಾನೆಲ್‌ಗಳನ್ನು ನಿರ್ಬಂಧಿಸಿದ ಮಾಹಿತಿ-ಪ್ರಸಾರ ಸಚಿವಾಲಯ

ನವದೆಹಲಿ: ಮಾಹಿತಿ ಮತ್ತು ಪ್ರಸಾರ ಸಚಿವಾಲಯವು 18 ಭಾರತೀಯ ಮತ್ತು ನಾಲ್ಕು ಪಾಕಿಸ್ತಾನ ಮೂಲದ ಯೂ ಟ್ಯೂಬ್ ಸುದ್ದಿ ಚಾನೆಲ್‌ಗಳನ್ನು ನಕಲಿ ಸುದ್ದಿ ಹಾಗೂ ಭಾರತ ವಿರೋಧಿ ವಿಷಯವನ್ನು ಪೋಸ್ಟ್ ಮಾಡಿದ್ದಕ್ಕಾಗಿ ನಿರ್ಬಂಧಿಸಿದೆ. ವೀಕ್ಷಕರನ್ನು ದಾರಿತಪ್ಪಿಸಲು ಈ ಯೂ ಟ್ಯೂಬ್ ಚಾನೆಲ್‌ಗಳು ಟಿವಿ ನ್ಯೂಸ್ ಚಾನೆಲ್‌ಗಳ ಲೋಗೊಗಳು ಮತ್ತು ಸುಳ್ಳು ಥಂಬ್‌ನೇಲ್‌ಗಳನ್ನು ಬಳಸಿಕೊಂಡಿವೆ ಎಂದು ಸಚಿವಾಲಯ … Continued

ಮುಂದಿದೆ ಸವಾಲಿನ ಹಾದಿ, ಎಲ್ಲ ಹಂತಗಳಲ್ಲಿ ಒಗ್ಗಟ್ಟು ಬೇಕು: ಕಾಂಗ್ರೆಸ್‌ ಸಂಸದರ ಸಭೆಯಲ್ಲಿ ಬಂಡಾಯ ಗುಂಪಿಗೆ ಸುಳಿವು ನೀಡಿದ ಸೋನಿಯಾ ಗಾಂಧಿ

ನವದೆಹಲಿ: ಇತ್ತೀಚಿನ ಚುನಾವಣೆಗಳಲ್ಲಿ ಪಕ್ಷದ ಸಾಧನೆ “ಆಘಾತಕಾರಿ ಮತ್ತು ನೋವಿನಿಂದ ಕೂಡಿದೆ” ಎಂದು ಹೇಳಿರುವ ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ, ಮುಂದಿನ ಹಾದಿಯು ಹಿಂದೆಂದಿಗಿಂತಲೂ ಹೆಚ್ಚು ಸವಾಲಿನದ್ದಾಗಿದೆ ಮತ್ತು ಸಂಘಟನೆಯ ಎಲ್ಲ ಹಂತಗಳಲ್ಲಿ ಒಗ್ಗಟ್ಟು ಅತಿಮುಖ್ಯವಾಗಿದೆ ಎಂದು ಪ್ರತಿಪಾದಿಸಿದ್ದಾರೆ. ಮಂಗಳವಾರ ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ಪಕ್ಷದ ಸಂಸದರನ್ನು ಉದ್ದೇಶಿಸಿ ಮಾತನಾಡಿದ ಗಾಂಧಿ, ಪಕ್ಷವು ಒಗ್ಗಟ್ಟಿನಿಂದ ಇರುವುದನ್ನು … Continued

ಮನಸೋ ಇಚ್ಛೆ ಉಚಿತ ಸ್ಕೀಂಗಳನ್ನು ನಿಲ್ಲಿಸದಿದ್ದರೆ ಭಾರತದ ರಾಜ್ಯಗಳೂ ಮತ್ತೊಂದು ಶ್ರೀಲಂಕಾ ಆಗಬಹುದು: ಪ್ರಧಾನಿ ಮೋದಿಗೆ ಅಧಿಕಾರಿಗಳ ಮುನ್ನೆಚ್ಚರಿಕೆ

ನವದೆಹಲಿ: ಜನರನ್ನು ಸೆಳೆಯಲು ರಾಜ್ಯಗಳು ಮನಸೋ ಇಚ್ಛೆ ಉಚಿತ ಯೋಜನೆಗಳನ್ನು ಜಾರಿ ಮಾಡುತ್ತಿದ್ದರೆ ಆ ರಾಜ್ಯಗಳು ಸಹ ಶ್ರೀಲಂಕಾ, ಗ್ರೀಸ್‌ ದೇಶಗಳಂತೆ ಆರ್ಥಿಕ ಬಿಕ್ಕಟ್ಟುಗಳನ್ನು ಎದುರಿಸಬೇಕಾದೀತು ಎಂದು ಪ್ರಧಾನಿ ನರೇಂದ್ರ ಮೋದಿ ಅವರ ಮುಂದೆ ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ. ಕಳೆದ ಶನಿವಾರ ಪ್ರಧಾನಿ ಮೋದಿ ತಮ್ಮ ಅಧಿಕೃತ ಕಚೇರಿಯಲ್ಲಿ ಎಲ್ಲ ಇಲಾಖೆಯ ಕಾರ್ಯದರ್ಶಿಗಳ ಜೊತೆ ಸುಮಾರು … Continued

ದೃಷ್ಟಿ ವಿಕಲಚೇತನರ ಸುರಕ್ಷತೆಗೆ ಸೆನ್ಸಾರ್‌ ಇರುವ ಸ್ಮಾರ್ಟ್ ಶೂ ವಿನ್ಯಾಸಗೊಳಿಸಿದ 9ನೇ ತರಗತಿಯ ವಿದ್ಯಾರ್ಥಿ..!

ಗುವಾಹತಿ: ದೃಷ್ಟಿಹೀನರಿಗೆ ಸಹಾಯ ಮಾಡುವ ಪ್ರಯತ್ನದಲ್ಲಿ, ಅಸ್ಸಾಂನ ಕರೀಮ್‌ಗಂಜ್ ಜಿಲ್ಲೆಯ ಬಾಲಕನೊಬ್ಬ ಸಂವೇದಕ-ಸಕ್ರಿಯಗೊಳಿಸುವ ಸ್ಮಾರ್ಟ್ ಶೂ ಅನ್ನು ವಿನ್ಯಾಸಗೊಳಿಸಿದ್ದಾನೆ. ಕರೀಮ್‌ಗಂಜ್ ಜಿಲ್ಲೆಯ ರೋಲ್ಯಾಂಡ್ಸ್ ಮೆಮೋರಿಯಲ್ ಹೈಸ್ಕೂಲ್‌ನ 9 ನೇ ತರಗತಿಯ ವಿದ್ಯಾರ್ಥಿಯಾಗಿರುವ ಅಂಕುರಿತ್ ಕರ್ಮಾಕರ್ ದೃಷ್ಟಿ ವಿಕಲಚೇತನರು ನಡೆಯುವಾಗ ದಾರಿಯಲ್ಲಿ ಬರುವ ಅಡೆತಡೆಗಳಿಂದ ಸುರಕ್ಷಿತವಾಗಿರಲು ಸ್ಮಾರ್ಟ್ ಶೂ ಅನ್ನು ವಿನ್ಯಾಸಗೊಳಿಸಿದ್ದಾರೆ. ನಾನು ಅಂಧರಿಗಾಗಿ ಈ ಸ್ಮಾರ್ಟ್ … Continued

ಏಪ್ರಿಲ್ 7ರಂದು ಟಾಟಾ ಗ್ರೂಪ್ ಸೂಪರ್ ಅಪ್ಲಿಕೇಶನ್ Tata Neu ಬಿಡುಗಡೆ: ಅಮೆಜಾನ್​​, ಜಿಯೊಗೆ ಶುರುವಾಯ್ತು​ ಸ್ಪರ್ಧೆ

ಟಾಟಾ ಗ್ರೂಪ್‌(Tata Group)ನ ಸೂಪರ್ ಅಪ್ಲಿಕೇಶನ್ ಟಾಟಾ ನ್ಯೂ (Tata Neu) ಪರಿಚಯಿಸಿದ್ದು, ಈಗ ಅದು ಎಲ್ಲರಿಗೂ ಬಳಕೆಗೆ ದೊರಕುವಂತೆ ಮಾಡಲು ಏಪ್ರಿಲ್ 7 ರಂದು ಬಿಡುಗಡೆ ಮಾಡಲು ಸಿದ್ಧವಾಗಿದೆ. ಕಂಪನಿಯು ಅಪ್ಲಿಕೇಶನ್‌ನ ಗೂಗಲ್‌ ಪ್ಲೇ ಸ್ಟೋರ್‌ (Google Play Store) ಪುಟದಲ್ಲಿ ಟೀಸರ್ ಚಿತ್ರದ ಮೂಲಕ ಘೋಷಣೆ ಮಾಡಿದೆ. ಇದು ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ … Continued

ಪಶ್ಚಿಮ ಬಂಗಾಳ: ವಿಶ್ವವಿದ್ಯಾನಿಲಯದ ಕುಲಪತಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ಗೂಂಡಾವರ್ತನೆ ತೋರಿದ ವಿದ್ಯಾರ್ಥಿಗಳ ಗುಂಪು

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಅಲಿಯಾ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಗಳ ಗುಂಪೊಂದು ಉಪಕುಲಪತಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ವೀಡಿಯೊ ವೈರಲ್ ಆಗಿದೆ. ಈ ವಿಡಿಯೋ ಈಗ ರಾಜ್ಯದಲ್ಲಿ ರಾಜಕೀಯ ಗದ್ದಲಕ್ಕೆ ಕಾರಣವಾಗಿದೆ. ಉಪಕುಲಪತಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪಿ ಗಿಯಾಸುದ್ದೀನ್ ಮೊಂಡಲ್ ತೃಣಮೂಲ ಕಾಂಗ್ರೆಸ್‌ನೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂಬ ಬಿಜೆಪಿ ಆರೋಪಿಸಿದೆ. ವೀಡಿಯೊವನ್ನು ಹಂಚಿಕೊಂಡ ಪಶ್ಚಿಮ ಬಂಗಾಳದ ರಾಜ್ಯಪಾಲ … Continued

ಲಖಿಂಪುರ್ ಖೇರಿ ಪ್ರಕರಣದ ಆರೋಪಿ ಮಿಶ್ರಾ ಜಾಮೀನು ಪ್ರಶ್ನಿಸಿದ್ದ ಅರ್ಜಿ ವಿಚಾರಣೆ: ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್‌

ನವದೆಹಲಿ:ರೈತರು ಸೇರಿದಂತೆ ಎಂಟು ಜನರ ಸಾವಿಗೆ ಕಾರಣವಾಗಿದ್ದ ಲಖಿಂಪುರ್‌ ಖೇರಿ ಹಿಂಸಾಚಾರ ಪ್ರಕರಣದ ಮುಖ್ಯ ಆರೋಪಿ ಆಶಿಶ್ ಮಿಶ್ರಾಗೆ ಜಾಮೀನು ಮಂಜೂರು ಮಾಡಿದ್ದ ಅಲಾಹಾಬಾದ್ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಮೃತ ಕುಟುಂಬ ಸದಸ್ಯರು ಸಲ್ಲಿಸಿದ್ದ ಮೇಲ್ಮನವಿಗೆ ಸಂಬಂಧಿಸಿದ ತೀರ್ಪನ್ನು ಸುಪ್ರೀಂ ಕೋರ್ಟ್ ಸೋಮವಾರ ಕಾಯ್ದಿರಿಸಿದೆ. ತೀರ್ಪು ಕಾಯ್ದಿರಿಸುವ ಮುನ್ನ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) … Continued

2019-20ರಲ್ಲಿ ಅತಿ ಹೆಚ್ಚು ಕಾರ್ಪೊರೇಟ್ ದೇಣಿಗೆ ಪಡೆದ ಪಕ್ಷ ಬಿಜೆಪಿ : ರಾಜಕೀಯ ಪಕ್ಷಗಳು ದೇಣಿಗೆ ಪಡೆದ ಮಾಹಿತಿ ಇಲ್ಲಿದೆ…

ನವದೆಹಲಿ: 2019-20ನೇ ಹಣಕಾಸು ವರ್ಷದಲ್ಲಿ ಕಾರ್ಪೊರೇಟ್ ಮತ್ತು ವ್ಯಾಪಾರ ಸಂಸ್ಥೆಗಳು ರಾಷ್ಟ್ರೀಯ ಪಕ್ಷಗಳಿಗೆ 921.95 ಕೋಟಿ ರೂ.ಗಳ ದೇಣಿಗೆ ನೀಡಿದ್ದು, ಇದರಲ್ಲಿ ಬಿಜೆಪಿಯು 720.407 ಕೋಟಿ ರೂ.ಗಳ ದೇಣಿಗೆ ಪಡೆದಿದೆ ಎಂದು ವರದಿಯೊಂದು ತಿಳಿಸಿದೆ. ಆರ್ಥಿಕ ವರ್ಷ 2017-18 ಮತ್ತು 2018-19 ರ ನಡುವೆ ರಾಷ್ಟ್ರೀಯ ಪಕ್ಷಗಳಿಗೆ ಕಾರ್ಪೊರೇಟ್‌ಗಳಿಂದ ದೇಣಿಗೆ 109% ರಷ್ಟು ಹೆಚ್ಚಾಗಿದೆ ಎಂದು … Continued

ಹೊಸ ಮನೆ ಕಟ್ಟಲು, ಚೆಂದವಿಲ್ಲದ ಹುಡುಗಿಯರಿಗೆ ಮದುವೆಯಾಗಲು ವರದಕ್ಷಿಣೆ ಸಹಾಯ ಮಾಡುತ್ತದೆ: ಹೀಗೆಂದು ನರ್ಸಿಂಗ್ ವಿದ್ಯಾರ್ಥಿಗಳ ಪಠ್ಯಪುಸ್ತಕ ಹೇಳುತ್ತದೆ…!

ನವದೆಹಲಿ: ವರದಕ್ಷಿಣೆಯ ಅರ್ಹತೆ” ಅನ್ನು ಒಳಗೊಂಡಿರುವ ಕಾಲೇಜು ಪುಸ್ತಕದ ಪುಟದ ಚಿತ್ರವು ಆನ್‌ಲೈನ್‌ನಲ್ಲಿ ವೈರಲ್ ಆಗಿದೆ. ಈ ಚಿತ್ರವನ್ನು ಅಪರ್ಣಾ ಎಂಬ ಬಳಕೆದಾರರು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ ಮತ್ತು ಇದು ದಾದಿಯರಿಗಾಗಿ ಸಮಾಜಶಾಸ್ತ್ರದ ಪಠ್ಯಪುಸ್ತಕದಲ್ಲಿ ಬಂದಿದೆ ಅವರು ಹೇಳಿದ್ದಾರೆ. ಪೋಸ್ಟ್ ಅನ್ನು ಭಾನುವಾರ ಹಂಚಿಕೊಳ್ಳಲಾಗಿದೆ ಮತ್ತು ನೆಟಿಜನ್‌ಗಳಿಂದ ಆಘಾತಕಾರಿ ಮತ್ತು ಕೋಪದ ಪ್ರತಿಕ್ರಿಯೆಗಳು ಬಂದಿವೆ. ಪಠ್ಯಪುಸ್ತಕವನ್ನು … Continued

ಕಾಶ್ಮೀರ: ಶೋಪಿಯಾನದಲ್ಲಿ ಕಾಶ್ಮೀರಿ ಪಂಡಿತನ ಮೇಲೆ ಉಗ್ರರು ಗುಂಡಿನ ದಾಳಿ

ಕಾಶ್ಮೀರ: ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಚೋಟೋಗಾಮ್ ಪ್ರದೇಶದಲ್ಲಿ ಸೋಮವಾರ ಸಂಜೆ ಭಯೋತ್ಪಾದಕರು ಕಾಶ್ಮೀರಿ ಪಂಡಿತ ಹಾಗೂ ಅಂಗಡಿ ಮಾಲೀಕನ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿ ಗಾಯಗೊಳಿಸಿದ್ದಾರೆ. ಗಾಯಾಳು ಕಾಶ್ಮೀರಿ ಪಂಡಿತ ಸೋನು ಕುಮಾರ್ ಬಲ್ಜಿ ಎಂದು ಗುರುತಿಸಲಾಗಿದೆ ಹಾಗೂ ಗಂಭೀರ ಸ್ಥಿತಿಯಲ್ಲಿ ಶ್ರೀನಗರದ ಸೇನಾ ಆಸ್ಪತ್ರೆಗೆ ಸಾಗಿಸಲಾಗಿದೆ. ಕಳೆದ 24 ಗಂಟೆಗಳಲ್ಲಿ, ಪುಲ್ವಾಮಾದಲ್ಲಿ … Continued