ಭಾರೀ ಸ್ಫೋಟದಿಂದ 3 ಅಂತಸ್ತಿನ ಕಟ್ಟಡ ನೆಲಸಮ: ಐವರ ಸಾವು, 8 ಮಂದಿಗೆ ಗಾಯ

ಭಾಗಲ್ಪುರ : ಬಿಹಾರದ ಭಾಗಲ್ಪುರ ಜಿಲ್ಲೆಯಲ್ಲಿ ಗುರುವಾರ ರಾತ್ರಿ ಮೂರು ಅಂತಸ್ತಿನ ಕಟ್ಟಡದಲ್ಲಿ ಭಾರಿ ಸ್ಫೋಟ ಸಂಭವಿಸಿದ ನಂತರ ಕನಿಷ್ಠ ಐದು ಜನರು ಮೃತಪಟ್ಟಿದ್ದಾರೆ ಮತ್ತು ಎಂಟು ಜನರು ಗಾಯಗೊಂಡಿದ್ದಾರೆ. ಪೊಲೀಸ್‌ ತಂಡ ಮತ್ತು ತುರ್ತು ಸೇವೆಗಳು ತಕ್ಷಣವೇ ಘಟನಾ ಸ್ಥಳಕ್ಕೆ ಧಾವಿಸಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆ ಪ್ರಾರಂಭಿಸಿದವು. ಕುಸಿದ ಕಟ್ಟಡದ ಅವಶೇಷಗಳಡಿ ಹತ್ತರಿಂದ … Continued

ಯುರೋಪ್‌ನ ಅತಿದೊಡ್ಡ ಪರಮಾಣು ಸ್ಥಾವರದ ಮೇಲೆ ರಷ್ಯಾ ದಾಳಿ, ಬೆಂಕಿ ಕಾಣಿಸಿಕೊಂಡ ವೀಡಿಯೊ ಹಂಚಿಕೊಂಡ ಉಕ್ರೇನ್ ಅಧ್ಯಕ್ಷ, ವಿಶ್ವಸಂಸ್ಥೆ ತುರ್ತು ಸಭೆ

ನವದೆಹಲಿ: ರಷ್ಯಾವು ಉಕ್ರೇನ್‌ ವಿರುದ್ಧ ತನ್ನ ಹೋರಾಟವನ್ನು ತೀವ್ರಗೊಳಿಸಿದೆ. ಆಘಾತಕಾರಿ ಬೆಳವಣಿಗೆಯೊಂದರಲ್ಲಿ ಉಕ್ರೇನ್‌ನ ಪ್ರಮುಖ ಪರಮಾಣು ಸ್ಥಾವರದಲ್ಲಿ ಶುಕ್ರವಾರ ಬೆಂಕಿ ಕಾಣಿಸಿಕೊಂಡಿದೆ. ಯೂಕ್ರೇನ್​ನಲ್ಲಿರುವ ಯುರೋಪ್​ನ ಅತಿ ದೊಡ್ಡ ಪರಮಾಣು ವಿದ್ಯುತ್ ಸ್ಥಾವರ ಝಪೊರಿಝಿಯಾ ಮೇಲೆ ಶೆಲ್​ ದಾಳಿ ನಡೆಸಿರುವುದಾಗಿ ಹತ್ತಿರದ ಪಟ್ಟಣದ ಮೇಯರ್ ತಿಳಿಸಿದ್ದಾರೆ. ಅಣುಸ್ಥಾವರದ ಮೇಲೆ ರಷ್ಯಾ ದಾಳಿ ಮಾಡಿದ ಬೆನ್ನಲ್ಲೇ ಬ್ರಿಟನ್‌​ ವಿಶ್ವಸಂಸ್ಥೆ … Continued

ಉಕ್ರೇನ್‌ನ ಕೀವ್‌ನಲ್ಲಿ ಮತ್ತೊಬ್ಬ ಭಾರತೀಯ ವಿದ್ಯಾರ್ಥಿಗೆ ಗುಂಡೇಟಿನಿಂದ ಗಾಯ, ಆಸ್ಪತ್ರೆಗೆ ದಾಖಲು

ಕೀವ್‌: ಯುದ್ಧ ಪೀಡಿತ ಉಕ್ರೇನ್‌ನಲ್ಲಿ ಇನ್ನೊಬ್ಬ ಭಾರತೀಯ ವಿದ್ಯಾರ್ಥಿಯನ್ನು ಸ್ಥಳಾಂತರ ಮಾಡುತ್ತಿದ್ದಾಗ ಆತನ ಮೇಲೆ ಗುಂಡು ಹಾರಿಸಲಾಗಿದ್ದು, ತಕ್ಷಣವೇ ಮಧ್ಯದಲ್ಲಿ ಹಿಂತಿರುಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧದಲ್ಲಿ ಭಾರತೀಯ ವಿದ್ಯಾರ್ಥಿಯೊಬ್ಬ ಪ್ರಾಣ ಕಳೆದುಕೊಂಡ ಕೆಲವೇ ದಿನಗಳಲ್ಲಿ ಇದು ಸಂಭವಿಸಿದೆ. ಭಾರತೀಯ ವಿದ್ಯಾರ್ಥಿಗಳ ಸ್ಥಳಾಂತರಕ್ಕೆ ಅನುಕೂಲವಾಗಲು ಪೋಲೆಂಡ್‌ನಲ್ಲಿರುವ ನಾಗರಿಕ ವಿಮಾನಯಾನ ರಾಜ್ಯ … Continued

ಯುಎನ್‌ಜಿಎಯಲ್ಲಿ ಮತದಾನದಿಂದ ದೂರ ಉಳಿಯುವ ಸರ್ಕಾರದ ನಿಲುವಿಗೆ ಪ್ರತಿಪಕ್ಷಗಳ ಬೆಂಬಲ: ಮೂಲಗಳು

ನವದೆಹಲಿ: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ (ಯುಎನ್‌ಜಿಎ) ಮತದಾನದಿಂದ ದೂರ ಉಳಿಯುವ ಕೇಂದ್ರ ಸರ್ಕಾರದ ನಿಲುವನ್ನು ಕಾಂಗ್ರೆಸ್ ನಾಯಕರು ಬೆಂಬಲಿಸಿದ್ದಾರೆ ಎಂದು ಮೂಲಗಳು ಗುರುವಾರ ತಿಳಿಸಿವೆ. ವಿದೇಶಾಂಗ ವ್ಯವಹಾರಗಳ ಸಂಸತ್ತಿನ ಸಮಾಲೋಚನಾ ಸಮಿತಿಯು ನವದೆಹಲಿಯ ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ ಸಭೆ ನಡೆಸಿದ ನಂತರ ಈ ಮಾಹಿತಿ ಬಂದಿದೆ. ಉಕ್ರೇನ್‌ನಲ್ಲಿ ನಡೆಯುತ್ತಿರುವ ರಷ್ಯಾದ ಮಿಲಿಟರಿ ಕಾರ್ಯಾಚರಣೆಗಳ ನಡುವೆ ವಿದೇಶಾಂಗ … Continued

ಉಕ್ರೇನ್-ರಷ್ಯಾ ಯುದ್ಧ :ಉಕ್ರೇನ್‌ನಿಂದ ಸ್ಥಳಾಂತರಗೊಳ್ಳುವಾಗ ವಿಮಾನಗಳಲ್ಲಿ ಸಾಕು ಪ್ರಾಣಿಗಳನ್ನೂ ಕರೆತಂದ ವಿದ್ಯಾರ್ಥಿಗಳು..!

ನವದೆಹಲಿ: ಉಕ್ರೇನ್‌ನ ನೆರೆಯ ದೇಶಗಳಿಂದ ಹಿಂಡನ್ ವಾಯುನೆಲೆಗೆ ಗುರುವಾರ ಬೆಳಿಗ್ಗೆ ಆಗಮಿಸಿದ ಭಾರತೀಯ ವಾಯುಪಡೆಯ ಸ್ಥಳಾಂತರಿಸುವ ವಿಮಾನಗಳಲ್ಲಿ ಕೆಲವು ವಿದ್ಯಾರ್ಥಿಗಳು ತಮ್ಮ ಸಾಕು ನಾಯಿಗಳು ಮತ್ತು ಬೆಕ್ಕುಗಳನ್ನು ಕರೆತಂದಿದ್ದಾರೆ. ಇಲ್ಲಿ ಬಂದಿಳಿದ ಐಎಎಫ್‌ನ ನಾಲ್ಕು ವಿಮಾನಗಳಲ್ಲಿ ಒಂದರಲ್ಲಿ ಪುಣೆಯ ವಿದ್ಯಾರ್ಥಿನಿ ಯುಕ್ತಾ ತನ್ನ ಏಳು ತಿಂಗಳ ಸೈಬೀರಿಯನ್ ಹಸ್ಕಿ ನಾಯಿ ಮರಿ ನೀಲಾಳನ್ನು ಕರೆತಂದಿದ್ದಾಳೆ. ನೀಲಾ … Continued

ಉಕ್ರೇನ್ -ರಷ್ಯಾ ಯುದ್ಧ: ಉಕ್ರೇನ್‌ನಲ್ಲಿ ಇನ್ನೂ ಕೆಟ್ಟದ್ದು ಸಂಭವಿಸಲಿದೆ-ಪುತಿನ್ ಜೊತೆ ಮಾತುಕತೆ ನಂತರ ಫ್ರಾನ್ಸ್‌ ಅಧ್ಯಕ್ಷರ ಹೇಳಿಕೆ

ಪ್ಯಾರಿಸ್‌: ಉಕ್ರೇನ್ ವಿರುದ್ಧ ರಷ್ಯಾದ ಯುದ್ಧ ಮುಂದುವರೆದಿದೆ. ಏತನ್ಮಧ್ಯೆ, ಇಂದು, ಗುರುವಾರ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುತಿನ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದಾರೆ. ಉಭಯ ನಾಯಕರ ನಡುವೆ ಸುಮಾರು 90 ನಿಮಿಷಗಳ ಕಾಲ ಮಾತುಕತೆ ನಡೆಯಿತು. ಇದಾದ ನಂತರ ಮ್ಯಾಕ್ರನ್, “ಪುತಿನ್ ಇಡೀ ಉಕ್ರೇನ್ ಅನ್ನು ವಶಪಡಿಸಿಕೊಳ್ಳಲು ಬಯಸುತ್ತಾರೆ. ಉಕ್ರೇನ್‌ನಲ್ಲಿ … Continued

ನನ್ನ ಮುಂದೆ ಒಬ್ಬ ಹುಡುಗಿಯನ್ನು ಒದ್ದರು, ಅವಳು ಮೂರ್ಛೆ ಹೋದಳು… ಅವರು ನಮ್ಮನ್ನೂ ಹೊಡೆಯುತ್ತಿದ್ದರು: ಉಕ್ರೇನಿಯನ್ ಸೈನಿಕರ ಬಗ್ಗೆ ಭಾರತೀಯ ವಿದ್ಯಾರ್ಥಿಗಳ ಆರೋಪ

ಜೈಪುರ: ಯುದ್ಧ ಪೀಡಿತ ಉಕ್ರೇನ್‌ ದೇಶದ ರೊಮೇನಿಯಾದೊಂದಿಗಿನ ಗಡಿಯಲ್ಲಿ ಉಕ್ರೇನ್ ಸೈನಿಕರು ಭಾರತೀಯರನ್ನು ಥಳಿಸಿ ಅಶ್ರುವಾಯು ಶೆಲ್‌ಗಳನ್ನು ಹಾರಿಸುವುದರೊಂದಿಗೆ ಪರಿಸ್ಥಿತಿ ಭಯಾನಕವಾಗಿದೆ ಎಂದು ಉಕ್ರೇನ್‌ನಿಂದ ಇಲ್ಲಿಗೆ ಹಿಂತಿರುಗಿದ ಭಾರತೀಯ ವಿದ್ಯಾರ್ಥಿಗಳು ಹೇಳಿದ್ದಾರೆ. ರಷ್ಯಾದ ತೀವ್ರವಾದ ಸೇನಾ ದಾಳಿಯ ನಡುವೆ ಯುದ್ಧ ಪೀಡಿತ ರಾಷ್ಟ್ರದಿಂದ ಪಲಾಯನ ಮಾಡಿದ ನಂತರ ಇಲ್ಲಿಗೆ ಆಗಮಿಸಿದ ಎಂಟು ವಿದ್ಯಾರ್ಥಿಗಳು ಉಕ್ರೇನ್‌ನಲ್ಲಿರುವ ಭಾರತೀಯ … Continued

ಉಕ್ರೇನ್‌ನಿಂದ ಭಾರತೀಯ ವಿದ್ಯಾರ್ಥಿಗಳ ಸ್ಥಳಾಂತರಕ್ಕೆ ತನ್ನ 130 ಬಸ್‌ಗಳು ಸಿದ್ಧವಾಗಿವೆ ಎಂದ ರಷ್ಯಾ

ಮಾಸ್ಕೋ: ಯುದ್ಧ ಪೀಡಿತ ಉಕ್ರೇನ್‌ನ ಖಾರ್ಕೊವ್ ಮತ್ತು ಸುಮಿ ನಗರಗಳಿಂದ ರಷ್ಯಾದ ಬೆಲ್ಗೊರೊಡ್ ಪ್ರದೇಶಕ್ಕೆ ಭಾರತೀಯ ವಿದ್ಯಾರ್ಥಿಗಳು ಮತ್ತು ಇತರ ವಿದೇಶಿಯರನ್ನು ಸ್ಥಳಾಂತರಿಸಲು 130 ಬಸ್‌ಗಳು ಸಿದ್ಧವಾಗಿವೆ ಎಂದು ರಷ್ಯಾದ ಉನ್ನತ ಮಿಲಿಟರಿ ಜನರಲ್ ಗುರುವಾರ ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಬುಧವಾರ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುತಿನ್ ಅವರೊಂದಿಗೆ ಮಾತನಾಡಿ ಉಕ್ರೇನ್‌ನಲ್ಲಿನ ಸಂಘರ್ಷದ ಪ್ರದೇಶಗಳಿಂದ … Continued

ಈ ವರ್ಷ ಕೊರೊನಾದಿಂದ ಸಾವಿಗೀಡಾದ 92% ರಷ್ಟು ಜನರು ಕೋವಿಡ್‌ ಲಸಿಕೆ ತೆಗೆದುಕೊಳ್ಳದವರು:ಕೇಂದ್ರ ಸರ್ಕಾರ

ನವದೆಹಲಿ: ಈ ವರ್ಷದ ಜನವರಿಯಿಂದೀಚೆಗೆ ಲಸಿಕೆ ಪಡೆಯದ ಜನರು ಕೋವಿಡ್-19 ಸಾವುಗಳಲ್ಲಿ ಶೇಕಡಾ 92 ರಷ್ಟಿದ್ದಾರೆ ಎಂದು ಸರ್ಕಾರ ಇಂದು, ಗುರುವಾರ ತಿಳಿಸಿದೆ. ಲಸಿಕೆಗಳು ಮತ್ತು ವ್ಯಾಪಕವಾದ ವ್ಯಾಕ್ಸಿನೇಷನ್ ವ್ಯಾಪ್ತಿಯು ನೂರಾರು ಜೀವಗಳನ್ನು ರಕ್ಷಿಸುವಲ್ಲಿ ಬಹಳ ಪ್ರಮುಖ ಪಾತ್ರವನ್ನು ವಹಿಸಿದೆ ಎಂಬುದು ಸ್ಪಷ್ಟವಾಗಿದೆ. ಲಸಿಕೆಯು ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿನ ಉಲ್ಬಣದಿಂದ ರಾಷ್ಟ್ರವನ್ನು ರಕ್ಷಿಸಿದೆ” ಎಂದು ನೀತಿ … Continued

ಉಕ್ರೇನ್‌-ರಷ್ಯಾ ಬಿಕ್ಕಟ್ಟು: ಭಾರತೀಯರನ್ನು ತೆರವುಗೊಳಿಸುವ ಮನವಿ ಸಂಬಂಧ ಅಟಾರ್ನಿ ಜನರಲ್ ಸಲಹೆ ಕೋರಿದ ಸುಪ್ರೀಂ ಕೋರ್ಟ್‌

ನವದೆಹಲಿ: ರಷ್ಯಾ ಹಾಗೂ ಉಕ್ರೇನ್‌ ಯುದ್ಧ ತಡೆಯುವ ಬಗ್ಗೆ ತಾನು ಹೇಗೆ ನಿರ್ದೇಶನ ನೀಡಬಹುದು ಎಂಬ ಬಗ್ಗೆ ಸುಪ್ರೀಂ ಕೋರ್ಟ್‌ ಆಲೋಚನೆಗೀಡಾದ ಪ್ರಸಂಗ ಗುರುವಾರ ನಡೆಯಿತು. ಯುದ್ಧಪೀಡಿತ ಯುಕ್ರೇನ್‌ನಲ್ಲಿರುವ ಭಾರತೀಯರ ಶೀಘ್ರ ತೆರವಿಗೆ ಕೋರಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆ ವೇಳೆ ಹಿರಿಯ ವಕೀಲ ಎ.ಎಂ. ಧರ್ ಅವರು ಭಾರತದ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ … Continued