ಶ್ರೀಲಂಕಾವನ್ನು 9 ವಿಕೆಟ್‌ಗಳಿಂದ ಸೋಲಿಸಿದ ಎಂಟನೇ ಬಾರಿಗೆ ಯು-19 ಪುರುಷರ ಏಷ್ಯಾ ಕಪ್ ಪ್ರಶಸ್ತಿ ಮುಡಿಗೇರಿಸಿಕೊಂಡ ಭಾರತ

ದುಬೈ: ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಯು-19 ಪುರುಷರ ಏಷ್ಯಾ ಕಪ್ 2021 ರ ಫೈನಲ್‌ನಲ್ಲಿ ಯಶ್ ಧುಲ್ ನೇತೃತ್ವದ ಯುವ ಭಾರತೀಯ ತಂಡವು ಶ್ರೀಲಂಕಾವನ್ನು 9 ವಿಕೆಟ್‌ಗಳಿಂದ ಸೋಲಿಸಿ ಪ್ರಶಸ್ತಿ ತನ್ನದಾಗಿಸಿಕೊಂಡಿತು. ರಘುವಂಶಿ ಅವರ ಅಜೇಯ 56 ರನ್‌ಗಳ ನೆರವಿನಿಂದ ಭಾರತವು 102 ರನ್‌ಗಳ ಗುರಿಯನ್ನು ಕೇವಲ 22 ಓವರ್‌ಗಳಲ್ಲಿ ತಲುಪಿ ಶ್ರೀಲಂಕಾವನ್ನು … Continued

ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ದಿನಾಂಕ ವಿಸ್ತರಿಸುವ ಪ್ರಸ್ತಾಪವಿಲ್ಲ: ಸರ್ಕಾರ

ನವದೆಹಲಿ: ಆದಾಯ ತೆರಿಗೆ ರಿಟರ್ನ್ (ಐಟಿಆರ್) ಸಲ್ಲಿಸುವ ಕೊನೆಯ ದಿನಾಂಕವನ್ನು ವಿಸ್ತರಿಸುವುದಿಲ್ಲ ಎಂದು ಕೇಂದ್ರ ಸರ್ಕಾರ ಇಂದು, ಶುಕ್ರವಾರ ಹೇಳಿದೆ. ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಡಿಸೆಂಬರ್ 31 ಅಧಿಕೃತ ಅಂತಿಮ ದಿನಾಂಕವಾಗಿ ಉಳಿದಿದೆ ಎಂದು ಕಂದಾಯ ಕಾರ್ಯದರ್ಶಿ ತರುಣ್ ಬಜಾಜ್ ಶುಕ್ರವಾರ ಹೇಳಿದ್ದಾರೆ. ಇದುವರೆಗೆ ಸಲ್ಲಿಕೆಯಾಗಿರುವ ರಿಟರ್ನ್ಸ್‌ಗಳು ಹಿಂದಿನ ವರ್ಷಕ್ಕೆ ಹೋಲಿಸಿದರೆ ಹೆಚ್ಚು ಎಂದು … Continued

ಪ್ಲಾಸ್ಟಿಕ್ ಬೇಬಿ…ಬಿಹಾರದಲ್ಲಿ ವಿಚಿತ್ರ ಮಗುವಿನ ಜನನ, ಮೈಮೇಲೆ ಚರ್ಮದ ಬದಲು ಪ್ಲಾಸ್ಟಿಕ್ ಇದೆ…!

ಔರಂಗಾಬಾದ್ ಸದರ್ ಆಸ್ಪತ್ರೆ ಆವರಣದಲ್ಲಿರುವ ನವಜಾತ ಶಿಶು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಗು ಕೊಲೊಡಿಯನ್ ಎಂಬ ಕಾಯಿಲೆಯಿಂದ ಬಳಲುತ್ತಿದೆ. ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಈ ಮಗುವಿನ ಕೈ ಕಾಲುಗಳ ಬೆರಳುಗಳು ಹಾಗೂ ಇಡೀ ದೇಹದ ಮೇಲೆ ಪ್ಲಾಸ್ಟಿಕ್ ರೀತಿಯ ಪದರವಿದೆ. ಈ ಕಾಯಿಲೆಯಿಂದ ಬಳಲುತ್ತಿರುವ ಮಕ್ಕಳನ್ನು ಇದೇ ಕಾರಣಕ್ಕೆ ‘ಪ್ಲಾಸ್ಟಿಕ್ ಬೇಬೀಸ್’ ಎಂದೂ ಕರೆಯುತ್ತಾರೆ. … Continued

ಬಿಹಾರದಲ್ಲಿ ನಾಲ್ಕು ಕಾಲುಗಳಿರುವ ಮಗುವಿಗೆ ಜನ್ಮ ನೀಡಿದ ಮಹಿಳೆ..!

ಪಾಟ್ನಾ: ಬಿಹಾರದ ಗೋಪಾಲಗಂಜ್ ಜಿಲ್ಲೆಯಲ್ಲಿ ಮಹಿಳೆಯೊಬ್ಬರು ಗುರುವಾರ 4 ಕಾಲುಗಳಿರುವ ಮಗುವಿಗೆ ಜನ್ಮ ನೀಡಿದ್ದಾರೆ…! ಬೈಕುಂತ್‌ಪುರ ಬ್ಲಾಕ್‌ನ ರೆವ್ತಿತ್ ಗ್ರಾಮದ ನಿವಾಸಿಯಾಗಿರುವ ಮಗುವಿನ ತಾಯಿ ರವಿನಾ ಖಾತೂನ್ ಅವರನ್ನು ಗುರುವಾರ ಬೆಳಗ್ಗೆ ಹೆರಿಗೆ ನೋವಿನ ನಂತರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ (ಪಿಎಚ್‌ಸಿ) ದಾಖಲಿಸಲಾಗಿತ್ತು. ಖಾತೂನ್ ನಾಲ್ಕು ಕಾಲುಗಳಿರುವ ಮಗುವಿಗೆ ಜನ್ಮ ನೀಡಿದಳು. ಮಗುವಿಗೆ ನಾಲ್ಕು ಕಾಲುಗಳಿರುವುದನ್ನು … Continued

ಶ್ರೀನಗರದಲ್ಲಿ ತಡರಾತ್ರಿ ಎನ್‌ಕೌಂಟರ್‌ನಲ್ಲಿ ಮೂವರು ಭಯೋತ್ಪಾದಕರ ಹತ್ಯೆ, ನಾಲ್ವರು ಭದ್ರತಾ ಸಿಬ್ಬಂದಿಗೆ ಗಾಯ

ಶ್ರೀನಗರ: ಶ್ರೀನಗರದಲ್ಲಿ ಗುರುವಾರ ರಾತ್ರಿ ನಡೆದ ಹೊಸ ಎನ್‌ಕೌಂಟರ್‌ನಲ್ಲಿ ಇನ್ನೂ ಮೂವರು ಭಯೋತ್ಪಾದಕರು ಹತರಾಗಿದ್ದಾರೆ ಮತ್ತು ನಾಲ್ವರು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ. ಕಾಶ್ಮೀರ ಕಣಿವೆಯಲ್ಲಿ ಮೂರು ಪ್ರತ್ಯೇಕ ಗುಂಡಿನ ಚಕಮಕಿಯಲ್ಲಿ ಕಳೆದ 36 ಗಂಟೆಗಳಲ್ಲಿ ಭಯೋತ್ಪಾದಕರ ಸಂಖ್ಯೆಯನ್ನು ಒಂಬತ್ತಕ್ಕೆ ಒಯ್ದಿದೆ. ಗುರುವಾರ ಮತ್ತು ಶುಕ್ರವಾರದ ಮಧ್ಯರಾತ್ರಿ ಜಮ್ಮು ಮತ್ತು ಕಾಶ್ಮೀರದ ಶ್ರೀನಗರ ಜಿಲ್ಲೆಯ ಪಂಥಾ ಚೌಕ್ … Continued

ದೆಹಲಿಯಲ್ಲಿ 3.8 ಡಿಗ್ರಿ ಸೆಲ್ಸಿಯಸ್‌ಗೆ ಇಳಿದ ಕನಿಷ್ಠ ತಾಪಮಾನ

ನವದೆಹಲಿ: ಶುಕ್ರವಾರ (ಡಿಸೆಂಬರ್ 31) ರಾಷ್ಟ್ರ ರಾಜಧಾನಿಯಲ್ಲಿ ಚಳಿಗಾಳಿ ಪರಿಸ್ಥಿತಿಗಳು ಚಾಲ್ತಿಯಲ್ಲಿರುವುದರಿಂದ ದೆಹಲಿಯ ಜನರು ಕೊರೆಯುವ ಚಳಿಯಲ್ಲಿಯೇ ಹೊಸ ವರ್ಷ ಆಚರಿಸಲು ಸಿದ್ಧರಾಗಿದ್ದಾರೆ. ಭಾರತೀಯ ಹವಾಮಾನ ಇಲಾಖೆ (IMD) ಪ್ರಕಾರ, ನಗರದಲ್ಲಿ ಕನಿಷ್ಠ ತಾಪಮಾನವು 3.8 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದೆ. ಗುರುವಾರ (ಡಿಸೆಂಬರ್ 30) ನಗರದಲ್ಲಿ ಚಳಿಗಾಳಿ ಆವರಿಸಿದ್ದು, ಒಂದು ದಿನದ ಹಿಂದಿನ ತಾಪಮಾನ 8.4 … Continued

ತಮಿಳುನಾಡಿನಲ್ಲಿ ಮತ್ತೆ ಭಾರೀ ಮಳೆ: ಮೂವರು ಸಾವು, ಚೆನ್ನೈ ಜಲಾವೃತ

ಚೆನ್ನೈ: ತಮಿಳುನಾಡಿನಲ್ಲಿ ವರುಣನ ಆರ್ಭಟ ಮತ್ತೆ ಜೋರಾಗಿದ್ದು, ಮಳೆ ಸಂಬಂಧಿ ಘಟನೆಗಳಿಂದ ಮೂವರು ಮೃತಪಟ್ಟಿದ್ದಾರೆ. ಭಾರೀ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ರೆಡ್‌ ಅಲರ್ಟ್‌ ಘೋಷಣೆ ಮಾಡಲಾಗಿದೆ. ಚೆನ್ನೈ, ಕಾಂಚಿಪುರಂ, ತಿರುವಲ್ಲೂರ್‌, ಚೆಂಗಲೆಪಟ್ಟು ಈ ನಾಲ್ಕು ಜಿಲ್ಲೆಗಳಲ್ಲಿ ರೆಡ್‌ ಅಲರ್ಟ್‌ ಘೋಷಿಸಲಾಗಿದ್ದು, ಜಿಲ್ಲೆಗಳಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 20 ಸೆ.ಮೀ.ನಷ್ಟು ಮಳೆಯಾಗಿದೆ … Continued

ಮಹಾರಾಷ್ಟ್ರದಲ್ಲಿ ಓಮಿಕ್ರಾನ್ ಸೋಂಕಿತ ರೋಗಿ ಹೃದಯಾಘಾತದಿಂದ ಸಾವು

ಮುಂಬೈ: ಮಹಾರಾಷ್ಟ್ರದಲ್ಲಿ ಕೊರೊನಾ ವೈರಸ್ ರೂಪಾಂತರಿ ಓಮಿಕ್ರಾನ್ ಸೋಂಕು ತಗುಲಿದ್ದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಪುಣೆಯ ಪಿಂಪ್ರಿ-ಚಿಂಚವಾಡ್‌ನಲ್ಲಿ ನೆಲೆಸಿದ್ದ 52 ವರ್ಷದ ಓಮಿಕ್ರಾನ್ ಸೋಂಕಿತರು ಹೃದಯಾಘಾತಕ್ಕೆ ಒಳಗಾಗಿ ನಿಧನರಾಗಿದ್ದು, ಈ ಸಾವನ್ನು ಓಮಿಕ್ರಾನ್ ಸೋಂಕಿನಿಂದ ಸಂಭವಿಸಿದ ಸಾವು ಎಂದು ಹೇಳಲು ವೈದ್ಯರು ನಿರಾಕರಿಸಿದ್ದಾರೆ. ಅವರ ಸಾವಿಗೆ ಇನ್ನಿತರ ಆರೋಗ್ಯ ಸಮಸ್ಯೆಗಳೇ ಕಾರಣ ಎಂದು … Continued

ದೇಶದಲ್ಲಿ ಕೋವಿಡ್ ಸೋಂಕು ನಿನ್ನೆಗಿಂತ 27% ಏರಿಕೆ; 1,270ಕ್ಕೆ ತಲುಪಿದ ಓಮಿಕ್ರಾನ್‌ ಸೋಂಕು

ಭಾರತದ ಸಕ್ರಿಯ ಪ್ರಕರಣಗಳು 91,361ಕ್ಕೆ ಏರಿದೆ. ಸಕ್ರಿಯ ಪ್ರಕರಣಗಳು ಒಟ್ಟು ಪ್ರಕರಣಗಳಲ್ಲಿ ಶೇಕಡಾ 1 ಕ್ಕಿಂತ ಕಡಿಮೆ, 0.26%ರಷ್ಟಿದೆ. ಚೇತರಿಕೆ ದರವು ಪ್ರಸ್ತುತ 98.36 ಪ್ರತಿಶತದಲ್ಲಿದೆ. ಕಳೆದ 24 ಗಂಟೆಗಳಲ್ಲಿ 7,585 ಚೇತರಿಕೆ ವರದಿ. ಕಳೆದ 88 ದಿನಗಳಲ್ಲಿ ದೈನಂದಿನ ಧನಾತ್ಮಕತೆಯ ದರ (1.34%) ಶೇಕಡಾ 2 ಕ್ಕಿಂತ ಕಡಿಮೆ ಸಾಪ್ತಾಹಿಕ ಸಕಾರಾತ್ಮಕತೆಯ ದರ (0.89%) … Continued

ಆವರ್ತಕ ಕೆವೈಸಿ ಅಪ್‌ಡೇಟ್‌ನ ಗಡುವನ್ನು ಮಾರ್ಚ್ 31ರ ವರೆಗೆ ವಿಸ್ತರಿಸಿದ ಆರ್‌ಬಿಐ

ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ (RBI) ನಿಯಂತ್ರಿತ ಘಟಕಗಳಿಂದ ಗ್ರಾಹಕರ ಕೆವೈಸಿ (KYC) ಕಡ್ಡಾಯ ಆವರ್ತಕ ನವೀಕರಣಕ್ಕಾಗಿ ಗಡುವನ್ನು ಮಾರ್ಚ್ 31, 2022ರ ವರೆಗೆ ವಿಸ್ತರಿಸಿದೆ. ಕೊರೊನಾದ ಓಮಿಕ್ರಾನ್‌ ಪ್ರಭೇದವು ಭಾರತದಲ್ಲೂ ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಈ ಗಡುವನ್ನು 2022ರ ಮಾರ್ಚ್‌ 31ರ ವರೆಗೆ ವಿಸ್ತರಿಸಲಾಗಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತನ್ನ ನೋಟಿಸ್‌ನಲ್ಲಿ ತಿಳಿಸಿದೆ. … Continued