ಶ್ರೀಲಂಕಾಕ್ಕೆ ಅವಧಿ ಮೀರಿದ ಪರಿಹಾರ ಸಾಮಗ್ರಿ ಕಳುಹಿಸಿತೇ ಪಾಕಿಸ್ತಾನ..? ಫೋಟೋಗಳು ವೈರಲ್ ; ವ್ಯಾಪಕ ಟೀಕೆ

ಭೀಕರ ‘ದಿತ್ವಾ’ ಚಂಡಮಾರುತದಿಂದ ತತ್ತರಿಸಿರುವ ಶ್ರೀಲಂಕಾದಲ್ಲಿ ಪಾಕಿಸ್ತಾನವು ಕಳುಹಿಸಿದ ಆಹಾರ ಸಾಮಗ್ರಿಗಳು ಚರ್ಚೆಗೆ ಒಳಗಾಗಿದೆ. ಸಹಾಯದ ಸಂಕೇತವಾಗಿ ಪಾಕಿಸ್ತಾನ ಕಳುಹಿಸಿದ ಪರಿಹಾರ ಸಾಮಗ್ರಿಗಳ ಬಗ್ಗೆ ಆಕ್ಷೇಪ ವ್ಯಕ್ತವಾಗಿದ್ದು, ಆನ್‌ಲೈನ್‌ನಲ್ಲಿ ಹರಿದಾಡುತ್ತಿರುವ ಫೋಟೋಗಳಲ್ಲಿ ಆಹಾರ ಮತ್ತು ಇತರ ಸರಬರಾಜು ಮಾಡಿದ ಸಾಮಗ್ರಿಗಳು ಅವಧಿ ಮೀರಿದಂತೆ (Expiry Date) ಕಂಡುಬಂದಿರುವುದು ಕೋಲಾಹಲಕ್ಕೆ ಕಾರಣವಾಗಿದೆ. ಇದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ … Continued

ವೀಡಿಯೊ..| ಇತಿಹಾಸ ಸೃಷ್ಟಿಸಿದ ಟರ್ಕಿಯ ಮಾನವರಹಿತ ಯುದ್ಧ ವಿಮಾನ ; ರಾಡಾರ್ ನಿರ್ದೇಶಿತ ಕ್ಷಿಪಣಿಯಿಂದ ನಿಖರ ದಾಳಿ

ಅಂಕಾರಾ: ಟರ್ಕಿಯು ತನ್ನ ಮಾನವರಹಿತ (Unmanned) ಯುದ್ಧ ವಿಮಾನವಾದ ‘ಕಿಜಿಲೆಲ್ಮಾ’ (Kizilelma) ವನ್ನು ಯಶಸ್ವಿಯಾಗಿ ಪರೀಕ್ಷಿಸುವ ಮೂಲಕ ಜಾಗತಿಕ ಯುದ್ಧ ವಿಮಾನಯಾನ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದಿದೆ. ರಾಡಾರ್ ನಿರ್ದೇಶಿತ ಗಾಳಿಯಿಂದ-ಗಾಳಿಗೆ (air-to-air) ಚಿಮ್ಮುವ ಕ್ಷಿಪಣಿಯನ್ನು ಬಳಸಿ, ಒಂದು ವಿಮಾನವನ್ನು ನಿಖರವಾಗಿ ಮತ್ತು ಯಶಸ್ವಿಯಾಗಿ ಗುರಿ ಮಾಡಿ ಪರೀಕ್ಷೆ ನಡೆಸಲಾಗಿದೆ. ಸಿನೋಪ್ ಫೈರಿಂಗ್ ರೇಂಜ್‌ನ ಕರಾವಳಿಯಲ್ಲಿ … Continued

ಪ್ರಖರ ಸೌರ ವಿಕಿರಣದಿಂದ ಏರ್‌ಬಸ್ ವಿಮಾನಗಳ ಸಾಫ್ಟ್‌ವೇರ್‌ನಲ್ಲಿ ದೋಷ ಪತ್ತೆ ; ಜಗತ್ತಿನಾದ್ಯಂತ ಸಾವಿರಾರು ವಿಮಾನಗಳು ಸ್ಥಗಿತ…!

ತೀವ್ರ ಸೌರ ವಿಕಿರಣದಿಂದಾಗಿ (Intense Solar Radiation) ಏರ್‌ಬಸ್ ಎ320 ಸರಣಿಯ ವಿಮಾನಗಳ ನಿರ್ಣಾಯಕ ಸಾಫ್ಟ್‌ವೇರ್‌ನಲ್ಲಿ ದೋಷ ಕಂಡುಬಂದಿದ್ದು, ಅದನ್ನು ಸರಿಪಡಿಸುವವರೆಗೆ ಜಗತ್ತಿನಾದ್ಯಂತ ಸಾವಿರಾರು ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ. ಏರ್‌ಬಸ್ ಕಂಪನಿಯ 55 ವರ್ಷಗಳ ಇತಿಹಾಸದಲ್ಲಿ ಇದುವರೆಗೆ ಕಂಡ ಅತಿ ದೊಡ್ಡ ‘ವಿಮಾನ ಹಿಂಪಡೆಯುವಿಕೆ’ ಅಥವಾ ‘ರಿಕೌಂಟ್’ ಇದಾಗಿದೆ. ಏನಿದು ತಾಂತ್ರಿಕ ದೋಷ? ಈ ಸಮಸ್ಯೆ … Continued

ವೀಡಿಯೊ…| ‘ಇದು ವಿರಾಟ್, ಸಹಾಯ ಬೇಕು’ : ಕಪ್ಪು ಸಮುದ್ರದಲ್ಲಿ ರಷ್ಯಾದ 2 ತೈಲ ಹಡಗುಗಳ ಮೇಲೆ ದಾಳಿ

 ಕಪ್ಪು ಸಮುದ್ರದಲ್ಲಿ ರಷ್ಯಾದ ಎರಡು ತೈಲ ಟ್ಯಾಂಕರ್‌ಗಳ ಮೇಲೆ ಮಾನವರಹಿತ ನೌಕೆಯಿಂದ (ಡ್ರೋನ್) ದಾಳಿ ನಡೆದಿದೆ ಎಂದು ಶನಿವಾರ ಟರ್ಕಿ ಸರ್ಕಾರ ವರದಿ ಮಾಡಿದೆ. ಈ ಟ್ಯಾಂಕರ್‌ಗಳನ್ನು ‘ವಿರಾಟ್’ (Virat) ಮತ್ತು ‘ಕೈರೋಸ್’ (Kairos) ಎಂದು ಗುರುತಿಸಲಾಗಿದೆ. ಟರ್ಕಿ ಸರ್ಕಾರದ ಹೇಳಿಕೆಯ ಪ್ರಕಾರ, ಶುಕ್ರವಾರ ತಡರಾತ್ರಿ ಈ ಘಟನೆ ನಡೆದಿದೆ. ಟ್ಯಾಂಕರ್‌ಗಳ ಸಿಬ್ಬಂದಿಯನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. … Continued

ಅಪರೂಪದ ವೀಡಿಯೊ…| ಶ್ರೀಲಂಕಾ ಭೀಕರ ಪ್ರವಾಹ: ಉಕ್ಕಿದ ನದಿಯಲ್ಲಿ ಸಿಲುಕಿದ್ದ ಆನೆ ಬೆನ್ನೇರಿ ಕುಳಿತು ಜೀವ ಉಳಿಸಿಕೊಂಡ ಚಿರತೆ…!

ಶ್ರೀಲಂಕಾ: ದಿತ್ವಾ ಚಂಡುಮಾರುತದಿಂದಾಗಿ ಶ್ರೀಲಂಕಾದಾದ್ಯಂತ ಭೀಕರ ಪ್ರವಾಹಗಳು ಸೃಷ್ಟಿಯಾಗಿದ್ದು, ಈವರೆಗೆ 123 ಜನ ಸಾವಿಗೀಡಾಗಿದ್ದಾರೆ ಹಾಗೂ 130 ಜನ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಭೀಕರ ಪ್ರವಾಹದ ಪರಿಣಾಮ ಈ ವನ್ಯಜೀವಿಗಳ ಮೇಲೆಯೂ ಆಗಿದ್ದು, ಬದುಕುಳಿಯಲು ಹತಾಶ ಪ್ರಯತ್ನ ಮಾಡುವ ಪರಿಸ್ಥಿತಿ ಎದುರಾಗಿದೆ. ಇಂತಹ ಭೀಕರ ಪ್ರವಾಹದಲ್ಲಿ ಸೆರೆ ಸಿಕ್ಕ ಅಪರೂಪದ ಹಾಗೂ ಅಷ್ಟೇ ಹೃದಯ ತಟ್ಟುವ … Continued

‘ದಿತ್ವಾ’ ಚಂಡಮಾರುತದ ಆರ್ಭಟಕ್ಕೆ ಶ್ರೀಲಂಕಾದಲ್ಲಿ 56 ಸಾವು : ವ್ಯಾಪಕ ಪ್ರವಾಹ, ಕೊಲಂಬೊದಲ್ಲಿ ಜನಜೀವನ ಅಸ್ತವ್ಯಸ್ತ

 ಕೊಲಂಬೊ: ‘ದಿತ್ವಾ’ ಚಂಡಮಾರುತವು ಶುಕ್ರವಾರ ಶ್ರೀಲಂಕಾದಾದ್ಯಂತ ಉತ್ತರಕ್ಕೆ ಸಾಗಿದ್ದು, ವ್ಯಾಪಕ ಪ್ರವಾಹಕ್ಕೆ ಕಾರಣವಾಗಿದೆ. ಚಂಡುಮಾರುತದಿಂದ ಈವರೆಗೆ 56 ಜನರು ಸಾವಿಗೀಡಾಗಿದ್ದಾರೆ ಮತ್ತು 23 ಮಂದಿ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ಮುಂದಿನ 12 ಗಂಟೆಗಳಲ್ಲಿ ಭಾರೀ ಮಳೆ ಮತ್ತು ಬಿರುಗಾಳಿಯಿಂದಾಗಿ ಮತ್ತಷ್ಟು ಪ್ರವಾಹ ಪರಿಸ್ಥಿತಿ ಉಂಟಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಶ್ರೀಲಂಕಾದ ಪೂರ್ವ ಮತ್ತು ಮಧ್ಯದ ಪ್ರದೇಶಗಳಲ್ಲಿ … Continued

25 ಲಕ್ಷ ‘ಸ್ಟೋನ್‌ ಕೋಲ್ಡ್‌ ಕಿಲ್ಲರ್ಸ್‌’ ನಿರ್ಮೂಲನೆಗೆ ಯುದ್ಧ ಸಾರಿದ ನ್ಯೂಜಿಲೆಂಡ್ : ಯಾರು ಈ ಸ್ಟೋನ್‌ ಕೋಲ್ಡ್‌ ಕಿಲ್ಲರ್ಸ್‌..?

ವೆಲ್ಲಿಂಗ್ಟನ್ (ನ್ಯೂಜಿಲೆಂಡ್): ನ್ಯೂಜಿಲೆಂಡ್ ತನ್ನ ದುರ್ಬಲ ಸ್ಥಳೀಯ ವನ್ಯಜೀವಿಗಳನ್ನು ರಕ್ಷಿಸುವ ಮಹತ್ವದ ಉದ್ದೇಶದಿಂದ 2050ರ ವೇಳೆಗೆ ದೇಶಾದ್ಯಂತ ಇರುವ ಎಲ್ಲ ಕಾಡು ಬೆಕ್ಕುಗಳನ್ನು (Feral Cats) ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಯೋಜನೆ ರೂಪಿಸಿದೆ. ಈ ಕುರಿತು ಮಾತನಾಡಿರುವ ಸಂರಕ್ಷಣಾ ಸಚಿವ ತಾಮಾ ಪೊಟಾಕಾ (Tama Potaka) ಅವರು ಕಾಡು ಬೆಕ್ಕುಗಳನ್ನು “ಕಲ್ಲು ಹೃದಯದ ಕೊಲೆಗಡುಕರು (“stone … Continued

ಹಾಂಗ್ ಕಾಂಗ್‌ನಲ್ಲಿ ಭೀಕರ ಅಗ್ನಿ ಅನಾಹುತ: 44 ಸಾವು, ನೂರಾರು ಮಂದಿ ನಾಪತ್ತೆ

ಹಾಂಗ್ ಕಾಂಗ್: ಹಾಂಗ್ ಕಾಂಗ್‌ನ ಎತ್ತರದ ವಸತಿ ಸಂಕೀರ್ಣದಲ್ಲಿ ಸಂಭವಿಸಿದ ಭೀಕರ ಅಗ್ನಿ ಅನಾಹುತದಲ್ಲಿ ಕನಿಷ್ಠ 44 ಜನರು ಸಾವಿಗೀಡಾಗಿದ್ದಾರೆ ಮತ್ತು ನೂರಾರು ಜನರು ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದಶಕಗಳಲ್ಲಿ ಹಾಂಗ್ ಕಾಂಗ್ ಕಂಡ ಅತ್ಯಂತ ಭೀಕರ ಬೆಂಕಿಯ ಘಟನೆ ಇದಾಗಿದೆ. ಇದು ಬುಧವಾರ ಮಧ್ಯಾಹ್ನ 2,000 ಅಪಾರ್ಟ್‌ಮೆಂಟ್‌ಗಳನ್ನು ಹೊಂದಿರುವ ಎಂಟು ಕಟ್ಟಡಗಳ ವಸತಿ … Continued

ವೀಡಿಯೊ…| ಅಂತ್ಯಸಂಸ್ಕಾರಕ್ಕೂ ಮುನ್ನ ಶವಪೆಟ್ಟಿಗೆಯೊಳಗೆ ಎಚ್ಚರಗೊಂಡ ಸತ್ತುಹೋಗಿದ್ದಾಳೆಂದು ಭಾವಿಸಲಾಗಿದ್ದ ಮಹಿಳೆ…!

ಥಾಯ್ಲೆಂಡ್‌ನ ಬೌದ್ಧ ದೇವಾಲಯವೊಂದರಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಸತ್ತು ಹೋಗಿದ್ದಾರೆಂದು ನಂಬಲಾದ ಮಹಿಳೆಯೊಬ್ಬರು ಅಂತ್ಯಸಂಸ್ಕಾರಕ್ಕೆ ಮುನ್ನವೇ ಶವಪೆಟ್ಟಿಗೆಯೊಳಗೆ ಜೀವಂತವಾಗಿ ಪತ್ತೆಯಾಗಿದ್ದಾರೆ. ಈ ಘಟನೆ ಬ್ಯಾಂಕಾಕ್‌ನ ಹೊರವಲಯದಲ್ಲಿರುವ ನೊಂಥಬುರಿಯ ವಾಟ್ ರಾಟ್ ಪ್ರಕೋಂಗ್ ಥಾಮ್ (Wat Rat Prakhong Tham) ದೇವಾಲಯದಲ್ಲಿ ನಡೆದಿದೆ. ಒಂದು ಪಿಕಪ್ ಟ್ರಕ್‌ನ ಹಿಂಭಾಗದಲ್ಲಿ ಇರಿಸಲಾಗಿದ್ದ ಬಿಳಿ ಶವಪೆಟ್ಟಿಗೆಯಿಂದ ಅಸಾಮಾನ್ಯ ಚಲನೆಯನ್ನು ದೇವಾಲಯದ … Continued

ಮಾನವನ ಪ್ರೌಢಾವಸ್ಥೆ ಪ್ರಾರಂಭವಾಗೋದು 32 ವರ್ಷಗಳ ನಂತರವಂತೆ ; ಮೆದುಳಿನ 5 ಹಂತಗಳ ಬಗ್ಗೆ ವಿಜ್ಞಾನಿಗಳ ಅಧ್ಯಯನದಲ್ಲಿ ಬಹಿರಂಗ…

ಲಂಡನ್: ಮಾನವನ ಮೆದುಳು ತನ್ನ ಜೀವನದಲ್ಲಿ ಐದು ವಿಭಿನ್ನ ಹಂತಗಳ ಮೂಲಕ ಸಾಗುತ್ತದೆ ಎಂದು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ತಿಳಿಸಿದ್ದಾರೆ. ಪ್ರಮುಖ ತಿರುವುಗಳು ೯, ೩೨, ೬೬, ಮತ್ತು ೮೩ ನೇ ವಯಸ್ಸಿನಲ್ಲಿ ಸಂಭವಿಸುತ್ತವೆ ಎಂದು ಈ ಅಧ್ಯಯನವು ಹೇಳಿದೆ. ಈ ಅಧ್ಯಯನವನ್ನು ೯೦ ವರ್ಷದವರೆಗಿನ ಸುಮಾರು ೪,೦೦೦ ಜನರನ್ನು ಬಳಸಿ ನಡೆಸಲಾಗಿದ್ದು, ಅವರ ಮೆದುಳಿನ … Continued