ಶಿರಸಿ ತಾಲೂಕಿನಲ್ಲಿ ದಾಖಲೆಯ 24 ಸೆಂಮೀ ಮಳೆ, ಉಕ್ಕಿದ ನದಿಗಳು, ತೋಟ-ಗದ್ದೆಗಳು ಜಲಾವೃತ

ಶಿರಸಿ: ಕಳೆದ ಇಪ್ಪತ್ನಾಲ್ಕು ತಾಸುಗಳ ಅವಧಿಯಲ್ಲಿ ತಾಲ್ಲೂಕಿನಲ್ಲಿ 24 ಸೆಂಮೀ. ಮಳೆ ಸುರಿದಿದೆ. ನದಿ, ಕೊಳ್ಳಗಳು ಭರ್ತಿಯಾಗಿದ್ದು ಹಲವೆಡೆ ತೋಟ, ಗದ್ದೆಗಳು ಜಲಾವೃತಗೊಂಡಿವೆ. ಮಾರಿಗದ್ದೆ, ಸರಕುಳಿ, ಮಾದ್ನಕಳ ಸೇತುವೆಗಳ ಮೇಲೆ ನದಿ ನೀರು ರಭಸವಾಗಿ ಹರಿಯುತ್ತಿರುವುದರಿಂದ ಶಿರಸಿ ಹಾಗೂ ಸಿದ್ದಾಪುರ ತಾಲ್ಲೂಕುಗಳ ನಡುವಿನ ಸಂಪರ್ಕ ಸ್ಥಗಿತಗೊಂಡಿದೆ. ಪಟ್ಟಣಹೊಳೆ, ಕೆಂಗ್ರೆ ಹೊಳೆಯೂ ಉಕ್ಕಿ ಹರಿಯುತ್ತಿದ್ದು ಸಂಚಾರ ಸ್ಥಗಿತಗೊಂಡಿದೆ. … Continued

ಪರ್ತಗಾಳಿ ವಿದ್ಯಾಧಿರಾಜ ಶ್ರೀಗಳು ಅವತಾರ ಪುರುಷರಾಗಿದ್ದರು, ಕಾಲ್ನಡಿಗೆಯಲ್ಲಿ ೩೭೦ ಕಿಮೀ ನಡೆದು ಅಸಾಧ್ಯ ಗಂಡಕಿಯಾತ್ರೆ ಮಾಡಿದ್ದರು..

ಕುಮಟಾ; ಗುರುವಾರ ಸಂಜೆ ಡಾ.ಎ.ವಿ.ಬಾಳಿಗಾ ಕಲಾ ಮತ್ತು ವಿಜ್ಞಾನ ಬಹಾವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೋಕರ್ಣ ಪರ್ತಗಾಳಿ ಮಠದ ಶ್ರೀ ವಿದ್ಯಾಧಿರಾಜ ಶ್ರೀಪಾದ ವಡೇರ ಸ್ವಾಮೀಜಿ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕೆನರಾ ಕಾಲೇಜು ಸೊಸೈಟಿಯ ಕಾರ್ಯಾಧ್ಯಕ್ಷ ಡಿ.ಎಂ.ಕಾಮತ್ ಮಾತನಾಡಿ, ಶ್ರೀಗಳು ಅವತಾರ ಪುರುಷರಾಗಿದ್ದರು. ಭಾರತೀಯ ಧರ್ಮ-ಸಂಸ್ಕೃತಿಯ ಅಭಿವೃದ್ಧಿಗೆ ಅನುಪಮ ಕೊಡುಗೆ ನೀಡಿದ್ದಾರೆ. ಧರ್ಮಗ್ರಂಥಗಳಲ್ಲಿ ಆಳವಾದ … Continued

ದ್ವಿತೀಯ ಪಿಯುಸಿ: ಡಾ.ಬಾಳಿಗಾ ವಾಣಿಜ್ಯ ವಿದ್ಯಾರ್ಥಿಗಳ ಉತ್ತಮ ಸಾಧನೆ

ಕುಮಟಾ;ಡಾ.ಎ.ವಿ.ಬಾಳಿಗಾ ವಾಣಿಜ್ಯ ಮಹಾವಿದ್ಯಾಲಯದ ಪದವಿಪೂರ್ವ ವಿಭಾಗದ ೧೧೦ ವಿದ್ಯಾರ್ಥಿಗಳಲ್ಲಿ ೧೨ ಡಿಸ್ಟಿಂಗಶ್‌ನ್ ೬೭ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ೩೧ ವಿದ್ಯಾರ್ಥಿಗಳು ದ್ವಿತಿಯ ದರ್ಜೆಯಲ್ಲಿ ಉತ್ತಿರ್ಣ ರಾಗಿದ್ದಾರೆ. ಕಾರ್ತಿಕ ಹೆಗಡೆ ಸಾರಂಗ ಮತ್ತು ಚೇತನಾ ದತ್ತಾತ್ರಯ ಭಟ್ಟ ಎಲ್ಲ ವಿಷಯಗಳಲ್ಲಿಯೂ ನೂರೂ ಅಂಕ ಗಳಿಸಿ ೬೦೦ ಅಂಕ ಗಳಿಸಿದ್ದಾರೆ.ಪ್ರಜ್ಞಾ ಹೆಗಡೆ ೫೭೯ ಅಂಕ ಹಾಗೂ ಮಿಥುನ ನಾಯಕ … Continued

ಹಾಲಕ್ಕಿ ಸಮುದಾಯ ಭವನ ಲೋಕಾರ್ಪಣೆ

ಕುಮಟಾ : ತಾಲ್ಲೂಕಿನ ದೀವಗಿಯಲ್ಲಿ ಹಾಲಕ್ಕಿ ಒಕ್ಕಲಿಗರ ಸಂಘ ವತಿಯಿಂದ ಆಯೋಜಿಸಲಾಗಿದ್ದ ಹಾಲಕ್ಕಿ ಒಕ್ಕಲಿಗರ ಸಮುದಾಯ ಭವನದ ಲೋಕಾರ್ಪಣೆ ಮತ್ತು ಗುರುವಂದನಾ ಸಮಾರಂಭದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿಯವರು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಕಾರ್ಯಕ್ರಮದಲ್ಲಿ ಶ್ರೀ ಪ್ರಸನ್ನನಾಥ ಸ್ವಾಮೀಜಿ, ಉಪಮುಖ್ಯಮಂತ್ರಿ ಡಾ. ಅಶ್ವಥ್ ನಾರಾಯಣ್ , ಸಚಿವರಾದ ಶಿವರಾಮ್ ಹೆಬ್ಬಾರ್ … Continued

ಹೊನ್ನಾವರ: ಇಂದು ಸಂಜೆಯಿಂದ ಬೆಳದಿಂಗಳ ಸಂಗೀತೋತ್ಸವ

ಹೊನ್ನಾವರ: ುತ್ತರ ಕನ್ನಡ ಜಿಲ್ಲೆಯ ಹೊನ್ನಾವರ  ತಾಲೂಕಿನ   ನೀಲ್ಕೋಡ ಕರಿಕಾನಮ್ಮನ ಆವಾರದಲ್ಲಿ ಫೆ.೨೭ರಂದು ೨೩ನೇ ವರ್ಷದ ಬೆಳದಿಂಗಳ ಸಂಗೀತೋತ್ಸವ ನಡೆಯಲಿದೆ. ಕಲಾಮಂಡಲ ಹೊನ್ನಾವರ, ಎಸ್‌ಕೆಪಿ ಮ್ಯೂಸಿಕ್‌ ಟ್ರಸ್ಟ್‌ ಅರೆಅಂಗಡಿ, ಎಸ್‌ಕೆಪಿ ದೇವಸ್ಥಾನ ಟ್ರಸ್ಟ್‌ ನೀಲ್ಕೊಡು ಸಹಯೋಗದಲ್ಲಿ ಅಹೋರಾತ್ರಿ ಸಂಗೀತೋತ್ಸವ ಜರುಗಲಿದೆ. ಸಂಜೆ ೭:೧೫ಕ್ಕೆ ಸಭಾ ಕಾರ್ಯಕ್ರಮ ಜರುಗಲಿದ್ದು, ಶಾಸಕ ದಿನಕರ ಶೆಟ್ಟಿ ಉದ್ಘಾಟನೆ ನೆರವೇರಿಸುವರು. ಮುಖ್ಯ … Continued

ಕುಮಟಾ: ಆಂಬುಲೆನ್ಸ್‌ಗಳ ಖರೀದಿಗೆ ಸಾರ್ವಜನಿಕರ ಸಹಕಾರ ಕೋರಿದ ರೋಟರಿ ಕ್ಲಬ್‌

ರೋಟರಿ ಕ್ಲಬ್‌ ಕುಮಟಾ ಸಾರ್ವಜನಿಕರ ಜೀವ ರಕ್ಷಣೆಯ ಮಹತ್ತರ ಕಾರ್ಯಕ್ಕಾಗಿ ಸಾರ್ವಜನಿಕರ ಸಹಕಾರ ಬಯಸಿದೆ. ಕುಮಟಾದ ಸಾರ್ವಜನಿಕ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ದಿಸೆಯಲ್ಲಿ ಸುಸಜ್ಜಿತ ಆಂಬುಲೆನ್ಸ್‌ಗಳನ್ನು ಹೊಂದಿಸಲು ಜನರಿಂದ ಸಹಾಯ ಕೇಳಿದೆ. ಕುಮಟಾ ಹಾಗೂ ಸುತ್ತಮುತ್ತಲಿನ ಜನರ ಜೀವ ರಕ್ಷಣೆಗೆ ಅಗತ್ಯವಾಗಿರುವ ಈ ಕಾರ್ಯಕ್ಕೆ ಜನರು ಉದಾರವಾಗಿ ದಾನ ಮಾಡಬೇಕೆಂದು ಕೋರಲಾಗಿದೆ. ಹಣ  ಸಂದಾಯಕ್ಕಾಗಿ ಬ್ಯಾಂಕ್‌ ವಿವರ … Continued

೨೮ರಂದು ಎರಡು ಕೃತಿಗಳು ಬಿಡುಗಡೆ

ಹೊನ್ನಾವರ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಹೊಸಾಕುಳಿ ಮೇಲನಗಂಟಿಗೆ ಶ್ರೀಧರಾನುಗ್ರಹದಲ್ಲಿ ಫೆ.೨೮ರಂದು ರವಿವಾರ ಮಧ್ಯಾಹ್ನ 3 ಗಂಟೆಗೆ ಅವರ ಕೃತಿಗಳಾದ ನಿತ್ಯಗಾಮಿನಿ ಹಾಗೂ ೨೨ನೇ ಕೃತಿ ನನಗೊಂದು ಭಾಷಣ ಬರೆದುಕೊಡ್ತೀರಾ ಟೀಚರ್‌ ಬಿಡುಗಡೆ ಕಾರ್ಯಕ್ರಮ ಭರವಸೆಯ ಬೆನ್ನೇರಿ ಎಂಬ ವಿಶಿಷ್ಟ ಕಾರ್ಯಕ್ರಮ ಆಯೋಜಿಸಲಾಗಿದೆ. ಇದೇ ಸಂದರ್ಭದಲ್ಲಿ ಆಳ್ವಾಸ್ ಮೂಡುಬಿದರೆ ಸಂಗೀತ ಶಿಕ್ಷಕರಾಗಿರುವ ಚಿನ್ಮಯ ಭಟ್ಟ … Continued