ದೇಶದಲ್ಲಿ ಸ್ಪುಟ್ನಿಕ್ ವಿ ಲಸಿಕೆ ತಯಾರಿಕೆಗೆ ಸೀರಮ್ ಇನ್‌ಸ್ಟಿಟ್ಯೂಟ್​ಗೆ ಡಿಸಿಜಿಐ ಷರತ್ತುಬದ್ಧ ಅನುಮತಿ

ನವ ದೆಹಲಿ: ರಷ್ಯಾದ ಸ್ಪುಟ್ನಿಕ್ ವಿ ಕೋವಿಡ್ ಲಸಿಕೆ ತಯಾರಿಕೆಗೆ ಕೆಲವು ಷರತ್ತುಗಳೊಂದಿಗೆ ಭಾರತೀಯ ಔಷಧ ನಿಯಂತ್ರಣ ಮಹಾ ನಿರ್ದೇಶನಾಲಯ(ಡಿಸಿಜಿಐ) ಸೆರಂ ಇನ್‌ಸ್ಟಿಟ್ಯೂಟ್‌ ಆಫ್ ಇಂಡಿಯಾ ಸಂಸ್ಥೆಗೆ ಅನುಮತಿ ನೀಡಿದೆ. ಈಗಾಗಲೇ ಕೋವಿಶೀಲ್ಡ್ ಲಸಿಕೆಯನ್ನು ಉತ್ಪಾದಿಸುತ್ತಿರುವ ಸೆರಂ ಇನ್‌ಸ್ಟಿಟ್ಯೂಟ್‌ ಆಫ್ ಇಂಡಿಯಾ ಸಂಸ್ಥೆ ಸ್ಪುಟ್ನಿಕ್ ವಿ ಲಸಿಕೆ ತಯಾರಿಕೆ ಮತ್ತು ಲಸಿಕೆಯ ವಿಶ್ಲೇಷಣೆ ಮತ್ತು ಪರೀಕ್ಷೆಗೆ … Continued

ಕೇರಳದ ಬಜೆಟ್‌: 20,000 ಕೋಟಿ ರೂ.ಗಳ ಕೋವಿಡ್ ಪುನರುಜ್ಜೀವನ ಪ್ಯಾಕೇಜ್, ಹೊಸ ತೆರಿಗೆಗಳಿಲ್ಲ

ಕೊಚ್ಚಿ: ದೇಶದಲ್ಲಿ ಕೊರೊನಾ ಎರಡನೇ ಉಲ್ಬಣ ಹೆಚ್ಚಳದಿಂದ ನಿಯಂತ್ರಣಕ್ಕಾಗಿ ಲಾಕ್​ಡೌನ್ ಜಾರಿಯಿಂದ ಕೂಲಿ ಕಾರ್ಮಿಕರು ದುರ್ಬಲರಿಗೆ ನೆರವಾಗುವ ದೃಷ್ಟಿಯಿಂದ ಅನೇಕ ರಾಜ್ಯಗಳು ಸಾವಿರಾರು ಕೋಟಿ ವಿಶೇಷ ಪ್ಯಾಕೇಜ್ ಘೋಷಿಸುತ್ತಿದೆ. ಶುಕ್ರವಾರ ಕೇರಳ ವಿಧಾನಮಂಡಲ ಅಧಿವೇಶದಲ್ಲಿ ಪರಿಷ್ಕೃತ ಬಜೆಟ್ ಸಲ್ಲಿಸಿರುವ ಕೇರಳ ಹಣಕಾಸು ಸಚಿವ ಕೆ.ಎನ್. ಬಾಲಗೋಪಾಲ್ 20,000 ಕೋಟಿ ರೂ.ಮೊತ್ತದ ಕೋವಿಡ್ ವಿಶೇಷ ಪ್ಯಾಕೇಜ್ ಘೋಷಿಸಿದ್ದಾರೆ. … Continued

ಸಾಹಸವೋ, ವ್ಯವಸ್ಥೆ ದುಸ್ಥಿತಿಯ ಪ್ರತಿಬಿಂಬವೋ ?: ಮಹಿಳೆ ಕೋವಿಡ್‌ ಪಾಸಿಟಿವ್‌ ಮಾವನನ್ನು ತನ್ನ ಬೆನ್ನ ಮೇಲೆ ಆಸ್ಪತ್ರೆಗೆ ಹೊತ್ತೊಯ್ದ ಚಿತ್ರ ವೈರಲ್‌..!

ಗುವಾಹಟಿ: ಸೋಶಿಯಲ್ ಮೀಡಿಯಾದಲ್ಲಿ ಹೃದಯ ವಿದ್ರಾವಕ ಚಿತ್ರವೊಂದು ಕಾಣಿಸಿಕೊಳ್ಳುತ್ತಿದೆ, ಇದರಲ್ಲಿ ಯುವತಿಯೊಬ್ಬಳು ವಯಸ್ಸಾದ ವ್ಯಕ್ತಿಯನ್ನು ಬೆನ್ನಿನ ಮೇಲೆ ಹೊತ್ತುಕೊಂಡು ಹೋಗುವುದನ್ನು ಕಾಣಬಹುದಾಗಿದೆ. ಚಿತ್ರದಲ್ಲಿ ಕಾಣುವ ಮಹಿಳೆ, ನಿಹಾರಿಕಾ ದಾಸ್ ಎಂದು ಗುರುತಿಸಲ್ಪಟ್ಟಿದ್ದಾಳೆ, ಅವಳು ತನ್ನ ಮಾವನನ್ನು ಬೆನ್ನಿನ ಮೇಲೆ ಹೊತ್ತುಕೊಂಡು ಕೋವಿಡ್‌ ಕೇರ್ ಕೇಂದ್ರಕ್ಕೆ ಕರೆದೊಯ್ದಿದ್ದಾಳೆ, ಏಕೆಂದರೆ ಆಕೆಯ ಮಾವನಿಗೆ ಕೋವಿಡ್‌-19 ಪಾಸಿಟಿವ್. ನಂತರ, ಅವಳಿಗೂ … Continued

ಭಾರತದಲ್ಲಿ ಮೊದಲು ಕಂಡುಬಂದ ಕೋವಿಡ್‌-19 ಡೆಲ್ಟಾ ರೂಪಾಂತರದ ವಿರುದ್ಧ ಫಿಜರ್ ಲಸಿಕೆಯಿಂದ ಕಡಿಮೆ ಪ್ರತಿಕಾಯ ಉತ್ಪಾದನೆ: ಲ್ಯಾನ್ಸೆಟ್ ಅಧ್ಯಯನ

ಲಂಡನ್: ದಿ ಲ್ಯಾನ್ಸೆಟ್ ಜರ್ನಲ್‌ನಲ್ಲಿ ಪ್ರಕಟವಾದ ಸಂಶೋಧನೆಯ ಪ್ರಕಾರ ಫಿಜರ್-ಬಯೋಟೆಕ್ ಲಸಿಕೆಯೊಂದಿಗೆ ಸಂಪೂರ್ಣವಾಗಿ ಲಸಿಕೆ ಹಾಕಿದ ಜನರು ಮೂಲ ಸ್ಟ್ರೈನ್‌ಗೆ ಹೋಲಿಸಿದರೆ ಭಾರತದಲ್ಲಿ ಮೊದಲು ಗುರುತಿಸಲ್ಪಟ್ಟ ಡೆಲ್ಟಾ ರೂಪಾಂತರದ ವಿರುದ್ಧ ಐದು ಪಟ್ಟು ಕಡಿಮೆ ಮಟ್ಟದ ತಟಸ್ಥಗೊಳಿಸುವ ಪ್ರತಿಕಾಯಗಳನ್ನು ಹೊಂದುವ ಸಾಧ್ಯತೆಯಿದೆ. ವೈರಸ್ ಅನ್ನು ಗುರುತಿಸಲು ಮತ್ತು ಹೋರಾಡಲು ಸಮರ್ಥವಾಗಿರುವ ಈ ಪ್ರತಿಕಾಯಗಳ ಮಟ್ಟವು ಹೆಚ್ಚುತ್ತಿರುವ … Continued

ಆಪಲ್ ನಿಂದ ಶೀಘ್ರದಲ್ಲೇ ವೈರ್‌ಲೆಸ್ ಚಾರ್ಜಿಂಗ್-ಹೊಸ ಐಪ್ಯಾಡ್ ಮಿನಿಯೊಂದಿಗೆ ಐಪ್ಯಾಡ್ ಪ್ರೊ ಬಿಡುಗಡೆ

*ಐಪ್ಯಾಡ್ ಪ್ರೊಗಾಗಿ ಮ್ಯಾಗ್‌ಸೇಫ್ ಸಿಸ್ಟಮ್‌ನಂತೆಯೇ ಪಿಪಿಎಲ್ ವೈರ್‌ಲೆಸ್ ಚಾರ್ಜಿಂಗ್ ತಂತ್ರಜ್ಞಾನವನ್ನು ಪರೀಕ್ಷಿಸುತ್ತಿದೆ. *ಸಾಧನದ ಕೆಳಭಾಗದಲ್ಲಿರುವ ಥಂಡರ್ಬೋಲ್ಟ್ ಪೋರ್ಟ್ ಮೂಲಕ ಚಾರ್ಜಿಂಗ್ ಮಾಡುವುದು ಹೊಸ ವಿನ್ಯಾಸದ ಒಂದು ಭಾಗವಾಗಿ ಮುಂದುವರಿಯುತ್ತದೆ. *ಐಪ್ಯಾಡ್‌ನ ವೈರ್‌ಲೆಸ್ ಪಾಯಿಂಟ್‌ಗಳನ್ನು ಲಗತ್ತಿಸುವ ಮೂಲಕ ರಿವರ್ಸ್ ಚಾರ್ಜಿಂಗ್ ಐಫೋನ್ ಅನ್ನು ಆಪಲ್ ಅಭಿವೃದ್ಧಿಪಡಿಸುತ್ತಿದೆ. ನಿಜವಾದ ವೈರ್‌ಲೆಸ್ ಅನುಭವಕ್ಕಾಗಿ ವೈರ್‌ಲೆಸ್ ಚಾರ್ಜಿಂಗ್ ಅನ್ನು ಬೆಂಬಲಿಸುವ ಐಪ್ಯಾಡ್ … Continued

43,000 ಕೋಟಿ ರೂ.ಗಳ ವೆಚ್ಚದಲ್ಲಿ 6 ಸಾಂಪ್ರದಾಯಿಕ ಜಲಾಂತರ್ಗಾಮಿ ನೌಕೆಗಳ ನಿರ್ಮಾಣಕ್ಕೆ ಕೇಂದ್ರದಿಂದ ಅನುಮತಿ

ನವ ದೆಹಲಿ: ಸಶಸ್ತ್ರ ಪಡೆಗಳ ಆಧುನೀಕರಣ ಮತ್ತು ಕಾರ್ಯಾಚರಣೆಯ ಅಗತ್ಯಗಳಿಗಾಗಿ ಸುಮಾರು 6,000 ಕೋಟಿ ರೂ.ಗಳ ವಿವಿಧ ಉಪಕರಣಗಳ ಬಂಡವಾಳ ಸ್ವಾಧೀನಕ್ಕೆ ಸಂಬಂಧಿಸಿದ ಪ್ರಸ್ತಾಪಗಳಿಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ರಕ್ಷಣಾ ಸ್ವಾಧೀನ ಮಂಡಳಿ (ಡಿಎಸಿ) ಶುಕ್ರವಾರ ಅನುಮೋದನೆ ನೀಡಿದೆ. ಹೆಚ್ಚುವರಿಯಾಗಿ, ಸ್ಟ್ರಾಟೆಜಿಕ್ ಪಾರ್ಟ್‌ನರ್‌ಶಿಪ್ (ಎಸ್‌ಪಿ) ಮಾದರಿಯಡಿಯಲ್ಲಿ ಪ್ರಾಜೆಕ್ಟ್ ಪಿ 75 … Continued

‘ಪ್ರಚಾರ ಪಡೆಯುವ ಪ್ರಯತ್ನ’: 5ಜಿ ನೆಟ್‌ವರ್ಕ್ ವಿರುದ್ಧ ಜುಹಿ ಚಾವ್ಲಾ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್,20 ಲಕ್ಷ ರೂ.ದಂಡ

ನವ ದೆಹಲಿ: ಭಾರತದಲ್ಲಿ 5 ಜಿ ಟೆಲಿಕಾಂ ತಂತ್ರಜ್ಞಾನವನ್ನು ‘ಪರೀಕ್ಷಿಸದ’ ಅನುಷ್ಠಾನಕ್ಕೆ ವಿರುದ್ಧವಾಗಿ ನಟಿ ಮತ್ತು ಪರಿಸರವಾದಿ ಜುಹಿ ಚಾವ್ಲಾ ಅವರು ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ಶುಕ್ರವಾರ ವಜಾಗೊಳಿಸಿದೆ ಮತ್ತು ‘ಕಾನೂನಿನ ಪ್ರಕ್ರಿಯೆಯನ್ನು ದುರುಪಯೋಗಪಡಿಸಿಕೊಂಡಿದ್ದಕ್ಕಾಗಿ ಅರ್ಜಿದಾರರಿಗೆ 20 ಲಕ್ಷ ರೂ.ದಂಡ ವಿಧಿಸಿದೆ. ಚಾವ್ಲಾ ಅವರ ಮೊಕದ್ದಮೆಯು ಮಾನವರು ಮತ್ತು ಇತರ ಜೀವಿಗಳ ಮೇಲೆ 5 … Continued

ಕೋವಿಡ್ ನಿಂದ ಚೆನ್ನೈನ ವಂಡಲೂರು ಮೃಗಾಲಯದಲ್ಲಿ ಸಿಂಹಿಣಿ ಸಾವು, ಎಂಟು ಸಿಂಹಗಳಿಗೆ ಪಾಸಿಟಿವ್‌..!

ಚೆನ್ನೈ: ವಂಡಲೂರಿನ ಅರಿಗ್ನಾರ್ ಅಣ್ಣ ಝೂಲಾಜಿಕಲ್ ಪಾರ್ಕ್‌ನಲ್ಲಿ ಒಂಭತ್ತು ವರ್ಷದ ಸಿಂಹಿಣಿ ನೀಲಾ ಕೋವಿಡ್ -19 ನಿಂದ ಮೃತಪಟ್ಟಿದೆ ಮತ್ತು ಇತರ ಎಂಟು ಸಿಂಹಗಳು ವೈರಸ್‌ಗೆ ಧನಾತ್ಮಕ ಪರೀಕ್ಷೆ ನಡೆಸಿವೆ. ಪ್ರಾಣಿಶಾಸ್ತ್ರದ ಉದ್ಯಾನದ ಸಫಾರಿ ಪ್ರದೇಶದಲ್ಲಿ ನೆಲೆಸಿದ್ದ ಸಿಂಹಿಣಿ ಗುರುವಾರ ಸಂಜೆ 6.15 ಕ್ಕೆ ನಿಧನವಾಯಿತು. ಮೃತ ಸಿಂಹಿಣಿ ಲಕ್ಷಣರಹಿತರಾಗಿತ್ತು. ಆದರೂ ಹಿಂದಿನ ದಿನ ಪರೀಕ್ಷೆ … Continued

ರೆಪೋ, ರಿವರ್ಸ್ ರೆಪೋ ದರದಲ್ಲಿ ಬದಲಾವಣೆ ಮಾಡದ ಆರ್‌ಬಿಐ

ಮುಂಬೈ: ರಿಸರ್ವ್‌ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಶುಕ್ರವಾರ ತನ್ನ ಹಣಕಾಸು ನೀತಿ ಪರಿಶೀಲನೆ ಮಾಡಿದ್ದು, ರೆಪೋ ದರ, ರಿವರ್ಸ್ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದೆ ಹಾಗೆಯೇ ಉಳಿಸಿದೆ. ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್, ರೆಪೋ ದರವನ್ನು ಈ ಹಿಂದಿನ ಶೇಕಡಾ 4ರಷ್ಟು ಮತ್ತು ರಿವರ್ಸ್ ರೆಪೋ … Continued

ಮತ್ತೆ ಜೈಲಿಗೆ ಹೋಗಲು ಪ್ರಧಾನಿ ಕೊಲ್ಲುವ ಬೆದರಿಕೆ ಹಾಕಿದ ಆರೋಪಿ

ನವ ದೆಹಲಿ: ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಆರೋಪಿಯೊಬ್ಬ ಪ್ರಧಾನಿ ನರೇಂದ್ರ ಮೋದಿಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿ ಮತ್ತೆ ಜೈಲು ಸೇರಿದ ಘಟನೆ ದೆಹಲಿಯಲ್ಲಿ ನಡೆದಿದೆ. ದೆಹಲಿಯ ಖಜೂರಿ ಖಾಸ್ ಪ್ರದೇಶದ ಸಲ್ಮಾನ್ (22) ಬಂಧಿತ ಎಂಬಾತ ಬಂಧಿತ ಆರೋಪಿ. ಹಲವಾರು ಪ್ರಕರಣಗಳಲ್ಲಿ ಆರೋಪಿಯಾಗಿರುವ ಸಲ್ಮಾನ್ ಬಂಧಿತನಾಗಿ ಜೈಲಿನಲ್ಲಿದ್ದ. ಇತ್ತೀಚೆಗೆ ಜಾಮೀನ ಮೇಲೆ ಬಿಡುಗಡೆಯಾಗಿದ್ದ. ಕಳೆದ ರಾತ್ರಿ … Continued