ಪ್ರವಾಸದ ಸಂದರ್ಭದಲ್ಲಿ ಹೋಟೆಲ್‌ಗಳಲ್ಲಿ ಬೇಡ, ಸರ್ಕಾರಿ ಗೆಸ್ಟ್‌ಹೌಸ್‌ಗಳಲ್ಲಿ ಉಳಿಯಿರಿ: ಉತ್ತರ ಪ್ರದೇಶದ ಸಚಿವರಿಗೆ, ಅಧಿಕಾರಿಗಳಿಗೆ ಸಿಎಂ ಆದಿತ್ಯನಾಥ ತಾಕೀತು

ಲಕ್ನೋ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ತಮ್ಮ ಸಂಪುಟದ ಸಚಿವರ ಕಾರ್ಯವೈಖರಿಗಾಗಿ ಹಲವು ನಿಯಮಗಳನ್ನು ರೂಪಿಸಿದ್ದಾರೆ. ಇನ್ನು ಮುಂದೆ ಸಚಿವರು ರಾಜ್ಯದ ಯಾವುದೇ ನಗರಗಳಿಗೆ ತೆರಳಿದರೆ ಐಷಾರಾಮಿ ಹೋಟೆಲ್‌ಗಳ ಬದಲು ಸರಕಾರಿ ಅತಿಥಿ ಗೃಹಗಳಲ್ಲಿಯೇ ತಂಗಬೇಕು ಎಂಬುದು ಸೇರಿ ಹಲವು ನಿಯಮಗಳನ್ನು ಜಾರಿಗೆ ತಂದಿದ್ದಾರೆ. ಉತ್ತರ ಪ್ರದೇಶದ ಸಚಿವರು ಯಾವುದೇ ಭಾಗಗಳಿಗೆ ತೆರಳಿದರೂ … Continued

ಕಾಶ್ಮೀರ: ಎನ್‌ಕೌಂಟರ್‌ನಲ್ಲಿ ನಾಲ್ವರು ಭಯೋತ್ಪಾದಕರ ಹತ್ಯೆ, ಸೇನಾ ವಾಹನ ಪಲ್ಟಿಯಾಗಿ ಇಬ್ಬರು ಸೇನಾ ಸಿಬ್ಬಂದಿ ಸಾವು

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಗುರುವಾರ ನಡೆದ ಎನ್‌ಕೌಂಟರ್‌ನಲ್ಲಿ ಕನಿಷ್ಠ 4 ಭಯೋತ್ಪಾದಕರು ಹತರಾಗಿದ್ದಾರೆ. ಇವರು ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೈಬಾ (ಎಲ್ಇಟಿ) ನೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ಹೇಳಲಾಗಿದೆ. ಅವರಲ್ಲದೆ, ಕಾರ್ಯಾಚರಣೆಯ ವೇಳೆ ಅವರ ವಾಹನ ಪಲ್ಟಿಯಾಗಿ ಇಬ್ಬರು ಸೈನಿಕರು ಮೃತಪಟ್ಟಿದ್ದಾರೆ. ರಸ್ತೆ ಒದ್ದೆಯಾಗಿದ್ದರಿಂದ ಚಾಲಕ ವಾಹನದ ಮೇಲೆ ನಿಯಂತ್ರಣ ಕಳೆದುಕೊಂಡ ಪರಿಣಾಮ … Continued

ಮದುವೆಗೆ ಮಾನ್ಯತೆ: ಅಲಾಹಾಬಾದ್ ಹೈಕೋರ್ಟಿನಿಂದ ಸಲಿಂಗಿ ಜೋಡಿಯ ಮನವಿ ತಿರಸ್ಕಾರ

ಪ್ರಯಾಗ: ತಮ್ಮ ಮದುವೆಗೆ ಮಾನ್ಯತೆ ಕೋರಿ ಸಲಿಂಗ ದಂಪತಿ ಸಲ್ಲಿಸಿದ್ದ ಅರ್ಜಿಯನ್ನು ಅಲಾಹಾಬಾದ್ ಹೈಕೋರ್ಟ್ ಕಳೆದ ವಾರ ತಿರಸ್ಕರಿಸಿದೆ. ತಮ್ಮ ಮಗಳನ್ನು ಇನ್ನೊಬ್ಬ ಮಹಿಳೆ ಬಲವಂತ ಮತ್ತು ಅಕ್ರಮವಾಗಿ ಬಂಧನದಲ್ಲಿರಿಸಿದ್ದಾಳೆ ಎಂದು ಆರೋಪಿಸಿ ಹಾಗೂ ಮಗಳನ್ನು ತಮ್ಮ ವಶಕ್ಕೆ ಒಪ್ಪಿಸುವಂತೆ ತಾಯಿಯೊಬ್ಬರು ಸಲ್ಲಿಸಿದ್ದ ಹೇಬಿಯಸ್‌ ಕಾರ್ಪಸ್‌ ಅರ್ಜಿ ವಿಲೇವಾರಿ ಮಾಡಿದ ನ್ಯಾಯಮೂರ್ತಿ ಶೇಖರ್ ಕುಮಾರ್ ಯಾದವ್ … Continued

ಸೀರೆ ನೇಯ್ಗೆ ಘಟಕಕ್ಕೆ ಬೆಂಕಿ: ಒಂದೇ ಕುಟುಂಬದ ನಾಲ್ವರು ಸಜೀವ ದಹನ

ವಾರಾಣಸಿ: ಸೀರೆ ನೇಯ್ಗೆ ಘಟಕಕ್ಕೆ ಬೆಂಕಿ ಹೊತ್ತಿಕೊಂಡು ನಾಲ್ವರು ಸಜೀವದಹನವಾದ ಘಟನೆ ವಾರಾಣಸಿಯಲ್ಲಿ ನಡೆದಿದೆ. ಅಶ್ಫಾಕ್ ನಗರದ ಮನೆಯೊಂದರಲ್ಲಿ ಮದನಪುರದ ವ್ಯಕ್ತಿಯೊಬ್ಬರು ಸೀರೆ ನೇಯ್ಗೆಯಲ್ಲಿ ತೊಡಗಿದ್ದರು. ಗುರುವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, 12*10 ಅಡಿ ಕೊಠಡಿಯಲ್ಲಿ ಕೆಲಸ ಮಾಡಲಾಗುತ್ತಿತ್ತು. ಸಿಂಥೆಟಿಕ್ ಸೀರೆಯ ಫೋಮ್ ಮತ್ತು ಫಿನಿಶಿಂಗ್ ಸಾಮಗ್ರಿಗಳನ್ನು ಕೊಠಡಿಯಲ್ಲಿ ಇರಿಸಲಾಗಿತ್ತು. … Continued

ನನ್ನ ಅತ್ಯುತ್ತಮ-ಅಂತಿಮ ಕೊಡುಗೆ… ಮತ್ತು ಅದನ್ನು ಸ್ವೀಕರಿಸದಿದ್ದರೆ…ಟ್ವಿಟರ್ ಖರೀದಿಗೆ ಮುಂದಾದ ಎಲೋನ್ ಮಸ್ಕ್…!

ಎಲೋನ್ ಮಸ್ಕ್ ಅಗ್ರ ಷೇರುದಾರನಾದ ನಂತರ ಟ್ವಿಟರ್ ಮಂಡಳಿಯಲ್ಲಿ ಸ್ಥಾನವನ್ನು ಪಡೆದುಕೊಳ್ಳುವುದಿಲ್ಲ ಎಂದು ಘೋಷಿಸಿದ ದಿನಗಳ ನಂತರ, ಟೆಸ್ಲಾ ಸಿಇಒ ಗುರುವಾರ ಅಂದಾಜು 41 ಶತಕೋಟಿ ಅಮೆರಿಕನ್‌ ಡಾಲರುಗಳಿಗೆ ಟ್ವಿಟರ್ ಅನ್ನು ಖರೀದಿಸುವ ಬಗ್ಗೆ ಪ್ರಸ್ತಾಪಿಸಿದ್ದಾರೆ. ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್‌ನ 100 ಪ್ರತಿಶತವನ್ನು ಖರೀದಿಸಲು ನಗದು ರೂಪದಲ್ಲಿ ಪ್ರತಿ ಷೇರಿಗೆ $54.20 “ಅತ್ಯುತ್ತಮ ಮತ್ತು ಅಂತಿಮ” ಕೊಡುಗೆ … Continued

ಆತ್ಮಹತ್ಯೆ ಮಾಡಿಕೊಳ್ಳಲು ಮೆಟ್ರೋ ನಿಲ್ದಾಣದಿಂದ ಜಿಗಿದ ಹುಡುಗಿಯನ್ನು ರಕ್ಷಿಸಿದ ಸಿಐಎಸ್‌ಎಫ್ : ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ಯೋಧರು ಇಂದು, ಗುರುವಾರ ಮುಂಜಾನೆ ಕಟ್ಟಡದಿಂದ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದ ಹುಡುಗಿಯೊಬ್ಬಳ ಜೀವ ಉಳಿಸಿದ್ದಾರೆ. ಅಕ್ಷರಧಾಮ ಮೆಟ್ರೋ ನಿಲ್ದಾಣದಲ್ಲಿ ಇಂದು ಬೆಳಗ್ಗೆ 7:28-7:50ರ ನಡುವೆ ಈ ಘಟನೆ ನಡೆದಿದೆ. ಮೂಲಗಳ ಪ್ರಕಾರ, ಮೆಟ್ರೋ ನಿಲ್ದಾಣದಲ್ಲಿ ಸೈಡ್‌ವಾಲ್‌ನ ಎತ್ತರದ ತುದಿಯಿಂದ ಹಾರಿ ಆತ್ಮಹತ್ಯೆಗೆ ಯತ್ನಿಸುತ್ತಿದ್ದ ಹುಡುಗಿಯನ್ನು ಸಿಐಎಸ್‌ಎಫ್ ಸಿಬ್ಬಂದಿ ಗಮನಿಸಿದರು. … Continued

ರೈಲ್ವೇ ಹಳಿಗಳ ಮೇಲೆ ಮಲಗಿದ ಮಹಿಳೆ ಮೇಲೆ ಹಾಯ್ದುಹೋದ ರೈಲು…ನಂತರ ಎದ್ದುಬಂದ ಮಹಿಳೆ..! ವೀಕ್ಷಿಸಿ

ಮಹಿಳೆಯೊಬ್ಬರ ರೈಲು ಹಳಿಗಳ ಮೇಲೆ ಮಲಗಿದ್ದಾಗ ರೈಲು ಅವಳ ಮೇಲೆ ಹಾದು ಹೋಗಿದ್ದರೂ ಆಕೆಗೆ ಆನೂ ಆಗಿಲ್ಲ. ಈಗ ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಏಪ್ರಿಲ್ 12 ರಂದು ಐಪಿಎಸ್ ಅಧಿಕಾರಿ ದೀಪಾಂಶು ಕಾಬ್ರಾ ಅವರು ಟ್ವಿಟರ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ವೀಡಿಯೊ ಪ್ರಾರಂಭವಾಗುತ್ತಿದ್ದಂತೆ, ಗೂಡ್ಸ್ ರೈಲು ಪೂರ್ಣ ವೇಗದಲ್ಲಿ ಹಾದುಹೋಗುವುದನ್ನು ನಾವು ನೋಡುತ್ತೇವೆ. … Continued

ಮಹಿಳೆಯೇ ಸಿಎಂ ಆಗಿರುವುದರಿಂದ ಮಹಿಳೆಯ ಮೇಲಿನ ಒಂದೇ ಒಂದು ಅಪರಾಧವೂ ನಾಚಿಕೆಗೇಡಿನ ಸಂಗತಿ :ನಾಡಿಯಾ ಅತ್ಯಾಚಾರದ ಕುರಿತು ಸಿಎಂ ಮಮತಾ ಹೇಳಿಕೆಗೆ ವ್ಯತಿರಿಕ್ತವಾಗಿ ಹೇಳಿದ ಸಂಸದ ಸೌಗತ ರಾಯ್

ಕೋಲ್ಕತ್ತಾ: ಮುಖ್ಯಮಂತ್ರಿಯೇ ಮಹಿಳೆಯಾಗಿರುವ ಬಂಗಾಳದಲ್ಲಿ ಮಹಿಳೆಯರ ಮೇಲಿನ ಒಂದೇ ಒಂದು ಅಪರಾಧವೂ ನಾಚಿಕೆಗೇಡಿನ ಸಂಗತಿ ಎಂದು ತೃಣಮೂಲ ಕಾಂಗ್ರೆಸ್ ಸಂಸದ ಸೌಗತ ರಾಯ್ ಹೇಳಿದ್ದಾರೆ. ಮಹಿಳೆಯರ ಮೇಲಿನ ಅಪರಾಧದ ಬಗ್ಗೆ ಪ್ರತಿಯೊಬ್ಬರೂ ತೀವ್ರವಾಗಿ ಚಿಂತಿತರಾಗಿದ್ದಾರೆ ಮತ್ತು ಇದು ಮಾಧ್ಯಮಗಳಿಂದಾಗಿ ಎಂದು ನನಗೆ ಖಚಿತವಿಲ್ಲ. ಈ ವಿಷಯಗಳಲ್ಲಿ ನಾವು ಶೂನ್ಯ ಸಹಿಷ್ಣುತೆಯನ್ನು ಹೊಂದಿರಬೇಕು. ಯಾವುದೇ ಘಟನೆ ನಡೆದರೆ, … Continued

ಅಮೆರಿಕದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಬಗ್ಗೆ ಭಾರತಕ್ಕೂ ಕಳವಳವಿದೆ: ಸಿಖ್ಖರ ಮೇಲಿನ ದಾಳಿ ಉಲ್ಲೇಖಿಸಿ ಬ್ಲಿಂಕನ್‌ಗೆ ತಿರುಗೇಟು ನೀಡಿದ ಜೈಶಂಕರ್

ನವದೆಹಲಿ: ಅಮೆರಿಕದಲ್ಲಿರುವ ಭಾರತೀಯರು ಮತ್ತು ಭಾರತೀಯ ಮೂಲದ ಅಮೆರಿಕನ್ನರ ಮೇಲಿನ ದಾಳಿಗಳನ್ನು ಉಲ್ಲೇಖಿಸಿ, ಅಮೆರಿಕದಲ್ಲಿ ಮಾನವ ಹಕ್ಕುಗಳ ಬಗ್ಗೆಯೂ ನವದೆಹಲಿಗೆ ಕಳವಳವಿದೆ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಹೇಳಿದ್ದಾರೆ. ಭಾರತದಲ್ಲಿ “ಮಾನವ ಹಕ್ಕುಗಳ ಉಲ್ಲಂಘನೆ ಹೆಚ್ಚಳ” ಕುರಿತು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಅವರ ಇತ್ತೀಚಿನ ಕಾಮೆಂಟ್‌ಗಳಿಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ವಿದೇಶಾಂಗ ಸಚಿವ … Continued

ಉಡವನ್ನೂ ಬಿಡದ ಕಾಮುಕರು… ಬೆಂಗಾಲ್ ಮಾನಿಟರ್ ದೈತ್ಯ ಹಲ್ಲಿಯ ಮೇಲೆ ಸಾಮೂಹಿಕ ಅತ್ಯಾಚಾರ…!-ನಾಲ್ವರ ಬಂಧನ

ಮುಂಬೈ: ವಿಲಕ್ಷಣ ಘಟನೆಯೊಂದರಲ್ಲಿ, ಮಹಾರಾಷ್ಟ್ರದ ಗೋಠಾಣೆ ಗ್ರಾಮದ ಬಳಿಯಿರುವ ಸಹ್ಯಾದ್ರಿ  ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬಂಗಾಳದ ಮಾನಿಟರ್ ಹಲ್ಲಿಯ ಮೇಲೆ ಅತ್ಯಾಚಾರ ನಡೆಸಿದ ಆರೋಪದ ಮೇಲೆ ನಾಲ್ವರನ್ನು ಬಂಧಿಸಲಾಗಿದೆ…! ವರದಿಗಳ ಪ್ರಕಾರ, ನಾಲ್ವರು ಆರೋಪಿಗಳನ್ನು ಬೇಟೆಗಾರರು ಎಂದು ಗುರುತಿಸಲಾಗಿದ್ದು, ಗೊಠಾಣೆಯಲ್ಲಿನ ಗಭಾ ಪ್ರದೇಶದ ಸಹ್ಯಾದ್ರಿ ಹುಲಿ ಸಂರಕ್ಷಿತ ಪ್ರದೇಶದ ಕೋರ್ ಝೋನ್‌ಗೆ ಪ್ರವೇಶಿಸಿ ಬಂಗಾಳದ ಮಾನಿಟರ್ … Continued