ಬಳಕೆದಾರರಿಗೆ ಎಡಿಟ್ ಬಟನ್ ಬೇಕೇ ಎಂದು ಕೇಳಿದ ಟ್ವಿಟರ್‌ನ ಅತಿದೊಡ್ಡ ಷೇರುದಾರರಾದ ಎಲೋನ್ ಮಸ್ಕ್

ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಲೋನ್ ಮಸ್ಕ್ ಶನಿವಾರದಂದು ಟ್ವಿಟ್ಟರಿನ ಅತಿದೊಡ್ಡ ಷೇರುದಾರನಾದ ನಂತರ ತನ್ನ ಟ್ವಿಟರ್ ವೈಶಿಷ್ಟ್ಯದ ಆದ್ಯತೆಗಳನ್ನು ಸ್ಪಷ್ಟಪಡಿಸಲು ಸಮಯವ್ಯರ್ಥ ಮಾಡಿಲ್ಲ. ಟೆಸ್ಲಾ ಸಿಇಒ ಅವರು ತಮ್ಮ 80 ಮಿಲಿಯನ್ ಅನುಯಾಯಿಗಳ ಬಳಿ, ಪೋಸ್ಟ್ ಮಾಡಿದ ನಂತರ ತಮ್ಮ ಟ್ವೀಟ್‌ಗಳನ್ನು ಎಡಿಟ್‌ (edit) ಮಾಡಲು ಬಯಸುತ್ತಾರೆಯೇ ಎಂಬುದರ ಕುರಿತು ಅಭಿಪ್ರಾಯ ಸಂಗ್ರಹಿಸಿದ್ದಾರೆ. ಟ್ವಿಟರ್‌ನ … Continued

ಶ್ರೀಲಂಕಾದಲ್ಲಿ ತೀವ್ರ ಆರ್ಥಿಕ ಬಿಕ್ಕಟ್ಟಿನಿಂದ ರಾಜಕೀಯ ಬಿಕ್ಕಟ್ಟು: ಮೈತ್ರಿಕೂಟದಿಂದ ಹೊರನಡೆದ 41 ಸಂಸದರು, ಬಹುಮತ ಕಳೆದುಕೊಂಡ ರಾಜಪಕ್ಸೆ ಸರ್ಕಾರ

ಕೊಲಂಬೊ: ಶ್ರೀಲಂಕಾದ ಅಧ್ಯಕ್ಷ ಗೊಟಾಬಯ ರಾಜಪಕ್ಸೆ ಅವರ ಆಡಳಿತ ಒಕ್ಕೂಟವು 225 ಸದಸ್ಯರ ಸಂಸತ್ತಿನಲ್ಲಿ ತನ್ನ ಬಹುಮತವನ್ನು ಕಳೆದುಕೊಂಡಿದೆ. ಕನಿಷ್ಠ 41 ಶಾಸಕರು ಆರ್ಥಿಕ ಬಿಕ್ಕಟ್ಟಿನ ಮೇಲೆ ಹೆಚ್ಚುತ್ತಿರುವ ಅಶಾಂತಿಯ ನಡುವೆ ಮೈತ್ರಿಯಿಂದ ಹೊರನಡೆದರು ಎಂದು ಸುದ್ದಿ ವರದಿಗಳು ತಿಳಿಸಿವೆ. ನಮ್ಮ ಪಕ್ಷವು ಜನರ ಪರವಾಗಿದೆ” ಎಂದು ರಾಜಪಕ್ಸೆ ಅವರ ಒಕ್ಕೂಟಕ್ಕೆ ಬೆಂಬಲವನ್ನು ಹಿಂತೆಗೆದುಕೊಂಡ ಶ್ರೀಲಂಕಾ … Continued

ಹೃದಯ ಸ್ಪರ್ಶಿ ಭಾವಗಳ ಚಿತ್ರ…. ಉಕ್ರೇನ್‌ನಲ್ಲಿ ರಷ್ಯಾ ದಾಳಿಯಲ್ಲಿ ಸತ್ತ ತನ್ನ ಮಾಲೀಕನ ದೇಹ ಬಿಟ್ಟುಹೋಗಲು ನಿರಾಕರಿಸಿದ ನಾಯಿ..!

NEXTA ಮಾಧ್ಯಮ ಸಂಸ್ಥೆಯು ಪೋಸ್ಟ್ ಮಾಡಿದ ಹೃದಯಸ್ಪರ್ಶಿ ಛಾಯಾಚಿತ್ರದಲ್ಲಿ, ಉಕ್ರೇನ್‌ನ ಕೀವ್ ಬಳಿಯ ಬುಚ್‌ನಲ್ಲಿ ನಾಯಿಯೊಂದು ತನ್ನ ಮಾಲೀಕರ ಶವದ ಪಕ್ಕದಲ್ಲಿ ಕುಳಿತಿರುವುದನ್ನು ಕಾಣಬಹುದು. ಉಕ್ರೇನ್‌ನಲ್ಲಿರುವ ಚಿತ್ರವನ್ನು ಕೀವ್ ಬಳಿಯ ಬುಚ್‌ ಪ್ರದೇಶದಲ್ಲಿ ತೆಗೆಯಲಾಗಿದೆ ಎಂದು ಭಾವಿಸಲಾಗಿದೆ. ಇದನ್ನು ಉಕ್ರೇನಿಯನ್ ಪ್ರಾಣಿ ಹಕ್ಕುಗಳ ಸಂಸ್ಥೆ ಯು ಎನಿಮಲ್ಸ್ ಹಂಚಿಕೊಂಡಿದೆ. ಒಂದು ಶೀರ್ಷಿಕೆಯು ಕೀವ್ ಬಳಿ ರಷ್ಯಾದ … Continued

ಮಾಜಿ ಮುಖ್ಯ ನ್ಯಾಯಮೂರ್ತಿ ಗುಲ್ಜಾರ್ ಅಹ್ಮದ್ ಅವರನ್ನು ಪಾಕಿಸ್ತಾನದ ಹಂಗಾಮಿ ಪ್ರಧಾನಿಯಾಗಿ ನಾಮನಿರ್ದೇಶನ ಮಾಡಿದ ಇಮ್ರಾನ್ ಖಾನ್

ಇಸ್ಲಾಮಾಬಾದ್‌: ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರು ಹಂಗಾಮಿ ಪ್ರಧಾನಿ ಸ್ಥಾನಕ್ಕೆ ಸೋಮವಾರ ಪಾಕಿಸ್ತಾನದ ಮಾಜಿ ಮುಖ್ಯ ನ್ಯಾಯಮೂರ್ತಿ ಗುಲ್ಜಾರ್ ಅಹ್ಮದ್ ಅವರ ಹೆಸರನ್ನು ಪ್ರಸ್ತಾಪಿಸಿದ್ದಾರೆ. ಭಾನುವಾರ ರಾತ್ರಿ ತಕ್ಷಣವೇ ಜಾರಿಗೆ ಬರುವಂತೆ ಇಮ್ರಾನ್ ಖಾನ್ ಅವರನ್ನು ದೇಶದ ಪ್ರಧಾನಿಯಾಗಿ ಡಿ-ನೋಟಿಫಿಕೇಶನ್ ಮಾಡಿ ಪಾಕಿಸ್ತಾನ ಅಧ್ಯಕ್ಷ ಅಲ್ವಿ ಆದೇಶ ಹೊರಡಿಸಿದ ನಂತರ ಈ ಬೆಳವಣಿಗೆ ನಡೆದಿದೆ. … Continued

ಅನಾಮಧೇಯ ವ್ಯಕ್ತಿ ಟಿಪ್ಪಣಿಯೊಂದಿಗೆ ಲಂಡನ್ ಗ್ರಂಥಾಲಯಕ್ಕೆ ಬರೋಬ್ಬರಿ 50 ವರ್ಷಗಳ ನಂತರ ಮರಳಿದ ಬಹಳ ಹಳೆಯ ಪುಸ್ತಕ..!

ಯೂನಿವರ್ಸಿಟಿ ಕಾಲೇಜ್ ಲಂಡನ್‌ ಲೈಬ್ರರಿಯಿಂದ ತೆಗೆದುಕೊಂಡು ಹೋಗಿದ್ದ ಬಹಳ ಹಳೆಯ ಪುಸ್ತಕವೊಂದು ಬರೋಬ್ಬರಿ 50 ವರ್ಷಗಳ ನಂತರ ಇತ್ತೀಚೆಗೆ ಯೂನಿವರ್ಸಿಟಿ ಕಾಲೇಜ್ ಲಂಡನ್‌ಗೆ (ಯುಸಿಎಲ್) ಪುನಃ ಹಿಂದಿರುಗಿದೆ. ಪುಸ್ತಕವನ್ನು ಅಪರಿಚಿತ ವ್ಯಕ್ತಿಯೊಬ್ಬರು ಯುಸಿಎಲ್ ಲೈಬ್ರರಿಗೆ ಮೇಲ್ ಮಾಡಿದ್ದಾರೆ. ಅದರ ಜೊತೆಗೆ ಅನಾಮಧೇಯ ವ್ಯಕ್ತಿ ಒಂದು ಟಿಪ್ಪಣಿಯನ್ನೂ ಬರೆದಿದ್ದಾರೆ. ಆತ್ಮೀಯ ಗ್ರಂಥಪಾಲಕರೇ, ಈ ಪುಸ್ತಕವು ತಲುಪಲು ಸುಮಾರು … Continued

ಶ್ರೀಲಂಕಾದಲ್ಲಿ ಈಗ 1 ಕೆಜಿ ಅಕ್ಕಿಗೆ 220 ರೂ., ಹಾಲಿನ ಪುಡಿ ಕೆಜಿಗೆ 1900ರೂ ರೂ., ತೆಂಗಿನ ಎಣ್ಣೆಗೆ ₹850..!

ಕೊಲಂಬೊ: ಹೆಚ್ಚಿನ ಹಣದುಬ್ಬರದ ನಂತರ ಶ್ರೀಲಂಕಾದಲ್ಲಿ ಮೂಲಭೂತ ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರಿವೆ. ಬಿಕ್ಕಟ್ಟಿನ ಪೀಡಿತ ದ್ವೀಪ ರಾಷ್ಟ್ರವು ಅಭೂತಪೂರ್ವ ಆರ್ಥಿಕ ಕುಸಿತದ ಹಾದಿಯಲ್ಲಿರುವಾಗ ಮೂಲಭೂತ ಸರಕುಗಳನ್ನು ಖರೀದಿಸಲು ಶ್ರೀಲಂಕಾದವರು ಗಂಟೆಗಳ ಕಾಲ ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ಇತ್ತೀಚಿನ ವಾರಗಳಲ್ಲಿ ತರಕಾರಿಗಳ ಬೆಲೆ ದ್ವಿಗುಣಗೊಂಡಿದೆ, ಅಕ್ಕಿ ಹಾಗೂ ಗೋಧಿ ಕ್ರಮವಾಗಿ ಪ್ರತಿ ಕೆಜಿಗೆ 220 ರೂ.ಗಳು … Continued

ಆರ್ಥಿಕ ಬಿಕ್ಕಟ್ಟು: ಶ್ರೀಲಂಕಾದ ಪ್ರಧಾನಿ ರಾಜಪಕ್ಸೆ ಹೊರತುಪಡಿಸಿ ಇಡೀ ಸಚಿವ ಸಂಪುಟದ ರಾಜೀನಾಮೆ

ಕೊಲಂಬೊ: ಶ್ರೀಲಂಕಾದ ಆರ್ಥಿಕ ಬಿಕ್ಕಟ್ಟಿನ ಬಗ್ಗೆ ಸರ್ಕಾರದ ವಿರುದ್ಧ ಸಾರ್ವಜನಿಕ ಆಕ್ರೋಶ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ಮಹಿಂದಾ ರಾಜಪಕ್ಸೆ ಹೊರತುಪಡಿಸಿ ಶ್ರೀಲಂಕಾದ ಇಡೀ ಸಚಿವ ಸಂಪುಟವೇ ರಾಜೀನಾಮೆ ನೀಡಿದೆ. ಅವರೆಲ್ಲರೂ ಸಾಮಾನ್ಯ ಪತ್ರಕ್ಕೆ ಸಹಿ ಹಾಕಿದ್ದಾರೆ, ಹೊಸ ಸಚಿವ ಸಂಪುಟ ರಚನೆಗೆ ದಾರಿ ಮಾಡಿಕೊಡಲು ರಾಜೀನಾಮೆ ನೀಡಲು ಒಪ್ಪಿಗೆ ನೀಡಿದ್ದಾರೆ ಎಂದು ಆಂಗ್ಲ ಭಾಷೆಯ ಪತ್ರಿಕೆ … Continued

ನಯಾ ಪಾಕಿಸ್ತಾನ…!? : ಪಾಕಿಸ್ತಾನದಲ್ಲಿ ಸದನದೊಳಗೇ ಪರಸ್ಪರ ಹೊಡೆದಾಡಿಕೊಂಡರು, ಕೂದಲು ಎಳೆದುಕೊಂಡ ಮಹಿಳಾ ಶಾಸಕರು..! ವೀಕ್ಷಿಸಿ

ಇಸ್ಲಾಮಾಬಾದ್: ಭಾನುವಾರ ಪಾಕಿಸ್ತಾನದ ರಾಜಕೀಯದಲ್ಲಿ ಗೊಂದಲದ ದಿನವಾಗಿತ್ತು. ರಾಷ್ಟ್ರೀಯ ಅಸೆಂಬ್ಲಿಯಿಂದ ಪಂಜಾಬ್‌ ವಿಧಾನಸಭೆ ವರೆಗೆ ಗದ್ದಲ ಮತ್ತು ಘೋಷಣೆಗಳದ್ದೇ ಕಾರುಬಾರು.. ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಭಾನುವಾರ ಪಂಜಾಬ್ ಗವರ್ನರ್ ಚೌಧರಿ ಸರ್ವರ್ ಅವರನ್ನು ವಜಾಗೊಳಿಸಿದ್ದಾರೆ. ಹೊಸ ಸದನದ ನಾಯಕ ಮತ್ತು ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲು ಪಂಜಾಬ್ ವಿಧಾನಸಭೆಯ ಅಧಿವೇಶನವನ್ನು ಭಾನುವಾರ ಕರೆಯಲಾಗಿತ್ತು. ಆದರೆ ಮತದಾನವಿಲ್ಲದೆ … Continued

ರಷ್ಯಾದಿಂದ ಮರಳಿ ಪಡೆದ ಕೀವ್ ಪ್ರದೇಶದಲ್ಲಿ 410 ಮೃತ ದೇಹಗಳು ಪತ್ತೆ : ಉಕ್ರೇನ್

ಕೀವ್: ವಿಶಾಲವಾದ ಕೀವ್ ಪ್ರದೇಶದಲ್ಲಿ ರಷ್ಯಾದ ಸೇನೆಯಿಂದ ಇತ್ತೀಚೆಗೆ ಹಿಂಪಡೆದ ಪ್ರದೇಶಗಳಿಂದ ಉಕ್ರೇನ್ ಒಟ್ಟು 410 ನಾಗರಿಕ ದೇಹಗಳನ್ನು ವಶಪಡಿಸಿಕೊಂಡಿದೆ ಎಂದು ಅದರ ಪ್ರಾಸಿಕ್ಯೂಟರ್ ಜನರಲ್ ಐರಿನಾ ವೆನೆಡಿಕ್ಟೋವಾ ಭಾನುವಾರ ಹೇಳಿದ್ದಾರೆ. ಕೀವ್ ಪ್ರದೇಶದ ವಿಮೋಚನೆಗೊಂಡ ಪ್ರದೇಶಗಳಿಂದ ಸತ್ತ ನಾಗರಿಕರ 410 ದೇಹಗಳನ್ನು ಸ್ಥಳಾಂತರಿಸಲಾಗಿದೆ. ವಿಧಿವಿಜ್ಞಾನ ತಜ್ಞರು ಈಗಾಗಲೇ 140 ಅನ್ನು ಪರೀಕ್ಷಿಸಿದ್ದಾರೆ ಎಂದು ವೆನೆಡಿಕ್ಟೋವಾ … Continued

ತನ್ನ ಸರ್ಕಾರ ಉರುಳಿಸುವ ಪಿತೂರಿಯಲ್ಲಿ ಅಮೆರಿಕದ ರಾಜತಾಂತ್ರಿಕ ಡೊನಾಲ್ಡ್ ಲು ಭಾಗಿ: ಪಾಕ್ ಪ್ರಧಾನಿ ಇಮ್ರಾನ್ ಖಾನ್ ಗಂಭೀರ ಆರೋಪ

ನವದೆಹಲಿ: ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರ ವಿರುದ್ಧದ ಅವಿಶ್ವಾಸ ನಿರ್ಣಯವನ್ನು ರಾಷ್ಟ್ರೀಯ ಅಸೆಂಬ್ಲಿ ಡೆಪ್ಯುಟಿ ಸ್ಪೀಕರ್ ತಿರಸ್ಕರಿಸಿದ ನಂತರ ಅವರನ್ನು ಅಧಿಕಾರದಿಂದ ಹೊರಹಾಕುವ ವಿರೋಧ ಪಕ್ಷದ ಪ್ರಯತ್ನದಿಂದ ಅವರು ಸದ್ಯಕ್ಕೆ ಪಾರಾಗಿದ್ದಾರೆ. ಅವರು ತಮ್ಮನ್ನು ಪದಚ್ಯುತಗೊಳಿಸುವ ಪ್ರಯತ್ನದ ಹಿಂದೆ “ವಿದೇಶಿ ಪಿತೂರಿ” ಎಂದು ಆರೋಪಿಸಿದ್ದಾರೆ. ಇಮ್ರಾನ್ ಖಾನ್, ಅಮೆರಿಕದ ಸ್ಟೇಟ್ ಡಿಪಾರ್ಟ್‌ಮೆಂಟ್‌ನಲ್ಲಿ ದಕ್ಷಿಣ ಏಷ್ಯಾದೊಂದಿಗೆ … Continued