ವಿಲಕ್ಷಣ ಘಟನೆ : ಕುತ್ತಿಗೆಗೆ ‘ತ್ರಿಶೂಲ’ ಚುಚ್ಚಿದ ಸ್ಥಿತಿಯಲ್ಲೇ 65 ಕಿಮೀ ಪ್ರಯಾಣಿಸಿ ಆಸ್ಪತ್ರೆಗೆ ಬಂದ ವ್ಯಕ್ತಿ, ಈತನನ್ನು ನೋಡಿ ವೈದ್ಯರೇ ಕಂಗಾಲು

ಕೋಲ್ಕತ್ತಾ: ಕೋಲ್ಕತ್ತಾದ ಎನ್‌ಆರ್‌ಎಸ್ ಆಸ್ಪತ್ರೆಗೆ ಬಂದ ವ್ಯಕ್ತಿಯೊಬ್ಬನನ್ನು ನೋಡಿ ಆಸ್ಪತ್ರೆಯ ವೈದ್ಯರೇ ಹೌಹಾರಿದ್ದಾರೆ. ಯಾಕೆಂದರೆ ಪಶ್ಚಿಮ ಬಂಗಾಳದ ನಾಡಿಯಾ ಪ್ರದೇಶದಿಂದ ಬಂದ ಈ ವ್ಯಕ್ತಿಯ ಕೊತ್ತಿಗೆಗೆ ‘ತ್ರಿಶೂಲ’ (ತ್ರಿಶೂಲ) ಚುಚ್ಚಿಕೊಂಡಿತ್ತು, ಆದರೂ ಆತ ನಾಡಿಯಾದ ಕಲ್ಯಾಣಿಯಿಂದ 65 ಕಿಲೋಮೀಟರ್ ದೂರ ಪ್ರಯಾಣಿಸಿ ಆಸ್ಪತ್ರೆಗೆ ಬಂದಿದ್ದಾನೆ…! ಭಾಸ್ಕರ ರಾಮ್ ಎಂಬ ವ್ಯಕ್ತಿಯ ಕುತ್ತಿಗೆಗೆ 150 ವರ್ಷ ಹಳೆಯದಾದ … Continued

ದೆಹಲಿ ಮದ್ಯ ನೀತಿ ಪ್ರಕರಣ: ಉದ್ಯಮಿ ಅಮಿತ್ ಅರೋರಾ ಬಂಧಿಸಿದ ಇ.ಡಿ.

ನವದೆಹಲಿ: ಮದ್ಯ ನೀತಿ ಪ್ರಕರಣದಲ್ಲಿ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ನಿಕಟವರ್ತಿ ಅಮಿತ್ ಅರೋರಾ ಅವರನ್ನು ಜಾರಿ ನಿರ್ದೇಶನಾಲಯ ಬುಧವಾರ ಬಂಧಿಸಿದೆ. ಅರೋರಾ ಗುರುಗ್ರಾಮ ಮೂಲದ ಬಡ್ಡಿ ರಿಟೇಲ್‌ನ ನಿರ್ದೇಶಕರಾಗಿದ್ದಾರೆ. ದೆಹಲಿ ಅಬಕಾರಿ ನೀತಿ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಇದುವರೆಗೆ ಒಟ್ಟು ಐವರನ್ನು ಇ.ಡಿ. ಬಂಧಿಸಿದೆ. ಮದ್ಯದ ಉದ್ಯಮಿ ಸಮೀರ್ ಮಹೇಂದ್ರು ಅವರನ್ನು … Continued

ಹರಿಯಾಣ ಜಿಲ್ಲಾ ಪರಿಷತ್ ಚುನಾವಣೆ: 411 ಸ್ಥಾನಗಳಲ್ಲಿ 350ರಲ್ಲಿ ಗೆದ್ದ ಸ್ವತಂತ್ರ ಅಭ್ಯರ್ಥಿಗಳು ; ಪ್ರಮುಖ ರಾಜಕೀಯ ಪಕ್ಷಗಳನ್ನು ಮತದಾರರು ತಿರಸ್ಕರಿಸಿದ್ದು ಯಾಕೆ..?

ನವದೆಹಲಿ: ಭಾನುವಾರ ಪ್ರಕಟವಾದ ಹರಿಯಾಣ ಜಿಲ್ಲಾ ಪರಿಷತ್ ಚುನಾವಣಾ ಫಲಿತಾಂಶಗಳು ರಾಜ್ಯದಲ್ಲಿ ಆಡಳಿತಾರೂಢ ಬಿಜೆಪಿ ಮತ್ತು ವಿರೋಧ ಪಕ್ಷದಲ್ಲಿರುವ ಕಾಂಗ್ರೆಸ್, ಭಾರತೀಯ ರಾಷ್ಟ್ರೀಯ ಲೋಕದಳ (ಐಎನ್‌ಎಲ್‌ಡಿ ಹೀಗೆ ಮುಖ್ಯವಾಹಿನಿಯ ರಾಜಕೀಯ ಪಕ್ಷಗಳಿಗಿಂತ ಹೆಚ್ಚಾಗಿ ಮತದಾರರು ಸ್ವತಂತ್ರ ಅಭ್ಯರ್ಥಿಗಳನ್ನು ಹೆಚ್ಚು ನಂಬಿರುವುದು ಕಂಡುಬಂದಿದೆ. ಜಿಲ್ಲಾ ಪರಿಷತ್‌ಗಳ 411 ಸ್ಥಾನಗಳಲ್ಲಿ 350ರಲ್ಲಿ ಸ್ವತಂತ್ರ ಅಭ್ಯರ್ಥಿಗಳು ಗೆದ್ದಿದ್ದಾರೆ. ಆಡಳಿತಾರೂಢ ಬಿಜೆಪಿ … Continued

ಕಾರ್ಯಕ್ರಮದಲ್ಲೇ ಕೆಂಡಾಮಂಡಲವಾದ ಮಮತಾ ಬ್ಯಾನರ್ಜಿ : ಅಧಿಕಾರಿಗಳು ತೀವ್ರ ತರಾಟೆಗೆ-ಕಾರಣ ಇಲ್ಲಿದೆ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಚಳಿಗಾಲದ ಬಟ್ಟೆಗಳನ್ನು ವಿತರಿಸಲು ಮಂಗಳವಾರ ಸರ್ಕಾರಿ ಕಾರ್ಯಕ್ರಮಕ್ಕೆ ಆಗಮಿಸಿದರು. ಆದರೆ ಅದು ಇನ್ನೂ ಸ್ಥಳಕ್ಕೆ ತಲುಪಿಲ್ಲ ಎಂದು ತಿಳಿದ ನಂತರ ಅವರು ತಮ್ಮ ಶಾಂತತೆ ಕಳೆದುಕೊಂಡರು ಮತ್ತು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ಮುಖ್ಯಮಂತ್ರಿ ಚಳಿಗಾಲದ ಬಟ್ಟೆಗಳನ್ನು ವಿತರಿಸಲು ಉತ್ತರ 24 ಪರಗಣ ಜಿಲ್ಲೆಯಲ್ಲಿದ್ದರು. ಸಿಟ್ಟು ಗೋಚರವಾಗುವಂತೆ … Continued

ಗುಜರಾತ್ ಕಾಂಗ್ರೆಸ್‌ ಸಮಾವೇಶಕ್ಕೆ ನುಗ್ಗಿ ಕೋಲಾಹಲ ಎಬ್ಬಿಸಿದ ಬೃಹತ್‌ ಗೂಳಿ : ಇದಕ್ಕೆ ಬಿಜೆಪಿ ಕಾರಣ ಎಂದ ರಾಜಸ್ಥಾನ ಸಿಎಂ ಗೆಹ್ಲೋಟ್ | ವೀಕ್ಷಿಸಿ

ನವದೆಹಲಿ: ಗುಜರಾತ್‌ನ ಮೆಹ್ಸಾನಾದಲ್ಲಿ ಸೋಮವಾರ ನಡೆದ ಕಾಂಗ್ರೆಸ್‌ ಸಮಾವೇಶದಲ್ಲಿ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮಾತನಾಡುತ್ತಿದ್ದಾಗ ದಾರಿ ತಪ್ಪಿದ ಗೂಳಿಯೊಂದು ನುಗ್ಗಿ ಕೋಲಾಹಲ ಎಬ್ಬಿಸಿದೆ.. ಸಮಾವೇಶಕ್ಕೆ ನುಗ್ಗಿದ ಗೂಳಿ ನಂತರ ಗೊಂದಲಕ್ಕೊಳಗಾಗಿ ಅತ್ತ ಇತ್ತ ಓಡುತ್ತಿರುವ ದೃಶ್ಯದ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಪ್ರೇಕ್ಷಕರನ್ನು ಶಾಂತವಾಗಿರುವಂತೆ ಸೂಚಿಸಿದ ಅಶೋಕ ಗೆಹ್ಲೋಟ್, ಇದೇವೇಳೆ ಭಾರತೀಯ ಜನತಾ … Continued

ಅಂಜನಾದ್ರಿ ಬೆಟ್ಟದಲ್ಲಿ ಹಾಕಿದ್ದ ಬ್ಯಾನರ್ ತೆರವುಗೊಳಿಸಿದ ಜಿಲ್ಲಾಡಳಿತ

ಕೊಪ್ಪಳ: ಅಂಜನಾದ್ರಿ ಬೆಟ್ಟದಲ್ಲಿ ಅನ್ಯಧರ್ಮದವರಿಗೆ ವ್ಯಾಪಾರಕ್ಕೆ ಅವಕಾಶವಿಲ್ಲ ಎಂದು ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಹಾಕಿದ್ದ ಪೋಸ್ಟರ್‌ ಅನ್ನು ಜಿಲ್ಲಾಡಳಿತ ತೆರವುಗೊಳಿಸಿದೆ. ಜಿಲ್ಲೆಯ ಗಂಗಾವತಿ ತಾಲೂಕಿನ ಐತಿಹಾಸಿಕ ಅಂಜನಾದ್ರಿ ಬೆಟ್ಟದಲ್ಲಿ ಡಿಸೆಂಬರ್‌ 5ರಂದು ಹನುಮಮಾಲೆ ವಿಸರ್ಜನೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಈ ಪೋಸ್ಟರ್‌ ಹಾಕಲಾಗಿತ್ತು. ಹನುಮಮಾಲೆ ವಿಸರ್ಜನೆ ಕಾರ್ಯಕ್ರಮಕ್ಕೆ ಅಂಜನಾದ್ರಿ ಬೆಟ್ಟಕ್ಕೆ ಅಪಾರ ಸಂಖ್ಯೆಯಲ್ಲಿ ಮಾಲಾಧಾರಿಗಳು ಆಗಮಿಸುತ್ತಾರೆ. … Continued

ಅಭಯಾರಣ್ಯದಲ್ಲಿ ಸಫಾರಿ ವೇಳೆ ಹುಲಿಯ ಸಮೀಪವೇ ಬಾಲಿವುಡ್‌ ನಟಿ ರವೀನಾ ಟಂಡನ್ ವಾಹನದ ವೀಡಿಯೊ ಕಂಡುಬಂದ ನಂತರ ತನಿಖೆ ಆರಂಭ | ವೀಕ್ಷಿಸಿ

ನರ್ಮದಾಪುರಂ (ಮಧ್ಯಪ್ರದೇಶ): ಬಾಲಿವುಡ್ ನಟಿ ರವೀನಾ ಟಂಡನ್ ಸಫಾರಿ ವೇಳೆ ಹುಲಿಯ ಸಮೀಪದಲ್ಲಿ ಪ್ರಯಾಣಿಸುತ್ತಿದ್ದ ವಾಹನವೊಂದು ವೀಡಿಯೊದಲ್ಲಿ ಕಂಡುಬಂದ ಹಿನ್ನೆಲೆಯಲ್ಲಿ ಸತ್ಪುರ ಹುಲಿ ಸಂರಕ್ಷಿತ ಪ್ರದೇಶದ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ವೀಡಿಯೊದಲ್ಲಿ ಸಫಾರಿ ವಾಹನವು ಹುಲಿಯ ಸಮೀಪಕ್ಕೆ ಬಂದಿರುವುದನ್ನು ತೋರಿಸಿದೆ. ಕ್ಲಿಪ್‌ನಲ್ಲಿ, ಮಧ್ಯಪ್ರದೇಶದ ನರ್ಮದಾಪುರಂ ಜಿಲ್ಲೆಯ … Continued

ಡಿಜಿಟಲ್‌ ಕರೆನ್ಸಿ ಇನ್ಮುಂದೆ ರಿಯಾಲಿಟಿ..: ಡಿಸೆಂಬರ್‌ 1ರಂದು ಬೆಂಗಳೂರು ಸೇರಿ ದೇಶದ 4 ಮಹಾನಗರಗಳು, 4 ಬ್ಯಾಂಕ್‌ಗಳಲ್ಲಿ ಪ್ರಾಯೋಗಿಕವಾಗಿ ಡಿಜಿಟಲ್ ಕರೆನ್ಸಿ ಆರಂಭ

ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಡಿಜಿಟಲ್‌ ಕರೆನ್ಸಿ ಪ್ರಾರಂಭಿಸುವುದಾಗಿ ಘೋಷಿಸಿದ ನಂತರ ಈಗ ಡಿಜಿಟಲ್ ರೂಪಾಯಿ ಅಂತಿಮವಾಗಿ ರಿಯಾಲಿಟಿ ಆಗುತ್ತಿದೆ. ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿಯಲ್ಲಿ (CBDC) ಚಿಲ್ಲರೆ ಭಾಗವಹಿಸುವಿಕೆಗಾಗಿ ಪ್ರಾಯೋಗಿಕ ಯೋಜನೆಯು ಡಿಸೆಂಬರ್ 1 ರಂದು ನಾಲ್ಕು ನಗರಗಳಲ್ಲಿ ಮತ್ತು ನಾಲ್ಕು ಬ್ಯಾಂಕುಗಳೊಂದಿಗೆ ಪ್ರಾರಂಭವಾಗುತ್ತದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಮಂಗಳವಾರ ತಿಳಿಸಿದೆ. … Continued

ಪ್ರಧಾನಿ ಮೋದಿಗೇನು ರಾವಣನಂತೆ 100 ತಲೆಗಳಿವೆಯೇ: ಮಲ್ಲಿಕಾರ್ಜುನ ಖರ್ಗೆ ಲೇವಡಿ, ಗುಜರಾತ್‌ ಮಗನಿಗೆ ಅವಮಾನ ಎಂದ ಬಿಜೆಪಿ

ಅಹಮದಾಬಾದ್‌: ಗುಜರಾತ್ ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ರಾವಣ ಎಂದು ಕರೆದಿರುವುದು ರಾಜಕೀಯ ವಾಗ್ಯುದ್ಧಕ್ಕೆ ಕಾರಣವಾಗಿದೆ. ಖರ್ಗೆ ಅವರು ಗುಜರಾತಿನ ಮಗನನ್ನು ಅವಮಾನಿಸಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಗುಜರಾತ್ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಅಹಮದಾಬಾದ್‌ನಲ್ಲಿ ನಡೆದ ಕಾಂಗ್ರೆಸ್‌ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ ಅವರು … Continued

ಶತ್ರು ರಾಷ್ಟ್ರಗಳ ಡ್ರೋನ್‌ ಪತ್ತೆಹಚ್ಚಿ ಹೊಡೆದುರುಳಿಸಲು ಭಾರತದ ಸೇನೆಯಿಂದ ಗಿಡುಗನಿಗೆ ತರಬೇತಿ…!

ಔಲಿ (ಉತ್ತರಾಖಂಡ): ಇದೇ ಮೊದಲ ಬಾರಿಗೆ, ಶತ್ರು ಡ್ರೋನ್‌ಗಳನ್ನು ಪತ್ತೆ ಹಚ್ಚಲು ಭಾರತೀಯ ಸೇನೆಯು ಗಿಡುಗಕ್ಕೆ ತರಬೇತಿ ನೀಡಿದೆ ಮತ್ತು ಉತ್ತರಾಖಂಡದ ಔಲಿಯಲ್ಲಿ ನಡೆಯುತ್ತಿರುವ ಭಾರತ ಮತ್ತು ಅಮೆರಿಕದ ಯುದ್ಧ ಅಬ್ಯಾಸದ ಜಂಟಿ ತರಬೇತಿ ಸಮಯದಲ್ಲಿ ಅವುಗಳನ್ನು ಪ್ರದರ್ಶಿಸಲಾಯಿತು. . ನಡೆಯುತ್ತಿರುವ ಜಂಟಿ ತರಬೇತಿ ಸಮಯದಲ್ಲಿ ಶತ್ರು ಡ್ರೋನ್‌ಗಳನ್ನು ಬೇಟೆಯಾಡಲು ತರಬೇತಿ ಪಡೆದ “ಅರ್ಜುನ್” ಎಂಬ … Continued