ಬಿಜೆಪಿ ಶಾಸಕನಿಗೆ ವಯೋವೃದ್ಧನಿಂದ ಕಪಾಳಮೋಕ್ಷದ‌ ವಿಡಿಯೊ ವೈರಲ್…! ತನ್ನ ಚಿಕ್ಕಪ್ಪ ಪ್ರೀತಿಯಿಂದ ಕೆನ್ನೆಗೆ ತಟ್ಟಿದ್ದಾರೆ ಎಂದ ಶಾಸಕ

ಉನ್ನಾವೋ (ಉತ್ತರಪ್ರದೇಶ): ಬಿಜೆಪಿ ಶಾಸಕ ಪಂಕಜ್ ಗುಪ್ತಾ ಅವರಿಗೆ ಕಾರ್ಯಕ್ರಮದ ವೇಳೆ ರೈತನೊಬ್ಬ ಕಪಾಳಮೋಕ್ಷ ಮಾಡಿರುವುದನ್ನು ತೋರಿಸುವ ವಿಡಿಯೋ ತುಣುಕೊಂದು ವೈರಲ್ ಆಗಿದ್ದು, ಶಾಸಕ ತನ್ನ ಚಿಕ್ಕಪ್ಪ ತನ್ನ ಕೆನ್ನೆಯ ಮೇಲೆ ಪ್ರೀತಿಯಿಂದ ತಟ್ಟಿದ್ದಾರೆ ಎಂದು ಹೇಳಿದ್ದಾರೆ. ವಿಡಿಯೊ ವ್ಯಾಪಕವಾಗಿ ವೈರಲ್‌ ಆಗಿದ್ದು, ಶುಕ್ರವಾರ ಉನ್ನಾವೊದ ಸದರ್ ಕ್ಷೇತ್ರದ ಶಾಸಕರು ನಕಾರಾತ್ಮಕ ಅನಿಸಿಕೆಗಳನ್ನು ಹೋಗಲಾಡಿಸಲು ಪತ್ರಿಕಾಗೋಷ್ಠಿಯನ್ನು … Continued

ಭಾರತದ ಮತ್ತೊಂದು ಮೈಲಿಗಲ್ಲು: ದೇಶದಲ್ಲಿ 150 ಕೋಟಿಗೂ ಹೆಚ್ಚು ಡೋಸ್ ಕೋವಿಡ್‌ ಲಸಿಕೆ ನೀಡಲಾಗಿದೆ ಎಂದ ಪ್ರಧಾನಿ

ನವದೆಹಲಿ: ದೇಶದಲ್ಲಿ ಈವರೆಗೆ 150 ಕೋಟಿ‌ ಡೋಸ್ ಲಸಿಕೆ ನೀಡಿರುವುದು ಮಹತ್ವದ ಮೈಲುಗಲ್ಲು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಲಸಿಕೆ ನೀಡಿಕೆ ಆರಂಭವಾದ ಒಂದು ವರ್ಷದ ಅವಧಿಯಲ್ಲಿ 150 ಕೋಟಿ ಡೋಸ್ ಲಸಿಕೆ ನೀಡಲಾಗಿದೆ. ಇದು ಆಶಾದಾಯಕ ಬೆಳವಣಿಗೆ ಎಂದು ಅವರು ಹೇಳಿದ್ದಾರೆ. ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾದಲ್ಲಿ ಎರಡನೇ ಕ್ಯಾನ್ಸರ್ ಘಟಕಕ್ಕೆ ಚಾಲನೆ … Continued

ದೇಶದಲ್ಲಿ ಕೋವಿಡ್ ಪ್ರಕರಣಗಳು ಘಾತೀಯವಾಗಿ ಹೆಚ್ಚಳ, ಆರ್-ನಾಟ್ ಮೌಲ್ಯವು ಈಗಲೇ ಎರಡನೇ ಅಲೆಗಿಂತ ಹೆಚ್ಚಾಗಿದೆ..!-.ಆರ್-ಮೌಲ್ಯದ ಅರ್ಥವೇನು ?

ಆರ್-ನಾಟ್, ಅಥವಾ ಆರ್0, ಸೋಂಕಿಗೆ ಒಳಗಾಗುವ ಜನರ ಸರಾಸರಿ ಸಂಖ್ಯೆಯನ್ನು ಸೂಚಿಸುತ್ತದೆ ಮತ್ತು ಕೋವಿಡ್ ಧನಾತ್ಮಕ ವ್ಯಕ್ತಿಯಿಂದ ಎಷ್ಟು ಆರೋಗ್ಯವಂತ ಜನರು ಸೋಂಕಿಗೆ ಒಳಗಾಗಬಹುದು ಎಂಬುದನ್ನು ಹೇಳುತ್ತದೆ. ನವದೆಹಲಿ: ದೇಶದಲ್ಲಿ ಕೋವಿಡ್-19 ಪ್ರಕರಣಗಳು ದಿನದಿಂದ ದಿನಕ್ಕೆ ಘಾತೀಯವಾಗಿ ಏರುತ್ತಿವೆ. ಓಮಿಕ್ರಾನ್‌ ರೂಪಾಂತರವು ತನ್ನ ರಂಪಾಟವನ್ನು ಪ್ರಾರಂಭಿಸುತ್ತಿದ್ದಂತೆ, ದೇಶವನ್ನು ಧ್ವಂಸಗೊಳಿಸಿದ ಎರಡನೇ ಅಲೆಯ ಉತ್ತುಂಗದಲ್ಲಿದ್ದುದಕ್ಕಿಂತ R-0 (R-naught) … Continued

ಇಟಲಿಯಿಂದ ಮತ್ತೊಂದು ವಿಮಾನದಲ್ಲಿ ಅಮೃತಸರಕ್ಕೆ ಬಂದಿಳಿದ ಪ್ರಯಾಣಿಕರಲ್ಲಿ 150 ಜನರಿಗೆ ಕೋವಿಡ್‌ ಸೋಂಕು..!

ಅಮೃತಸರ: ಇಟಲಿಯಿಂದ ಸುಮಾರು 150 ಅಂತಾರಾಷ್ಟ್ರೀಯ ಪ್ರಯಾಣಿಕರು ಪಂಜಾಬ್‌ಗೆ ಆಗಮಿಸಿದ ನಂತರ ಕೋವಿಡ್ -19ಕ್ಕೆ ಧನಾತ್ಮಕ ಪರೀಕ್ಷೆ ನಡೆಸಿದ್ದಾರೆ. 290 ಪ್ರಯಾಣಿಕರಿದ್ದ ವಿಮಾನವು ರೋಮ್‌ನಿಂದ ಅಮೃತಸರಕ್ಕೆ ಬಂದಿದೆ. ಪ್ರೋಟೋಕಾಲ್ ಪ್ರಕಾರ ನಗರದಾದ್ಯಂತ ಆಸ್ಪತ್ರೆಗಳಲ್ಲಿ ಸ್ಥಾಪಿಸಲಾದ ಪ್ರತ್ಯೇಕ ವಾರ್ಡ್‌ಗಳಿಗೆ ರೋಗಿಗಳನ್ನು ಸ್ಥಳಾಂತರಿಸುವ ಸಾಧ್ಯತೆಯಿದೆ. ಗುರುವಾರ ಮುಂಜಾನೆ, ಇಟಲಿಯ ಮಿಲನ್‌ನಿಂದ ಚಾರ್ಟರ್ ಫ್ಲೈಟ್‌ನಲ್ಲಿ ಅಮೃತಸರ ವಿಮಾನ ನಿಲ್ದಾಣಕ್ಕೆ ಬಂದ … Continued

ಪ್ರಧಾನಿ ಮೋದಿ ಪಾಕಿಸ್ತಾನದ ಫೈರಿಂಗ್‌ ವ್ಯಾಪ್ತಿಯಲ್ಲಿದ್ದರು’: ಬೆದರಿಕೆ ಇರಲಿಲ್ಲ ಎಂಬ ಪಂಜಾಬ್‌ ಸಿಎಂ ಹೇಳಿಕೆ ತಳ್ಳಿಹಾಕಿದ ಕಾಂಗ್ರೆಸ್‌ನ ಮನೀಶ್ ತಿವಾರಿ

ಚಂಡೀಗಢ: ಫಿರೋಜ್‌ಪುರದ ಫ್ಲೈಓವರ್ ಮೇಲೆ 20 ನಿಮಿಷಗಳ ಕಾಲ ಪ್ರಧಾನಿ ನರೇಂದ್ರ ಮೋದಿ ಬೆಂಗಾವಲು ಪಡೆ ತಡೆಹಿಡಿಲ್ಪಟ್ಟಾಗ ಅವರ ಭದ್ರತೆಗೆ ಯಾವುದೇ ಅಪಾಯವಿರಲಿಲ್ಲ ಎಂಬ ಪಂಜಾಬ್ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಹೇಳಿಕೆಯನ್ನು ಅವರದ್ದೇ ಪಕ್ಷದ ಹಿರಿಯ ನಾಯಕ ಮನೀಶ್ ತಿವಾರಿ ಶುಕ್ರವಾರ ತಳ್ಳಿಹಾಕಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಕಾಂಗ್ರೆಸ್‌ ನಾಯಕ ತಿವಾರಿ, ಪ್ರಧಾನಿಯ ಭದ್ರತೆಯನ್ನು ಬೇರೆಯವರ … Continued

ಮೂರನೇ ಕೋವಿಡ್ ಅಲೆ ಜನವರಿ ಅಂತ್ಯದ ವೇಳೆಗೆ ಉತ್ತುಂಗಕ್ಕೇರಬಹುದು, ದೈನಂದಿನ ಪ್ರಕರಣಗಳು 10 ಲಕ್ಷವನ್ನೂ ತಲುಪಬಹುದು: ಹೊಸ ಅಧ್ಯಯನದ ಊಹೆ

ನವದೆಹಲಿ: ಭಾರತದಲ್ಲಿ ಓಮಿಕ್ರಾನ್-ಪ್ರಚೋದಿತ ಕೋವಿಡ್ -19ರ ಮೂರನೇ ಅಲೆಯು ಜನವರಿ-ಅಂತ್ಯ ಮತ್ತು ಫೆಬ್ರವರಿಯಲ್ಲಿ ಗರಿಷ್ಠವಾಗಬಹುದು, ದೈನಂದಿನ ಪ್ರಕರಣಗಳು 10 ಲಕ್ಷ ಮುಟ್ಟಬಹುದು ಎಂದು ಐಐಎಸ್‌ಸಿ-ಐಎಸ್‌ಐ (IISc-ISI) ಹೊಸ ಮಾಡೆಲಿಂಗ್ ಅಧ್ಯಯನವು ಅಂದಾಜು ಮಾಡಿದೆ. ಓಮಿಕ್ರಾನ್ ಹರಡುವ ದರಗಳನ್ನು ಆಧರಿಸಿದ ಅಧ್ಯಯನವನ್ನು ಪ್ರೊಫೆಸರ್ ಶಿವ ಅತ್ರೇಯ, ಪ್ರೊಫೆಸರ್ ರಾಜೇಶ್ ಸುಂದರೇಶನ್ ಮತ್ತು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ … Continued

ವಿಲಕ್ಷಣ ಘಟನೆ: ತಪಾಸಣೆ ಸಮಯದಲ್ಲಿ ಸಿಕ್ಕಿಬೀಳುವ ಭಯದಲ್ಲಿ ಮೊಬೈಲ್ ನುಂಗಿದ ಕೈದಿ..!

ನವದೆಹಲಿ: ತಾನು ಸಿಕ್ಕಿಬೀಳುವ ಭಯದಿಂದ ತಿಹಾರ್‌ ಜೈಲಿನಲ್ಲಿ ಕೈದಿಯೊಬ್ಬರು ಜೈಲು ಅಧಿಕಾರಿಗಳು ನಡೆಸಿದ ತಪಾಸಣೆಯ ವೇಳೆ ಮೊಬೈಲ್ ಫೋನ್ ನುಂಗಿದ ಘಟನೆ ಬುಧವಾರ ನಡೆದಿದೆ. ಈ ‘ಅಸಾಮಾನ್ಯ ಘಟನೆ’ ಜೈ ತಿಹಾರ್ ಸೆಂಟ್ರಲ್ ಕಾರಾಗೃಹದ 1 ಜೈಲಿನೊಳಗೆ ನಡೆದಿದೆ ಎಂದು ವರದಿಯಾಗಿದೆ. ಮೊಬೈಲ್ ಮತ್ತು ಇತರ ನಿಷೇಧಿತ ವಸ್ತುಗಳ ತಪಾಸಣೆ ನಡೆಯುತ್ತಿರುವಾಗ ಜೈಲು ಅಧಿಕಾರಿಗಳು ಈತನ … Continued

ನೀಟ್‌ ಪಿಜಿ ಪ್ರವೇಶ: ಮಧ್ಯಂತರ ಆದೇಶದಲ್ಲಿ ಒಬಿಸಿಗೆ 27%, ಇಡಬ್ಲ್ಯುಎಸ್‌ ವಿದ್ಯಾರ್ಥಿಗಳಿಗೆ 10% ಕೋಟಾಕ್ಕೆ ಅನುಮತಿಸಿದ ಸುಪ್ರೀಂ ಕೋರ್ಟ್

ನವದೆಹಲಿ: ಶುಕ್ರವಾರ, ತನ್ನ ಮಧ್ಯಂತರ ಆದೇಶದಲ್ಲಿ ಸುಪ್ರೀಂ ಕೋರ್ಟ್, 2021-22ನೇ ಸಾಲಿಗೆ NEET-PG ಪ್ರವೇಶಕ್ಕಾಗಿ ವೈದ್ಯಕೀಯ ಕೌನ್ಸೆಲಿಂಗ್ ಅನ್ನು ಪುನರಾರಂಭಿಸಲು ಅವಕಾಶ ಮಾಡಿಕೊಟ್ಟಿತು ಮತ್ತು 27% ಹಿಂದುಳಿದ ವರ್ಗ(OBC) ಮತ್ತು 10% ಆರ್ಥಿಕ ದುರ್ಬಲರ ಕೋಟಾ (EWS) ಸಿಂಧುತ್ವವನ್ನು ಎತ್ತಿಹಿಡಿದಿದೆ. ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ್ ಮತ್ತು ಎ.ಎಸ್. ಬೋಪಣ್ಣ ಅವರ ಪೀಠವು ಮಧ್ಯಂತರ ಆದೇಶವು 2021-22 … Continued

ಏಳು ತಿಂಗಳ ನಂತರ ಭಾರತದಲ್ಲಿ 1 ಲಕ್ಷಕ್ಕೂ ಹೆಚ್ಚು ದೈನಂದಿನ ಕೊರೊನಾ ಸೋಂಕು ದಾಖಲು…! ಇದು ಹಿಂದಿನ ದಿನಕ್ಕಿಂತ 28.8% ಹೆಚ್ಚು

ನವದೆಹಲಿ: ಕಳೆದ 24 ಗಂಟೆಗಳಲ್ಲಿ ಭಾರತವು 1,17,100 ಹೊಸ ಪ್ರಕರಣಗಳನ್ನು ದಾಖಲಿಸಿದೆ, ಇದು ಹಿಂದಿನ ದಿನಕ್ಕಿಂತ 28.8% ಹೆಚ್ಚಾಗಿದೆ ಎಂದು ಶುಕ್ರವಾರ ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳು ತೋರಿಸಿವೆ. ಇದು ಒಟ್ಟು ಪ್ರಕರಣವನ್ನು ಅನ್ನು 3,52,26,386 ಕ್ಕೆ ಒಯ್ದಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 302 ಸಾವುಗಳು ವರದಿಯಾಗಿದ್ದು, ಒಟ್ಟು ಸಾವಿನ ಸಂಖ್ಯೆ 4,83,178 ಕ್ಕೆ … Continued

ಒಂದು ರಾಜ್ಯದ ಪರಿಶಿಷ್ಟ ಸಮುದಾಯದ ವ್ಯಕ್ತಿ ಮತ್ತೊಂದು ರಾಜ್ಯದ ಎಸ್‌ಸಿ/ಎಸ್‌ಟಿ ಸವಲತ್ತು ಪಡೆಯುವಂತಿಲ್ಲ: ಸುಪ್ರೀಂಕೋರ್ಟ್‌

ನವದೆಹಲಿ: ಒಂದು ರಾಜ್ಯದ ಪರಿಶಿಷ್ಟ ಜಾತಿ (ಎಸ್‌ಸಿ) ಅಥವಾ ಪರಿಶಿಷ್ಟ ಪಂಗಡಕ್ಕೆ (ಎಸ್‌ಟಿ) ಸೇರಿದ ವ್ಯಕ್ತಿ ಮತ್ತೊಂದು ರಾಜ್ಯದಲ್ಲಿ ಅಂತಹ ಎಸ್‌ಸಿ/ಎಸ್‌ಟಿ ಸಮುದಾಯಕ್ಕೆ ಸೇರಿದ ವ್ಯಕ್ತಿಗಳಿಗೆ ನೀಡಲಾಗಿರುವ ಸವಲತ್ತು ಮತ್ತು ಪ್ರಯೋಜನಗಳನ್ನು ಪಡೆಯಲು ಅರ್ಹರಲ್ಲ ಎಂದು ಸುಪ್ರೀಂ ಕೋರ್ಟ್ ಬುಧವಾರ ಹೇಳಿದೆ ಎಂದು ಬಾರ್‌ ಅಂಡ್‌ ಬೆಂಚ್‌ ವರದಿ ಮಾಡಿದೆ. ಮಹಾರಾಷ್ಟ್ರ ರಾಜ್ಯದಲ್ಲಿ ಪರಿಶಿಷ್ಟ ಜಾತಿ … Continued