ತನ್ನ ಕೆಲಸ ಸಮಯಕ್ಕೆ ಮುಗಿಸಿಲ್ಲ ಎಂಬ ಕಾರಣಕ್ಕೆ ತನ್ನ ಸಂಬಳ ತಾನೇ ತಡೆಹಿಡಿದ ಈ ಐಎಎಸ್​ ಅಧಿಕಾರಿ..!

ಜಬಲ್ಪುರ (ಮಧ್ಯಪ್ರದೇಶ):ಮಧ್ಯಪ್ರದೇಶದ ಸಾರ್ವಜನಿಕ ಕುಂದುಕೊರತೆಗಳನ್ನು ಪರಿಹರಿಸಲು ವಿಳಂಬ ಮಾಡಿದ್ದಕ್ಕಾಗಿ ಜಬಲ್‌ಪುರದ ಜಿಲ್ಲಾಧಿಕಾರಿ ಕರ್ಮವೀರ್ ಶರ್ಮಾ ಅವರು ತಮ್ಮ ಸಂಬಳವನ್ನು ತಾವೇ ಹಿಡಿದಿಟ್ಟುಕೊಂಡು ತಮಗೆ ತಾವೇ ಸ್ವತಃ ಶಿಕ್ಷೆ ವಿಧಿಸಿಕೊಂಡಿದ್ದಾರೆ…! ಮುಖ್ಯಮಂತ್ರಿ ಸಹಾಯವಾಣಿಯಿಂದ ಸ್ವೀಕರಿಸಿದ ಪ್ರಕರಣಗಳಿಗೆ ಸಂಬಂಧಿಸಿದ ಎಲ್ಲಾ ಬಾಕಿ ಕೆಲಸಗಳನ್ನು ಪೂರ್ಣಗೊಳಿಸುವ ವರೆಗೆ ಅವರು ತಮ್ಮ ವೇತನವನ್ನು ತಡೆಹಿಡಿಯಲಾಗುವುದು ಎಂದು ಹೇಳಿದ್ದಾರೆ. ಕಾಮಗಾರಿ ಬಾಕಿ ಇದ್ದಲ್ಲಿ … Continued

ಏಕಾಏಕಿ ಗ್ರಾಮದೊಳಕ್ಕೇ ನುಗ್ಗಿದ 200 ಆನೆಗಳ ಹಿಂಡು…! ; ಬೆಚ್ಚಿಬಿದ್ದ ಜನ, ಅರಣ್ಯ ಇಲಾಖೆ ಸಿಬ್ಬಂದಿ..ವೀಕ್ಷಿಸಿ

ನಾಗಾಂವ್ (ಅಸ್ಸಾಂ):  ಆನೆಗಳ ಹಿಂಡು ಅಸ್ಸಾಂನ ನಾಗಾಂವ್‌ನ ವಸತಿ ಪ್ರದೇಶಗಳಿಗೆ ನುಗ್ಗಿದೆ. ಸುಮಾರು 200 ಸಂಖ್ಯೆಯಷ್ಟಿದ್ದ ಆನೆಗಳು ಆಹಾರಗಳನ್ನು ಹುಡುಕಿಕೊಂಡು ಗ್ರಾಮಗಳಿಗೆ ನುಗ್ಗಿವೆ. ಅರಣ್ಯ ವಿಭಾಗದ ಅಧಿಕಾರಿಗಳು ಮತ್ತು ಗ್ರಾಮಸ್ಥರು ಈ ಆನೆಗಳನ್ನು ಓಡಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ನಾಗಾಂವ್ ಅರಣ್ಯ ಸಂರಕ್ಷಣಾ ಅಸ್ಸಾಂ ರೇಂಜರ್ ರಾಜೇನ್ ಸೈಕಿಯಾ ತಿಳಿಸಿದ್ದಾರೆ. ಅಸ್ಸಾಂನ ನಾಗಾಂವ್ ಪ್ರದೇಶವು ಪದೇ ಪದೇ … Continued

ಬಾಲಿವುಡ್‌ ನಟ ಅರ್ಜುನ್ ಕಪೂರ್ ಸೇರಿ ಕುಟುಂಬದ ನಾಲ್ವರಿಗೆ ಕೊರೊನಾ ಸೋಂಕು ದೃಢ

ಮುಂಬೈ: ನಟ ಅರ್ಜುನ್ ಕಪೂರ್ ಮತ್ತು ಅವರ ಸಹೋದರಿ ಅಂಶುಲಾ ಕಪೂರ್ ಅವರು ಕೋವಿಡ್ -19 ಗೆ ಧನಾತ್ಮಕ ಪರೀಕ್ಷೆ ಮಾಡಿದ್ದಾರೆ. ಕಾಕತಾಳೀಯವಾಗಿ ಅಂಶುಲಾ ಅವರ ಜನ್ಮದಿನದಂದೇ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಅರ್ಜುನ್ ಅವರ ಸೋದರ ಸಂಬಂಧಿ, ಚಲನಚಿತ್ರ ನಿರ್ಮಾಪಕಿ ರಿಯಾ ಕಪೂರ್ ಮತ್ತು ಅವರ ಪತಿ ಕರಣ್ ಬೂಲಾನಿ ಅವರಿಗೂ ಕೊರೊನಾ ಸೋಂಕು … Continued

ಅಡುಗೆ ಮಾಡುತ್ತಿದ್ದಾಗ ಎಲ್‌ಪಿಜಿ ಸಿಲಿಂಡರ್ ಸ್ಫೋಟ, ಐದು ಮಕ್ಕಳು ಸಾವು

ಬಂಕಾರ : ತಾಯಿ ಅಡುಗೆ ಮಾಡುತ್ತಿದ್ದ ವೇಳೆಯಲ್ಲಿ ಎಲ್‌ಪಿಜಿ ಸಿಲಿಂಡರ್‌ ಸ್ಪೋಟಗೊಂಡು ಐವರು ಮಕ್ಕಳು ಸಜೀವ ಸಹನವಾದ ಘಟನೆ ಬಿಹಾರದ ಬಂಕಾ ಜಿಲ್ಲೆಯ ರಾಜಾವರ ಗ್ರಾಮದಲ್ಲಿ ನಡೆದಿದೆ. ಜಿಲ್ಲಾಡಳಿತ ಉನ್ನತಮಟ್ಟದ ತನಿಖೆಗೆ ಆದೇಶಿಸಿದೆ. ರಾಜಾವರ ಗ್ರಾಮದ ಛೋಟು ಪಾಸ್ವಾನ್ ಅವರ ಪುತ್ರ ಅಂಕುಶ್ (12 ವರ್ಷ), ನಾಲ್ವರು ಪುತ್ರಿಯರಾದ ಅಂಶು ಕುಮಾರಿ (8 ವರ್ಷ), ಸೀಮಾ … Continued

ಓಮಿಕ್ರಾನ್: ಭಾರತದಲ್ಲಿ ಸೋಂಕಿತರ ಸಂಖ್ಯೆ 781ಕ್ಕೆ ಏರಿಕೆ, ದೆಹಲಿಯಲ್ಲಿ ಹೆಚ್ಚಿನ ಪ್ರಕರಣಗಳು

ನವದೆಹಲಿ: ಭಾರತದಲ್ಲಿ ಕೊರೊನಾ ವೈರಸ್‌ನ ಓಮಿಕ್ರಾನ್ ರೂಪಾಂತರದ ಪ್ರಕರಣಗಳು 653 ರಿಂದ ಬುಧವಾರ 781ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳು ತೋರಿಸಿವೆ. ಡಿಸೆಂಬರ್ 2 ರಂದು ದೇಶದಲ್ಲಿ ಮೊದಲ ಬಾರಿಗೆ ಹೊಸ ರೂಪಾಂತರದ ಪ್ರಕರಣಗಳು ವರದಿಯಾಗಿವೆ ಮತ್ತು ಈಗ 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಅದು ಹರಡಿದೆ. ದೆಹಲಿಯಲ್ಲಿ (238), ಮಹಾರಾಷ್ಟ್ರ … Continued

ಬಹುಮುಖ ವ್ಯಕ್ತಿತ್ವದ ದಾರಾ ಶಿಕೋಗೆ ಜಾತ್ಯತೀತತೆ ಚಾಂಪಿಯನ್ ಎಂದು ಕರೆಸಿಕೊಳ್ಳುವ ಸರ್ಕಾರಗಳು ‘ಉದ್ದೇಶಪೂರ್ವಕವಾಗಿ’ ಪ್ರಾಮುಖ್ಯತೆ ನೀಡಿಲ್ಲ: ನಖ್ವಿ

ನವದೆಹಲಿ: ಪೂರ್ವಗ್ರಹ ಪೀಡಿತ ರಾಜಕೀಯವು ದಾರಾ ಶಿಕೋ ಅವರ ಪರಂಪರೆಯ ಮೇಲೆ ತಪ್ಪು ಕಲ್ಪನೆಯನ್ನು ಸೃಷ್ಟಿಸಿದೆ ಎಂದು ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಮಂಗಳವಾರ ಹೇಳಿದ್ದಾರೆ. ಜಾತ್ಯತೀತತೆಯ ಚಾಂಪಿಯನ್ ಎಂದು ಕರೆಸಿಕೊಳ್ಳುವ ಸರ್ಕಾರಗಳು ಉದ್ದೇಶಪೂರ್ವಕವಾಗಿ ಇತರ ಅನೇಕ ಮಹಾನ್ ವ್ಯಕ್ತಿಗಳಂತೆ ದಾರಾ ಶಿಕೋ ಮಾಡಿದ ಕೆಲಸಗಳಿಗೆ ಸರಿಯಾದ ಮಹತ್ವ, ಮನ್ನಣೆ ನೀಡಲಿಲ್ಲ ಎಂದು ಅವರು … Continued

ಕಾಂಗ್ರೆಸ್​ ಶಾಸಕರಿಗೆ ಪೊಲೀಸರ ಪ್ಯಾಂಟ್ ಒದ್ದೆ ಮಾಡುವ ಸಾಮರ್ಥ್ಯವಿದೆ ಎಂದ ಸಿಧು ವಿರುದ್ಧ ಮಾನನಷ್ಟ ನೋಟಿಸ್

ಚಂಡೀಗಢ: ಕಾಂಗ್ರೆಸ್ ಪಕ್ಷದ ಇಬ್ಬರು ಸದಸ್ಯರು ಪೊಲೀಸರ ಪ್ಯಾಂಟ್ ಒದ್ದೆ ಮಾಡುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಹೇಳುವ ಮೂಲಕ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ವಿವಾದಕ್ಕೀಡಾಗಿದ್ದಾರೆ. ತಮ್ಮ ಪಕ್ಷದ ಸದಸ್ಯರನ್ನು ಹೊಗಳುವ ನವಜೋತ್ ಸಿಂಗ್ ಸಿಧು ಅವರ ಭಾಷಣದ ವಿಡಿಯೋ ವೈರಲ್ ಆಗಿ ಈಗ ನವಜೋತ್ ಸಿಂಗ್ ಸಿಧು ವಿರುದ್ಧ ಮಾನನಷ್ಟ ನೋಟಿಸ್‌ … Continued

ದೇಶದಲ್ಲಿ 1,49,297 ಕೋಟಿ ರೂ. ಆದಾಯ ತೆರಿಗೆ ಮರುಪಾವತಿ

ನವದೆಹಲಿ: ದೇಶದಲ್ಲಿ ಈ ವರ್ಷ ಏಪ್ರಿಲ್ 1ರಿಂದ ಈವರೆಗೆ ( December 27)  1,49,297 ಕೋಟಿ ರೂ.ಗಳಿಗೂ ಅಧಿಕ ಆದಾಯ ತೆರಿಗೆ ಮರುಪಾವತಿ ಮಾಡಲಾಗಿದೆ. 1.45 ಕೋಟಿ ತೆರಿಗೆ ಪಾವತಿದಾರರಿಗೆ ಸರಿ ಸುಮಾರು 1.50 ಲಕ್ಷ ಕೋಟಿ ರೂಪಾಯಿ ಮರುಪಾವತಿ ಮಾಡಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ. ಈ ಕುರಿತು ಹೇಳಿಕೆ ನೀಡಿರುವ ಕೇಂದ್ರ … Continued

ಮದ್ಯ ಖರೀದಿಸಲು ಹಣ ನೀಡದ್ದಕ್ಕೆ ಗೆಳತಿಯ ಮೂಗನ್ನೇ ಕತ್ತರಿಸಿದ ಭೂಪ..!

ಖಾಂಡ್ವಾ (ಮಧ್ಯಪ್ರದೇಶ): ಮದ್ಯ ಖರೀದಿಸಲು ತನ್ನ ಸಂಗಾತಿ ಹಣ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಖಾಂಡ್ವಾದಲ್ಲಿ 40 ವರ್ಷದ ವ್ಯಕ್ತಿಯೊಬ್ಬ ತನ್ನ ಲಿವ್-ಇನ್ ಪಾರ್ಟ್ನರಿನ ಮೂಗನ್ನು ಹರಿತವಾದ ಆಯುಧದಿಂದ ಕತ್ತರಿಸಿದ್ದು, ಆತನನ್ನು ನಂತರ ಬಂಧಿಸಲಾಗಿದೆ. ಕೊತ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ಈ ಘಟನೆ ನಡೆದಿದ್ದು, ವ್ಯಕ್ತಿಯನ್ನು ಲವಕುಶ ಪಟೇಲ್ ಎಂದು ಗುರುತಿಸಲಾಗಿದೆ. ಮದ್ಯ ಖರೀದಿಸಲು ತನ್ನ … Continued

ಪಂಜಾಬ್ ಚುನಾವಣೆಗೂ ಮುನ್ನ ಬಿಜೆಪಿ ಸೇರಿದ ಭಾರತದ ತಂಡದ ಮಾಜಿ ಆಟಗಾರ ದಿನೇಶ್ ಮೊಂಗಿಯಾ

ಪಂಜಾಬ್ ಚುನಾವಣೆಗೂ ಮುನ್ನ ಬಿಜೆಪಿ ಸೇರಿದ ಭಾಋತದ ತಂಡದ ಮಾಜಿ ಆಟಗಾರ ದಿನೇಶ್ ಮೊಂಗಿಯಾ ನವದೆಹಲಿ: ಭಾರತದ ಕ್ರಿಕೆಟ್‌ ತಂಡದ ಮಾಜಿ ಆಟಗಾರ ದಿನೇಶ್ ಮೊಂಗಿಯಾ ಪಂಜಾಬ್ ಚುನಾವಣೆಗೂ ಮುನ್ನ ಮಂಗಳವಾರ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ತಮ್ಮ ರಾಜಕೀಯದ ಇನ್ನಿಂಗ್ಸ್ ಪ್ರಾರಂಭಿಸಿದ್ದಾರೆ. ದೆಹಲಿಯ ಬಿಜೆಪಿ ಪಕ್ಷದ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಮೊಂಗಿಯಾ(44) ಅವರು ಸೇರ್ಪಡೆಯಾಗಿದ್ದು, ಈ ವೇಳೆ … Continued