ದೆಹಲಿಯಲ್ಲಿ 3.8 ಡಿಗ್ರಿ ಸೆಲ್ಸಿಯಸ್‌ಗೆ ಇಳಿದ ಕನಿಷ್ಠ ತಾಪಮಾನ

ನವದೆಹಲಿ: ಶುಕ್ರವಾರ (ಡಿಸೆಂಬರ್ 31) ರಾಷ್ಟ್ರ ರಾಜಧಾನಿಯಲ್ಲಿ ಚಳಿಗಾಳಿ ಪರಿಸ್ಥಿತಿಗಳು ಚಾಲ್ತಿಯಲ್ಲಿರುವುದರಿಂದ ದೆಹಲಿಯ ಜನರು ಕೊರೆಯುವ ಚಳಿಯಲ್ಲಿಯೇ ಹೊಸ ವರ್ಷ ಆಚರಿಸಲು ಸಿದ್ಧರಾಗಿದ್ದಾರೆ. ಭಾರತೀಯ ಹವಾಮಾನ ಇಲಾಖೆ (IMD) ಪ್ರಕಾರ, ನಗರದಲ್ಲಿ ಕನಿಷ್ಠ ತಾಪಮಾನವು 3.8 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದೆ. ಗುರುವಾರ (ಡಿಸೆಂಬರ್ 30) ನಗರದಲ್ಲಿ ಚಳಿಗಾಳಿ ಆವರಿಸಿದ್ದು, ಒಂದು ದಿನದ ಹಿಂದಿನ ತಾಪಮಾನ 8.4 … Continued

ತಮಿಳುನಾಡಿನಲ್ಲಿ ಮತ್ತೆ ಭಾರೀ ಮಳೆ: ಮೂವರು ಸಾವು, ಚೆನ್ನೈ ಜಲಾವೃತ

ಚೆನ್ನೈ: ತಮಿಳುನಾಡಿನಲ್ಲಿ ವರುಣನ ಆರ್ಭಟ ಮತ್ತೆ ಜೋರಾಗಿದ್ದು, ಮಳೆ ಸಂಬಂಧಿ ಘಟನೆಗಳಿಂದ ಮೂವರು ಮೃತಪಟ್ಟಿದ್ದಾರೆ. ಭಾರೀ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ರೆಡ್‌ ಅಲರ್ಟ್‌ ಘೋಷಣೆ ಮಾಡಲಾಗಿದೆ. ಚೆನ್ನೈ, ಕಾಂಚಿಪುರಂ, ತಿರುವಲ್ಲೂರ್‌, ಚೆಂಗಲೆಪಟ್ಟು ಈ ನಾಲ್ಕು ಜಿಲ್ಲೆಗಳಲ್ಲಿ ರೆಡ್‌ ಅಲರ್ಟ್‌ ಘೋಷಿಸಲಾಗಿದ್ದು, ಜಿಲ್ಲೆಗಳಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 20 ಸೆ.ಮೀ.ನಷ್ಟು ಮಳೆಯಾಗಿದೆ … Continued

ಮಹಾರಾಷ್ಟ್ರದಲ್ಲಿ ಓಮಿಕ್ರಾನ್ ಸೋಂಕಿತ ರೋಗಿ ಹೃದಯಾಘಾತದಿಂದ ಸಾವು

ಮುಂಬೈ: ಮಹಾರಾಷ್ಟ್ರದಲ್ಲಿ ಕೊರೊನಾ ವೈರಸ್ ರೂಪಾಂತರಿ ಓಮಿಕ್ರಾನ್ ಸೋಂಕು ತಗುಲಿದ್ದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಪುಣೆಯ ಪಿಂಪ್ರಿ-ಚಿಂಚವಾಡ್‌ನಲ್ಲಿ ನೆಲೆಸಿದ್ದ 52 ವರ್ಷದ ಓಮಿಕ್ರಾನ್ ಸೋಂಕಿತರು ಹೃದಯಾಘಾತಕ್ಕೆ ಒಳಗಾಗಿ ನಿಧನರಾಗಿದ್ದು, ಈ ಸಾವನ್ನು ಓಮಿಕ್ರಾನ್ ಸೋಂಕಿನಿಂದ ಸಂಭವಿಸಿದ ಸಾವು ಎಂದು ಹೇಳಲು ವೈದ್ಯರು ನಿರಾಕರಿಸಿದ್ದಾರೆ. ಅವರ ಸಾವಿಗೆ ಇನ್ನಿತರ ಆರೋಗ್ಯ ಸಮಸ್ಯೆಗಳೇ ಕಾರಣ ಎಂದು … Continued

ದೇಶದಲ್ಲಿ ಕೋವಿಡ್ ಸೋಂಕು ನಿನ್ನೆಗಿಂತ 27% ಏರಿಕೆ; 1,270ಕ್ಕೆ ತಲುಪಿದ ಓಮಿಕ್ರಾನ್‌ ಸೋಂಕು

ಭಾರತದ ಸಕ್ರಿಯ ಪ್ರಕರಣಗಳು 91,361ಕ್ಕೆ ಏರಿದೆ. ಸಕ್ರಿಯ ಪ್ರಕರಣಗಳು ಒಟ್ಟು ಪ್ರಕರಣಗಳಲ್ಲಿ ಶೇಕಡಾ 1 ಕ್ಕಿಂತ ಕಡಿಮೆ, 0.26%ರಷ್ಟಿದೆ. ಚೇತರಿಕೆ ದರವು ಪ್ರಸ್ತುತ 98.36 ಪ್ರತಿಶತದಲ್ಲಿದೆ. ಕಳೆದ 24 ಗಂಟೆಗಳಲ್ಲಿ 7,585 ಚೇತರಿಕೆ ವರದಿ. ಕಳೆದ 88 ದಿನಗಳಲ್ಲಿ ದೈನಂದಿನ ಧನಾತ್ಮಕತೆಯ ದರ (1.34%) ಶೇಕಡಾ 2 ಕ್ಕಿಂತ ಕಡಿಮೆ ಸಾಪ್ತಾಹಿಕ ಸಕಾರಾತ್ಮಕತೆಯ ದರ (0.89%) … Continued

ಆವರ್ತಕ ಕೆವೈಸಿ ಅಪ್‌ಡೇಟ್‌ನ ಗಡುವನ್ನು ಮಾರ್ಚ್ 31ರ ವರೆಗೆ ವಿಸ್ತರಿಸಿದ ಆರ್‌ಬಿಐ

ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ (RBI) ನಿಯಂತ್ರಿತ ಘಟಕಗಳಿಂದ ಗ್ರಾಹಕರ ಕೆವೈಸಿ (KYC) ಕಡ್ಡಾಯ ಆವರ್ತಕ ನವೀಕರಣಕ್ಕಾಗಿ ಗಡುವನ್ನು ಮಾರ್ಚ್ 31, 2022ರ ವರೆಗೆ ವಿಸ್ತರಿಸಿದೆ. ಕೊರೊನಾದ ಓಮಿಕ್ರಾನ್‌ ಪ್ರಭೇದವು ಭಾರತದಲ್ಲೂ ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಈ ಗಡುವನ್ನು 2022ರ ಮಾರ್ಚ್‌ 31ರ ವರೆಗೆ ವಿಸ್ತರಿಸಲಾಗಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತನ್ನ ನೋಟಿಸ್‌ನಲ್ಲಿ ತಿಳಿಸಿದೆ. … Continued

ವಯಸ್ಕರಿಗಿಂತ 2ರಿಂದ 18 ವರ್ಷದ ಮಕ್ಕಳಲ್ಲಿ ಕೋವ್ಯಾಕ್ಸಿನ್ ಹೆಚ್ಚು ಪರಿಣಾಮಕಾರಿ ಎಂದ ಭಾರತ್ ಬಯೋಟೆಕ್

ಹೈದರಾಬಾದ್: ಕೋವಿಡ್‌ ವಿರೋಧಿ ಕೋವ್ಯಾಕ್ಸಿನ್ ವಯಸ್ಕರಿಗಿಂತ 2 ರಿಂದ 18 ವರ್ಷದೊಳಗಿನ ಮಕ್ಕಳಲ್ಲಿ ಹೆಚ್ಚು ರೋಗನಿರೋಧಕ ಶಕ್ತಿ ಉಂಟುಮಾಡಿ ಪರಿಣಾಮಕಾರಿಯಾಗಿ ಕೋವಿಡ್-19 ವಿರುದ್ಧ ಹೋರಾಡಲು ಶಕ್ತಿ ತುಂಬಿದೆ. ಮತ್ತು ಕೋವ್ಯಾಕ್ಸಿನ್ ತುಂಬಾ ಸುರಕ್ಷಿತ ಎಂದು ಭಾರತ್ ಬಯೋಟೆಕ್ ಹೇಳಿದೆ. 12ರಿಂದ 18 ವರ್ಷದೊಳಗಿನ ಮಕ್ಕಳಿಗೆ ಕೊರೊನಾ ಲಸಿಕೆ ಕೋವ್ಯಾಕ್ಸಿನ್ ಬಳಕೆಗೆ ಭಾರತೀಯ ಔಷಧ ನಿಯಂತ್ರಣ ಸಂಸ್ಥೆ … Continued

ಅಚ್ಚರಿ ತರುವ ಪ್ರಾಣಿಗಳ ಬುದ್ಧಿವಂತಿಕೆ…ನಲ್ಲಿ ಬಿಟ್ಟುನೀರು ಕುಡಿದು ನಂತರ ನಳ ಬಂದ್‌ ಮಾಡುವ ಮಂಗ-ಹಸು..! ವೀಕ್ಷಿಸಿ

ನೀರು ಜೀವಜಲ ಅದೆಷ್ಟು ಅಮೂಲ್ಯ ಎಂಬುದು ಎಲ್ಲರಿಗೂ ಗೊತ್ತು. ಆದರೆ, ಒಂದಷ್ಟು ಸಂದರ್ಭದಲ್ಲಿ ನಾವು ಮನುಷ್ಯರು ನೀರನ್ನು ಪೋಲು ಮಾಡುತ್ತೇವೆ. ನೀರೆಂಬ ಅಮೃತವನ್ನು ಮಿತವಾಗಿ ಬಳಸಬೇಕು ಎಂದು ಗೊತ್ತಿದ್ದರೂ ಒಂದಷ್ಟು ಸಂದರ್ಭದಲ್ಲಿ ನೀರು ಪೋಲಾಗಿ ಹೋಗುತ್ತದೆ. ಹೀಗೆ ನೀರಿನ ಪ್ರಾಮುಖ್ಯತೆ ಗೊತ್ತಿದ್ದೂ ನೀರು ಪೋಲು ಮಾಡುವವರಿಗೆ ಈ ದೃಶ್ಯ ಒಂದು ಪಾಠವಾಗಿದೆ. ಪ್ರಾಣಿಗಳು ತೋರುವ ಬುದ್ಧಿವಂತಿಕೆ, … Continued

ಮಹಾರಾಷ್ಟ್ರದಲ್ಲಿ ಓಮಿಕ್ರಾನ್ ಪ್ರಕರಣದಲ್ಲಿ ಭಾರೀ ಏರಿಕೆ..198 ಹೊಸ ಪ್ರಕರಣಗಳು ದಾಖಲು

ಮುಂಬೈ: ಮಹಾರಾಷ್ಟ್ರವು ಗುರುವಾರ ಓಮಿಕ್ರಾನ್ ಪ್ರಕರಣಗಳಲ್ಲಿ ಭಾರಿ ಏರಿಕೆ ಕಂಡಿದೆ. ಹೊಸದಾಗಿ 198 ಪ್ರಕರಣಗಳು ದಾಖಲಾಗಿದೆ. ರಾಜ್ಯ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ, ರಾಜ್ಯದಲ್ಲಿ ಓಮಿಕ್ರಾನ್ ಪ್ರಕರಣಗಳ ಒಟ್ಟು ಸಂಖ್ಯೆ ಈಗ 450ಕ್ಕೆ ಏರಿದೆ. ಮತ್ತೊಂದೆಡೆ, ಮುಂಬೈ 3,671 ತಾಜಾ ಸೋಂಕುಗಳನ್ನು ದಾಖಲಿಸಿದೆ, ಇದು ಡೇಟಾ ಪ್ರಕಾರ ನಿನ್ನೆಯ ಸಂಖ್ಯೆಗಳಿಗೆ ಹೋಲಿಸಿದರೆ 46% … Continued

ಮತ್ತೆ ವೇಗವಾಗಿ ಏರುತ್ತಿದೆ ಕೊರೊನಾ: ಮುಂಬೈ-ದೆಹಲಿ -ಕೋಲ್ಕತ್ತಾದಲ್ಲಿ ಒಂದೇ ದಿನದಲ್ಲಿ ಸೋಂಕು ದ್ವಿಗುಣ, 6 ರಾಜ್ಯಗಳಲ್ಲಿ ಮೇ ಸ್ಥಿತಿಗೆ ಬಂದ ದೈನಂದಿನ ಸೋಂಕು..! ಇಲ್ಲಿದೆ ಮಾಹಿತಿ

ನವದೆಹಲಿ: ದೆಹಲಿ, ಹರಿಯಾಣ, ತಮಿಳುನಾಡು, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಗುಜರಾತ್, ಕರ್ನಾಟಕ ಮತ್ತು ಜಾರ್ಖಂಡ್ ಎಂಬ ಎಂಟು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಕೋವಿಡ್ ಪ್ರಕರಣಗಳಲ್ಲಿ ಹೆಚ್ಚಿನ ಏರಿಕೆಯನ್ನು ವರದಿ ಮಾಡಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಈ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸಾಪ್ತಾಹಿಕ ಕೋವಿಡ್-19 ಪ್ರಕರಣಗಳಲ್ಲಿ ಏರಿಕೆಯನ್ನು ಕಂಡಿವೆ ಮತ್ತು ಪ್ರಕರಣದ … Continued

ಮುಂಬೈ ಬ್ಯಾಂಕ್​ ದರೋಡೆ ವೇಳೆ ಸಿಬ್ಬಂದಿ ಸಾವು, 8 ತಾಸಿನಲ್ಲಿ ಇಬ್ಬರ ಬಂಧಿಸಿದ ಪೊಲೀಸರು: ದರೋಡೆ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಮುಂಬೈ: ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾದ ಮುಂಬೈ ಶಾಖೆಯಲ್ಲಿ ದರೋಡೆ ಮಾಡಲು ನುಗ್ಗಿದ್ದ ಇಬ್ಬರು ಮುಸುಕುಧಾರಿಗಳು ಗುಂಡು ಹಾರಿಸಿ, ಓರ್ವ ಉದ್ಯೋಗಿಯನ್ನ ಕೊಲೆ ಮಾಡಿ, ಎರಡೂವರೆ ಲಕ್ಷ ರೂ. ದೋಚಿ ಪರಾರಿಯಾದ ಘಟನೆ ನಡೆದಿದ್ದು, ಕೇವಲ ಎಂಟು ತಾಸಿನಲ್ಲಿ ಪ್ರಕರಣ ಭೇದಿಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮುಂಬೈನ ದಹಿಸರ್​ನ ಎಸ್​​ಬಿಐ ಬ್ಯಾಂಕ್​​​ನಲ್ಲಿ ದರೋಡೆ … Continued