ಭಾರತದಲ್ಲಿ 1.49 ಲಕ್ಷ ಹೊಸ ಕೋವಿಡ್ -19 ಪ್ರಕರಣಗಳು ದಾಖಲು, ಸಕಾರಾತ್ಮಕ ದರ 9.27%

ನವದೆಹಲಿ: ಭಾರತವು ಶುಕ್ರವಾರ 24 ಗಂಟೆಗಳಲ್ಲಿ 1,49,394 ಹೊಸ ಕೋವಿಡ್ -19 ಪ್ರಕರಣಗಳನ್ನು ವರದಿ ಮಾಡಿದೆ, ಇದು ಹಿಂದಿನ ದಿನ ದಾಖಲಾಗಿದ್ದಕ್ಕಿಂತ 13 ಶೇಕಡಾ ಕಡಿಮೆಯಾಗಿದೆ. ದೇಶದಲ್ಲಿ ದೈನಂದಿನ ಧನಾತ್ಮಕತೆಯ ದರವು ಶೇಕಡಾ 9.27 ರಷ್ಟಿದ್ದರೆ, ಸಾಪ್ತಾಹಿಕ ಧನಾತ್ಮಕತೆಯ ದರವು ಪ್ರಸ್ತುತ ಶೇಕಡಾ 12.03 ರಷ್ಟಿದೆ. ಇದೇ 24 ಗಂಟೆಗಳಲ್ಲಿ, ಭಾರತವು 1,072 ಕೋವಿಡ್ ಸಾವುಗಳನ್ನು … Continued

ಭಾರತದ ಕ್ರೀಡಾಲೋಕಕ್ಕೆ ಬಂತು ಮತ್ತೊಂದು ಲೀಗ್‌: ಪ್ರೈಮ್ ವಾಲಿಬಾಲ್ ಲೀಗ್‌ನ ಮೊದಲ ಸೀಸನ್ ಫೆಬ್ರವರಿ 5ರಿಂದ ಆರಂಭ

ಹೈದರಾಬಾದ್: ಹೈದರಾಬಾದ್‌ನ ಗಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿರುವ ಪ್ರೈಮ್ ವಾಲಿಬಾಲ್ ಲೀಗ್‌ನ ಮೊದಲ ಸೀಸನ್‌ನಲ್ಲಿ ಹಲವಾರು ಪ್ರತಿಭಾವಂತ ಆಟಗಾರರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಸಜ್ಜಾಗಿದ್ದಾರೆ. ಸೀಸನ್ 1ರಲ್ಲಿ ಭಾಗವಹಿಸುವ ಏಳು ಫ್ರಾಂಚೈಸಿಗಳು ಅಹಮದಾಬಾದ್ ಡಿಫೆಂಡರ್ಸ್, ಬೆಂಗಳೂರು ಟಾರ್ಪಿಡೋಸ್, ಕ್ಯಾಲಿಕಟ್ ಹೀರೋಸ್, ಚೆನ್ನೈ ಬ್ಲಿಟ್ಜ್, ಹೈದರಾಬಾದ್ ಬ್ಲಾಕ್ ಹಾಕ್ಸ್, ಕೊಚ್ಚಿ ಬ್ಲೂ ಸ್ಪೈಕರ್ಸ್ ಮತ್ತು ಕೋಲ್ಕತ್ತಾ ಥಂಡರ್ಬೋಲ್ಟ್ಸ್ … Continued

ಆಘಾತಕಾರಿ ಘಟನೆ…ತನ್ನ ಚೂಪಾದ ಮೂತಿಯಿಂದ ಮೀನುಗಾರನನ್ನು ಚುಚ್ಚಿ ಕೊಂದ ಬ್ಲ್ಯಾಕ್​ ಮಾರ್ಲಿನ್​ ಮೀನು..!

ವಿಶಾಖಪಟ್ಟಣಂ: ವಿಶಾಖಪಟ್ಟಣಂ ಕರಾವಳಿಯ ಬಂಗಾಳಕೊಲ್ಲಿ ಸಮುದ್ರದಲ್ಲಿ ನಡೆದ ದಾರುಣ ಘಟನೆಯೊಂದರಲ್ಲಿ, ಈಟಿಯಂತಹ ಮೂತಿ ಹೊಂದಿರುವ ಮಾರ್ಲಿನ್ ಎಂಬ ದೈತ್ಯ ಮೀನು ಮೀನುಗಾರನೊಬ್ಬನನ್ನು ಕೊಂದಿದೆ. ದುರಂತ ಸಂಭವಿಸಿದಾಗ ವಿಶಾಖಪಟ್ಟಣಂ ಜಿಲ್ಲೆಯ 40 ವರ್ಷದ ಮೊಳ್ಳಿ ಜೋಗಣ್ಣ ಎಂಬವರು ಇತರ ನಾಲ್ವರು ಮೀನುಗಾರರೊಂದಿಗೆವಿಶಾಖಪಟ್ಟಣಂನ ದಕ್ಷಿಣದ ಪರವಾಡ ಪೊಲೀಸ್ ಠಾಣಾ ವ್ಯಾಪ್ತಿಯ ತೀರದಿಂದ 60 ನಾಟಿಕಲ್ ಮೈಲಿ ದೂರದ ಆಳ … Continued

ಕೇಂದ್ರ ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ :ರಾಜ್ಯಗಳಿಗೆ ಶಾಲೆ ಆರಂಭಿಸುವ ಹೊಣೆ..! ಪೋಷಕರ ಒಪ್ಪಿಗೆ ಪಡೆದು ನಿರ್ಧರಿಸಿ ಎಂದ ಕೇಂದ್ರ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಶಾಲೆಗಳ ಆರಂಭದ ಕುರಿತು ಗುರುವಾರ ಹೊಸದಾಗಿ ಮಾರ್ಗಸೂಚಿ ಪ್ರಕಟಿಸಿದೆ. ಶಾಲೆ ಆರಂಭಿಸುವ ನಿರ್ಧಾರವನ್ನು ಅದು ಆಯಾ ರಾಜ್ಯ ಸರ್ಕಾರಗಳಿಗೆ ಬಿಟ್ಟಿದೆ. ಶಾಲೆಗಳಲ್ಲಿ ಭೌತಿಕ ತರಗತಿ ಆರಂಭಿಸುವ ಕುರಿತು ಆಯಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳು ತೀರ್ಮಾನ ತೆಗೆದುಕೊಳ್ಳಬಹುದು. ಆಫ್‌ಲೈನ್‌ ತರಗತಿ ಕುರಿತು ಮಕ್ಕಳ … Continued

ಮದುವೆಯಾಗಿ ಚಿನ್ನಾಭರಣದೊಂದಿಗೆ ಪರಾರಿಯಾಗುವುದೇ ಈ ಯುವತಿಯ ಕಾಯಕ : 8 ಪುರುಷರಿಗೆ ಈವರೆಗೆ ಮೋಸ..!

ಭೋಪಾಲ್ : ಮದುವೆಯಾಗುವುದನ್ನೇ ಕಾಯಕವಾಗಿಸಿಕೊಂಡು ಎಂಟಕ್ಕೂ ಹೆಚ್ಚು ಪುರುಷರಿಗೆ ವಂಚಿಸಿ ಮದುವೆಯಾಗಿ ಚಿನ್ನಾಭರಣ ಮತ್ತು ನಗದು ಹಣದೊಂದಿಗೆ ಓಡಿಹೋಗಿದ್ದ 28ರ ಹರೆಯದ ಯುವತಿಯೊಬ್ಬಳು ಈಗ ಜೈಲು ಪಾಲಾಗಿದ್ದಾಳೆ…! ಊರ್ಮಿಳಾ ಅಹಿರ್ವಾರ್ ಅಲಿಯಾಸ್ ರೇಣು ರಜಪೂತ ಎಂಬವಳೇ ಮದುವೆಯಾಗಿ ಈ ರೀತಿ ಕನಿಷ್ಠ ಎಂಟು ಮಂದಿಯನ್ನು ವಂಚಿಸಿದ್ದಾಳೆ ಎಂದು ಶಂಕಿಸಲಾಗಿದೆ. ಬಂಧಿತ ಇತರ ಮೂವರು ಆರೋಪಿಗಳನ್ನು ಅರ್ಚನಾ … Continued

ಉತ್ತರ ಪ್ರದೇಶ ಚುನಾವಣೆ: ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಕಾರಿನ ಮೇಲೆ ಗುಂಡಿನ ದಾಳಿ..!

ಹಾಪುರ(ಉತ್ತರ ಪ್ರದೇಶ): ದೆಹಲಿ-ಮೀರತ್ ಎಕ್ಸ್‌ಪ್ರೆಸ್‌ವೇದಲ್ಲಿ ಛಜರ್ಸಿ ಟೋಲ್ ಪ್ಲಾಜಾ ಬಳಿ ತನ್ನ ವಾಹನದ ಮೇಲೆ ಕನಿಷ್ಠ 3-4 ಸುತ್ತು ಗುಂಡುಗಳನ್ನು ಹಾರಿಸಲಾಗಿದೆ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಗುರುವಾರ ಆರೋಪಿಸಿದ್ದಾರೆ. ಎಐಎಂಐಎಂ ಮುಖ್ಯಸ್ಥರು ಉತ್ತರಪ್ರದೇಶದ ಮೀರತ್‌ನ ಕಿಥೌರ್‌ನಲ್ಲಿ ಚುನಾವಣಾ ಸಂಬಂಧಿತ ಕಾರ್ಯಕ್ರಮದ ನಂತರ ದೆಹಲಿಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಹೇಳಿದ್ದಾರೆ. ಮೀರತ್‌ನ … Continued

ಪ್ರಧಾನಿ ಮೋದಿ ಸೇನಾ ಸಮವಸ್ತ್ರ ಧರಿಸಿದ ಪ್ರಕರಣ: ಪ್ರಧಾನಿ ಕಚೇರಿಗೆ ನೋಟಿಸ್‌ ಜಾರಿ ಮಾಡಿದ ಉತ್ತರ ಪ್ರದೇಶ ಕೋರ್ಟ್‌

ನವದೆಹಲಿ: ಕಳೆದ ವರ್ಷ ಕಾಶ್ಮೀರಕ್ಕೆ ಭೇಟಿ ನೀಡಿದ್ದ ವೇಳೆ ಪ್ರಧಾನಿ ನರೇಂದ್ರ ಮೋದಿ ಸೇನಾ ಸಮವಸ್ತ್ರವನ್ನು ಧರಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯ ಸಂಬಂಧಿಸಿದಂತೆ ಪ್ರಧಾನಿ ಕಚೇರಿಗೆ ಪ್ರಯಾಗ್‌ರಾಜ್‌ನ ಜಿಲ್ಲಾ ನ್ಯಾಯಾಲಯವು ನೋಟಿಸ್‌ ಜಾರಿಗೊಳಿಸಿದೆ. ಈ ಕುರಿತು ದೈನಿಕ್‌ ಭಾಸ್ಕರ್‌ ಪತ್ರಿಕೆ ವರದಿ ಮಾಡಿದ್ದು ವಕೀಲ ರಾಕೇಶ್‌ನಾಥ್‌ ಪಾಂಡೆ ಎನ್ನುವವರು ಸಿಆರ್‌ಪಿಸಿ ಸೆಕ್ಷನ್‌ 156(3)ರ ಅಡಿ ದಾಖಲಿಸಿರುವ … Continued

ಗೇಟ್‌ 2022 ಪರೀಕ್ಷೆ ಮುಂದೂಡುವ ಮನವಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

ನವದೆಹಲಿ: ಸ್ನಾತಕೋತ್ತರ ಎಂಜಿನಿಯರಿಂಗ್ ಕೋರ್ಸ್‌ಗಳಿಗೆ ಪ್ರವೇಶ ಕಲ್ಪಿಸಲು ನಡೆಸಲಾಗುವ ಗೇಟ್‌ -2022 ಪರೀಕ್ಷೆ ಮುಂದೂಡಿಕೆಗೆ ಕೋರಿ ಸಲ್ಲಿಸಲಾಗಿದ್ದ ಮನವಿಗಳನ್ನು ಸುಪ್ರೀಂ ಕೋರ್ಟ್‌ ಗುರುವಾರ ವಜಾಗೊಳಿಸಿದೆ. ಇದು ಸರ್ಕಾರದ ನೀತಿನಿರೂಪಣೆಯ ಭಾಗವಾಗಿದ್ದು ಸರ್ಕಾರದ ಪ್ರಾಧಿಕಾರಿಗಳು ಈ ಬಗ್ಗೆ ನಿರ್ಧಾರ ಮಾಡಬೇಕು. ಇದರಲ್ಲಿ ನ್ಯಾಯಾಲಯದ ಮಧ್ಯಪ್ರವೇಶ ಮಾಡಿದರೆ ಗೊಂದಲಕ್ಕೆ ಕಾರಣವಾಗಲಿದೆ ಎಂದು ನ್ಯಾ. ಡಿ ವೈ ಚಂದ್ರಚೂಡ್‌, ನ್ಯಾ. … Continued

ಏನಿದು ಅ(ವ್ಯ)ವಸ್ಥೆ…ಕಾರಿನ ಹೆಡ್‌ಲೈಟ್‌ಗಳ ಬೆಳಕಿನಲ್ಲಿ 12ನೇ ತರಗತಿಯ ಪರೀಕ್ಷೆ ಬರೆದ 400 ಕ್ಕೂ ಹೆಚ್ಚು ವಿದ್ಯಾರ್ಥಿಗಳು..!

ಪಾಟ್ನಾ: ಕಾರಿನ ಹೆಡ್‌ಲೈಟ್‌ಗಳ ಬೆಳಕಿನಲ್ಲಿ ಪರೀಕ್ಷೆ ಬರೆದಿರುವ ವಿಚಿತ್ರ ಘಟನೆ ನಡೆದಿದೆ. ಮಂಗಳವಾರ ಬಿಹಾರದ ಪೂರ್ವ ಚಂಪಾರಣ್ ಜಿಲ್ಲೆಯ ಪರೀಕ್ಷಾ ಕೇಂದ್ರದಲ್ಲಿ 400 ಕ್ಕೂ ಹೆಚ್ಚು ವಿದ್ಯಾರ್ಥಿಗಳು ತಮ್ಮ 12 ನೇ ತರಗತಿ (ಮಧ್ಯಂತರ) ಪರೀಕ್ಷೆಯನ್ನು ಕಾರ್ ಹೆಡ್‌ಲೈಟ್‌ನಲ್ಲಿ ಬರೆದಿದ್ದಾರೆ. ಈ ಸಂಬಂಧ ಪೂರ್ವ ಚಂಪಾರಣ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಶಿರ್ಷತ್ ಕಪಿಲ್ ಅಶೋಕ್ ಅವರು ಮಹಾರಾಜ್ … Continued

ಗಾಲ್ವಾನ್‌ನಲ್ಲಿ ಭಾರತ-ಚೀನಾ ಘರ್ಷಣೆ: ಚೀನಾದ ಹೆಚ್ಚಿನ ಸೈನಿಕರು ಸಾವು ಎಂದ ಆಸ್ಟ್ರೇಲಿಯಾ ಪತ್ರಿಕೆ ತನಿಖಾ ವರದಿ

ನವದೆಹಲಿ: ಆಸ್ಟ್ರೇಲಿಯಾದ ಪ್ರಮುಖ ಪ್ರತ್ರಿಕೆ ದಿ ಕ್ಲಾಕ್ಸನ್ 2020ರಲ್ಲಿ ಭಾರತ ಹಾಗೂ ಚೀನಾ ನಡುವೆ ಗಲ್ವಾನ್ ಕಣಿವೆಯಲ್ಲಿ ನಡೆದ ಘರ್ಷಣೆಯ ಕುರಿತಾಗಿ “ಗಲ್ವಾನ್ ಡಿಕೋಡೆಡ್:” ತನಿಖಾ ವರದಿ ಪ್ರಕಟಿಸಿದೆ. ತನಿಖಾ ವರದಿ ಪ್ರಕಾರ, ಈ ಘರ್ಷಣೆಯಲ್ಲಿ ಭಾರತಕ್ಕಿಂತ ಹೆಚ್ಚಾಗಿ ಚೀನಾ ಸೈನಿಕರು ಪ್ರಾಣ ಕಳೆದುಕೊಂಡಿದ್ದಾರೆ. ಪ್ರಮುಖವಾಗಿ ಹೊಡೆದಾಟಕ್ಕಿಂತ ಹೆಚ್ಚಾಗಿ ನದಿಯನ್ನು ದಾಟುವಾಗ ಕನಿಷ್ಠ 38 ಸೈನಿಕರು … Continued