
ನವದೆಹಲಿ: ಜುಲೈ 25 ಮತ್ತು 26 ರಂದು ನಡೆಯಲಿರುವ ಮಾಲ್ಡೀವ್ಸ್ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ದೃಢಪಡಿಸಿದೆ. ಇದು ಪ್ರಧಾನಿಯವರ ದ್ವೀಪಕ್ಕೆ ಮೂರನೇ ಭೇಟಿಯಾಗಿದೆ. ಆದರೆ ಮೊಹಮ್ಮದ್ ಮುಯಿಝು ಮಾಲ್ಡೀವ್ಸ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಇದು ಮೊದಲ ಭೇಟಿಯಾಗಿದೆ.
ಜುಲೈ 23 ಮತ್ತು 24 ಇಂಗ್ಲೆಂಡ್ ಪ್ರವಾಸ ಬಳಿಕ ನರೇಂದ್ರ ಮೋದಿ ಅವರು, ಲಂಡನ್ನಿಂದ ಮಾಲ್ಡೀವ್ಸ್ಗೆ ತೆರಳಲಿದ್ದಾರೆ. “ಜುಲೈ 26 ರಂದು ಮಾಲ್ಡೀವ್ಸ್ನ 60 ನೇ ಸ್ವಾತಂತ್ರ್ಯ ವಾರ್ಷಿಕೋತ್ಸವದ ಆಚರಣೆಯಲ್ಲಿ ಮೋದಿ ‘ಗೌರವ ಅತಿಥಿ’ಯಾಗಲಿದ್ದಾರೆ. ಪರಸ್ಪರ ಸಹಕಾರ, ಭಾರತ-ಮಾಲ್ಡೀವ್ಸ್ ಜಂಟಿ ದೃಷ್ಟಿಕೋನ ಮತ್ತು ಇತರವುಗಳನ್ನು ಒಳಗೊಂಡಂತೆ ಇಬ್ಬರು ನಾಯಕರು ಹಲವಾರು ವಿಷಯಗಳ ಬಗ್ಗೆ ಚರ್ಚಿಸಲಿದ್ದಾರೆ” ಎಂದು ವಿದೇಶಾಂಗ ಭಾರತದ ಸಚಿವಾಲಯ (MEA) ತಿಳಿಸಿದೆ.
‘ಇಂಡಿಯಾ ಔಟ್’ ಅಭಿಯಾನದ ನಂತರ ಚುನಾವಣೆಯಲ್ಲಿ ಗೆದ್ದು ಮುಯಿಝು ಸರ್ಕಾರ ಅಧಿಕಾರ ವಹಿಸಿಕೊಂಡ ನಂತರ ಹದಗೆಟ್ಟಿದ್ದ ಭಾರತ ಮತ್ತು ಮಾಲ್ಡೀವ್ಸ್ ತಮ್ಮ ರಾಜತಾಂತ್ರಿಕ ಸಂಬಂಧಗಳನ್ನು ಮತ್ತೆ ಸ್ಥಾಪಿಸಿವೆ ಎಂದು ಇದು ಸೂಚಿಸುತ್ತದೆ.

ಭಾರತವು ತನ್ನ ಭದ್ರತಾ ಸಿಬ್ಬಂದಿಯನ್ನು ದ್ವೀಪದಿಂದ ಹಿಂತೆಗೆದುಕೊಳ್ಳುವಂತೆ ಮಾಲ್ಡೀವ್ಸ್ ಒತ್ತಾಯಿಸಿದ ನಂತರ ಸಂಬಂಧಗಳು ಮತ್ತಷ್ಟು ಹದಗೆಟ್ಟವು, ಇದನ್ನು ಭಾರತವು ಮೇ ತಿಂಗಳೊಳಗೆ ಪೂರ್ಣಗೊಳಿಸಿತು. ಚೀನಾ-ಮೊದಲು ನೀತಿಯನ್ನು ಅಳವಡಿಸಿಕೊಳ್ಳಲು ಮುಯಿಝು ನಿರ್ಧರಿಸಿ ಚೀನಾವನ್ನು ಅನ್ನು ತಮ್ಮ ಮೊದಲ ವಿದೇಶಿ ತಾಣವಾಗಿ ಆರಿಸಿಕೊಂಡರು. ಅವರ ಭೇಟಿಯ ನಂತರ, ಅವರು “ಭಾರತವು ಒಂದು ಬೆದರಿಸುವ ರಾಷ್ಟ್ರ” ಎಂದು ಹೇಳಿದ್ದರು.
ಆದರೆ, ನಂತರ ಆರ್ಥಿಕವಾಗಿ ಹೊಡೆತ ಬಿದ್ದ ನಂತರ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ತನ್ನ ನೀತಿಯನ್ನು ಮರುಪರಿಶೀಲಿಸಬೇಕಾಯಿತು, ಭಾರತದೊಂದಿಗಿನ ಸಂಬಂಧ ಹದಗೆಟ್ಟಂತೆ, ಪ್ರವಾಸೋದ್ಯಮವೇ ಪ್ರಮುಖ ಆದಾಯವಾದ ಮಾಲ್ಡೀವ್ಸ್ಗೆ ಭಾರತೀಯ ಪ್ರವಾಸಿಗರು ಭೇಟಿ ನೀಡುವುದನ್ನು ಕಡಿಮೆ ಮಾಡಿದರು. ಇದು ಮಾಲ್ಡೀವ್ಸ್ ನಲ್ಲಿ ಆರ್ಥಿಕ ಕುಸಿತಕ್ಕೆ ಕಾರಣವಾಯಿತು.
ಮಾಲ್ಡೀವ್ಸ್ನ ಸಾಲದ ಹೊರೆಯಿಂದಾಗಿ ಚೀನಾ ನೆರವು ನೀಡುವಲ್ಲಿ ಹೆಚ್ಚಿನ ಉತ್ಸಾಹವನ್ನು ತೋರಿಸದ ಕಾರಣ ಚೀನಾ ಮತ್ತು ಗಲ್ಫ್ ರಾಷ್ಟ್ರಗಳೊಂದಿಗೆ ನೆರವು ಪಡೆಯಲು ಅವರು ಮಾಡಿದ ಪ್ರಯತ್ನ ವಿಫಲವಾಯಿತು. ಸೌದಿ ಅರೇಬಿಯಾ ಮತ್ತು ಇತರ ಮಧ್ಯಪ್ರಾಚ್ಯ ರಾಷ್ಟ್ರಗಳಿಂದ ಸ್ಪಂದನೆಗಳು ಸಹ ಉತ್ತಮವಾಗಿರಲಿಲ್ಲ.
ಇದು ಮುಯಿಝು ಅವರನ್ನು ಭಾರತದ ಕಡೆಗೆ ತಿರುಗುವಂತೆ ಮಾಡಿತು. ಇದು ದೇಶದ ಅತಿದೊಡ್ಡ ವ್ಯಾಪಾರ ಪಾಲುದಾರನಾಗಿ ಭಾರತ ಮುಂದುವರೆದಿದೆ. ಭಾರತದ ಬೇಲ್ಔಟ್ ಅನ್ನು ಬಳಸಿಕೊಂಡು ಮುಯಿಝು ಸೆಪ್ಟೆಂಬರ್ 2024 ರಲ್ಲಿ ಡೀಫಾಲ್ಟ್ ಅನ್ನು ತಪ್ಪಿಸಲು ಸಾಧ್ಯವಾಯಿತು. ಭಾರತ ಮಾಲ್ಡೀವ್ಸ್ಗೆ US$757 ಮಿಲಿಯನ್ಗೆ ಸಮಾನವಾದ ಸಹಾಯವನ್ನು ನೀಡಿತು. ಉತ್ತರ ಮಾಲ್ಡೀವ್ಸ್ನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ದಕ್ಷಿಣ ಮಾಲ್ಡೀವ್ಸ್ನಲ್ಲಿ ಸೇತುವೆ ಮತ್ತು ರಸ್ತೆ ಯೋಜನೆ, ರಾಜಧಾನಿ ಮಾಲೆಯಲ್ಲಿ ದೊಡ್ಡ ವಸತಿ ಅಭಿವೃದ್ಧಿ ಯೋಜನೆ ಮತ್ತು ಮಾಲೆ ದ್ವೀಪವನ್ನು ಅದರ ಪಶ್ಚಿಮ ಉಪನಗರ ದ್ವೀಪಗಳೊಂದಿಗೆ ಸಂಪರ್ಕಿಸುವ ಹೊಸ ಸೇತುವೆ ಸೇರಿದಂತೆ ದೊಡ್ಡ ಪ್ರಮಾಣದ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಗಳನ್ನು ಮುಂದುವರಿಸಲು ನಿರ್ಧರಿಸಲಾಯಿತು.
ನಂತರ, ಮುಯಿಝು ಭಾರತಕ್ಕೆ ಭೇಟಿ ನೀಡಿ ಸಂಬಂಧಗಳಲ್ಲಿನ ಬಿಕ್ಕಟ್ಟನ್ನು ಸರಿಪಡಿಸಿದರು. ಈ ಪ್ರವಾಸದ ಸಮಯದಲ್ಲಿ ಮುಯಿಝು ಮೋದಿಯನ್ನು ಮಾಲ್ಡೀವ್ಸ್ಗೆ ಆಹ್ವಾನಿಸಿದರು. ನಂತರ, ವಿದೇಶಾಂಗ ಸಚಿವ ಅಬ್ದುಲ್ಲಾ ಹಲೀಲ್ ಭಾರತಕ್ಕೆ ಭೇಟಿ ನೀಡಿ ಪ್ರಧಾನಿಯವರನ್ನು ದ್ವೀಪಕ್ಕೆ ಭೇಟಿ ನೀಡುವಂತೆ ಆಹ್ವಾನಿಸಿದರು.


ನಿಮ್ಮ ಕಾಮೆಂಟ್ ಬರೆಯಿರಿ