ಅಯೋಧ್ಯೆಯ ಈ ವಿಶಿಷ್ಟ ಬ್ಯಾಂಕಿನಲ್ಲಿ ಹಣವೇ ಇಲ್ಲ..! ಈ ಬ್ಯಾಂಕ್‌ ಖಾತೆಯಲ್ಲಿ ʼರಾಮನಾಮʼ ಜಪವೇ ಠೇವಣಿ..!! ಖಾತೆ ತೆರೆಯಬೇಕಾದ್ರೆ ಇರುವ ಷರತ್ತುಗಳೇನೆಂದರೆ…

ಅಯೋಧ್ಯೆ : ಭಗವಾನ್ ಶ್ರೀರಾಮನ ಭೂಮಿಯಾದ ಅಯೋಧ್ಯೆಯಲ್ಲಿ ಒಂದು ಅನನ್ಯ ಬ್ಯಾಂಕ್ ಇದೆ, ಅಲ್ಲಿ ಹಣ ಮುಖ್ಯವಲ್ಲ. ಆ ಬ್ಯಾಂಕಿನ 35,000 ಖಾತೆದಾರರು ಪಡೆಯುವ ಏಕೈಕ ಪ್ರತಿಫಲವೆಂದರೆ ಮನಸ್ಸಿನ ಶಾಂತಿ, ನಂಬಿಕೆ ಮತ್ತು ಅಧ್ಯಾತ್ಮಿಕತೆ…! ಅಯೋಧ್ಯೆಯಲ್ಲಿ ಹೊಸದಾಗಿ ನಿರ್ಮಿಸಲಾದ ರಾಮ ಮಂದಿರಕ್ಕೆ ಭೇಟಿ ನೀಡುವ ಭಕ್ತರು ಮತ್ತು ಪ್ರವಾಸಿಗರ ಗಮನವನ್ನು ಈಗ ಈ ಬ್ಯಾಂಕ್‌ ಸೆಳೆಯುತ್ತಿದೆ. … Continued

ಅಯೋಧ್ಯೆ ಭಗವಾನ್‌ ರಾಮಲಲ್ಲಾ ವಿಗ್ರಹದ ದಿವ್ಯ ಕಣ್ಣುಗಳನ್ನು ಕೆತ್ತಿದ ಬೆಳ್ಳಿ ಸುತ್ತಿಗೆ, ಚಿನ್ನದ ಉಳಿ ಫೋಟೋ ಹಂಚಿಕೊಂಡ ಶಿಲ್ಪಿ ಅರುಣ ಯೋಗಿರಾಜ

ಬೆಂಗಳೂರು : ಅಯೋಧ್ಯೆಯಲ್ಲಿ ಹೊಸದಾಗಿ ನಿರ್ಮಿಸಲಾದ ರಾಮಮಂದಿರದಲ್ಲಿ ಇತ್ತೀಚೆಗೆ ಸ್ಥಾಪಿಸಲಾದ ರಾಮಲಲ್ಲಾ ವಿಗ್ರಹದ ಮೈಸೂರು ಮೂಲದ ಶಿಲ್ಪಿ ಅರುಣ ಯೋಗಿರಾಜ ಅವರು ದೇವರ “ದಿವ್ಯ ಕಣ್ಣುಗಳನ್ನು” ಕೆತ್ತಲು ಬಳಸಿದ ಉಪಕರಣಗಳ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. “ನಾನು ರಾಮ್ ಲಲ್ಲಾನ ದಿವ್ಯ ಕಣ್ಣುಗಳನ್ನು (ನೆತ್ರೋನ್ಮಿಲನ) ಕೆತ್ತಿದ ಚಿನ್ನದ ಉಳಿಯೊಂದಿಗೆ ಈ ಬೆಳ್ಳಿಯ ಸುತ್ತಿಗೆಯನ್ನು ಹಂಚಿಕೊಳ್ಳಲು ಯೋಚಿಸಿದೆ” ಎಂದು X … Continued

ಅಯೋಧ್ಯೆ ಬಾಲರಾಮನ ಕಣ್ತುಂಬಿಕೊಳ್ಳಲು ಭಕ್ತ ಸಾಗರ: 11 ದಿನದಲ್ಲಿ ರಾಮಮಂದಿರಕ್ಕೆ ಭೇಟಿ ನೀಡಿದವರು ಎಷ್ಟು ಗೊತ್ತಾ..?

ಅಯೋಧ್ಯಾ : ಜನವರಿ 22 ರಂದು ರಾಮಮಂದಿರದ ಉದ್ಘಾಟನೆ ನಂತರ, ಕಳೆದ 11 ದಿನಗಳಲ್ಲಿ ಸುಮಾರು 25 ಲಕ್ಷ ಭಕ್ತರು ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ದೇವಸ್ಥಾನದ ಟ್ರಸ್ಟ್‌ನ ಕಚೇರಿ ಪ್ರಭಾರಿ ಪ್ರಕಾಶ ಗುಪ್ತಾ ಪ್ರಕಾರ, ಕಳೆದ 11 ದಿನಗಳಲ್ಲಿ ಸುಮಾರು 8 ಕೋಟಿ ರೂಪಾಯಿಗಳನ್ನು ಕಾಣಿಕೆ ಪೆಟ್ಟಿಗೆಗಳಲ್ಲಿ ಸಂಗ್ರಹವಾಗಿದೆ. ಚೆಕ್ ಮತ್ತು ಆನ್‌ಲೈನ್ ಮೂಲಕ ಪಡೆದ … Continued

ಲಕ್ನೋದಿಂದ 6 ದಿನ ಕಾಲ್ನಡಿಗೆಯಲ್ಲಿ ತೆರಳಿ ಅಯೋಧ್ಯೆಯ ಭಗವಾನ್‌ ʼರಾಮಲಲ್ಲಾʼ ದರ್ಶನ ಪಡೆದ 350 ಮಂದಿ ಮುಸ್ಲಿಮರು….!

ಅಯೋಧ್ಯೆ: ರಾಮಲಲ್ಲಾ ದರ್ಶನ ಪಡೆದು ಪೂಜೆ ಸಲ್ಲಿಸುವ ಸಲುವಾಗಿ ಆರು ದಿನಗಳ ಪಾದಯಾತ್ರೆ ಪೂರ್ಣಗೊಳಿಸಿದ 350 ಮುಸ್ಲಿಂ ಭಕ್ತರು ಬುಧವಾರ ಅಯೋಧ್ಯೆಗೆ ತಲುಪಿದ್ದಾರೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS) ಬೆಂಬಲಿತ ಮುಸ್ಲಿಂ ಸಂಘಟನೆಯಾದ ಮುಸ್ಲಿಂ ರಾಷ್ಟ್ರೀಯ ಮಂಚ್ (MRM) ಅಡಿಯಲ್ಲಿ ಗುಂಪು ಜನವರಿ 25 ರಂದು ಲಕ್ನೋದಿಂದ ತಮ್ಮ ಪ್ರಯಾಣವನ್ನು ಪ್ರಾರಂಭಿಸಿತು ಎಂದು ಎಂಆರ್‌ಎಂ … Continued

ರಾಮಮಂದಿರ ಪ್ರಾಣ ಪ್ರತಿಷ್ಠೆ ಸಮಾರಂಭದಲ್ಲಿ ಭಾಗವಹಿಸಿದ್ದ ಮುಖ್ಯ ಇಮಾಮ್ ವಿರುದ್ಧ ಫತ್ವಾ, ಬೆದರಿಕೆ ಕರೆ

ನವದೆಹಲಿ: ಜನವರಿ 22 ರಂದು ಅಯೋಧ್ಯೆಯ ರಾಮ ಮಂದಿರದಲ್ಲಿ ರಾಮಲಲ್ಲಾನ ‘ಪ್ರಾಣ ಪ್ರತಿಷ್ಠಾ’ ಸಮಾರಂಭದಲ್ಲಿ ಭಾಗವಹಿಸಿದ ಆಲ್ ಇಂಡಿಯಾ ಇಮಾಮ್ ಆರ್ಗನೈಸೇಶನ್ ಮುಖ್ಯಸ್ಥ ಡಾ.ಇಮಾಮ್ ಉಮರ್ ಅಹ್ಮದ್ ಇಲ್ಯಾಸಿ ವಿರುದ್ಧ ಫತ್ವಾ ಹೊರಡಿಸಲಾಗಿದೆ ಎಂದು ವರದಿಯಾಗಿದೆ. ಫತ್ವಾವನ್ನು ಭಾನುವಾರ ಹೊರಡಿಸಲಾಗಿದೆ. ಆದರೆ ರಾಮ ಮಂದಿರದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ದಿನದಿಂದಲೂ ತನಗೆ ಬೆದರಿಕೆ ಕರೆಗಳು ಬರುತ್ತಿವೆ ಎಂದು … Continued

ರಾಮಮಂದಿರ ಪ್ರತಿಷ್ಠಾಪನೆ ಪ್ರಾದೇಶಿಕ ಶಾಂತಿಗೆ ದೊಡ್ಡ ಬೆದರಿಕೆ : ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ಕ್ಯಾತೆ

ವಿಶ್ವಸಂಸ್ಥೆ : ಅಯೋಧ್ಯೆಯಲ್ಲಿ ರಾಮ ಮಂದಿರದ ಪ್ರತಿಷ್ಠಾಪನೆಯು ‘ಪ್ರದೇಶದ ಶಾಂತಿ’ಗೆ ‘ದೊಡ್ಡ ಬೆದರಿಕೆಯಾಗಿದೆ’ ಎಂದು ವಿಶ್ವಸಂಸ್ಥೆಯ ಅಧಿಕಾರಿಯೊಬ್ಬರಿಗೆ ಪತ್ರ ಬರೆದು ಎಚ್ಚರಿಸುವ ಮೂಲಕ ಪಾಕಿಸ್ತಾನವು ರಾಮ ಮೀದರದ ಉದ್ಘಾಟನೆಗೆ ಕ್ಯಾತೆ ತೆಗೆದಿದೆ. ಅಯೋಧ್ಯೆಯಲ್ಲಿ ಧ್ವಂಸಗೊಂಡ ಬಾಬರಿ ಮಸೀದಿಯ ಸ್ಥಳದಲ್ಲಿ ರಾಮಮಂದಿರ ನಿರ್ಮಾಣ ಮತ್ತು ಪವಿತ್ರೀಕರಣವನ್ನು ಪಾಕಿಸ್ತಾನ ತೀವ್ರವಾಗಿ ಖಂಡಿಸುತ್ತದೆ ಎಂದು ಪಾಕಿಸ್ತಾನದ ವಿಶ್ವ ಸಂಸ್ಥೆಯ ಕಾಯಂ … Continued

ಉದ್ಘಾಟನೆಯಾದ 2ನೇ ದಿನವೇ ಅಯೋಧ್ಯೆ ರಾಮ ಮಂದಿರದೊಳಕ್ಕೆ ಮಂಗ(ಹುನುಮಂತ)ನ ಪ್ರವೇಶ….

ಅಯೋಧ್ಯೆ: ಭಗವಾನ್‌ ರಾಮ ಇರುವಲ್ಲಿ ಹನುಮಂತ ಇದ್ದೇ ಇರುತ್ತಾನೆ ಎನ್ನುವುದು ಬಲವಾದ ನಂಬಿಕೆ. ಈ ನಂಬಿಕೆಗೆ ಕಾಕತಾಳೀಯವಾದ ಘಟನೆ ಅಯೋಧ್ಯೆ ರಾಮ ಮಂದಿರದಲ್ಲಿ ನಡೆದಿದೆ. ಮಂದಿರ ಉದ್ಘಾಟನೆಯಾದ ಮಾರನೇ ದಿನ ಮಂಗವೊಂದು ಮಂದಿರದ ಗರ್ಭಗುಡಿ ಪ್ರವೇಶಿಸಿ, ರಾಮನನ್ನು ಕಣ್ತುಂಬಿಕೊಂಡ ಘಟನೆ ನಡೆದಿದೆ. ಈ ಬಗ್ಗೆ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸಾಮಾಜಿಕ ಜಾಲತಾಣ … Continued

ವೀಡಿಯೊ…| ಅಯೋಧ್ಯೆ ರಾಮ ಮಂದಿರ ಭಕ್ತರಿಗೆ ತೆರೆದ ಮೊದಲ ದಿನವೇ ಐದು ಲಕ್ಷ ಜನರ ಆಗಮನ, ಎರಡನೇ ದಿನವೂ ಜನಸಾಗರ

ಅಯೋಧ್ಯೆ : ಅಯೋಧ್ಯೆಯಲ್ಲಿನ ರಾಮ ಮಂದಿರವು ಸೋಮವಾರ ಉದ್ಘಾಟನೆಗೊಂಡ ನಂತರ ಭಾರಿ ಜನಸಮೂಹಕ್ಕೆ ಸಾಕ್ಷಿಯಾಯಿತು, ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ರಾಮ ಮಂದಿರದಲ್ಲಿ ಸೋಮವಾರ ರಾಮಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠೆ ಮಾಡಿದ್ದರು. ಒಂದು ದಿನದ ನಂತರ, ಮಂಗಳವಾರ ಭಾರೀ ಚಳಿಯ ನಡುವೆಯೂ ಸುಮಾರು 5 ಲಕ್ಷ ಭಕ್ತರು ದೇವಾಲಯಕ್ಕೆ ರಾಮನ ದರ್ಶನಕ್ಕಾಗಿ ಆಗಮಿಸಿದ್ದರು ಎಂದು … Continued

1949ರಲ್ಲಿ ಬಾಬರಿ ಮಸೀದಿಯೊಳಗೆ ʼಕಂಡುಬಂದʼ ಹಳೆಯ ರಾಮನ ಮೂರ್ತಿಯನ್ನು ನೂತನ ರಾಮ ಮಂದಿರದಲ್ಲಿ ಎಲ್ಲಿ ಪ್ರತಿಷ್ಠಾಪಿಸ್ತಾರೆ….?

ಅಯೋಧ್ಯೆ: ಅಯೋಧ್ಯೆಯಲ್ಲಿ ರಾಮಮಂದಿರದ ಉದ್ಘಾಟನಾ ಸಮಾರಂಭವು ಭಾರತದಲ್ಲಿ ಮಾತ್ರವಲ್ಲದೆ ಜಗತ್ತಿನಾದ್ಯಂತ ಕೋಟ್ಯಂತರ ಹಿಂದೂಗಳಿಂದ ವೀಕ್ಷಿಸಲ್ಪಟ್ಟಿತು. ಈಗ ಯೋಜಿಸಲಾಗುತ್ತಿರುವ ಮತ್ತೊಂದು ಪ್ರಮುಖ ಸಂಗತಿಯೆಂದರೆ ಹಳೆಯ ರಾಮಲಲ್ಲಾ ವಿಗ್ರಹವನ್ನು ಪ್ರತಿಷ್ಠಾಪಿಸುವುದು, ಇದು ಡಿಸೆಂಬರ್ 22, 1949 ರ ರಾತ್ರಿ ಬಾಬರಿ ಮಸೀದಿಯೊಳಗೆ ಕಂಡುಬಂದ ನಂತರದಿಂದ ಈವರೆಗೂ ತಾತ್ಕಾಲಿಕ ಟೆಂಟ್‌ ತರಹದ ರಚನೆಯಲ್ಲಿ ಪೂಜಿಸಲ್ಪಡುತ್ತಿದೆ. ಬಾಬರಿ ಮಸೀದಿಯಲ್ಲಿ ರಾಮನ ವಿಗ್ರಹವು … Continued

ಅಯೋಧ್ಯೆ ರಾಮಲಲ್ಲಾ ವಿಗ್ರಹಕ್ಕೆ 11 ಕೋಟಿ ರೂಪಾಯಿ ಮೌಲ್ಯದ ಕಿರೀಟ ದಾನ ಮಾಡಿದ ಗುಜರಾತ್ ವಜ್ರದ ವ್ಯಾಪಾರಿ

ಅಯೋಧ್ಯೆ : ಗುಜರಾತಿನ ಸೂರತ್‌ನ ವಜ್ರದ ವ್ಯಾಪಾರಿಯೊಬ್ಬರು ಅಯೋಧ್ಯೆಯಲ್ಲಿ ಹೊಸದಾಗಿ ನಿರ್ಮಿಸಲಾದ ರಾಮಮಂದಿರದಲ್ಲಿ ಸ್ಥಾಪಿಸಲಾದ ರಾಮಲಲ್ಲಾನ ವಿಗ್ರಹಕ್ಕೆ 11 ಕೋಟಿ ಮೌಲ್ಯದ ಕಿರೀಟವನ್ನು ದಾನ ಮಾಡಿದ್ದಾರೆ. ಇದನ್ನು ಹೊಸದಾಗಿ ನಿರ್ಮಿಸಲಾಗಿರುವ ರಾಮಮಂದಿರದ ಭಗವಾನ್‌ ರಾಮಲಲ್ಲಾನಿಗಾಗಿ ವಿಶೇಷವಾಗಿ ತಯಾರಿಸಲಾಗಿದೆ. ಸೂರತ್‌ನ ಗ್ರೀನ್ ಲ್ಯಾಬ್ ಡೈಮಂಡ್ ಕಂಪನಿಯ ಮಾಲೀಕ ಮುಖೇಶ ಪಟೇಲ್ ಅವರು 6 ಕಿಲೋಗ್ರಾಂ ತೂಕದ ಕಿರೀಟವನ್ನು … Continued