ಎನ್‌ ಡಿಎ ಶಾಸಕಾಂಗ ಪಕ್ಷದ ನಾಯಕರಾಗಿ ನಿತೀಶಕುಮಾರ ಆಯ್ಕೆ

ನವದೆಹಲಿ: ಬುಧವಾರ ಜೆಡಿಯು ಮುಖ್ಯಸ್ಥ ನಿತೀಶಕುಮಾರ ಅವರನ್ನು ಎನ್‌ಡಿಎ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು ಮತ್ತು ಅವರು ದಾಖಲೆಯ ಹತ್ತನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಗುರುವಾರ (ನವೆಂಬರ್‌ 20)ಬೆಳಿಗ್ಗೆ 11:30 ಕ್ಕೆ ಪಾಟ್ನಾದ ಗಾಂಧಿ ಮೈದಾನದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ. ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್‌ಡಿಎ) ಎಲ್ಲಾ … Continued

ಬಿಹಾರ ಫಲಿತಾಂಶ ; ಅಭೂತಪೂರ್ವ ಮೂರನೇ ನಾಲ್ಕರಷ್ಟು ಬಹುಮತದ ಗೆಲುವಿನತ್ತ ಎನ್‌ ಡಿಎ ; ಇಂಡಿಯಾ ಬ್ಲಾಕ್‌ ಧೂಳೀಪಟ ; ಎಕ್ಸಿಟ್‌ ಪೋಲ್‌ಗಳೂ ತಲೆಕೆಳಗು

ಪಾಟ್ನಾ /ನವದೆಹಲಿ: ಬಿಹಾರ ವಿಧಾನಸಭಾ ಚುನಾವಣೆಯ ಮತ ಎಣಿಕೆ ಅಂತಿಮ ಹಂತಕ್ಕೆ ತಲುಪುತ್ತಿದ್ದು, ಆಡಳಿತಾರೂಢ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ(NDA)ವು ತಾನು ನಿಗದಿಪಡಿಸಿದ್ದ ‘160 ಪಾರ್’ (160ಕ್ಕೂ ಹೆಚ್ಚು) ಗುರಿಯನ್ನು ಸಲೀಸಾಗಿ ದಾಟಿ, 243 ಸದಸ್ಯ ಬಲದ ವಿಧಾನಸಭೆಯಲ್ಲಿ ಅಭೂತಪೂರ್ವ ಮೂರನೇ ನಾಲ್ಕರಷ್ಟು ಬಹುಮತದ ಗೆಲುವಿನತ್ತ ಸಾಗುತ್ತಿದೆ.. ತೇಜಸ್ವಿ ಯಾದವ್ ನೇತೃತ್ವದ ಮಹಾಘಟಬಂಧನಕ್ಕೆ (ಮಹಾ ಮೈತ್ರಿಕೂಟ) ತೀವ್ರ … Continued

ಬಿಹಾರದಲ್ಲಿ ಮತ್ತೊಮ್ಮೆ ಎನ್​ಡಿಎ ಅಧಿಕಾರಕ್ಕೆ ; ಭವಿಷ್ಯ ನುಡಿದ 8 ಎಕ್ಸಿಟ್ ಪೋಲ್‌ ಗಳು

ಬಿಹಾರದಲ್ಲಿ ಮತದಾನ ಮುಗಿದಿದ್ದು, ಇದರ ಬೆನ್ನಿಗೇ ಮತತಗಟ್ಟೆ ಸಮೀಕ್ಷೆಗಳು ರಾಜಕೀಯ ಪಕ್ಷಗಳ ಭವಿಷ್ಯ ಏನಾಗಲಿದೆ ಎಂದು ಭವಿಷ್ಯ ನುಡಿದಿವೆ. ಈ ಬಾರಿಯೂ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (NDA) ಬಿಹಾರದಲ್ಲಿ ಮತ್ತೆ ಅಧಿಕಾರಕ್ಕೆ ಮರಳಲಿದೆ ಎಂದು ಎಂಟು ಎಕ್ಸಿಟ್ ಪೋಲ್‌ಗಳು ಭವಿಷ್ಯ ನುಡಿದಿವೆ. ದೈನಿಕ್ ಭಾಸ್ಕರ್ ಎಕ್ಸಿಟ್ ಪೋಲ್ ಎನ್‌ಡಿಎ 145 ರಿಂದ 160 … Continued

ಬಿಹಾರ ಚುನಾವಣೆ: ವಿವಿಪ್ಯಾಟ್ ಚೀಟಿಗಳು ರಸ್ತೆಯಲ್ಲಿ ಪತ್ತೆ ; ಇಬ್ಬರು ಅಧಿಕಾರಿಗಳ ಅಮಾನತು

ಸಮಸ್ಟಿಪುರ: ಬಿಹಾರ ವಿಧಾನಸಭಾ ಚುನಾವಣೆಗಳ ಮೊದಲ ಹಂತದ ಮತದಾನ ನವೆಂಬರ್ 6 ರಂದು ಮುಗಿದ ಕೆಲವೇ ದಿನಗಳ ನಂತರ, ಸಮಸ್ಟಿಪುರದ ಕಾಲೇಜು ಸಮೀಪದ ರಸ್ತೆಗಳಲ್ಲಿ ವಿವಿಪ್ಯಾಟ್ ಚೀಟಿಗಳ ರಾಶಿಗಳು ಪತ್ತೆಯಾದ ಹಿನ್ನೆಲೆಯಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ. ಈ ಪ್ರಕರಣದಲ್ಲಿ ನಿರ್ಲಕ್ಷ್ಯ ತೋರಿದ ಕಾರಣಕ್ಕೆ ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಪ್ರಕರಣವು ಗಮನ ಸೆಳೆದ ನಂತರ, ಮುಖ್ಯ ಚುನಾವಣಾ … Continued

ಬಿಹಾರ ಚುನಾವಣೆ : ವಾರಗಳ ಹಗ್ಗಜಗ್ಗಾಟದ ನಂತರ ಇಂಡಿಯಾ ಬಣದ ಸಿಎಂ ಅಭ್ಯರ್ಥಿಯಾಗಿ ತೇಜಸ್ವಿ ಯಾದವ್‌ ಹೆಸರು ಘೋಷಣೆ

ನವದೆಹಲಿ: ಮುಂದಿನ ತಿಂಗಳು ನಡೆಯಲಿರುವ ಬಿಹಾರ ವಿಧಾನಸಭಾ ಚುನಾವಣೆ ಕಾವು ದಿನದಿಂದ ದಿನಕ್ಕೆ ಏರುತ್ತಿದ್ದು, ಅನೇಕ ದಿನಗಳ ಊಹಾಪೋಹಗಳ ನಂತರ, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರನ್ನು ಮಹಾಘಟಬಂಧನದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಗುರುವಾರ ಘೋಷಿಸಲಾಯಿತು. ವಿಕಾಸಶೀಲ್ ಇನ್ಸಾನ್ ಪಕ್ಷದ ಮುಖ್ಯಸ್ಥ ಮುಖೇಶ ಸಹಾನಿ ಅವರನ್ನು ಮೈತ್ರಿಕೂಟದ ಉಪಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸಲಾಗಿದೆ. ಸೀಟು ಹಂಚಿಕೆ ಮತ್ತು ಅಭ್ಯರ್ಥಿಗಳ … Continued

ಬಿಹಾರ ಚುನಾವಣೆ: ನಾಮಪತ್ರ ಸಲ್ಲಿಕೆ ವೇಳೆ ಬಂಧನಕ್ಕೊಳಗಾದ ಎಐಎಂಐಎಂ ಅಭ್ಯರ್ಥಿಗೆ ಹೃದಯಾಘಾತ

ಪಾಟ್ನಾ: ಬಿಹಾರದಲ್ಲಿ ಎರಡು ಹಂತದ ವಿಧಾನಸಭಾ ಚುನಾವಣೆಗೆ ಕೆಲವೇ ವಾರಗಳು ಬಾಕಿ ಇರುವಾಗ, ಕಾನೂನು ಕ್ರಮಗಳು ಚುನಾವಣಾ ರಣರಂಗದ ಮೇಲೆ ಪರಿಣಾಮ ಬೀರಲು ಪ್ರಾರಂಭಿಸಿವೆ. ಕಳೆದ 24 ಗಂಟೆಗಳಲ್ಲಿ, ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಮತ್ತು ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ನಿಂದ ಇಬ್ಬರು ಅಭ್ಯರ್ಥಿಗಳನ್ನು ಬಂಧಿಸಲಾಗಿದೆ. ರೋಹ್ತಾಸ್‌ನಲ್ಲಿ, ಸಸಾರಾಮ್‌ನ ಆರ್‌ಜೆಡಿಯ ಅಭ್ಯರ್ಥಿ ಸತೇಂದ್ರ … Continued

ಬಿಹಾರ ವಿಧಾನಸಭಾ ಚುನಾವಣೆ: ಓವೈಸಿ ನೇತೃತ್ವದ ಎಐಎಂಐಎಂನಿಂದ ಹೊಸ ‘ಗ್ರ್ಯಾಂಡ್ ಡೆಮಾಕ್ರಟಿಕ್ ಅಲಯನ್ಸ್’ ಕಣಕ್ಕೆ; ಯಾರಿಗೆ ಹಾನಿ..?

ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಗೂ ಮುನ್ನ, ಅಸಾದುದ್ದೀನ್ ಓವೈಸಿ ನೇತೃತ್ವದ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (AIMIM) ರಾಜ್ಯದಲ್ಲಿ ಮೂರನೇ ರಾಜಕೀಯ ರಂಗವನ್ನು ಪ್ರಾರಂಭಿಸಿದೆ. ‘ಗ್ರ್ಯಾಂಡ್ ಡೆಮಾಕ್ರಟಿಕ್ ಅಲಯನ್ಸ್’ (GDA) ಎಂದು ಹೆಸರಿಸಲಾಗಿರುವ ಈ ಮೈತ್ರಿಕೂಟದಲ್ಲಿ ಸ್ವಾಮಿ ಪ್ರಸಾದ ಮೌರ್ಯ ಅವರ ‘ಅಪ್ನಿ ಜನತಾ ಪಾರ್ಟಿ’ ಕೂಡಾ ಸೇರಿಕೊಂಡಿದೆ. ಈ ಹೊಸ ಬೆಳವಣಿಗೆಯು ರಾಜ್ಯದ ರಾಜಕೀಯ … Continued