ಮೈಚಾಂಗ್ ಚಂಡಮಾರುತ : ಚೆನ್ನೈನಲ್ಲಿ ವಿಷ್ಣು ವಿಶಾಲ ಮನೆಯಲ್ಲಿ 24 ಗಂಟೆಗಳ ಕಾಲ ಸಿಲುಕಿದ್ದ ಬಾಲಿವುಡ್‌ ನಟ ಅಮೀರ್ ಖಾನ್ ರಕ್ಷಣೆ

ಚೆನ್ನೈ: ಮೈಚಾಂಗ್ ಚಂಡಮಾರುತದಿಂದ ಭಾರೀ ಮಳೆಯಿಂದಾಗಿ ಜಲಾವೃತವಾಗಿದ್ದ ಚೆನ್ನೈನಲ್ಲಿ ಸಿಲುಕಿದ್ದ ಅಮೀರ್ ಖಾನ್ ಅವರನ್ನು ತಮಿಳು ನಟ ವಿಷ್ಣು ವಿಶಾಲ ಅವರೊಂದಿಗೆ ರಕ್ಷಿಸಲಾಗಿದೆ. ಖಾನ್ ಮತ್ತು ಇತರರ ರಕ್ಷಣೆ ಮಾಡುತ್ತಿರುವ ಚಿತ್ರಗಳನ್ನು ವಿಶಾಲ್ X ನಲ್ಲಿ ಹಂಚಿಕೊಂಡಿದ್ದಾರೆ. “ನಮ್ಮಂತಹ ಸಿಕ್ಕಿಬಿದ್ದಿರುವವರಿಗೆ ಸಹಾಯ ಮಾಡಿದ ಅಗ್ನಿಶಾಮಕ ಮತ್ತು ರಕ್ಷಣಾ ಇಲಾಖೆಗೆ ಧನ್ಯವಾದಗಳು. ಕರಪಕ್ಕಂನಲ್ಲಿ ರಕ್ಷಣಾ ಕಾರ್ಯಾಚರಣೆ ಆರಂಭವಾಗಿದೆ. … Continued

ವೀಡಿಯೊಗಳು…| ʼಮೈಚಾಂಗ್ʼ ಚಂಡಮಾರುತ : ಭಾರೀ ಮಳೆಗೆ ಚೆನ್ನೈನಲ್ಲಿ ಜನಜೀವನ ಸ್ಥಗಿತ, ತೇಲುವ ಕಾರುಗಳು, ರಸ್ತೆಯಲ್ಲಿ ಮೊಸಳೆ, ಏರ್‌ಪೋರ್ಟ್ ರನ್‌ ವೇಯಲ್ಲಿ ನೀರೋ ನೀರು

ಚೆನ್ನೈ: ಪ್ರಸ್ತುತ ಬಂಗಾಳಕೊಲ್ಲಿಯಲ್ಲಿ ರಚನೆಯಾಗಿರುವ ʼಮೈಚಾಂಗ್ʼ ಚಂಡಮಾರುತವು ಆಂಧ್ರ ಕರಾವಳಿಯತ್ತ ಸಾಗುತ್ತಿದ್ದು, ತಮಿಳುನಾಡು ಮತ್ತು ಪುದುಚೇರಿಯಲ್ಲಿ ಧಾರಾಕಾರ ಮಳೆಯಾಗುತ್ತಿದೆ. ತಮಿಳುನಾಡಿನ ಉತ್ತರ ಕರಾವಳಿಯ ಚೆನ್ನೈ, ಚೆಂಗಲ್ಪಟ್ಟು, ಕಾಂಚೀಪುರಂ, ನಾಗಪಟ್ಟಿಣಂ, ತಿರುವಳ್ಳೂರು ಮತ್ತು ಕಡಲೂರು ಜಿಲ್ಲೆಗಳನ್ನು ಒಳಗೊಂಡಂತೆ ಭಾರೀ ಮಳೆಯಾಗುತ್ತಿದೆ ಎಂದು ವರದಿಯಾಗಿದೆ. ಹೊಸದಿಲ್ಲಿ: ನಾಳೆ ಭೂಕುಸಿತಕ್ಕೆ ಅಪ್ಪಳಿಸಲಿರುವ ಮೈಚಾಂಗ್ ಚಂಡಮಾರುತವು ಇನ್ನಷ್ಟು ತೀವ್ರತೆ ತರುವ ಭೀತಿಯಿದ್ದು, … Continued

ಚೆನ್ನೈ: ಭಾರೀ ಮಳೆ, ನವೆಂಬರ್‌ 30 ರಂದು ಶಾಲೆಗಳಿಗೆ ರಜೆ

ಚೆನ್ನೈ: ಭಾರೀ ಮಳೆಯಿಂದಾಗಿ ನಗರದ ಕೆಲವು ಭಾಗಗಳಲ್ಲಿ ಜನಜೀವನ ಅಸ್ತವ್ಯಸ್ತವಾಗಿರುವುದರಿಂದ ಗುರುವಾರ (ನವೆಂಬರ್‌ 30) ಚೆನ್ನೈನಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಭಾರತೀಯ ಹವಾಮಾನ ಇಲಾಖೆ (IMD) ಡಿಸೆಂಬರ್ 2 ಮತ್ತು 3 ರಂದು ಚೆನ್ನೈ ಮತ್ತು ಅದರ ನೆರೆಯ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಿದ್ದು, ಭಾರೀ ಮಳೆಯಾಗುವ ಸಾಧ್ಯತೆಯನ್ನು ಸೂಚಿಸಿದೆ. ಹವಾಮಾನ ಇಲಾಖೆ ಪ್ರಕಾರ, ತಮಿಳುನಾಡಿನ … Continued

ಚೆನ್ನೈ ರಾಜಭವನದ ಹೊರಗೆ ಪೆಟ್ರೋಲ್ ಬಾಂಬ್ ಎಸೆತ : ಓರ್ವನ ಬಂಧನ

ಚೆನ್ನೈ : ತಮಿಳುನಾಡಿನ ರಾಜಧಾನಿ ಚೆನ್ನೈನ ರಾಜಭವನದ ಹೊರಗೆ ಪೆಟ್ರೋಲ್ ಬಾಂಬ್ ಎಸೆದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ಬಂಧಿತ ವ್ಯಕ್ತಿಯನ್ನು ವಿನೋದ ಎಂದು ಗುರುತಿಸಲಾಗಿದೆ. ನೀಟ್ ಮಸೂದೆಗೆ ರಾಜ್ಯಪಾಲ ಟಿ.ಎನ್.ರವಿ ಅವರು ಒಪ್ಪಿಗೆ ನೀಡದ ಕಾರಣ ಪೆಟ್ರೋಲ್ ಬಾಂಬ್ ಎಸೆದಿರುವುದಾಗಿ ಆರೋಪಿ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ. ಮೂರು ದಿನಗಳ ಹಿಂದಷ್ಟೆ ಈತ ಜೈಲಿನಿಂದ ಬಿಡುಗಡೆಯಾಗಿದ್ದ. … Continued

ಕ್ರಿಕೆಟ್‌ ವಿಶ್ವಕಪ್ 2023: ರೋಚಕ ಪಂದ್ಯದಲ್ಲಿ ಪಾಕಿಸ್ತಾನಕ್ಕೆ ಆಘಾತ ; ಐತಿಹಾಸಿಕ ಗೆಲುವು ಸಾಧಿಸಿದ ಅಫ್ಘಾನಿಸ್ತಾನ

ಚೆನ್ನೈ: ಸೋಮವಾರ (ಅಕ್ಟೋಬರ್ 23) ಚೆನ್ನೈನ ಎಂ.ಎ. ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ತಮ್ಮ ಲೀಗ್ ಮುಖಾಮುಖಿಯಲ್ಲಿ ಪಾಕಿಸ್ತಾನವನ್ನು ಸೋಲಿಸುವ ಮೂಲಕ ಅಫ್ಘಾನಿಸ್ತಾನವು ವಿಶ್ವಕಪ್‌ನಲ್ಲಿ ತಮ್ಮ ಬಲಾಢ್ಯ ತಂಡ ಮಣಿಸುವ ಅಭಿಯಾನವನ್ನು ಮುಂದುವರೆಸಿದೆ. 283 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಅಫ್ಘಾನಿಸ್ತಾನ ಬ್ಯಾಟ್ಸ್‌ಮನ್‌ಗಳು ರಹಮತ್ ಶಾ (77*) ಮತ್ತು ಹಶ್ಮತುಲ್ಲಾ ಶಾಹಿದಿ (48*)ಅವರೊಂದಿಗೆ ರಹಮಾನುಲ್ಲಾ ಗುರ್ಬಾಜ್ (65) ಮತ್ತು … Continued

ಮೂವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ನಾಲ್ವರು ಉಸಿರುಗಟ್ಟಿ ಸಾವು

ಚೆನ್ನೈ: ಮನಾಲಿ ಸಮೀಪದ ಎಂಎಂಡಿಎಯ ಮಾಥೂರ್‌ನಲ್ಲಿ ಶನಿವಾರ ಮುಂಜಾನೆ ಮನೆಯೊಂದರಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ನಾಲ್ವರು ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. ಅಜ್ಜಿ ಮತ್ತು ಮೂವರು ಮೊಮ್ಮಕ್ಕಳು ಉಸಿರುಗಟ್ಟಿ ನಿದ್ರೆಯಲ್ಲೇ ಸಾವಿಗೀಡಾಗಿದ್ದಾರೆ. ಬೆಂಕಿ ಅನಾಹುತಕ್ಕೆ ನಿಖರವಾದ ಕಾರಣ ತಿಳಿದುಬಂದಿಲ್ಲವಾದರೂ, ಮನೆಯಲ್ಲಿದ್ದ ಗ್ಯಾಸ್ ಸಿಲಿಂಡರ್ ಯಥಾಸ್ಥಿತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರನ್ನು ಸಂತಾನಲಕ್ಷ್ಮಿ ಮತ್ತು ಅವರ … Continued

ಎರಡು ಬಾರಿ ನೀಟ್‌ ಪರೀಕೆಯಲ್ಲಿ ಅನುತ್ತೀರ್ಣನಾದ ನಂತರ ಆತ್ಮಹತ್ಯೆ ಮಾಡಿಕೊಂಡ ಯುವಕ : ನಂತರ ತಂದೆಯೂ ಆತ್ಮಹತ್ಯೆ

ಚೆನ್ನೈ: ಚೆನ್ನೈನಲ್ಲಿ 19 ವರ್ಷದ ವೈದ್ಯಕೀಯ ಸೀಟ್‌ ಆಕಾಂಕ್ಷಿಯೊಬ್ಬ ಎರಡು ಬಾರಿ ಪ್ರಯತ್ನದಲ್ಲಿ ನೀಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ವಿಫಲರಾದ ಕಾರಣ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ ತನ್ನ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಆತನನ್ನು ಆಸ್ಪತ್ರೆಗೆ ಸಾಗಿಸಲಾಯಿತು, ಆದರೆ ಅಲ್ಲಿ ಆತ ಸತ್ತಿದ್ದಾನೆ ಎಂದು ಘೋಷಿಸಲಾಯಿತು. ನಗರದ ಕ್ರೋಮ್‌ಪೇಟೆಯಲ್ಲಿ ಘಟನೆ ನಡೆದಿದ್ದು, ವಿದ್ಯಾರ್ಥಿಯನ್ನು ಜಗದೀಶ್ವರನ್ ಎಂದು … Continued

ಭಯಾನಕ ವೀಡಿಯೊ…| ಮನೆಗೆ ಹಿಂದಿರುಗುತ್ತಿದ್ದ ಶಾಲಾ ಬಾಲಕಿ ಮೇಲೆ ಪದೇಪದೇ ದಾಳಿ ಮಾಡಿದ ಹಸು : ಬೊಬ್ಬೆ ಹೊಡೆದ್ರೂ ಬಿಡದ ಆಕಳು

ಚೆನ್ನೈನಲ್ಲಿ ನಡೆದ ಭಯಾನಕ ಘಟನೆಯೊಂದರಲ್ಲಿ ಶಾಲಾ ಬಾಲಕಿಯೊಬ್ಬಳು ತನ್ನ ತಾಯಿ ಮತ್ತು ಕಿರಿಯ ಸಹೋದರನೊಂದಿಗೆ ಶಾಲೆಯಿಂದ ಮನೆಗೆ ಹೋಗುತ್ತಿದ್ದಾಗ ಹಸುವೊಂದು ಅಮಾನುಷವಾಗಿ ದಾಳಿ ಮಾಡಿದೆ. ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ಘಟನೆಯ ಭಯಾನಕ ವೀಡಿಯೊ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆಗಸ್ಟ್ 9 ರಂದು ಈ ಘಟನೆ ಚೆನ್ನೈನ ಎಂಎಂಡಿಎ ಕಾಲೋನಿಯಲ್ಲಿ ನಡೆದಿದೆ ಎಂದು ವರದಿಯಾಗಿದೆ. ಎರಡು … Continued

ಧಾರ್ಮಿಕ ವಿಧಿವಿಧಾನದ ವೇಳೆ ದೇವಸ್ಥಾನದ ಕೆರೆಯಲ್ಲಿ ಮುಳುಗಿ 5 ಮಂದಿ ಸಾವು

ಚೆನ್ನೈ : ಚೆನ್ನೈನ ಕೀಲ್ಕತ್ತಲೈ ಬಳಿಯ ಮೂವರಸಂಪೇಟೆಯಲ್ಲಿರುವ ದೇವಸ್ಥಾನದ ಕೊಳದಲ್ಲಿ ಬುಧವಾರ ಧಾರ್ಮಿಕ ಕ್ರಿಯೆಯ ವೇಳೆ 18 ರಿಂದ 23 ವರ್ಷದೊಳಗಿನ ಐವರು ಮುಳುಗಿ ಮೃತಪಟ್ಟಿದ್ದಾರೆ. ಬೆಳಗ್ಗೆ 10:15ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಂಗನಲ್ಲೂರಿನ ಧರ್ಮಲಿಂಗೇಶ್ವರ ದೇವಸ್ಥಾನವು ಕಳೆದ ಕೆಲವು ದಿನಗಳಿಂದ ದೇವಸ್ಥಾನದಲ್ಲಿ ಸಮಾರಂಭಗಳನ್ನು ಆಯೋಜಿಸುತ್ತಿದೆ ಎಂದು ಅವರು ಹೇಳಿದರು. … Continued

ಹಿರಿಯ ನಟ ಶರತ್ ಬಾಬು ಆಸ್ಪತ್ರೆಗೆ ದಾಖಲು

ಬಹುಭಾಷಾ ನಟ ಶರತ್ ಬಾಬು (71) ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಚೆನ್ನೈನ ಖಾಸಗಿ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಈ ಕುರಿತು ತೆಲುಗು ನಟಿ ಕರಾಟೆ ಕಲ್ಯಾಣಿ ಅವರು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿಯನ್ನು ಶೇರ್​​ ಮಾಡಿಕೊಂಡಿದ್ದಾರೆ. ಸದ್ಯ ಹಿರಿಯ ನಟ ಶರತ್ ಬಾಬು ಅವರ ಆರೋಗ್ಯದ ಬಗ್ಗೆ … Continued