ಸಚಿವ ನವಾಬ್ ಮಲಿಕ್ ಆಸ್ಪತ್ರೆಗೆ ದಾಖಲು, ಅವರ ಆರೋಗ್ಯ ಸ್ಥಿತಿ ಗಂಭೀರ: ನ್ಯಾಯಾಲಯಕ್ಕೆ ತಿಳಿಸಿದ ವಕೀಲರು

ಮುಂಬೈ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ(ED)ದಿಂದ ಬಂಧಿತರಾಗಿರುವ ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಅವರು ಜ್ವರ ಮತ್ತು ಅತಿಸಾರದಿಂದ ಬಳಲುತ್ತಿದ್ದು, ಸೋಮವಾರ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಅವರ ವಕೀಲರು ಇಲ್ಲಿನ ವಿಶೇಷ ನ್ಯಾಯಾಲಯಕ್ಕೆ ತಿಳಿಸಿದ್ದಾರೆ ಮತ್ತು ಮಲಿಕ್ ಅವರ ಆರೋಗ್ಯವು ಹದಗೆಟ್ಟಿದೆ ಮತ್ತು ಅವರು ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ಹೇಳಿದ್ದಾರೆ. ಕಳೆದ ವಾರ, … Continued

ತನ್ನ ವಿಚ್ಛೇದಿತ ಪತ್ನಿ ಮೆಲಿಂಡಾ ಅವರನ್ನೇ ಮತ್ತೆ ಮದುವೆಯಾಗಲು ಬಯಸುವೆ ಎಂದ ಬಿಸಿನೆಸ್‌ ಮ್ಯಾಗ್ನೆಟ್‌ ಬಿಲ್ ಗೇಟ್ಸ್…!

ಬಿಲ್ ಗೇಟ್ಸ್ ಅವರು ಮಾಜಿ ಪತ್ನಿ ಮೆಲಿಂಡಾ ಅವರನ್ನೇ ಮತ್ತೆ ಮತ್ತೆ ಮದುವೆ (All Over Again’) ಆಗಲು ಬಯಸುವುದಾಗಿ ಹೇಳಿದ್ದಾರೆ. ಬಿಲ್ ಗೇಟ್ಸ್ ಮತ್ತು ಅವರ ಮಾಜಿ ಪತ್ನಿ ಮಿಲಿಂಡಾ ಇಬ್ಬರೂ ವಿಚ್ಛೇದನದ ನೋವಿನಿಂದ ಹೊರಬರುತ್ತಿದ್ದಾರೆ. ಮಾಜಿ ಪತ್ನಿ ಮೆಲಿಂಡಾ ಫ್ರೆಂಚ್ ಗೇಟ್ಸ್ ಅವರೊಂದಿಗಿನ ತನ್ನ ವಿವಾಹವು “ಅದ್ಭುತ ಎಂದು ಹೇಳಿರುವ ಬಿಲ್ ಗೇಟ್ಸ್ … Continued

ಯಾವುದೇ ವ್ಯಕ್ತಿಯನ್ನು ಕೋವಿಡ್‌ ಲಸಿಕೆ ಹಾಕಿಸಿಕೊಳ್ಳುವಂತೆ ಒತ್ತಾಯಿಸುವಂತಿಲ್ಲ: ಸುಪ್ರೀಂಕೋರ್ಟ್​

ನವದೆಹಲಿ: ಯಾವುದೇ ವ್ಯಕ್ತಿಯನ್ನು ಕೋವಿಡ್​ ಲಸಿಕೆ ಹಾಕಿಸಿಕೊಳ್ಳುವಂತೆ ಬಲವಂತ ಮಾಡುವ ಹಾಗಿಲ್ಲ. ಪ್ರಸ್ತುತವಿರುವ ಸರ್ಕಾರದ ಕೋವಿಡ್​-19 ಲಸಿಕೆ ನೀತಿ ಅಸಮಂಜಸ ಅಥವಾ ಅನಿಯಂತ್ರಿತವಲ್ಲ ಎಂದು ಸೋಮವಾರ ಸುಪ್ರೀಂಕೋರ್ಟ್ ಹೇಳಿದೆ. ನ್ಯಾಯಮೂರ್ತಿಗಳಾದ ಎಲ್.ನಾಗೇಶ್ವರ ರಾವ್ ಮತ್ತು ಬಿ.ಆರ್.ಗವಾಯಿ ಅವರಿದ್ದ ದ್ವಿಸದಸ್ಯ ಪೀಠ, ವಿವಿಧ ಸಂಸ್ಥೆಗಳು ಮತ್ತು ಸರ್ಕಾರಗಳು ಲಸಿಕೆ ಹಾಕಿಸಿಕೊಳ್ಳದ ಜನರ ಮೇಲೆ ನಿರ್ಬಂಧಗಳನ್ನು ವಿಧಿಸಿರುವುದು ಸರಿಯಲ್ಲ. … Continued

ವೈದ್ಯಕೀಯ ವಿದ್ಯಾರ್ಥಿಗಳು ಸಂಸ್ಕೃತದಲ್ಲಿ ‘ಚರಕ ಶಪಥʼದ ಪ್ರತಿಜ್ಞಾವಿಧಿ ತೆಗೆದುಕೊಂಡ ನಂತರ ಡೀನ್ ಅವರನ್ನು ಹುದ್ದೆಯಿಂದ ತೆಗೆದ ತಮಿಳುನಾಡು ಸರ್ಕಾರ

ತಮಿಳುನಾಡಿನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಮಧುರೈ ಮೆಡಿಕಲ್ ಕಾಲೇಜಿನ ಡೀನ್ ಎ. ರತ್ನವೇಲ್ ಅವರನ್ನು ಭಾನುವಾರದಂದು ಅವರ ಹುದ್ದೆಯಿಂದ ಬಿಡುಗಡೆಗೊಳಿಸಿದೆ ಮತ್ತು ಎಲ್ಲಿಯೂ ಪೋಸ್ಟ್​ ಕೊಟ್ಟಿಲ್ಲ. ಕಾಲೇಜಿನ ಮೊದಲ ವರ್ಷದ ವಿದ್ಯಾರ್ಥಿಗಳು ಸಂಸ್ಕೃತದಲ್ಲಿ ‘ಮಹರ್ಷಿ ಚರಕ ಶಪಥ’ ತೆಗೆದುಕೊಂಡ ಒಂದು ದಿನದ ನಂತರ ತಮಿಳುನಾಡು ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ವೈದ್ಯಕೀಯ ಕೋರ್ಸ್‌ಗೆ … Continued

ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ರಾಜಕೀಯ ಪಕ್ಷ ಕಟ್ಟುತ್ತಾರಾ? ಅದನ್ನು ಮಾಡಬಹುದು ಎನ್ನುತ್ತವೆ ಮೂಲಗಳು

ನವದೆಹಲಿ: ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರು “ಪುಟವನ್ನು ತಿರುಗಿಸಲು” ಸಿದ್ಧರಾಗಿದ್ದಾರೆ ಮತ್ತು 2024 ರ ಸಾರ್ವತ್ರಿಕ ಚುನಾವಣೆಗೆ ಮುಂಚಿತವಾಗಿ ತಮ್ಮದೇ ಆದ ರಾಜಕೀಯ ಪಕ್ಷ ಸ್ಥಾಪಿಸಲು ಸಿದ್ಧರಾಗಿದ್ದಾರೆ ಎಂದು ಈ ವಿಷಯದ ಬಗ್ಗೆ ತಿಳಿದಿರುವ ಮೂಲಗಳು ತಿಳಿಸಿವೆ. ಬಿಹಾರಕ್ಕೆ ತೆರಳಿ, ಜನರನ್ನು ಭೇಟಿ ಮಾಡುವ ಮೂಲಕ ಮತ್ತು ಅವರನ್ನು ಪೀಡಿಸುವ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವ ಮೂಲಕ … Continued

ದೇಶದಲ್ಲಿ ಕೊರೊನಾ ನಾಲ್ಕನೇ ಅಲೆ ಶುರುವಾಗಿಲ್ಲ, ಮತ್ತೊಂದು ಅಲೆ ಸಾಧ್ಯತೆ ಕಡಿಮೆ: ಐಸಿಎಂಆರ್‌

ನವದೆಹಲಿ: ದೇಶಾದ್ಯಂತ ಕೋವಿಡ್‌ ಸೋಂಕಿನ ಪ್ರಕರಣಗಳ ಸಂಖ್ಯೆಯಲ್ಲಿ ನಿಧನಾವಾಗಿ ಏರುತ್ತಿರುವ ನಡುವೆಯೇ ಭಾರತದಲ್ಲಿ ನಾಲ್ಕನೇ ಅಲೆ ಬಂದಿಲ್ಲ, ಬರುವ ಸಾಧ್ಯತೆಯೂ ಕಡಿಮೆಯಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್‌) ಹೇಳಿದೆ. ಪ್ರಸ್ತುತ ದೇಶದಲ್ಲಿನ ಕೋವಿಡ್‌ ಸೋಂಕಿನ ಪರಿಸ್ಥಿತಿಯನ್ನು ನಾಲ್ಕನೇ ಅಲೆ ಎಂದು ಹೇಳಲಾಗುವುದುಲ್ಲ. ಸೋಂಕು ಸ್ಥಳೀಯ ಮಟ್ಟದಲ್ಲಿದೆ ಇದೆಯಷ್ಟೇ ಎಂದು ಐಸಿಎಂಆರ್‌ ತಜ್ಞರು ಭಾನುವಾರ … Continued

ಮೇ 4ರ ನಂತರ ಮಹಾರಾಷ್ಟ್ರದ ಶಕ್ತಿ ನಿಮಗೆ ತೋರಿಸ್ತೇನೆ: ಧ್ವನಿವರ್ಧಕದ ಗಡುವು ಸಮೀಪಿಸಿದಂತೆ ಗುಡುಗಿದ ರಾಜ್ ಠಾಕ್ರೆ

ಔರಂಗಾಬಾದ್‌: ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿ ಭಾನುವಾರ ಬೃಹತ್ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಅಧ್ಯಕ್ಷ ರಾಜ್ ಠಾಕ್ರೆ, ಮೇ 4 ರೊಳಗೆ ಮಹಾರಾಷ್ಟ್ರದ ಮಸೀದಿಗಳಲ್ಲಿನ ಎಲ್ಲಾ ಧ್ವನಿವರ್ಧಕಗಳನ್ನು ತೆಗೆದುಹಾಕಬೇಕು. ಇಲ್ಲದಿದ್ದರೆ, ಹನುಮಾನ್ ಚಾಲೀಸಾವನ್ನು ಮುಂದೆ ‘ಡಬಲ್ ಪವರ್’ ನಲ್ಲಿ ನುಡಿಸಲಾಗುವುದು ಎಂದು ಎಚ್ಚರಿಸಿದ್ದಾರೆ. ಮೇ 3 ರಂದು ಈದ್ ಇದೆ, ಹಬ್ಬಕ್ಕೆ ತೊಂದರೆ ಮಾಡಲು … Continued

ಸ್ವಮೂತ್ರ ಪ್ರತಿದಿನ ಕುಡಿಯುವ ಬ್ರಿಟನ್‌ ವ್ಯಕ್ತಿ… ಇದು 10 ವರ್ಷ ಚಿಕ್ಕವನಾಗಿ ಕಾಣುವಂತೆ ಮಾಡಿದೆಯಂತೆ…!

ಇಂಗ್ಲೆಂಡಿನಲ್ಲಿ 34 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು, ಪ್ರತಿದಿನ ತನ್ನದೇ ಆದ ಮೂತ್ರವನ್ನು ಕುಡಿಯುತ್ತಾನೆ, ವಿಲಕ್ಷಣ ಅಭ್ಯಾಸವು ತನ್ನ ಖಿನ್ನತೆಯನ್ನು “ಗುಣಪಡಿಸಿದೆ” ಮತ್ತು ತನ್ನ ನೈಜ ವಯಸ್ಸಿಗಿಂತ 10 ವರ್ಷ ಚಿಕ್ಕವನಾಗಿ ಕಾಣುವಂತೆ ಮಾಡಿದೆ ಎಂದು ಹೇಳಿಕೊಂಡಿದ್ದಾರೆ. ನ್ಯೂಯಾರ್ಕ್ ಪೋಸ್ಟ್ ಪ್ರಕಾರ, ಹ್ಯಾಂಪ್‌ಶೈರ್‌ನ ಹ್ಯಾರಿ ಮಟಾಡೀನ್ 2016 ರಲ್ಲಿ ತನ್ನ ಸ್ವಂತ ಮೂತ್ರವನ್ನು ಸೇವಿಸಲು ಪ್ರಾರಂಭಿಸಿದರು. ಏಕೆಂದರೆ … Continued

ಹಿಂದೂಸ್ಥಾನೀ ಸಂಗೀತದ ಮೇರು ಗಾಯಕ, ದುರ್ಲಭ ರಾಗಗಳ ನಿಧಿ ಡಾ. ರಾಜಶೇಖರ ಮನ್ಸೂರ ಇನ್ನಿಲ್ಲ

ಧಾರವಾಡ: ಹಿಂದುಸ್ಥಾನಿ ಸಂಗೀತದ ಮೇರು ಗಾಯಕ, ಅಪ್ರಚಲಿತ ರಾಗಗಳನ್ನು ಪ್ರಸ್ತುತಪಡಿಸುವ ದೇಶದ ಕೆಲವೇ ಕೆಲವು ಗಾಯಕರಲ್ಲಿ ಒಬ್ಬರಾಗಿದ್ದ ಡಾ. ರಾಜಶೇಖರ ಮನ್ಸೂರ ಅವರು ಇಂದು ಭಾನುವಾರ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಡಾ. ರಾಜಶೇಖರ ಮನ್ಸೂರ ಅವರಿಗೆ ೭೯ ವರ್ಷ ವಯಸ್ಸಾಗಿತ್ತು. ತಂದೆ ದಿವಂಗತ ಡಾ.ಮಲ್ಲಿಕಾರ್ಜುನ ಮನ್ಸೂರ ಅವರಂತೆಯೇ ಹಿಂದೂಸ್ಥಾನೀ ಸಂಗೀತದ ಜೈಪುರ-ಅತ್ರೌಲಿ ಘರಾಣೆಯ ಅಗ್ರ ಗಾಯಕರಾಗಿದ್ದ ರಾಜಶೇಖರ … Continued

ಪಿಎಸ್ಐ ನೇಮಕಾತಿ ಪರೀಕ್ಷೆ ಹಗರಣ: ಪ್ರಮುಖ ಆರೋಪಿ ನೀರಾವರಿ ಇಲಾಖೆ ಅಧಿಕಾರಿ ಸಿಐಡಿಗೆ ಶರಣಾಗತಿ…!

ಕಲಬುರಗಿ: ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣದಲ್ಲಿ 20 ದಿ‌ನಗಳಿಂದ ತಲೆಮರೆಸಿಕೊಂಡಿದ್ದ ಮತ್ತೋರ್ವ ಪ್ರಮುಖ ಆರೋಪಿ, ನೀರಾವರಿ ಇಲಾಖೆಯ ಸಹಾಯಕ ಇಂಜಿನಿಯರ್ ಮಂಜುನಾಥ್ ಮೇಳಕುಂದಾ ಭಾನುವಾರ ಸಿಐಡಿ ಕಚೇರಿಗೆ ಆಗಮಿಸಿ ಶರಣಾಗಿದ್ದಾರೆ. ನಗರದ ಐವಾನ್ ಶಾಹಿ‌ ಅತಿಥಿಗೃಹದಲ್ಲಿರುವ ಸಿಐಡಿ ಕಚೇರಿಗೆ ಆಟೋದಲ್ಲಿ ಕೊರಳಿಗೆ ಒಂದು ಬ್ಯಾಗ್ ಹಾಕಿಕೊಂಡು ಮಂಜುನಾಥ ಬಂದಿದ್ದಾರೆ. ಈ ವೇಳೆ ಪಿಎಸ್ಐ ಪರೀಕ್ಷೆ … Continued