ಬೆಂಗಳೂರಲ್ಲಿ ಲಾಕ್‌ಡೌನ್‌ ಅಥವಾ ವೀಕೆಂಡ್‌ ಲಾಕ್‌ಡೌನ್‌: ನಾಳಿನ ಸಭೆಯಲ್ಲಿ ನಿರ್ಧಾರ..?

ಬೆಂಗಳೂರು: ಕೋವಿಡ್ ಸೋಂಕು ಪ್ರಕರಣಗಳು ವೇಗದಲ್ಲಿ ಹರಡುತ್ತಿರುವುದರಿಂದ ರಾಜಧಾನಿ ಬೆಂಗಳೂರಿನಲ್ಲಿ ಲಾಕ್‍ಡೌನ್ ಜಾರಿ ಮಾಡಬೇಕೋ ಬೇಡವೋ ಎಂಬುದು ನಾಳಿನ (ಸೋಮವಾರ. ಏ.೧೯) ಸಭೆಯಲ್ಲಿಯೇ ನಿರ್ಧಾರವಾಗಲಿದೆ. ನಾಳೆ ಕಂದಾಯ ಸಚಿವ ಆರ್.ಅಶೋಕ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಹಾಗೂ ಬೆಂಗಲೂರಿನ ಜನಪ್ರತಿನಿಧಿಗಳ ಸಭೆ ನಡೆಯಲಿದ್ದು, ಬೆಂಗಳೂರಿನಲ್ಲಿ ಲಾಕ್‍ಡೌನ್ ಮಾಡುತ್ತಾರೆಯೋ ಅಥವಾ ಕಠಿಣ ನಿಯಮಗಳನ್ನು ಜಾರಿ … Continued

ಆಘಾತಕಾರಿ..ಬೆಂಗಳೂರಿನಲ್ಲಿ ಸಮುದಾಯಕ್ಕೂ ಹಬ್ಬುತ್ತಿದೆ ಎಂದ ಆರೋಗ್ಯ ಸಚಿವರು…!

ಬೆಂಗಳೂರು: ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ವೈರಸ್‌ ಸಮುದಾಯಕ್ಕೂ ಹಬ್ಬುತ್ತಿದೆ ಎಂಬ ಆಘಾತಕರ ಮಾಹಿತಿಯನ್ನು ರಾಜ್ಯ ಆರೋಗ್ಯ ಸಚಿವ ಡಾ.ಸುಧಾಕರ ಹೊರ ಹಾಕಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಕೊರೊನಾ ಸೋಂಕು ನಮ್ಮ ನಿರೀಕ್ಷೆಗೂ ಮೀರಿ ಹಬ್ಬುತ್ತಿದೆ. ಇದು ಸಮುದಾಯಕ್ಕೂ ಹಬ್ಬುತ್ತಿದೆ. ನಾವು ಕಠಿಣ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಲಿದೆ ಎಂದು ಆತಂಕ ವ್ಯಕ್ತಪಡಿಸಿದರು. … Continued

ಕೊರೊನಾ ಸೋಂಕು: ನಿಲ್ಲದ ಭಾರತದ ದೈನಂದಿನ ಸೋಂಕಿನ ಏರಿಕೆ ಗ್ರಾಫ್‌..!

ನವ ದೆಹಲಿ: ಕೊರೊನಾ ವೈರಸ್‌ ಕಾಯಿಲೆಯ (ಕೋವಿಡ್ -19) 2,61,500 ದೈನಂದಿನ ಹೊಸ ಪ್ರಕರಣಗಳೊಂದಿಗೆ ಭಾರತವು ಅತಿ ಹೆಚ್ಚು ಏಕದಿನ ಸ್ಪೈಕ್ ಅನ್ನು ದಾಖಲಿಸುವುದು ಮುಂದುವರಿದಿದೆ.ಮತ್ತು 1501 ಸಾವುನೋವುಗಳನ್ನು ದಾಖಲಿಸಿದೆ, ಒಟ್ಟು ಸೋಂಕಿರ ಸಂಖ್ಯೆ 1,47,88,109 ಮತ್ತು ಸಾವಿನ ಸಂಖ್ಯೆ 1,77,150 ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ. … Continued

ಕೊರೊನಾ ವೈರಸ್ ಹರಡುವಿಕೆ ತಡೆಗೆ ಎಲ್ಲ ಒಳಾಂಗಣ ಕಾರ್ಯಕ್ರಮಗಳಿಗೆ ಎರಡು ತಿಂಗಳ ನಿಷೇಧ: ಲ್ಯಾನ್ಸೆಟ್‌ ಇಂಡಿಯಾ ಟಾಸ್ಕ್ ಫೋರ್ಸ್ ಶಿಫಾರಸು

ಭಾರತದಲ್ಲಿ ಕೋವಿಡ್‌-19 ಹರಡುವಿಕೆ ವಿರುದ್ಧ ಸರ್ಕಾರ ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದರೂ, ಪ್ರತಿ ದಿನ ಕಳೆದಂತೆ ವೈರಸ್ ಪ್ರಕರಣಗಳು ಹೆಚ್ಚುತ್ತಿವೆ. ವೈರಸ್ ಹರಡುವುದನ್ನು ತಡೆಯಲು ಕನಿಷ್ಠ ಎರಡು ತಿಂಗಳಾದರೂ ಒಳಾಂಗಣ ಕೂಟಗಳಿಗೆ ಸಂಪೂರ್ಣ ನಿಷೇಧ ಹೇರಬೇಕು ಎಂದು ಲ್ಯಾನ್ಸೆಟ್ ಕೋವಿಡ್ -19 ಆಯೋಗದ ಭಾರತ ಕಾರ್ಯಪಡೆ ತನ್ನ ವರದಿಯಲ್ಲಿ ತಿಳಿಸಿದೆ. ಧಾರ್ಮಿಕ, ರಾಜಕೀಯ ಘಟನೆಗಳು (ರಾಜ್ಯ ಚುನಾವಣೆಗಳು), … Continued

ಕರ್ನಾಟಕದಲ್ಲಿ ದೈನಂದಿನ ಪ್ರಕರಣಗಳಲ್ಲಿ ಮತ್ತೆ ಜಂಪ್‌… ಮುಂಬೈ-ಪುಣೆ ಸ್ಥಿತಿಯತ್ತ ಬೆಂಗಳೂರು..!!

ಬೆಂಗಳೂರು: ಕೇವಲ 24 ಗಂಟೆಗಳ ಅವಧಿಯಲ್ಲಿ 17,489 ಹೊಸ ಪ್ರಕರಣಗಳನ್ನು ದಾಖಲಿಸುವ ಮೂಲಕ ಕರ್ನಾಟಕವು ತನ್ನ ಏಕದಿನ ಗರಿಷ್ಠ ಕೊರೊನಾ ವೈರಸ್ ಸ್ಪೈಕ್ ದಾಖಲಿಸಿದೆ. ಶನಿವಾರದ ಪ್ರಕರಣವೂ ಸೇರಿ ಒಟ್ಟು ಸೋಂಕಿತರ ಸಂಖ್ಯೆ ಸೇರಿ ಒಟ್ಟು ಸೋಂಕಿತರ ಸಂಖ್ಯೆ 11,41,998ಕ್ಕೆ ತಲುಪಿದ್ದರೆ, ಸಕ್ರಿಯ ಪ್ರಕರಣಗಳು 1,19,160 ಕ್ಕೆ ತಲುಪಿದೆ ಎಂದು ರಾಜ್ಯ ಆರೋಗ್ಯ ಬುಲೆಟಿನ್ ತಿಳಿಸಿದೆ. … Continued

ಕುಂಭಮೇಳ: ಪ್ರಧಾನಿ ಮೋದಿ ಮನವಿ ಮೇರೆಗೆ ಕುಂಭ ಮೇಳದ ಮುಕ್ತಾಯ ಪ್ರಕಟಿಸಿದ ಜುನಾ ಅಖಾಡಾ..!

ಹರಿದ್ವಾರ: ಜುನಾ ಅಖಾಡದ ಕುಂಭಮೇಳವು ಮುಕ್ತಾಯಗೊಂಡಿದೆ ಎಂದು ಮಹಾಮಂಡಲೇಶ್ವರ ಸ್ವಾಮಿ ಅವ್ದೇಶಾನಂದ್ ಗಿರಿ ಶನಿವಾರ ಪ್ರಕಟಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತನಾಡಿದ ನಂತರ ಅವರು ಅಖಾಡಾದ ಕುಂಭ ಹಬ್ಬದ ಮುಕ್ತಾಯವನ್ನು ಘೋಷಿಸಿದರು. ಪ್ರಧಾನಿ ನರೇಂದ್ರ ಮೋದಿ ಆಚಾರ್ಯ ಮಹಾಮಂಡಲೇಶ್ವರ ಸ್ವಾಮಿ ಅವ್ದೇಶಾನಂದ್ ಗಿರಿ ಅವರೊಂದಿಗೆ ದೂರವಾಣಿ ಸಂವಾದ ನಡೆಸಿದರು ಮತ್ತು ಎಲ್ಲಾ ಸಂತರ ಆರೋಗ್ಯದ … Continued

ಕೊರೊನಾ ಹೆಚ್ಚಳ: ಸರ್ಕಾರಿ ಇಲಾಖೆಗಳ ಸಭೆಗೆ ಸದ್ಯಕ್ಕೆ ಬ್ರೇಕ್‌..!

ಬೆಂಗಳೂರು: ಕೋವಿಡ್ 2ನೇ ಅಲೆ ಹಿಂದೆಂದಿಗಿಂತಲೂ ವೇಗವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ಒಂದೆರಡು ತಿಂಗಳ ಅವಧಿಗೆ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸಭೆ ನಡೆಸುವುದನ್ನು ನಿಯಂತ್ರಿಸಬೇಕು ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಸೂಚಿಸಿದ್ದಾರೆ. ಸಭೆ ನಡೆಸುವುದು ಅನಿವಾರ್ಯವಾದಲ್ಲಿ ಅಧಿಕಾರಿಗಳು ಅಥವಾ ಸಭೆಯಲ್ಲಿ ಪಾಲ್ಗೊಳ್ಳುವವರು ಸಾಕಷ್ಟು ಆರೋಗ್ಯಯುತ ಸಾಮಾಜಿಕ ಅಂತರವಿರುವಂತೆ ಸಭೆ ನಡೆಸಬೇಕು ಹಾಗೂ ವಿಡಿಯೋ … Continued

ಮಹತ್ವದ ನಿರ್ಧಾರ.. ಕರ್ನಾಟಕದಲ್ಲಿ ಇನ್ಮುಂದೆ ಜಾತ್ರೆಗೆ ಅವಕಾಶವಿಲ್ಲ, ಮದುವೆ-ಸಮಾರಂಭಗಳಿಗೆ ಪಾಸ್‌ ಕಡ್ಡಾಯ..

ಬೆಂಗಳೂರು: ಸೋಂಕು ಹೆಚ್ಚಳದ ಕಾರಣ ಇನ್ಮುಂದೆ ರಾಜ್ಯದಲ್ಲಿ ಯಾವುದೇ ಜಾತ್ರೆಗಳಿಗೆ ಅವಕಾಶವಿಲ್ಲ. ಜಾತ್ರೆಗಳು ನಡೆದರೆ ಆಯಾ ಜಿಲ್ಲಾಧಿಕಾರಿಗಳನ್ನೇ ಹೊಣೆಯಾಗಿಸುತ್ತೇವೆ ಎಂದು ಕಂದಾಯ ಸಚಿವ ಆರ್​ ಅಶೋಕ್​ ಹೇಳಿದ್ದಾರೆ. ರಾಜ್ಯದಲ್ಲಿ ಕೊರೋನಾ ಸೋಂಕು ನಿಯಂತ್ರಣ ಸಂಬಂಧ ಎಲ್ಲ ಜಿಲ್ಲಾಧಿಕಾರಿಗಳೊಂದಿಗೆ ಶನಿವಾರ ನಡೆದ ಸಭೆಯ ನಂತರ ಮಾತನಾಡಿದ ಅವರು, ಸೋಂಕು ಹೆಚ್ಚಳ ಹಿನ್ನಲೆ ಯಾವುದೇ ಕಾರಣಕ್ಕೂ ಜಾತ್ರೆಗಳಿಗೆ ಅವಕಾಶವಿಲ್ಲ. … Continued

ವಿಧಾನಸೌಧ, ವಿಕಾಸ ಸೌಧ, ಎಂಎಸ್‌ ಬಿಲ್ಡಿಂಗ್‌ಗೆ ಸಾರ್ವಜನಿಕ ಪ್ರವೇಶಕ್ಕೆ ನಿರ್ಬಂಧ

ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೋನಾ ಸೋಂಕಿನ ಪ್ರಕರಣಗಳು ಹೆಚ್ಚಳವಾದ ಕಾರಣ ಈಗ ವಿಧಾನಸೌಧ, ವಿಕಾಸಸೌಧ ಮತ್ತು ಬಹುಮಹಡಿ ಕಟ್ಟಗಳಿಗೆ ಸಾರ್ವಜನಿಕರ ಪ್ರವೇಶಕ್ಕೆ ರಾಜ್ಯ ಸರ್ಕಾರ ನಿರ್ಬಂಧ ವಿಧಿಸಿದೆ. ಈ ಮೂಲಕ ಸಾರ್ವಜನಿಕರ ಪ್ರವೇಶಕ್ಕೆ ನಿಷೇಧ ಹೇರಿದೆ. ರಾಜ್ಯ ಸರ್ಕಾರದ ಅಧೀನ ಕಾರ್ಯದರ್ಶಿ ಈ ಕುರಿತು ಸುತ್ತೋಲೆ ಹೊರಡಿಸಿದ್ದು, ಕೊರೊನಾ ವೈರಸ್ 2ನೇ ಅಲೆ … Continued

ಕೋವಿಡ್ -19 ವಿರುದ್ಧದ ಹೋರಾಟ ಬಲಪಡಿಸಲು ಕುಂಭಮೇಳ ಈಗ ಸಾಂಕೇತಿಕವಾಗಿರಬೇಕು ಎಂದ ಪ್ರಧಾನಿ ಮೋದಿ

ನವ ದೆಹಲಿ: ಹರಿದ್ವಾರದ ಕುಂಭಮೇಳ ಪ್ರದೇಶದಿಂದ ಅಪಾರ ಸಂಖ್ಯೆಯ ಕೊರೊನಾ ಸೋಂಕಿಗೆ ಒಳಗಾಗುತ್ತಿರುವ ಮಧ್ಯೆ, ಪ್ರಧಾನಿ ನರೇಂದ್ರ ಮೋದಿ ಶನಿವಾರ ಬೆಳಿಗ್ಗೆ ವಾರಗಳ ಕಾಲ ನಡೆಯುವ ಧಾರ್ಮಿಕ ಹಬ್ಬವು “ಈಗ ಮಾತ್ರ ಸಾಂಕೇತಿಕವಾಗಿರಬೇಕು” ಎಂದು ಹೇಳಿದ್ದಾರೆ. ಕೋವಿಡ್ -19 ಸಾಂಕ್ರಾಮಿಕ ರೋಗದ ವಿರುದ್ಧ ಭಾರತದ ಹೋರಾಟಕ್ಕೆ ಇದು ಉತ್ತೇಜನ ನೀಡುತ್ತದೆ ಎಂದು ಪ್ರಧಾನಿ ಮೋದಿ ಒತ್ತಿ … Continued