ಬೆಚ್ಚಿ ಬೀಳಿಸಿದ ಘಟನೆ: ಒಂದೇ ರೀತಿಯಲ್ಲಿ ಕತ್ತರಿಸಿದ ಇಬ್ಬರು ಮಹಿಳೆಯರ ಅರ್ಧ ಶವಗಳು ಬೇರೆ ಬೇರೆ ಕಡೆ ಪತ್ತೆ..!

ಬೆಚ್ಚಿ ಬೀಳಿಸುವ ಘಟನೆ: ಇಬ್ಬರು ಮಹಿಳೆಯರ ಅರ್ಧ ದೇಹಗಳು ಪತ್ತೆ ಮಂಡ್ಯ: ಎರಡು ಪ್ರತ್ಯೇಕ ಪ್ರಕರಣದಲ್ಲಿ ಇಬ್ಬರು ಮಹಿಳೆಯರನ್ನು ಬೀಭತ್ಸವಾಗಿ ಕೊಲೆ ಮಾಡಿ ಅರ್ಧ ದೇಹ ತುಂಡರಿಸಲ್ಪಟ್ಟ ರೀತಿಯಲ್ಲಿ ಶವಗಳು ಪತ್ತೆಯಾಗಿರುವ ಘಟನೆ ವರದಿಯಾಗಿದೆ. ಪಾಂಡವಪುರ ತಾಲೂಕಿನಲ್ಲಿ ಒಬ್ಬ ಮಹಿಳೆಯ ಅರ್ಧ ಶವ, ಶ್ರೀರಂಗಪಟ್ಟಣ ತಾಲೂಕಿನಲ್ಲಿ ಮತ್ತೊಬ್ಬ ಮಹಿಳೆಯ ಅರ್ಧ ಶವ ಪತ್ತೆಯಾಗಿದೆ. ಪಾಂಡವಪುರ ತಾಲೂಕಿನ … Continued

ಮಂಡ್ಯದಲ್ಲಿ ಮಗಳ ಕೊಳೆತ ಶವದ ಜೊತೆ 4 ದಿನ ಕಳೆದ ತಾಯಿ…!

ಮಂಡ್ಯ: ನಾಲ್ಕು ದಿನದ ಹಿಂದೆ ಮೃತಪಟ್ಟ ಮಗಳ ಶವದ ಪಕ್ಕದಲ್ಲೇ ತಾಯಿ ಮಲಗಿರುವ ಘಟನೆ ಮಂಡ್ಯ ನಗರದ ಹಾಲಹಳ್ಳಿ ಬಡಾವಣೆಯ ಹೊಸ ತಮಿಳು ಕಾಲೋನಿಯಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಹಾಲಹಳ್ಳಿ ಬಡಾವಣೆಯ ರೂಪಾ (30) ಎಂಬ ಮಹಿಳೆ ನಾಲ್ಕು ದಿನಗಳ ಹಿಂದೆ ಮನೆಯಲ್ಲಿಯೇ ಮೃತಪಟ್ಟಿದ್ದರು. ಕಾರಣ ತಿಳಿದಿಲ್ಲ. ಆದರೆ ಮಗಳ ಶವದ ಮುಂದೆಯೇ ತಾಯಿ ನಾಗಮ್ಮ … Continued

ಮೈಸೂರು-ಧಾರವಾಡ ರೈಲಿನಲ್ಲಿ ಮಧ್ಯರಾತ್ರಿ  ಕಾಣಿಸಿಕೊಂಡ ಬೆಂಕಿ

ಮಂಡ್ಯ: ಮೈಸೂರು-ಧಾರವಾಡ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಮಧ್ಯರಾತ್ರಿ ಬೆಂಕಿ ಅವಘಡ ಸಂಭವಿಸಿದ್ದು, ಕೂದಲೆಳೆ ಸ್ವಲ್ಪದರಲ್ಲೇ ಭಾರೀ ಅನಾಹುತ ತಪ್ಪಿದೆ ಎಂದು ಹೇಳಲಾಗಿದೆ. ರೈಲು ರಾತ್ರಿ 10:30ಕ್ಕೆ ಮೈಸೂರಿನಿಂದ ಧಾರವಾಡಕ್ಕೆ ತೆರಳುತ್ತಿತ್ತು. ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಮಂದಗೆರೆ ಬಳಿ ರಾತ್ರಿ 12 ಗಂಟೆ ಸುಮಾರಿಗೆ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದೆ. ತಕ್ಷಣವೇ ಚಾಲಕ ರೈಲನ್ನು ನಿಲ್ಲಿಸಿದ್ದರಿಂದ ಅನಾಹುತ … Continued

ಬೀಗ ಒಡೆದು ಅಂಗನವಾಡಿಗೆ ನುಗ್ಗಿ, ಅಡುಗೆ ಮಾಡಿ ಊಟ ಮುಗಿಸಿ, ಕಥೆ ಬರೆದಿಟ್ಟು ಹೋದ ವಿಶಿಷ್ಟ ಕಳ್ಳ…!

ಮಂಡ್ಯ: ವ್ಯಕ್ತಿಯೊಬ್ಬ ರಾತ್ರಿ ವೇಳೆ ಅಂಗನವಾಡಿಗೆ ನುಗ್ಗಿ ಅಲ್ಲಿದ್ದ ವಸ್ತುಗಳನ್ನು ಬಳಸಿ ಅಡುಗೆ ಮಾಡಿಕೊಂಡು ಊಟ ಮಾಡಿ, ಕಥೆ, ಕವನ ಗೀಚಿ ಹೋಗಿರುವ ವಿಚಿತ್ರ ಘಟನೆ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಹೆಬ್ಬಣಿ ಗ್ರಾಮದಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಫೆಬ್ರವರಿ 22ರ ರಾತ್ರಿ ಕಳ್ಳತನ ಮಾಡಲು ವ್ಯಕ್ತಿಯೊಬ್ಬ ಅಂಗನವಾಡಿ ಬೀಗ ಮುರಿದು ಒಳಹೊಕ್ಕಿದ್ದಾನೆ. ಒಳಗಿದ್ದ ಬೀರುವಿನ ಬೀಗ … Continued

ನಾಲ್ವರು ಮಕ್ಕಳು ಸೇರಿ ಒಂದೇ ಕುಟುಂಬದ ಐವರ ಬರ್ಬರ ಕೊಲೆ

ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಗ್ರಾಮ ಬಜಾರ್‌ ಬೈಲ್‌ನಲ್ಲಿ ಒಂದೇ ಕುಟುಂಬದ ಐವರನ್ನು ಕೊಲೆ ಮಾಡಿದ್ದ ಬಗ್ಗೆ ವರದಿಯಾಗಿದೆ. ನಾಲ್ವರು ಮಕ್ಕಳು, ಹಾಗೂ ಓರ್ವ ಮಹಿಳೆಯನ್ನು ದುಷ್ಕರ್ಮಿಗಳು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಮೃತರನ್ನು ಲಕ್ಷ್ಮೀ(26), ರಾಜ್(12), ಕೋಮಲ್(7), ಕುನಾಲ್(4), ಗೋವಿಂದ(8) ಎಂದು ಗುರುತಿಸಲಾಗಿದೆ. ಸ್ಥಳಕ್ಕೆ ಕೆಆರ್‌ಎಸ್ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ … Continued

ಮಂಡ್ಯ: ಶಾಲೆಗೆ ಮೊಬೈಲ್ ತಂದ ವಿದ್ಯಾರ್ಥಿನಿಗೆ ಬಟ್ಟೆ ಬಿಚ್ಚಿಸಿ ಕೊಠಡಿಯಲ್ಲಿ ಕೂಡಿ ಹಾಕಿದ ಮುಖ್ಯ ಶಿಕ್ಷಕಿ…!

ಮಂಡ್ಯ: ಶಾಲೆಗೆ ಮೊಬೈಲ್ ತಂದಿದ್ದ ವಿದ್ಯಾರ್ಥಿನಿ ಜೊತೆ ಮುಖ್ಯ ಶಿಕ್ಷಕಿ ಅಮಾನವೀಯವಾಗಿ ನಡೆದುಕೊಂಡ ಘಟನೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಗಣಂಗೂರಿನಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಶಾಲೆಗೆ ಮೊಬೈಲ್ ತಂದ ವಿದ್ಯಾರ್ಥಿನಿ ಜೊತೆ ಮುಖ್ಯ ಶಿಕ್ಷಕಿ ಅಸಭ್ಯವಾಗಿ ನಡೆದುಕೊಂಡಿದ್ದು, ವಿದ್ಯಾರ್ಥಿನಿ ಬಟ್ಟೆ ಬಿಚ್ಚಿಸಿ ಕೊಠಡಿಯಲ್ಲಿ ಕೂಡಿ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ವಾರದ ಹಿಂದೆಯೇ ಈ … Continued

ಮಂಡ್ಯ: ತಮಿಳುನಾಡು ದೇವಾಲಯಗಳ ಪ್ರವಾಸಕ್ಕೆ ತೆರಳಿದ್ದ 30 ಮಹಿಳೆಯರಿಗೆ ಕೋವಿಡ್ ಸೋಂಕು

ಮಂಡ್ಯ: ತಮಿಳುನಾಡಿನ ಓಂ ಶಕ್ತಿ ದೇವಾಲಯಕ್ಕೆ ಪ್ರವಾಸ ಕೈಗೊಂಡಿದ್ದ ಮಂಡ್ಯ ಜಿಲ್ಲೆಯ 30 ಮಹಿಳೆಯರಿಗೆ ಕೋವಿಡ್ 19 ಸೋಂಕು ದೃಢವಾಗಿದೆ. ಕಳೆದ ವಾರ ಶ್ರೀರಂಗಪಟ್ಟಣದ ವಿವಿಧ ಗ್ರಾಮಗಳಿಂದ ಆರು ಬಸ್ ಗಳಲ್ಲಿ ಮಹಿಳಾ ಭಕ್ತರು ತಮಿಳುನಾಡಿನ ಓಂ ಶಕ್ತಿ ದೇವಾಲಯಕ್ಕೆ ತೆರಳಿದ್ದರು. ಈಗಾಗಲೇ ನಾಲ್ಕು ಬಸ್ ಗಳು ವಾಪಸ್ಸು ಬಂದಿವೆ. ಬಂದವರಲ್ಲಿ 30ಕ್ಕೂ ಹೆಚ್ಚು ಮಂದಿಗೆ … Continued

ಭೀಕರ ಅಪಘಾತ: ಒಂದೇ ಕುಟುಂಬದ ಐವರ ದುರ್ಮರಣ

ಮಂಡ್ಯ: ಒಂದೇ ಕುಟುಂಬದ ಐವರು ಭೀಕರ ಅಪಘಾತದಲ್ಲಿ ಮೃತಪಟ್ಟ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ನೆಲಮಾಕನಹಳ್ಳಿ ಗ್ರಾಮದ ಗೇಟ್ ಬಳಿ ನಡೆದ ಬಗ್ಗೆ ವರದಿಯಾಗಿದೆ. ದಡದಪುರ ಗ್ರಾಮದ ಮುತ್ತಮ್ಮ(45), ಮಗಳು ಬಸಮ್ಮಣಿ(30), ಮಗ ವೆಂಕಟೇಶ(25), ಬಸಮ್ಮಣಿ ಅವರ ಮಕ್ಕಳಾದ ಚಾಮುಂಡೇಶ್ವರಿ (8) ಹಾಗೂ, 2 ವರ್ಷದ ಗಂಡು ಮಗು ಮೃತಪಟ್ಟವರು ಎಂದು ಗುರುತಿಸಲಾಗಿದೆ. ಮುತ್ತಮ್ಮ … Continued

ಮಂಡ್ಯ: ಸಂಗಮದಲ್ಲಿ ಪುನೀತ್‌ ರಾಜಕುಮಾರ 11ನೇ ದಿನದ ಕಾರ್ಯ ಮಾಡಿದ ವಿನೋದ್ ರಾಜ್

ಮಂಡ್ಯ: ನಟ ಪುನೀತ್ ರಾಜ್ ಕುಮಾರ್ ಅಕಾಲಿಕವಾಗಿ ನಿಧನರಾಗಿ ಇಂದಿಗೆ (ಸೋಮವಾರಕ್ಕೆ) 11ನೇ ದಿನ. ಕುಟುಂಬಸ್ಥರು ಅವರ ಸಮಾಧಿ ಸ್ಥಳದಲ್ಲಿ 11ನೇ ದಿನದ ಕಾರ್ಯಕ್ರಮ ನೆರವೇರಿಸಿದರೆ ಶ್ರೀರಂಗ ಪಟ್ಟಣದ ಗಂಜಾಂ ಬಳಿಯ ಸಂಗಮ ಕ್ಷೇತ್ರದಲ್ಲಿ ನಟ ವಿನೋದ್ ರಾಜ್ ಅವರು ಅಪರ ಕರ್ಮ ಕಾರ್ಯವನ್ನು ನೆರವೇರಿಸಿದ್ದಾರೆ. ಇಂದು ಪುನೀತ್ ರಾಜ್ ಕುಮಾರ್ ನಿಧರಾಗಿ 11ನೇ ದಿನದ … Continued

ಫಾಲ್ಸ್ ನಿಂದ ಬಿದ್ದು ಇಬ್ಬರು ಯುವಕರು ಸಾವು

ಮಂಡ್ಯ: ವಾರಾಂತ್ಯದ ಪ್ರವಾಸಕ್ಕೆ ಬಂದಿದ್ದ ಬೆಂಗಳೂರಿನ ಇಬ್ಬರು ಯುವಕರು ಜಲಪಾತದಲ್ಲಿ ಬಿದ್ದು ಮೃತಪಟ್ಟ ಘಟನೆ ಮಳವಳ್ಳಿ ತಾಲೂಕಿನ ಹಲಗೂರು ಸಮೀಪದ ಗಾಣಾಳು ಜಲಪಾತದಲ್ಲಿ ನಡೆದಿದೆ. ಬೆಂಗಳೂರಿನ ಎಂಎಸ್ ಪಾಳ್ಯದ ಶಾಮ್‍ವೆಲ್(21), ಸಿಬಿಲ್(21) ಮೃತಪಟ್ಟವರು. ಇವರಿಬ್ಬರು ಸ್ನೇಹಿತರು ಬೈಕ್‍ನಲ್ಲಿ ಪ್ರವಾಸಕ್ಕೆಂದು ಗಾಣಾಳು ಫಾಲ್ಸ್‌ಗೆ ಬಂದಿದ್ದಾರೆ. ಈ ವೇಳೆ ಇವರು ಕಾಲು ಜಾರಿ ಫಾಲ್ಸ್‌ನಿಂದ ಕೆಳಗೆ ಬಿದ್ದು, ಮೃತಪಟ್ಟಿರಬಹುದು … Continued