ಮಂಗಳೂರು : ಮೊಬೈಲ್‌ ಫೋನ್‌ ವಿಚಾರಕ್ಕೆ ಜಗಳ ; ಅಣ್ಣನನ್ನೇ ಚಾಕುವಿನಿಂದ ಇರಿದು ಕೊಂದ ತಮ್ಮ

ಮಂಗಳೂರು : ಮೊಬೈಲ್‌ ಫೋನ್‌ ವಿಚಾರವಾಗಿ ಉಂಟಾದ ಜಗಳ ವಿಕೋಪಕ್ಕೆ ತಿರುಗಿ, ತಮ್ಮ ತನ್ನ ಅಣ್ಣನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ಮಂಗಳೂರಿನ ಕೊಟ್ಟಾರ ಕ್ರಾಸ್‌ ಸಮೀಪ ಭಾನುವಾರ ತಡರಾತ್ರಿ ನಡೆದಿದೆ ಎಂದು ವರದಿಯಾಗಿದೆ. ಮೃತ ವ್ಯಕ್ತಿಯನ್ನು 40 ವರ್ಷದ ಅಡಿವಪ್ಪ ಎಂದು ಗುರುತಿಸಲಾಗಿದ್ದು, ಆರೋಪಿ 36 ವರ್ಷದ ತಮ್ಮ ರಾಜು ಎಂದು ಪೊಲೀಸರು … Continued

ಪರಪ್ಪನ ಅಗ್ರಹಾರ ಜೈಲಿನ ಮೇಲೆ ಸಿಸಿಬಿ ದಾಳಿ : ಪ್ರಜ್ವಲ್‌ ರೇವಣ್ಣ ಬ್ಯಾರಕ್‌ನಲ್ಲಿ ಮೊಬೈಲ್‌ ಪತ್ತೆ

ಬೆಂಗಳೂರು: ಅತ್ಯಾಚಾರ ಪ್ರಕರಣದಲ್ಲಿ ದೋಷಿಯಾಗಿ  ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಜೆಡಿಎಸ್‌ ಮಾಜಿ ಸಂಸದ ಪ್ರಜ್ವಲ್ ರೇವಣ್ಣನನ್ನು ಇರಿಸಲಾಗಿರುವ ಬ್ಯಾರಕ್‌ನಲ್ಲಿ ಮೊಬೈಲ್‌ ಫೋನ್‌ ಪತ್ತೆಯಾಗಿದ್ದು, ಈತ ಅದನ್ನು ಬಳಸುತ್ತಿದ್ದ ಎಂಬ ಅನುಮಾನ ವ್ಯಕ್ತವಾಗಿದೆ. ಅಪರಾಧ ವಿಭಾಗದ ಅಧಿಕಾರಿಗಳು ನಡೆಸಿದ ದಿಢೀರ್ ತಪಾಸಣೆ ವೇಳೆ ಪ್ರಜ್ವಲ್ ರೇವಣ್ಣ ಬಳಿ ಮೊಬೈಲ್‌ ಫೋನ್‌ … Continued

ಭಾರತದಲ್ಲಿ ʼಏಜ್ ವೆರಿಫಿಕೇಷನ್ʼ ಫೀಚರ್‌ ಪರೀಕ್ಷೆಗೆ ಮುಂದಾದ ವಾಟ್ಸ್ಆ್ಯಪ್‌

ನವದೆಹಲಿ: ಮಕ್ಕಳ ವೈಯಕ್ತಿಕ ಮಾಹಿತಿಯ ಸಂಸ್ಕರಣೆ ಮತ್ತು ರಕ್ಷಣೆಗೆ ಸಂಬಂಧಿಸಿದ ಡಿಜಿಟಲ್ ಪರ್ಸನಲ್ ಡೇಟಾ ಪ್ರೊಟೆಕ್ಷನ್ (DPDP) ಕಾಯ್ದೆಯ ನಿಯಮಗಳನ್ನು ಪಾಲಿಸುವ ನಿಟ್ಟಿನಲ್ಲಿ ಮೆಟಾ ಮಾಲೀಕತ್ವದ ಜನಪ್ರಿಯ ಮೆಸೇಜಿಂಗ್ ವೇದಿಕೆ ವಾಟ್ಸ್ಆ್ಯಪ್ ಭಾರತದಲ್ಲಿ ‘ಏಜ್ ವೆರಿಫಿಕೇಷನ್’ (Age Verification) ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಪರೀಕ್ಷಿಸುತ್ತಿದೆ. ಸದ್ಯ ಈ ಪರೀಕ್ಷೆ ಆಯ್ದ ಬಳಕೆದಾರರಿಗೆ ಮಾತ್ರ ನಡೆಯುತ್ತಿದ್ದು, ಬಳಕೆದಾರರಿಗೆ ತಮ್ಮ … Continued

ಮಕ್ಕಳ ಹೆರುವಿಕೆ ತಡೆದ ಐಫೋನ್ ಕ್ರಾಂತಿ ! 2007ರ ನಂತರ ವಿಶ್ವದಾದ್ಯಂತ ಜನನ ಪ್ರಮಾಣ ಕುಸಿತದ ಬೆಚ್ಚಿಬೀಳಿಸುವ ಸತ್ಯ ಬಿಚ್ಚಿಟ್ಟ ಅಧ್ಯಯನ

ಸಾಮಾನ್ಯವಾಗಿ ಒಂದು ದೇಶ ಅಥವಾ ಸಮಾಜದಲ್ಲಿ ಜನರ ಜೀವನಮಟ್ಟ ಸುಧಾರಿಸಿದಂತೆ ಅಲ್ಲಿನ ಜನನ ಪ್ರಮಾಣ (ಬರ್ತ್ ರೇಟ್) ಕಡಿಮೆಯಾಗುತ್ತಾ ಹೋಗುವುದು ಇತಿಹಾಸದುದ್ದಕ್ಕೂ ಕಂಡುಬಂದಿರುವ ಸಾಮಾನ್ಯ ಪ್ರವೃತ್ತಿ. ಆದರೆ, ಕಳೆದ ಎರಡು ದಶಕಗಳಲ್ಲಿ ಸಂಶೋಧಕರು ತೀರಾ ಭಿನ್ನವಾದ ಮತ್ತು ವಿಚಿತ್ರವಾದ ವಿದ್ಯಮಾನವೊಂದನ್ನು ಗಮನಿಸಿದ್ದಾರೆ. 2007ರಿಂದೀಚೆಗೆ ಜಗತ್ತಿನಾದ್ಯಂತ ವಿವಿಧ ದೇಶಗಳಲ್ಲಿ ಆರ್ಥಿಕ ಮತ್ತು ಸಾಮಾಜಿಕ ಪರಿಸ್ಥಿತಿಗಳು ಬೇರೆ ಬೇರೆಯಾಗಿದ್ದರೂ … Continued

ಶಿರಸಿ: ಬುದ್ಧಿವಾದ ಹೇಳಿದ್ದಕ್ಕೆ ಮನನೊಂದ 9ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ

ಶಿರಸಿ: ಪರೀಕ್ಷೆಯ ಸಮಯದಲ್ಲಿ ಮೊಬೈಲ್ ವ್ಯಾಮೋಹ ಬಿಟ್ಟು ಓದಿನ ಕಡೆ ಗಮನಹರಿಸುವಂತೆ ಪೋಷಕರು ಹೇಳಿದ್ದಕ್ಕೆ ಮನನೊಂದ ವಿದ್ಯಾರ್ಥಿಯೊಬ್ಬ ನೇಣಿಗೆ ಶರಣಾಗಿರುವ ದಾರುಣ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ನಡೆದಿದೆ ಎಂದು ವರದಿಯಾಗಿದೆ. 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಶಿರಸಿ ನಗರದ ಗಣೇಶನಗರದ 15 ವರ್ಷದ ಶುಭಂ ನಾಯ್ಕ ಎಂಬಾತ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ ಎಂದು … Continued

ಗಂಡ ಹೊಸ ಮೊಬೈಲ್ ಕೊಡಿಸಲಿಲ್ಲ ಎಂದು ನೇಣಿಗೆ ಶರಣಾದ ಗೃಹಿಣಿ

ಮೋದಾಸ (ಗುಜರಾತ್): ಹೊಸ ಮೊಬೈಲ್ ಫೋನ್ ಕೊಡಿಸಲು ಪತಿ ನಿರಾಕರಿಸಿದ ಕಾರಣಕ್ಕೆ ೨೨ ವರ್ಷದ ವಲಸೆ ಕಾರ್ಮಿಕ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುಜರಾತ್‌ನ ಮೋದಾಸದಲ್ಲಿ ಶನಿವಾರ ನಡೆದಿದೆ ಎಂದು ವರದಿಯಾಗಿದೆ. ಮೃತ ಮಹಿಳೆಯನ್ನು ಊರ್ಮಿಳಾ ಎಂದು ಗುರುತಿಸಲಾಗಿದೆ. ಈ ದಂಪತಿ ಮೂಲತಃ ನೇಪಾಳದವರಾಗಿದ್ದು, ಜೀವನೋಪಾಯಕ್ಕಾಗಿ ಗುಜರಾತ್‌ಗೆ ಬಂದು ನೆಲೆಸಿದ್ದರು. ಮೋದಾಸದಲ್ಲಿ ಇವರು ‘ಚೈನೀಸ್ ಫುಡ್’ … Continued

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರಯಾಣಿಕರ ಮೊಬೈಲಿಗೆ ಸುರಕ್ಷತಾ ಅಲರ್ಟ್‌ ; ಎನ್‌ಎಚ್‌ಎಐ-ಜಿಯೋ ಒಪ್ಪಂದ

ನವದೆಹಲಿ: ರಾಷ್ಟ್ರೀಯ ಹೆದ್ದಾರಿಗಳಲ್ಲಿ (National Highways) ಸುರಕ್ಷತೆಯನ್ನು ಹೆಚ್ಚಿಸಲು ಮತ್ತು ಪ್ರಯಾಣಿಕರಿಗೆ ಸುಗಮ ಪ್ರಯಾಣಕ್ಕೆ ಅನುಕೂಲವಾಗಲು ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರ (NHAI), ಟೆಲಿಕಾಂ-ಆಧಾರಿತ ಸುರಕ್ಷತಾ ಎಚ್ಚರಿಕೆ ವ್ಯವಸ್ಥೆಯನ್ನು ರಾಷ್ಟ್ರೀಯ ಹೆದ್ದಾರಿಗಳ ಜಾಲದಾದ್ಯಂತ ಪರಿಚಯಿಸಲು ರಿಲಯನ್ಸ್ ಜಿಯೋ (Reliance Jio) ಜೊತೆ ಒಪ್ಪಂದಕ್ಕೆ (MoU) ಸಹಿ ಹಾಕಿದೆ. ಜಿಯೋದ ಅಸ್ತಿತ್ವದಲ್ಲಿರುವ 4G ಮತ್ತು 5G ನೆಟ್‌ವರ್ಕ್ ಅನ್ನು … Continued

ಶೀಘ್ರವೇ ಮೊಬೈಲ್‌ ನಲ್ಲಿ ಬರಲಿದೆ ಅಧಿಕೃತ ‘ಕಾಲರ್ ಐಡಿ’ ಸೇವೆ : ಸಂಖ್ಯೆ ಜೊತೆ ಕರೆ ಮಾಡಿದವರ ಹೆಸರು ಕಾಣಿಸ್ತದೆ ; ವಂಚನೆ ತಡೆಗೆ ಕ್ರಮ

ನವದೆಹಲಿ: ಭಾರತದಲ್ಲಿ ಶೀಘ್ರದಲ್ಲೇ ಅಧಿಕೃತ ‘ಕಾಲರ್ ಗುರುತಿಸುವಿಕೆ’ (Caller Identification) ವ್ಯವಸ್ಥೆ ಜಾರಿಗೆ ಬರಲು ಸಿದ್ಧವಾಗಿದ್ದು, ಇದು ಟ್ರೂಕಾಲರ್‌ನಂತಹ (Truecaller) ಮೂರನೇ ವ್ಯಕ್ತಿಯ ಆ್ಯಪ್‌ಗಳನ್ನು ಅವಲಂಬಿಸುವುದಿಲ್ಲ. ಕರೆ ಸ್ವೀಕರಿಸುವವರ ಫೋನ್ ಪರದೆಯ ಮೇಲೆ ಕರೆ ಮಾಡಿದವರ ನಿಜವಾದ ಹೆಸರನ್ನು ಪ್ರದರ್ಶಿಸುವ ಹೊಸ ವ್ಯವಸ್ಥೆಯನ್ನು ಪರಿಚಯಿಸುವ ದೂರಸಂಪರ್ಕ ಇಲಾಖೆ (DoT) ಪ್ರಸ್ತಾವನೆಗೆ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ … Continued

ವಿರಾಟ್ ಕೊಹ್ಲಿಯಿಂದ ಹಿಡಿದು ಎಬಿ ಡಿವಿಲಿಯರ್ಸ್ ವರೆಗೆ ಹಳ್ಳಿ ಅಂಗಡಿಗೆ ಬರುತ್ತಿದ್ದ ಕ್ರಿಕೆಟಿಗರ ಫೋನ್‌ ಕರೆ ; ಹಾಗಾದ್ರೆ ಆಗಿದ್ದೇನು..?

ಗರಿಯಾಬಂದ್ (ಛತ್ತೀಸ್‌ಗಢ): ನಿಮ್ಮ ಹಳ್ಳಿಯಲ್ಲಿರುವ ದಿನಸಿ ಅಂಗಡಿಯಲ್ಲಿ ನೀವು ಕುಳಿತಿದ್ದಾಗ ನಿಮ್ಮ ಫೋನ್ ರಿಂಗಾಗುತ್ತದೆ ಎಂದು ಕಲ್ಪಿಸಿಕೊಳ್ಳಿ. ಇನ್ನೊಂದು ತುದಿಯಲ್ಲಿ, “ಹಲೋ, ನಾನು ವಿರಾಟ್ ಕೊಹ್ಲಿ” ಎಂದು ಧ್ವನಿ ಹೇಳುತ್ತದೆ. ಸ್ವಲ್ಪ ಸಮಯದ ನಂತರ, ಮತ್ತೊಂದು ಕರೆ, “ಇದು ಎಬಿ ಡಿವಿಲಿಯರ್ಸ್ ಎಂದು ಹೇಳುತ್ತದೆ.” ನಂತರ ಇನ್ನೊಂದು ಕರೆ, “ನಾನು ರಜತ್ ಪಾಟಿದಾರ್…” ಹೀಗೆ ಇದು … Continued

ಶಿವಮೊಗ್ಗದ ಕೇಂದ್ರ ಕಾರಾಗೃಹದ ಕೈದಿಯ ಹೊಟ್ಟೆಯಲ್ಲಿ ಮೊಬೈಲ್ ಪತ್ತೆ…!

ಶಿವಮೊಗ್ಗ : ನಗರದ ಸೋಗಾನೆಯ ಕೇಂದ್ರ ಕಾರಾಗೃಹದಲ್ಲಿದ್ದ ಕೈದಿಯೊಬ್ಬ ಮೊಬೈಲ್ ಫೋನ್ ನುಂಗಿದ್ದು, ಅದನ್ನು ಜುಲೈ ೮ರಂದು ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆಯಲಾಗಿದೆ. ಬಳಿಕ ಮೊಬೈಲ್ ಅನ್ನು ಜೈಲು ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ. ದೌಲತ್ ಅಲಿಯಾಸ್ ಗುಂಡ (30) ಎಂಬ ಕೈದಿಯ ಹೊಟ್ಟೆಯಲ್ಲಿ ಮೂರು ಇಂಚು ಉದ್ದದ ಒಂದು ಇಂಚು ಅಗಲದ ಮೊಬೈಲ್ ಫೋನ್ ಪತ್ತೆಯಾಗಿದೆ. ಪ್ರಕರಣವೊಂದರಲ್ಲಿ ದೌಲತ್‌ಗೆ … Continued