ಹೆಂಡತಿಯ ಮೇಲೆ ಸೇಡು ತೀರಿಸಿಕೊಳ್ಳಲು ಟ್ರಾಫಿಕ್ ನಿಯಮ ಪದೇ ಪದೇ ಉಲ್ಲಂಘಿಸಿ ಕಿರುಕುಳ ನೀಡಿದ ಗಂಡ….!

ಪತಿ ಪತ್ನಿಯರ ಜಗಳ ವಿಕೋಪಕ್ಕೆ ಹೋಗಿ ಪತ್ನಿ ನಂತರ ತನ್ನ ತವರು ಮನೆಗೆ ಹೋಗಿದ್ದಳು. ಜಗಳ ವಿಕೋಪಕ್ಕೆ ಹೋದ ನಂತರ ಅವರಿಬ್ಬರ ಸಂಬಂಧ ಹಳಸಿ ಅದು ವಿಚ್ಛೇದನದ ವರೆಗೆ ಬಂದು ನಿಂತಿತು. ವಿಚ್ಛೇದನ ಪ್ರಕರಣ ನ್ಯಾಯಾಲಯದ ಮುಂದೆ ಇದ್ದು, ಈ ವೇಳೆ ಪತಿ ಮಹಾಶಯ ತನ್ನ ಪತ್ನಿಗೆ ಕಿರುಕುಳ ನೀಡಲು ಅಸಾಮಾನ್ಯ ಮಾರ್ವನ್ನು ಅನುಸರಿಸಿದ್ದಾನೆ. ಪತ್ನಿಯ … Continued

ತುಮಕೂರು | ಆಗ್ರೋ ಫುಡ್ ಕಂಪನಿಯಲ್ಲಿ ಆಯಿಲ್‌ ಟ್ಯಾಂಕ್‌ ಸ್ಫೋಟ; ಇಬ್ಬರ ಸಾವು, ಮೂವರಿಗೆ ಗಾಯ

ತುಮಕೂರು: ಪರಿಮಳ ಆಗ್ರೋ ಫುಡ್ ಕಂಪನಿಯಲ್ಲಿ ಆಯಿಲ್ ಟ್ಯಾಂಕ್ ಸ್ಪೋಟಗೊಂಡ ಪರಿಣಾಮ ಇಬ್ಬರು ಕಾರ್ಮಿಕರು ಸಾವಿಗೀಡಾದ ಘಟನೆ ನಡೆದಿದೆ ಎಂದು ವರದಿಯಾಗಿದೆ. ಅಂತಸರನಹಳ್ಳಿಯಲ್ಲಿರುವ ಇಂಡಸ್ಟ್ರಿಯಲ್ಲಿ ಈ ದುರ್ಘಟನೆ ನಡೆದಿದೆ. ಆಯಿಲ್ ಟ್ಯಾಂಕ್ ಬಳಿ ಐವರು ಕಾರ್ಮಿಕರು ಕೆಲಸ ಮಾಡುತ್ತಿದ್ದಾಗ ಟ್ಯಾಂಕ್‌ ಸ್ಪೋಟಗೊಂಡಿದೆ ಎನ್ನಲಾಗಿದೆ. ಬಿಹಾರ ಮೂಲದ ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತ ಕಾರ್ಮಿಕರನ್ನು ಸಂತೋಷ … Continued

ನಟ ಸೈಫ್‌ ಅಲಿ ಖಾನ್‌ ಇರಿತದ ಪ್ರಕರಣ ; ಸೈಫ್ ಪುತ್ರ ಜೆಹ್ ಕೋಣೆಗೆ ನುಗ್ಗಿದ ದರೋಡೆಕೋರ ; 1 ಕೋಟಿ ರೂ.ಗೆ ಬೇಡಿಕೆ

ಮುಂಬೈ: ಮನೆಗೆ ನುಗ್ಗಿದ ದರೋಡೆಕೋರನಿಂದ ಚಾಕು ಇರಿತಕ್ಕೆ ಒಳಗಾದ ಬಾಲಿವುಡ್ ನಟ ಸೈಫ್ ಅಲಿ ಖಾನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ನಿವಾಸದಲ್ಲಿ ಮಕ್ಕಳ ಕೇರ್‌ಟೇಕರ್ ಅವರು ಪೊಲೀಸರ ಮುಂದೆ ಹೇಳಿಕೆ ನೀಡಿದ್ದು, ತಾನು ಸ್ನಾನಗೃಹದ ಬಳಿ ನೆರಳನ್ನು ಮೊದಲು ಗಮನಿಸಿರುವುದಾಗಿ ಹೇಳಿದ್ದಾಳೆ ಎಂದು ಮೂಲಗಳನ್ನು ಉಲ್ಲೇಖಿಸಿ ನ್ಯೂಸ್ 18 ವರದಿ ಮಾಡಿದೆ. ಮಾಧ್ಯಮಗಳ ವರದಿಗಳ ಪ್ರಕಾರ, … Continued

ಬೆಂಗಳೂರು: ಕಾರಿನಲ್ಲಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಉದ್ಯಮಿ ಶವ ಪತ್ತೆ

ಬೆಂಗಳೂರು: ಕಾರಿನಲ್ಲಿ ಸಂಪೂರ್ಣವಾಗಿ ಸುಟ್ಟು ಹೋಗಿರುವಂತಹ ಸ್ಥಿತಿಯಲ್ಲಿ ಉದ್ಯಮಿಯೊಬ್ಬರ ಮೃತದೇಹ ಹತ್ತೆಯಾಗಿರುವ ಘಟನೆ ಮುದ್ದಿನಪಾಳ್ಯದ ವಿಶ್ವೇಶ್ವರಯ್ಯ ಬಡಾವಣೆಯಲ್ಲಿ ನಡೆದಿದೆ. ವಾಹನವೊಂದು ಹೊತ್ತಿ ಉರಿದಿರುವ ಬಗ್ಗೆ ಪೊಲೀಸರಿಗೆ ತುರ್ತು ಕರೆ ಬಂದಿದೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದು, ಆದರೆ ಕಾರಿನೊಳಗಿದ್ದ ಸಿ ಪ್ರದೀಪ ಎಂಬುವರು ಉಸಿರುಗಟ್ಟಿ ಅದಾಗಲೇ ಮೃತಪಟ್ಟಿದ್ದರು ಎಂದು ಹೇಳಲಾಗಿದೆ. … Continued

ಕರ್ನಾಟಕ ರಾಜ್ಯೋತ್ಸವದ ದಿನ ಕರಾಳ ದಿನ ಆಚರಿಸಿದ ಎಂಇಎಸ್ ನಾಯಕರ ವಿರುದ್ಧ ಪ್ರಕರಣ ದಾಖಲು

ಬೆಳಗಾವಿ: ಕರ್ನಾಟಕ ರಾಜ್ಯೋತ್ಸವದಂದು ಕರಾಳ ದಿನ ಆಚರಣೆ ಮಾಡಿದ ಮಹಾರಾಷ್ಟ್ರ ಏಕೀಕರಣ ಸಮಿತಿ (MES) ವಿರುದ್ಧ ಪೊಲೀಸರು ಕ್ರಮ ಜರುಗಿಸಲು ಮುಂದಾಗಿದ್ದಾರೆ. ಸಮಿತಿ ಮುಖಂಡರು ಹಾಗೂ ಕಾರ್ಯಕರ್ತರ ವಿರುದ್ಧ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಿಲ್ಲಾಡಳಿತ ಕರಾಳ ದಿನಾಚರಣೆಗೆ ಅನುಮತಿ ನೀಡದೇ ಇದ್ದರೂ ಮಹಾರಾಷ್ಟ್ರ ಏಕೀಕರಣ ಸಮಿತಿ ಸದಸ್ಯರು ಬೀದಿಗಿಳಿದುಕರಾಳ ದಿನ ಆಚರಣೆ ಮಾಡಿದ್ದರು. … Continued

ವೀಡಿಯೊ…| ಜೂಜಾಟ ನಿಲ್ಲಿಸಲು ಹೋದ ಪೊಲೀಸರ ಮೇಲೆಯೇ ದೊಣ್ಣೆ, ಇಟ್ಟಿಗೆಗಳಿಂದ ದಾಳಿ ಮಾಡಿದ ಗುಂಪು ; ಇಬ್ಬರು ಪೊಲೀಸರಿಗೆ ಗಾಯ

ಲಕ್ನೋ: ದೀಪಾವಳಿ ಸಂದರ್ಭದಲ್ಲಿ ಜೂಜಾಡುತ್ತಿದ್ದವರಿಗೆ ಅಲ್ಲಿಂದ ತೆರಳಲು ಸೂಚಿಸಿದ ಪೊಲೀಸರ ಮೇಲೆ ಗುಂಪೊಂದು ದಾಳಿ ನಡೆಸಿದ ಪರಿಣಾಮ ಇಬ್ಬರು ಪೊಲೀಸರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ ಎಂದು ವರದಿಯಾಗಿದೆ. ಈ ಭೀಕರ ದಾಳಿಯ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗುತ್ತಿದೆ. ಬರೇಲಿಯ ಪ್ರೇಮ ನಗರ (Prem Nagar) ಪ್ರದೇಶದಲ್ಲಿ ಅನಧಿಕೃತ … Continued

ಸ್ನೇಹಿತನನ್ನು ಪ್ರಕರಣದಲ್ಲಿ ಸಿಲುಕಿಸಲು ವಿಮಾನಗಳಿಗೆ ಬಾಂಬ್‌ ಬೆದರಿಕೆ ಹಾಕಿದ್ದ ಅಪ್ರಾಪ್ತ…!

ಮುಂಬೈ: ಸೋಮವಾರದಿಂದ ವಿವಿಧ ವಿಮಾನಯಾನ ಸಂಸ್ಥೆಗಳಿಗೆ ಸರಣಿ ಬಾಂಬ್ ಬೆದರಿಕೆಗಳನ್ನು ಹಾಕಿದ್ದ ಹಿನ್ನೆಲೆಯಲ್ಲಿ ಮುಂಬೈ ಪೊಲೀಸರು ಅಪ್ರಾಪ್ತ ವಯಸ್ಕನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಬಾಂಬ್ ಬೆದರಿಕೆಗಳಿಂದಾಗಿ ಕೆಲವು ವಿಮಾನಗಳನ್ನು ದೂರದ ಕೆನಡಾದ ವಿಮಾನ ನಿಲ್ದಾಣಕ್ಕೂ ತಿರುಗಿಸಲಾಗಿತ್ತು. ಹುಡುಗನು ತನ್ನ ಸ್ನೇಹಿತನೊಬ್ಬನನ್ನು ಬಂಧನಕ್ಕೆ ಒಳಗಾಗುವಂತೆ ಮಾಡಬೇಕು ಎಂದು ಬಯಸಿ ಬಾಂಬ್‌ ಬೆದರಿಕೆಗಳನ್ನು ಹಾಕಿದ್ದ ಎಂದು ಹೇಳಲಾಗಿದೆ ಎಂದು ಪೊಲೀಸರು … Continued

ಮಾತು ನಂಬಿ ಆನ್‌ಲೈನ್‌ನಲ್ಲಿ ಹೂಡಿಕೆ ಮಾಡಿ 1.53 ಕೋಟಿ ರೂ. ಕಳೆದುಕೊಂಡ ದಂಪತಿ: ಪೊಲೀಸರ ಕಾರ್ಯದಿಂದ ಹೆಚ್ಚಿನ ಹಣ ವಸೂಲಿ ; ನಡೆದದ್ದು ಹೇಗೆ..?

ಬೆಂಗಳೂರು : ಬೆಂಗಳೂರಿನ ಟೆಕ್ ಉದ್ಯಮ ದಂಪತಿ ಆನ್‌ಲೈನ್ ಟ್ರೇಡಿಂಗ್ ಹಗರಣದಲ್ಲಿ ಕಳೆದುಕೊಂಡಿದ್ದ ಹಣದ ಹೆಚ್ಚಿನ ಭಾಗವನ್ನು ಯಶಸ್ವಿಯಾಗಿ ಮರುಪಡೆದುಕೊಂಡಿದ್ದಾರೆ. ಸ್ಥಳೀಯ ಪೊಲೀಸರ ತ್ವರಿತ ಕಾರ್ಯಾಚರಣೆಯಿಂದ ಇದು ಸಾಧ್ಯವಾಗಿದೆ. ಬೆಂಗಳೂರು ಪೂರ್ವ ವಿಭಾಗದ ಸೈಬರ್ ಕ್ರೈಂ ಪೊಲೀಸರ ಕ್ಷಿಪ್ರ ಕಾರ್ಯಾಚರಣೆಯಿಂದಾಗಿ ಬೆಂಗಳೂರಿನ ದಂಪತಿ ಆನ್‌ಲೈನ್ ಹೂಡಿಕೆ ಮಾಡಲು ವಂಚಕರಿಂದ ಕಳೆದುಕೊಂಡಿದ್ದ 1.53 ಕೋಟಿ ರೂ.ಗಳಲ್ಲಿ 1.4 … Continued

ಕ್ಷಮಿಸಿ..: ಕಳ್ಳತನ ಮಾಡಿದ್ದು ಖ್ಯಾತ ಸಾಹಿತಿ ಮನೆ ಎಂದು ಗೊತ್ತಾಗಿ ಕದ್ದ ವಸ್ತು ವಾಪಸ್‌ ತಂದಿಟ್ಟು ಪತ್ರ ಬರೆದು ಗೋಡೆಗೆ ಅಂಟಿಸಿ ಹೋದ ಕಳ್ಳ…!

ರಾಯಗಢ : ಅಸಾಮಾನ್ಯ ಘಟನೆಯೊಂದರಲ್ಲಿ ತಾನು ಕಳುವು ಮಾಡಿದ್ದು ಖ್ಯಾತ ಮರಾಠಿ ಬರಹಗಾರನ ಮನೆ ಎಂದು ಗೊತ್ತಾದ ನಂತರ ಕಳ್ಳನೊಬ್ಬ ತಾನು ಕದ್ದ ಎಲ್ಲ ವಸ್ತುಗಳನ್ನು ವಾಪಸ್ ತಂದಿಟ್ಟು, ತಾನು ಮಾಡಿದ ಕೃತ್ಯಕ್ಕೆ ಪಶ್ಚಾತ್ತಾಪಪಟ್ಟು ಗೋಡೆಗೆ ಪತ್ರವೊಂದನ್ನು ಅಂಟಿಸಿ ಹೋದ ಅಪರೂಪದ ಘಟನೆಯೊಂದು ರಾಯಗಡ ಜಿಲ್ಲೆಯ ನೇರಲ್ ಎಂಬಲ್ಲಿ ನಡೆದಿದೆ. ಈ ಕಳ್ಳ ಕಳುವು ಮಾಡಿದ … Continued

ಕುಡಿದ ಅಮಲಿನಲ್ಲಿ ಮದುವೆ ಮಂಟಪದಲ್ಲಿ ವಧುವಿನ ತಂದೆ-ತಾಯಿಗೆ ಕಪಾಳಮೋಕ್ಷ ಮಾಡಿದ ವರ..! ಪೊಲೀಸರನ್ನು ಕರೆಸಿದ ವಧು…!!

ವರನೊಬ್ಬ ಕುಡಿದ ಮತ್ತಿನಲ್ಲಿ ವಧುವಿನ ಪೋಷಕರಿಗೆ ಕಪಾಳಮೋಕ್ಷ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ತಕ್ಷಣವೇ ವಧು ಪೊಲೀಸರಿಗೆ ಕರೆ ಮಾಡಿ ವರನನ್ನು ಪೊಲೀಸ್​ ಠಾಣೆಗೆ ಕರೆದೊಯ್ದಿದ್ದಾಳೆ. ಉತ್ತರ ಪ್ರದೇಶದ ಬಂದಾ ಎಂಬಲ್ಲಿ ಈ ಘಟನೆ ನಡೆದಿದ್ದು, ಅಂಜಲಿ (18) ಎಂಬಾಕೆ ದಿಲೀಪ (25) ಎಂಬಾತನನ್ನು ವಿವಾಹವಾಗಬೇಕಿತ್ತು. ಸಂಪ್ರದಾಯದಂತೆ ಮದುವೆ ನಡೆಯುತ್ತಿದ್ದ ವೇಳೆ ವರ ದಿಲೀಪ … Continued