ಪಾಲಿಗ್ರಾಫ್ ಪರೀಕ್ಷೆಯಲ್ಲಿ ಶ್ರದ್ಧಾಳನ್ನು ಕೊಂದಿದ್ದು ಒಪ್ಪಿಕೊಂಡ ಅಫ್ತಾಬ್ ಪೂನಾವಾಲಾ, ಆದ್ರೆ ಯಾವುದೇ ಪಶ್ಚಾತ್ತಾಪವಿಲ್ಲ: ವರದಿ

ನವದೆಹಲಿ: ಶ್ರದ್ಧಾ ಹತ್ಯೆ ಪ್ರಕರಣದಲ್ಲಿ ಮಹತ್ವದ ತಿರುವು ಸಿಕ್ಕಿದ್ದು, ಪಾಲಿಗ್ರಾಫ್ ಪರೀಕ್ಷೆಯಲ್ಲಿ ಶ್ರದ್ಧಾ ವಾಕರಳನ್ನು ತಾನೇ ಕೊಂದಿರುವುದಾಗಿ ಆರೋಪಿ ಅಫ್ತಾಬ್ ಒಪ್ಪಿಕೊಂಡಿದ್ದಾನೆ. ಹತ್ಯೆಯ ನಂತರ ಶ್ರದ್ಧಾಳ ದೇಹದ ಭಾಗಗಳನ್ನು ಕಾಡಿನಲ್ಲಿ ಎಸೆದಿದ್ದನ್ನು ಅಫ್ತಾಬ್ ಒಪ್ಪಿಕೊಂಡಿದ್ದಾನೆ ಮತ್ತು ಆಕೆಯನ್ನು ಕೊಲ್ಲಲು ಬಹಳ ಹಿಂದೆಯೇ ಯೋಜಿಸಿದ್ದೆ ಎಂದು ಹೇಳಿದ್ದಾನೆ ಎಂದು ಮೂಲಗಳು ತಿಳಿಸಿವೆ. ಅಫ್ತಾಬ್ ಅನೇಕ ಹುಡುಗಿಯರೊಂದಿಗೆ  ಸಂಬಂಧ … Continued

ಹೊಸ ಕೋವಿಡ್ ಮುಂದಿನ ರೂಪಾಂತರವು ಒಮಿಕ್ರಾನ್‌ಗಿಂತ ಹೆಚ್ಚು ಅಪಾಯಕಾರಿಯಾಗಿರಬಹುದು-ಲ್ಯಾಬ್ ಅಧ್ಯಯನ: ವರದಿ

ನವದೆಹಲಿ : ಆರು ತಿಂಗಳ ಕಾಲ ರೋಗನಿರೋಧಕ ಶಕ್ತಿ ಹೊಂದಿರುವ ವ್ಯಕ್ತಿಯಿಂದ ಕೋವಿಡ್ -19 ಮಾದರಿಗಳನ್ನು ಬಳಸಿಕೊಂಡು ದಕ್ಷಿಣ ಆಫ್ರಿಕಾದ ಪ್ರಯೋಗಾಲಯದ ಅಧ್ಯಯನವು ವೈರಸ್ ಹೆಚ್ಚು ರೋಗಕಾರಕವಾಗಿ ವಿಕಸನಗೊಂಡಿತು ಎಂದು ತೋರಿಸಿದೆ, ಅಲ್ಲದೆ, ಹೊಸ ರೂಪಾಂತರವು ಪ್ರಸ್ತುತ ಪ್ರಧಾನ ಒಮಿಕ್ರಾನ್ ಸ್ಟ್ರೈನ್‌ಗಿಂತ ಹೆಚ್ಚಿನ ತೀವ್ರ ಅನಾರೋಗ್ಯ ಉಂಟುಮಾಡಬಹುದು ಎಂದು ಅಧ್ಯಯನ ಹೇಳಿದೆ. ಕಳೆದ ವರ್ಷ ಲಸಿಕೆಗಳ … Continued

ಹಿಜಾಬ್ ಧರಿಸದ ಮಹಿಳೆಗೆ ಬ್ಯಾಂಕ್‌ ಸೇವೆ ನೀಡಿದ್ದಕ್ಕೆ ಬ್ಯಾಂಕ್ ವ್ಯವಸ್ಥಾಪಕರನ್ನು ಹುದ್ದೆಯಿಂದ ವಜಾಗೊಳಿಸಿದ ಇರಾನ್ ಆಡಳಿತ : ವರದಿ

ಟೆಹ್ರಾನ್‌ : ಹಿಜಾಬ್‌ ಧರಿಸದ ಮಹಿಳೆಗೆ ಬ್ಯಾಂಕ್‌ ಸರ್ವೀಸ್‌ ನೀಡಿದ ಕಾರಣಕ್ಕೆ ಇರಾನ್ ಬ್ಯಾಂಕ್ ಮ್ಯಾನೇಜರ್ ಒಬ್ಬರನ್ನು ವಜಾ ಮಾಡಲಾಗಿದೆ ಎಂದು ಸುದ್ದಿ ಸಂಸ್ಥೆ ಏಜೆನ್ಸ್ ಫ್ರಾನ್ಸ್-ಪ್ರೆಸ್ (ಎಎಫ್‌ಪಿ) ಸ್ಥಳೀಯ ಮಾಧ್ಯಮ ವರದಿಗಳನ್ನು ಉಲ್ಲೇಖಿಸಿ ವರದಿ ಮಾಡಿದೆ. 8 ಕೋಟಿಗೂ ಹೆಚ್ಚು ಜನರಿರುವ ಇರಾನ್‌ ದೇಶದಲ್ಲಿ ನೈತಿಕತೆಯ ಪೊಲೀಸರು ಜಾರಿಗೊಳಿಸಿದ ಕಾನೂನಿನ ಪ್ರಕಾರ ಮಹಿಳೆಯರು ತಮ್ಮ … Continued

₹7,000 ಕೋಟಿಗೆ ಬಿಸ್ಲೇರಿ ಕಂಪನಿ ಖರೀದಿಸಲಿರುವ ಟಾಟಾ: ವರದಿ

ನವದೆಹಲಿ: ಇತ್ತೀಚಿನ ಮಾಧ್ಯಮ ವರದಿಗಳ ಪ್ರಕಾರ ಟಾಟಾ ಕನ್ಸ್ಯೂಮರ್ ಪ್ರಾಡಕ್ಟ್ಸ್ ₹7000 ಕೋಟಿಗೆ ಬಿಸ್ಲೆರಿ ಇಂಟರ್‌ನ್ಯಾಶನಲ್ ಅನ್ನು ಖರೀದಿಸಲಿದೆ. ಪ್ಯಾಕೇಜ್ಡ್ ವಾಟರ್ ಮೇಕರ್‌ನ ಅಧ್ಯಕ್ಷ ರಮೇಶ್ ಚೌಹಾಣ್ ಉಲ್ಲೇಖಿಸಿ ಎಕನಾಮಿಕ್ ಟೈಮ್ಸ್ ಪತ್ರಿಕೆ ಗುರುವಾರ ವರದಿ ಮಾಡಿದ್ದು, ಬಿಸ್ಲೆರಿ ಇಂಟರ್‌ನ್ಯಾಶನಲ್ ಇನ್ನು ಮುಂದೆ ತನ್ನದೇ ಆದ ಅಸ್ತಿತ್ವವಾಗಿ ಇರುವುದಿಲ್ಲ. ಪ್ರಮುಖ ವಿತರಣಾ ಕ್ರಮದಲ್ಲಿ, ರಮೇಶ್ ಚೌಹಾಣ್ … Continued

ಖ್ಯಾತ ರಾಪರ್‌ ಕಾನ್ಯೆ ವೆಸ್ಟ್ ಸಿಬ್ಬಂದಿ ಹತೋಟಿಯಲ್ಲಿಡಲು ಅಶ್ಲೀಲ ಚಿತ್ರ ತೋರಿಸ್ತಿದ್ರಂತೆ : ವರದಿ

ರಾಪರ್‌ ಕಾನ್ಯೆ ವೆಸ್ಟ್ ಎಲ್ಲಾ ತಪ್ಪು ಕಾರಣಗಳಿಗಾಗಿ ಕಳೆದ ಕೆಲವು ತಿಂಗಳುಗಳಿಂದ ಹೆಡ್‌ಲೈನ್‌ ಮಾಡುತ್ತಿದ್ದಾರೆ. ಈಗ, ರಾಪರ್ ತಮ್ಮ ಸಿಬ್ಬಂದಿ ಮೇಲೆ ಹತೋಟಿ ಸಾಧಿಸಲು ತಮ್ಮ ಮಾಜಿ ಪತ್ನಿ ಕಿಮ್ ಕಾರ್ಡಶಿಯಾನ್ ಅವರ ಅಶ್ಲೀಲ ಚಿತ್ರಗಳನ್ನು ತೋರಿಸಿದ್ದಾರೆ ಎಂದು ಹೇಳಿದ್ದರಿಂದ ಅವರು ಮತ್ತೆ ಸುದ್ದಿಯಲ್ಲಿದ್ದಾರೆ ಎಂದು ಯೀಜಿ ಮತ್ತು ಅಡಿಡಾಸ್‌ನ ಮಾಜಿ ಉದ್ಯೋಗಿಗಳು ಆರೋಪಿಸಿದ್ದಾರೆ ಎಂದು … Continued

ಸೌದಿ ಅರೇಬಿಯಾದಲ್ಲಿ ಕತ್ತಿಯಿಂದ ಶಿಕ್ಷೆಗೊಳಗಾದವರ ಶಿರಚ್ಛೇದ, 10 ದಿನಗಳಲ್ಲಿ 12 ಜನರಿಗೆ ಮರಣದಂಡನೆ: ವರದಿ

ಕಳೆದ 10 ದಿನಗಳಲ್ಲಿ ಮಾದಕವಸ್ತು ಸಂಬಂಧಿತ ಅಪರಾಧಗಳಿಗಾಗಿ ಸೌದಿ ಅರೇಬಿಯಾ 12 ಜನರನ್ನು ಗಲ್ಲಿಗೇರಿಸಿದೆ ಎಂದು ವರದಿಯಾಗಿದೆ. ಇವರಲ್ಲಿ ಕೆಲವರ ತಲೆಯನ್ನು ಖಡ್ಗದಿಂದ ತುಂಡರಿಸಲಾಗಿದೆ ಎಂದು ವರದಿಯೊಂದು ತಿಳಿಸಿದೆ. ಮಾದಕವಸ್ತು ಸಂಬಂಧಿತ ಆರೋಪದ ಮೇಲೆ ಜೈಲಿನಲ್ಲಿದ್ದ 12 ಜನರಿಗೆ ಮರಣದಂಡನೆ ವಿಧಿಸಲಾಯಿತು ಮತ್ತು ಇವರಲ್ಲಿ ಮೂವರು ಪಾಕಿಸ್ತಾನಿಗಳು, ನಾಲ್ವರು ಸಿರಿಯನ್ನರು, ಇಬ್ಬರು ಜೋರ್ಡಾನಿಯನ್ನರು ಮತ್ತು ಮೂವರು … Continued

10,000 ಉದ್ಯೋಗಿಗಳನ್ನು ವಜಾಗೊಳಿಸಲು ಯೋಜಿಸಿದ ಅಮೆಜಾನ್ : ವರದಿ

ಕಳೆದ ಕೆಲವು ತ್ರೈಮಾಸಿಕಗಳು ಲಾಭದಾಯಕವಾಗಿಲ್ಲದ ಕಾರಣ ಅಮೆಜಾನ್ ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸಲು ಮತ್ತು ವೆಚ್ಚ ಕಡಿತ ಕ್ರಮಗಳನ್ನು ಜಾರಿಗೆ ತರಲು ಯೋಜಿಸುತ್ತಿದೆ ಎಂದು ವರದಿಗಳು ತಿಳಿಸಿವೆ. ಈ ವಾರದಿಂದಲೇ ಕಂಪನಿಯು 10,000 ಉದ್ಯೋಗಿಗಳನ್ನು ವಜಾ ಮಾಡಬಹುದು ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ವಜಾಗೊಳಿಸುವಿಕೆಗಳ ಒಟ್ಟು ಸಂಖ್ಯೆಯು ಸುಮಾರು 10,000 ಆಗಿದ್ದರೆ, ಇದು ಅಮೆಜಾನ್ ಇತಿಹಾಸದಲ್ಲಿ … Continued

ಟಿ20 ವಿಶ್ವಕಪ್ ಸೆಮಿಫೈನಲ್‌ಗೆ ಮುಂಚೆ ಅಭ್ಯಾಸದ ವೇಳೆ ಮುಂದೋಳಿಗೆ ಪೆಟ್ಟು ಮಾಡಿಕೊಂಡ ರೋಹಿತ್‌ ಶರ್ಮಾ : ವರದಿ

ಮಂಗಳವಾರದ ತರಬೇತಿ ಅವಧಿಯಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರ ಮುಂದೋಳಿನ ಮೇಲೆ ಪ್ರಬಲವಾದ ಏಟು ತಿಂದಿದ್ದಾರೆ. ಇದು ಇಂಗ್ಲೆಂಡ್ ವಿರುದ್ಧದ T20 ವಿಶ್ವಕಪ್ ಸೆಮಿಫೈನಲ್‌ಗೆ ಮುಂಚಿತವಾಗಿ ತಂಡಕ್ಕೆ ಗಾಯದ ಸಮಸ್ಯೆ ಭೀತಿಗೆ ಕಾರಣವಾಯಿತು. ಅಡಿಲೇಡ್ ಓವಲ್‌ನಲ್ಲಿ ತಂಡದ ಥ್ರೋಡೌನ್ ಪರಿಣಿತ ಎಸ್ ರಘು ಅವರನ್ನು ಎದುರಿಸುತ್ತಿರುವಾಗ ಒಂದು ಶಾರ್ಟ್ ಬಾಲ್ ಲೆಂಗ್ತ್ ಏರಿಯಾದಿಂದ … Continued

ಲೈಂಗಿಕ ದೌರ್ಜನ್ಯದ ಆರೋಪ: ಸಿಡ್ನಿಯಲ್ಲಿ ಶ್ರೀಲಂಕಾ ಕ್ರಿಕೆಟಿಗ ದನುಷ್ಕಾ ಗುಣತಿಲಕ ಬಂಧನ-ವರದಿ

ಕ್ಯಾನ್‌ಬೆರಾ: ಲೈಂಗಿಕ ದೌರ್ಜನ್ಯದ ಆರೋಪದ ಮೇಲೆ ಶ್ರೀಲಂಕಾದ ಬ್ಯಾಟ್ಸ್‌ಮನ್ ದನುಷ್ಕಾ ಗುಣತಿಲಕ ಅವರನ್ನು ಭಾನುವಾರ ಸಿಡ್ನಿಯಲ್ಲಿ ಬಂಧಿಸಲಾಯಿತು ಎಂದು ಮೂಲಗಳು ಭಾನುವಾರ ತಿಳಿಸಿದೆ. ನವೆಂಬರ್ 2 ರಂದು ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪದ ತನಿಖೆಯ ಬಳಿಕ ಗುಣತಿಲಕ (31) ಅವರನ್ನು ಇಂದು ಮುಂಜಾನೆ ಬಂಧಿಸಿ, ಸಿಡ್ನಿ (Sydney) ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ ಎಂದು … Continued

ರಷ್ಯಾದ ಕೆಫೆಯಲ್ಲಿ ಅಗ್ನಿ ಅವಘಡ; 15 ಜನರು ಸಾವು

ಮಾಸ್ಕೋ: ರಷ್ಯಾದ (Russia) ಕೋಸ್ಟ್ರೋಮಾದ ಬಾರ್ ಮತ್ತು ಕೆಫೆಯೊಂದರಲ್ಲಿ ಶುಕ್ರವಾರ ತಡರಾತ್ರಿ ಸಂಭವಿಸಿದ ಅಗ್ನಿ ಅವಘಡದಲ್ಲಿ 15 ಮಂದಿ ಮೃತಪಟ್ಟಿದ್ದಾರೆ ಹಾಗೂ ಸುಮಾರು 250 ಮಂದಿಯನ್ನು ರಕ್ಷಿಸಲಾಗಿದೆ ಎಂದು ಅಲ್ಲಿನ ‘ಟಿಎಎಸ್​ಎಸ್’ ಸುದ್ದಿಸಂಸ್ಥೆ ವರದಿ ಮಾಡಿದೆ. ಮದ್ಯಪಾನ ಮಾಡಿದ ವ್ಯಕ್ತಿಯೊಬ್ಬ ಡ್ಯಾನ್ಸ್ ಫ್ಲೋರ್‌ನಲ್ಲಿ ‘ಫ್ಲೇರ್​ ಗನ್​’ನಿಂದ ಗುಂಡು ಹಾರಿಸಿದ ನಂತರ ಬೆಂಕಿ ಹೊತ್ತಿಕೊಂಡಿತ್ತು ಎಂದು ವರದಿ … Continued