ಭಾರತದ ಎಲ್ಲ ರಾಜ್ಯಗಳು, ಅನೇಕ ದೇಶಗಳನ್ನು ಹೆಸರನ್ನು ಭೂಪಟ-ಧ್ವಜ ನೋಡಿಯೇ ಹೇಳುವ 18 ತಿಂಗಳ ಪುಟ್ಟಪೋರ ಅನಿಕೇತ ಭಟ್‌…!

ಕಾರವಾರ: ಈತನ ವಯಸ್ಸು ಕೇವಲ 18 ತಿಂಗಳು ಅಂದರೆ ಒಂದೂವರೆ ವರ್ಷ ಮಾತ್ರ, ಇನ್ನೂ ಸರಿಯಾಗಿ ಹಲ್ಲು ಬಂದಿಲ್ಲವೇನೋ. ಆದರೆ ಈ ಪುಟ್ಟ ಹುಡುಗನಿಗೆ ಇರುವ ಜ್ಞಾನ ಮಾತ್ರ ಆತನ ವಯಸ್ಸಿಗೆ ಮೀರಿದ್ದು. ಈತ ತನ್ನ ಬುದ್ಧಿಶಕ್ತಿ ಕಾರಣಕ್ಕೇ ಈಗ ಎಲ್ಲರ ಗಮನ ಸೆಳೆಯುತ್ತಿದ್ದಾನೆ. ಒಂದೂವರೆ ವರ್ಷದ ಅನಿಕೇತನಿಗೆ ಭಾರತದ ಭೂಪಟ ತೋರಿಸಿದರೆ ದೇಶದ ಎಲ್ಲ … Continued

ಸಿದ್ದಾಪುರ: ಆಗಸ್ಟ್‌ 6ರಂದು ʼಮಾಸದ ನೆನಪುಗಳುʼ ಕೃತಿ ಬಿಡುಗಡೆ

ಸಿದ್ದಾಪುರ: ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಸಹಯೋಗದಲ್ಲಿ ಪತ್ರಕರ್ತ ಗಂಗಾಧರ ಕೊಳಗಿ ಅವರ ಮಾಸದ ನೆನಪುಗಳು ಕೃತಿ ಬಿಡುಗಡೆ ಸಮಾರಂಭ ಆಗಸ್ಟ್‌ 6 ರಂದು, ಶನಿವಾರ ಮಧ್ಯಾಹ್ನ 3 ಗಂಟೆಯಿಂದ ಸಿದ್ದಾಪುರದ ಲಯನ್ಸ್‌ ಬಾಲಭವನದಲ್ಲಿ ನಡೆಯಲಿದೆ. ಸಾಹಿತಿಗಳು ಹಾಗೂ ವಿಮರ್ಷಕರಾದ ಬೆಳಗಾವಿ ಡಾ.ಮೈತ್ರೇಯಿಣಿ ಗದಿಗೆಪ್ಪ ಗೌಡ ಅವರು ಕೃತಿಗಳನ್ನು ಬಿಡುಗಡೆ ಮಾಡಲಿದ್ದಾರೆ. ಉತ್ತರ … Continued

ಸಿದ್ದಾಪುರ: ಕೆರೆ ಬೇಟೆ ವೇಳೆ ಸಿಗದ ಮೀನು-ಆಯೋಜಕರು, ಪೊಲೀಸರ ಮೇಲೆ ಕಲ್ಲು ತೂರಾಟ

ಸಿದ್ದಾಪುರ: ಕೆರೆ ಬೇಟೆ (ಮೀನು ಬೇಟೆ )ಯಲ್ಲಿ ಮೀನು ಸಿಗಲಿಲ್ಲ ಎಂದು ಆಕ್ರೋಶಗೊಂಡ ಜನರು ಪೊಲೀಸರು ಹಾಗೂ ಆಯೋಜಕರ ಮೇಲೆ ಕಲ್ಲು ತೂರಾಟ ನಡೆಸಿರುವ ಘಟನೆ ುತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ಕಾನಗೋಡಿನ ದೊಡ್ಡ ಕೆರೆಯಲ್ಲಿ ಭಾನುವಾರ (ಮೇ 29) ನಡೆದಿದೆ. ಕಾನಗೋಡಿನ ದೊಡ್ಡ ಕೆರೆಯಲ್ಲಿ ಈಶ್ವರ ದೇವಸ್ಥಾನದ ಸಹಾಯರ್ಥ ಕೆರೆ ಮೀನು ಬೇಟೆ … Continued

ಸಿದ್ದಾಪುರ: ಕ್ಷುಲ್ಲಕ ಕಾರಣಕ್ಕೆ ಹೆಂಡತಿಗೆ ಕತ್ತಿಯಿಂದ ಹೊಡೆದುಕೊಂದ ಗಂಡ

ಸಿದ್ದಾಪುರ: ಕ್ಷುಲ್ಲಕ ಕಾರಣಕ್ಕೆ ಜಗಳವಾಗಿ ಹೆಂಡತಿ ಮೇಲೆ ಗಂಡ ಕತ್ತಿಯಿಂದ ಮಾರಣಾಂತಿಕ ಹಲ್ಲೆ ನಡೆಸಿದ ಪರಿಣಾಮ ಹೆಂಡತಿ ಸಾವಿಗೀಡಾದ ಘಟನೆ ಘಟನೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಹೆಗ್ಗೋಡ್‌ಮನೆಯಲ್ಲಿ ಶುಕ್ರವಾರ (ಮೇ 20) ನಡೆದ ಬಗ್ಗೆ ವರದಿಯಾಗಿದೆ. ಮೃತ ಮಹಿಳೆಯನ್ನು ನಾಗರತ್ನ ಮಂಜುನಾಥ ಚನ್ನಯ್ಯ (38) ಎಂದು ಗುರುತಿಸಲಾಗಿದೆ. ಮಂಜುನಾಥ ಕೇರಿಯ ಚೆನ್ನಯ್ಯ ಎನ್ನುವವರ … Continued

ಸಿದ್ದಾಪುರ: ವಾಹನ ಬಡಿದು ಜಿಂಕೆ ಸಾವು

ಸಿದ್ದಾಪುರ: ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಸಿದ್ದಾಪುರ -ಶಿರಸಿ ರಸ್ತೆಯ ಹಲಗಡಿಕೊಪ್ಪದ ಹತ್ತಿರ ಮಂಗಳವಾರ ಯಾವುದೋ ವಾಹನ ಬಡಿದು ಜಿಂಕೆಯೊಂದು ಮೃತಪಟ್ಟಿದೆ. ಜಿಂಕೆ ಬಿದ್ದಿದ್ದನ್ನು ನೋಡಿ ಸ್ಥಳೀಯರು ತಕ್ಷಣವೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ನಂತರ ಅವರು ಸಿಬ್ಬಂದಿ ಸ್ಥಳಕ್ಕಾಗಮಿಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ಜಿಂಕೆ ಸತ್ತಿತ್ತು. ನಂತರ ಉಪಅರಣ್ಯ ಸಂರಕ್ಷಣಾಧಿಕಾರಿ ಎಸ್.ಜಿ.ಹೆಗಡೆ, ಸಹಾಯಕ ಅರಣ್ಯ … Continued

ಸಿದ್ದಾಪುರ: ಹೆಬ್ಬಾವಿನ ಮರಿ ನುಂಗಲು ಯತ್ನಿಸಿದ ಕಾಳಿಂಗ ಸರ್ಪ….ವೀಕ್ಷಿಸಿ

ಸಿದ್ದಾಪುರ: ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪೂರ ತಾಲೂಕಿನ ಹೆಗ್ಗರಣಿ ಸಮೀಪದ ಹಳೇಹಳ್ಳದ ಬಳಿ ಕಾಳಿಂಗ ಸರ್ಪವೊಂದು ಮರಿ ಹಬ್ಬಾವನ್ನು ನುಂಗಲು ಪ್ರಯತ್ನಿಸುತ್ತಿದ್ದ ವೀಡಿಯೋ ವೈರಲ್ ಆಗಿದೆ. ನಾರಾಯಣ ಹೆಗಡೆ ಎಂಬವರ ದನದ ಕೊಟ್ಟಿಗೆ ಸಮೀಪದ ಗೊಬ್ಬರ ಗುಂಡಿ ಬಳಿ ಬಂದಿದ್ದ ಕಾಳಿಂಗ ಸರ್ಪ ಹೆಬ್ಬಾವಿನ ಮರಿಯನ್ನು ನುಂಗಲು ಪ್ರಯತ್ನಿಸಿದೆ ಎಂದು ವರದಿಯಾಗಿದೆ. ಕೆಲಸ ಮಾಡುತ್ತಿದ್ದಾಗ ಮನೆಯ … Continued

ಸಿದ್ದಾಪುರ: ಗಾಳಿ ರಭಸಕ್ಕೆ ಉರುಳಿದ ತೆಂಗಿನ ಮರ-ನಾಲ್ವರಿಗೆ ಗಾಯ

ಸಿದ್ದಾಪುರ: ಭಾರಿ ಗಾಳಿಯಿಂದಾಗಿ ಮನೆ ಮೇಲೆ ತೆಂಗಿನ ಮರ ಬಿದ್ದು ನಾಲ್ವರು ಗಾಯಗೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಕಡಕೇರಿಯಲ್ಲಿ ಶುಕ್ರವಾರ ಸಂಜೆ ನಡೆದ ಬಗ್ಗೆ ವರದಿಯಾಗಿದೆ. ಮನೆಯ ಪಕ್ಕದಲ್ಲಿ ಅಡಿಕೆ ಸಸಿ ಬೆಳೆಸಲು ಪ್ಲಾಸ್ಟಿಕ್‌ ಕವರಿನಲ್ಲಿ ಮಣ್ಣು ತುಂಬುತ್ತಿರುವ ಸಮಯದಲ್ಲಿ ಜೋರಾಗಿ ಗಾಳಿ ಬೀಸಿದ್ದರಿಂದ ತೆಂಗಿನ ಮರ ಬಿದ್ದಿದೆ. ಮರ ಬಿದ್ದ … Continued

ಭಾನ್ಕುಳಿ ಗೋಸ್ವರ್ಗ ಆವಾರದಲ್ಲಿ ಹಸಿರು ಸ್ವರ್ಗಕ್ಕೆ ಚಾಲನೆ 

ಸಿದ್ದಾಪುರ: ತಾಲೂಕಿನ ಭಾನ್ಕುಳಿಯಲ್ಲಿ ದೇಶೀ ಗೋವುಗಳ ಸಂರಕ್ಷಣೆಗಾಗಿ ಗೋಸ್ವರ್ಗದ ಆವಾರದಲ್ಲಿ ವೃಕ್ಷ ಸಂವರ್ಧನೆಯ ಪವಿತ್ರ ಕಾರ್ಯಕ್ಕೆ ಮುಂದಾಗಿ ಹಸಿರು ಸ್ವರ್ಗ ನಿರ್ಮಾಣಕ್ಕೆ ತೊಡಗಿಕೊಂಡಿರುವುದು ಸ್ವಾಗತಾರ್ಹ ಎಂದು ಕರ್ನಾಟಕ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಹೇಳಿದರು. ಅವರು ಗುರುವಾರ ಭಾನ್ಕುಳಿ ಶ್ರೀರಾಮದೇವಮಠ ಆವಾರದ ಗೋಸ್ವರ್ಗ ಪ್ರದೇಶದಲ್ಲಿ ಶ್ರೀರಾಮಚಂದ್ರಾಪುರ ಮಠದ ಕಾಮದುಘಾ ಟ್ರಸ್ಟ(ರಿ) ಮತ್ತು ದಿನೇಶ … Continued

ಸಿದ್ದಾಪುರ: ಮಂಗನಕಾಯಿಲೆ ಮೊದಲ ಪ್ರಕರಣ ದೃಢ

ಸಿದ್ದಾಪುರ: ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನಲ್ಲಿ ಮಂಗನ ಕಾಯಿಲೆಗೆ ಸಂಬಂಧಿಸಿದಂತೆ ಮೊದಲ ಪ್ರಕರಣ ಕಂಡುಬಂದಿದೆ.ಈ ಸಂಬಂಧ ತಹಶೀಲ್ದಾರರು  ಈ ಕುರಿತಂತೆ ಗ್ರಾಪಂ ಪಿ.ಡಿ.ಓಗಳ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳ ಸಭೆ ಕರೆದಿದ್ದರು.  ಎಲ್ಲ ಇಲಾಖೆಗಳ, ಸಾರ್ವಜನಿಕರ ಸಹಕಾರದಿಂದ ಈ ಕಾಯಿಲೆ ಉಲ್ಬಣವಾಗದಂತೆ ತಡೆಯುವದು ಮುಖ್ಯವಾಗಿದೆ ಎಂದು ತಹಶೀಲ್ದಾರ ಪ್ರಸಾದ ಎಸ್.ಎ. ಹೇಳಿದರು. ಅವರು ತಾಪಂ ಸಭಾಭವನದಲ್ಲಿ … Continued

ಧಾರ್ಮಿಕ ಬೆಳವಣಿಗೆಯಿಂದ ಸಾಮಾಜಿಕ ಬೆಳವಣಿಗೆ ಸಾಧ್ಯ

ಸಿದ್ದಾಪುರ: ಧಾರ್ಮಿಕ ಬೆಳವಣಿಗೆಯಿಂದ ಸಾಮಾಜಿಕ ಬೆಳವಣಿಗೆ ಸಾಧ್ಯ ಎಂದು ಚಿತ್ರದುರ್ಗದ ಮುರುಘಾಮಠದ ಶ್ರೀ ಶಿವಮೂರ್ತಿ ಮುರುಘರಾಜೇಂದ್ರ ಶರಣರು ಹೇಳಿದರು. ಅವರು ಪಟ್ಟಣದ ಸೊರಬ ರಸ್ತೆಯಲ್ಲಿನ ಶ್ರೀ ಮುರುಘಾಮಠದ ಆವರಣದಲ್ಲಿ ನೂತನವಾಗಿ ನಿರ್ಮಿಸಲಾಗುವ ಅನುಭವ ಮಂಟಪ, ಸಮುದಾಯ ಭವನ ಮತ್ತು ಶ್ರೀಮಠದ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ಆಧುನಿಕ ಜೀವನದಲ್ಲಿ ಭೌತಿಕ, ವೈಜ್ಞಾನಿಕ, ತಾಂತ್ರಿಕ ಬೆಳವಣಿಗೆಗಳು ಅತಿ ವೇಗವಾಗಿ … Continued