ನದಿಗೆ ಬಿದ್ದ ಕುದುರೆ ರಕ್ಷಿಸಲು ಹೋಗಿ ಕುದುರೆ ಸಹಿತ ನೀರು ಪಾಲಾದ ಇಬ್ಬರು ಯುವಕರು

ಹೈದರಾಬಾದ್: ಹೃದಯ ವಿದ್ರಾವಕ ಘಟನೆಯೊಂದರಲ್ಲಿ, ಕಿಸ್ಮತ್‌ಪುರದಲ್ಲಿನ ತೆಲಂಗಾಣ ಹಾರ್ಸ್ ರೈಡಿಂಗ್ ಅಕಾಡೆಮಿಯಲ್ಲಿ ಕೆಲಸ ಮಾಡುತ್ತಿದ್ದ ರಾಜಸ್ಥಾನದ 19 ವರ್ಷದ ಕುದುರೆ ತರಬೇತುದಾರ ಅಶು ಸಿಂಗ್ ಮತ್ತು ಅವರ ಸಹೋದ್ಯೋಗಿ ಮೊಹಮ್ಮದ್ ಸೈಫ್ (20) ಅಕಾಡೆಮಿ ಕುದುರೆಯನ್ನು ರಕ್ಷಿಸಲು ಪ್ರಯತ್ನಿಸುವ ವೇಳೆಗ ನೀರು ಪಾಲಾಗಿದ್ದಾರೆ. ಬುಧವಾರ ತಡರಾತ್ರಿ ಹರ್ಕ್ಯುಲಸ್ ಎಂಬ ಕುದುರೆ ಈಸಾ ನದಿಗೆ ಕುದುರೆ ಜಾರಿ … Continued

ಮೊಬೈಲ್‌ ಹಿಡಿದು ಪರೀಕ್ಷೆ ಹಾಲ್‌ ಪ್ರವೇಶಿಸಿದ ಪೊಲೀಸ್‌ ಆಯುಕ್ತರನ್ನೇ ತಡೆದ ಮಹಿಳಾ ಕಾನ್ಸ್‌ಟೇಬಲ್‌ : ಕರ್ತೃತ್ವ ಶಕ್ತಿಗೆ ಸಿಕ್ತು ಬಹುಮಾನ

ಹೈದರಾಬಾದ್: ಪರೀಕ್ಷಾ ಕೇಂದ್ರಕ್ಕೆ ಮೊಬೈಲ್ ಫೋನ್ ಹಿಡಿದು ಬರದಂತೆ ತಡೆದ ಮಹಿಳಾ ಪೇದೆಯೊಬ್ಬರಿಗೆ ರಾಚಕೊಂಡ ಪೊಲೀಸ್ ಆಯುಕ್ತ ಡಿಎಸ್ ಚೌಹಾಣ್ ಬಹುಮಾನ ನೀಡಿದ್ದಾರೆ. ಗುರುವಾರ ನಗರದ ಎಲ್‌ಬಿ ನಗರದಲ್ಲಿರುವ ಎಸ್‌ಎಸ್‌ಸಿ ಪರೀಕ್ಷಾ ಕೇಂದ್ರವನ್ನು ಪರಿಶೀಲಿಸಲು ಪೊಲೀಸ್ ಆಯುಕ್ತರು ಅಲ್ಲಿಗೆ ತೆರಳಿದ್ದರು. ಎಲ್ ಬಿ ನಗರ ಪೊಲೀಸ್ ಠಾಣೆಯಲ್ಲಿ ಮಹಿಳಾ ಪೇದೆ ಕಲ್ಪನಾ ಎಂಬವರನ್ನು ಪರೀಕ್ಷಾ ಕೇಂದ್ರದ … Continued

ಅಸ್ವಸ್ಥಗೊಂಡ ವಧುವನ್ನು ನಿಶ್ಚಯಿಸಿದ ದಿನವೇ ಆಸ್ಪತ್ರೆಯ ವಾರ್ಡ್‌ನಲ್ಲಿ ಸಂಪ್ರದಾಯದಂತೆ ವಿವಾಹವಾದ ವರ | ವೀಕ್ಷಿಸಿ

ಹೈದರಾಬಾದ್: ಕೇವಲ ಚಲನಚಿತ್ರದಲ್ಲಿ ಮಾತ್ರ ಕಾಣಬಹುದಾದ ವಿವಾಹವೊಂದು ನಡೆದಿದೆ. ಗುರುವಾರ ಬೆಳಿಗ್ಗೆ ವ್ಯಕ್ತಿಯೊಬ್ಬ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಧುವನ್ನು ಆಸ್ಪತ್ರೆಯಲ್ಲೇ ವಿವಾಹವಾಗಿದ್ದಾನೆ…! ಚೆನ್ನೂರು ಮಂಡಲದ ಲಂಬಾಡಿಪಲ್ಲಿ ಗ್ರಾಮದ ಶೈಲಜಾ ಎಂಬವರ ವಿವಾಹವು ಗುರುವಾರ ಬೆಳಗ್ಗೆ ಜಯಶಂಕರ ಭೂಪಾಲಪಲ್ಲಿ ಜಿಲ್ಲೆಯ ತಿರುಪತಿ ಎಂಬವರ ಜೊತೆ ನಿಗದಿಯಾಗಿತ್ತು. ಆದರೆ ಹಠಾತ್ ಶೈಲಜಾ ಅಸ್ವಸ್ಥಗೊಂಡಿದ್ದರಿಂದ ಚಿಕಿತ್ಸೆಗಾಗಿ ಆಸ್ಪತ್ರೆಗೆ ಅವರನ್ನು ಆಸ್ಪತ್ರೆಗೆ … Continued

ಮನೆಗೆ ಬೆಂಕಿ ತಗುಲಿ 6 ಮಂದಿ ಸಜೀವ ದಹನ

ಹೈದರಾಬಾದ್‌: ತೆಲಂಗಾಣದ ಮಂಚಾರ್ಯಾಲಾ ಜಿಲ್ಲೆಯಲ್ಲಿ ಶನಿವಾರ ಮನೆಯೊಂದರಲ್ಲಿ ಬೆಂಕಿ ಅವಘಡದಲ್ಲಿ ಒಂದೇ ಕುಟುಂಬದ ಆರು ಸದಸ್ಯರು ದಹನಗೊಂಡಿದ್ದಾರೆ. ಅಪಘಾತದಲ್ಲಿ ಮನೆ ಮಾಲೀಕ ಶಿವಯ್ಯ (50), ಪತ್ನಿ ಪದ್ಮಾ (45), ಪದ್ಮಾ ಅವರ ಅಕ್ಕನ ಮಗಳು ಮೌನಿಕಾ (23) ಮತ್ತು ಅವರ ಇಬ್ಬರು ಪುತ್ರಿಯರು ಸಾವಿಗೀಡಾಗಿದ್ದಾರೆ.ಮಂದಮರಿ ಸರ್ಕಲ್ ಇನ್ಸ್‌ಪೆಕ್ಟರ್ ಆಫ್ ಪೊಲೀಸ್ ಪ್ರಮೋದ್ ಕುಮಾರ್ ಮಾತನಾಡಿ, ತೆಲಂಗಾಣದ … Continued

ತೆಲಂಗಾಣದಲ್ಲಿ ಸರ್ಕಾರಿ ವೈದ್ಯರಾಗುವ ಮೂಲಕ ಇತಿಹಾಸ ಬರೆದ ಇಬ್ಬರು ತೃತೀಯ ಲಿಂಗಿಗಳು..!

ಹೈದರಾಬಾದ್‌: ತೆಲಂಗಾಣದಲ್ಲಿ ಇಬ್ಬರು ತೃತೀಯ ಲಿಂಗಿಗಳು ವೈದ್ಯರಾಗುವ ಮೂಲಕ ಇತಿಹಾಸ ಬರೆದಿದ್ದಾರೆ. ರುತ್ ಜಾನ್ ಪಾಲ್ ಮತ್ತು ಪ್ರಾಚಿ ರಾಥೋಡ್ ಅವರು ಸರ್ಕಾರಿ ಉಸ್ಮಾನಿಯಾ ಜನರಲ್ ಆಸ್ಪತ್ರೆಯಲ್ಲಿ (OGH) ವೈದ್ಯಕೀಯ ಅಧಿಕಾರಿಗಳಾಗಿ ಸೇರ್ಪಡೆಯಾಗಿದ್ದಾರೆ. ಲಿಂಗದ ಕಾರಣದಿಂದ ನಗರದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಕೆಲಸದಿಂದ ವಜಾಗೊಂಡಿರುವ ರಾಥೋಡ್ ಅವರು, ಸಾಮಾಜಿಕ ಕಳಂಕ ಮತ್ತು ಪೂರ್ವಾಗ್ರಹದ ಸವಾಲುಗಳನ್ನು ಎದುರಿಸಿ … Continued

ಅಂಡರ್‌ಪಾಸ್‌ನಲ್ಲಿ ಅರ್ಧ ಮುಳುಗಿದ ಶಾಲಾ ಬಸ್ : 30 ವಿದ್ಯಾರ್ಥಿಗಳ ರಕ್ಷಣೆ | ವೀಕ್ಷಿಸಿ

ತೆಲಂಗಾಣದಲ್ಲಿ ಭಾರೀ ಮಳೆಯಿಂದಾಗಿ, ಸುಮಾರು 30 ವಿದ್ಯಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಶಾಲಾ ಬಸ್, ಮೆಹಬೂಬ್‌ನಗರದ ಜಲಾವೃತ ರಸ್ತೆಯಲ್ಲಿ ಭಾಗಶಃ ಮುಳುಗಿ ಸಿಲುಕಿಕೊಂಡ ಘಟನೆ ವರದಿಯಾಗಿದೆ. ತೆಲಂಗಾಣದ ಮಹಬೂಬ್‌ನಗರದಲ್ಲಿ, ಮುಂಗಾರು ಮಳೆಯಿಂದಾಗಿ ರಸ್ತೆಯಲ್ಲಿ ಸಂಪೂರ್ಣವಾಗಿ ಮುಳುಗಿದ ನಂತರ ಖಾಸಗಿ ಶಾಲಾ ಬಸ್ ಅಂಡರ್‌ಪಾಸ್‌ನಲ್ಲಿ ಸಿಕ್ಕಿಹಾಕಿಕೊಂಡಿದೆ. ಶುಕ್ರವಾರ ಬೆಳಗ್ಗೆ ಮಹಬೂಬ್‌ನಗರ ಜಿಲ್ಲೆಯ ಮಾಚನ್ನಪಲ್ಲಿ ಮತ್ತು ಕೋಡೂರು ಗ್ರಾಮಗಳ ನಡುವೆ ಶಾಲಾ … Continued

ಕೊಲೆ ಮಾಡಲು ಬಂದವರ ಕಣ್ಣಿಗೆ ಖಾರದ ಪುಡಿ ಎರಚಿ ಪತಿಯನ್ನು ಬಚಾವ್ ಮಾಡಿದ ಮಹಿಳೆ..!

ಹೈದರಾಬಾದ್: ಮಹಿಳೆಯೊಬ್ಬಳು ಪತಿ ಹತ್ಯೆಗೆ ಬಂದಿದ್ದ ನಾಲ್ವರು ದುಷ್ಕರ್ಮಿಗಳ ಕಣ್ಣಿಗೆ ಖಾರದ ಪುಡಿ ಎರಚಿ ತನ್ನ ಪತಿ ಉಳಿಸಿಕೊಂಡಿರುವ ಘಟನೆ ತೆಲಂಗಾಣದ ವಾರಂಗಲ್‌ನ ಶಂಭುನಿಪೇಟೆಯಲ್ಲಿ ನಡೆದಿದೆ. ದಿ ವಾರಂಗಲ್ ಜಿಲ್ಲಾ ಲಾರಿ ಅಸೋಸಿಯೇಶನ್ ಅಧ್ಯಕ್ಷ ವೇಮುಲಾ ಭೂಪಾಲ್ ಅವರ ಮನೆಗೆ ಬುಧವಾರ ಮಧ್ಯರಾತ್ರಿ ನಾಲ್ವರು ಮಂದಿ ದುಷ್ಕರ್ಮಿಗಳು ಆಟೊದಲ್ಲಿ ಬಂದಿದ್ದಾರೆ. ಇವರಲ್ಲಿ ಮೂವರು ವೇಮುಲಾ ಮನೆಗೆ … Continued

ತೆಲಂಗಾಣ: ಇಬ್ಬರು ಟಿಡಿಪಿ ಶಾಸಕರೂ ಟಿಆರ್‌ಎಸ್‌ ತೆಕ್ಕೆಗೆ

ಹೈದರಾಬಾದ್‌: ತೆಲಂಗಾಣದಲ್ಲಿ ಇಬ್ಬರೂ ತೆಲಗು ದೇಶಂ ಪಕ್ಷದ ನಾಯಕರು ತೆಲಂಗಾಣ ರಾಷ್ಟ್ರ ಸಮಿತಿಗೆ (ಟಿಆರ್‌ಎಸ್‌) ಸೇರ್ಪಡೆಗೊಂಡರು. ಅಶ್ವರಾಪೇಟೆ ಕ್ಷೇತ್ರವನ್ನು ಪ್ರತಿನಿಧಿಸುವ ಮೆಚಾ ನಾಗೇಶ್ವರ ರಾವ್ ಮತ್ತು ಸಾತುಪಲ್ಲಿ ಪ್ರತಿನಿಧಿಸುವ ಸಾಂಡ್ರಾ ವೆಂಕಟ ವೀರಯ್ಯ ಟಿಡಿಪಿ ತೆಕ್ಕೆಗೆ ಸೇರಿದರು. ಕಳೆದ ಎರಡೂವರೆ ವರ್ಷಗಳಲ್ಲಿ ನಾಗೇಶ್ವರ ರಾವ್ ಅವರು ತಮ್ಮ ಕ್ಷೇತ್ರದ ಜನರಿಗೆ ನ್ಯಾಯ ಒದಗಿಸಲು ಸಾಧ್ಯವಾಗಿಲ್ಲ, ಆಡಳಿತ … Continued

ತೆಲಂಗಾಣದಲ್ಲಿ 2 ದಿನ ಹೀಟ್‌ವೇವ್..ಮಧ್ಯಾಹ್ನ 12ರಿಂದ 3ರ ನಡುವೆ ಹೊರಬಾರದಂತೆ ಜನರಿಗೆ ಸೂಚನೆ

ಭಾರತ ಹವಾಮಾನ ಇಲಾಖೆಯ ಹೈದರಾಬಾದ್ ಕೇಂದ್ರವು ತೆಲಂಗಾಣಕ್ಕೆ ಪರಿಣಾಮ ಆಧಾರಿತ ಶಾಖದ ಅಲೆಯ ಮುನ್ಸೂಚನೆ ನೀಡಿದೆ, ಇದರಲ್ಲಿ ರಾಜ್ಯದ ಹಲವಾರು ಭಾಗಗಳಲ್ಲಿ ಶಾಖದ ಅಲೆಯ ಪರಿಸ್ಥಿತಿಗಳು ಮುಂದುವರಿಯುವ ನಿರೀಕ್ಷೆಯಿದೆ. ತಾಪಮಾನವು ಸುಮಾರು 40- – 43 ° ಸೆಲ್ಸಿಯಸ್‌ ಆಗಬಹುದು ಎಂದು ಹೇಳಿದೆ. ಐಎಂಡಿಯ ಪ್ರಕಾರ, ಜಿಮಂಚೇರಿಯಲ್, ಪೆದ್ದಪಲ್ಲಿ, ಜಯಶಂಕರ್ ಭೂಪಾಲ್ಪಲ್ಲಿ, ಮುಲುಗು, ಭದ್ರಾಡ್ರಿ ಕೊಥಗುಡೆಮ್, … Continued

ತೆಲಂಗಾಣದಲ್ಲಿ ಕೊರೊನಾ ಲಸಿಕೆ ಎರಡು ಡೋಸ್ ಪಡೆದ ನಂತರವೂ 15 ಮಂದಿಗೆ ಸೋಂಕು..!

ಹೈದರಾಬಾದ್: ಎರಡು ಕೊರೊನಾ ಲಸಿಕೆಯ ಡೋಸ್ ಪಡೆದ ಬಳಿಕವೂ 15 ಮಂದಿಗೆ ಕೊರೊನಾ ಸೋಂಕು ತಗುಲಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ತೆಲಂಗಾಣದಲ್ಲಿ ಕೋವಿಡ್-19 ಸೋಂಕಿಗೆ ಸಂಪೂರ್ಣವಾಗಿ ಲಸಿಕೆ ಪಡೆದ ನಂತರವೂ 15 ಮಂದಿಗೆ ಸೋಂಕು ತಗುಲಿದೆ. ಇದಕ್ಕೆ ಆತಂಕಪಡುವ ಅಗತ್ಯವಿಲ್ಲ, ಇದು ಸಾಮಾನ್ಯವಾದ ಲಸಿಕೆ ಪಡೆದುಕೊಂಡ ನಂತರ ಬರುವ ಅನಾರೋಗ್ಯವಾಗಿದೆ ಎಂದು ಸಾರ್ವಜನಿಕ ಆರೋಗ್ಯದ ನಿರ್ದೇಶಕ … Continued