ಲೋಕಸಭೆ ಚುನಾವಣೆ :ಕಾಂಗ್ರೆಸ್ಸಿಗೆ ಮತ್ತೊಂದು ಆಘಾತ ; ಉತ್ತರ ಪ್ರದೇಶದಲ್ಲಿ ಏಕಪಕ್ಷೀಯವಾಗಿ ಟಿಕೆಟ್ ಘೋಷಿಸಿದ ಸಮಾಜವಾದಿ ಪಕ್ಷ…!

ಲಕ್ನೋ : ಕಾಂಗ್ರೆಸ್ ನೇತೃತ್ವದ ವಿಪಕ್ಷಗಳ ಇಂಡಿಯಾ ಮೈತ್ರಿಕೂಟಕ್ಕೆ ಮತ್ತೊಂದು ಹೊಡೆತ ಬಿದ್ದಿದೆ. ಈ ಬಾರಿ ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷವು ಕಾಂಗ್ರಸ್ಸಿಗೆ ಶಾಕ್‌ ನೀಡಿದೆ. ಕಾಂಗ್ರೆಸ್ ಗಮನಕ್ಕೂ ತರದೆ ಸಮಾಜವಾದಿ ಪಕ್ಷವು ಲೋಕಸಭೆ ಚುನಾವಣೆಗಾಗಿ ಏಕಾಏಕಿ ತನ್ನ 16 ಅಭ್ಯರ್ಥಿಗಳ ಪಟ್ಟಿಯನ್ನು . ಬಿಡುಗಡೆ ಮಾಡಿದೆ. ಇದು ಅನಿರೀಕ್ಷಿತವಲ್ಲವಾದರೂ ಇದರಿಂದ ಕಾಂಗ್ರೆಸ್ಸಿಗೆ ಹೊಡೆತವನ್ನಂತೂ ನೀಡಿದೆ. … Continued

ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ: ಬಿಜೆಪಿ ಶಾಸಕನಿಗೆ 25 ವರ್ಷಗಳ ಜೈಲು ಶಿಕ್ಷೆ

ಲಕ್ನೋ: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಹೊತ್ತಿದ್ದ ಉತ್ತರ ಪ್ರದೇಶದ ಬಿಜೆಪಿ ಶಾಸಕರೊಬ್ಬರು ಒಂಬತ್ತು ವರ್ಷಗಳ ಬಳಿಕ 25 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದು, ವಿಧಾನಸಭೆಯಿಂದ ಅನರ್ಹತೆಯಾಗುವ ಭೀತಿ ಎದುರಿಸುತ್ತಿದ್ದಾರೆ. ಈ ಅಪರಾಧವು 2014 ರಲ್ಲಿ ನಡೆದಿದ್ದು, ದೂರು ದಾಖಲಿಸಿದ ನಂತರ ಒಂದು ವರ್ಷಕ್ಕೂ ಹೆಚ್ಚು ಕಾಲ ಶಾಸಕರು ಕುಟುಂಬಕ್ಕೆ ಒತ್ತಡ ಮತ್ತು … Continued

ಮದುವೆ ವೇಳೆ ವರದಕ್ಷಿಣೆ ಕೇಳಿದ್ದಕ್ಕೆ ವರನನ್ನು ಮರಕ್ಕೆ ಕಟ್ಟಿ ಹಾಕಿದ ವಧುವಿನ ಕುಟುಂಬ | ವೀಕ್ಷಿಸಿ

ಪ್ರತಾಪಗಢ : ಉತ್ತರ ಪ್ರದೇಶದ ಪ್ರತಾಪ್‌ಗಢದಲ್ಲಿ ಮಂಗಳವಾರ, ಜೂನ್ 14 ರಂದು ಮದುವೆಯ ʼಜಯ ಮಾಲಾ’ ಸಮಾರಂಭದಲ್ಲಿ ವರ ಮತ್ತು ವಧುವಿನ ಕುಟುಂಬಗಳ ನಡುವೆ ವಾಗ್ವಾದ ನಡೆದ ನಂತರ ಮದುವೆ ಸಮಾರಂಭದಲ್ಲಿ ಜಗಳ ಉಲ್ಬಣಗೊಂಡು ವರನನ್ನು ಮರಕ್ಕೆ ಕಟ್ಟಿಹಾಕಿದ ಘಟನೆ ವರದಿಯಾಗಿದೆ. ಜಗಳಕ್ಕೆ ಕಾರಣ ವರ – ಅಮರಜೀತ ವರ್ಮಾ – ವಧುವಿನ ಕುಟುಂಬದಿಂದ ವರದಕ್ಷಿಣೆಗೆ … Continued

ಭೋಜಪುರಿ ನಟಿ ಆಕಾಂಕ್ಷಾ ದುಬೆ ಹೊಟೇಲ್‌ ರೂಮಿನಲ್ಲಿ ಶವವಾಗಿ ಪತ್ತೆ

ವಾರಾಣಸಿ: ಜನಪ್ರಿಯ ಭೋಜಪುರಿ ನಟಿ ಆಕಾಂಕ್ಷಾ ದುಬೆ ಭಾನುವಾರ ಇಲ್ಲಿನ ಹೋಟೆಲ್ ಕೊಠಡಿಯೊಂದರಲ್ಲಿ ಶವವಾಗಿ ಪತ್ತೆಯಾಗಿದ್ದು, ಇದು ಆತ್ಮಹತ್ಯೆ ಎಂದು ಪೊಲೀಸರು ಶಂಕಿಸಿದ್ದಾರೆ. 25 ವರ್ಷದ ನಟಿ ಆಕಾಂಕ್ಷಾ ದುಬೆ ಫ್ಯಾನ್‌ಗೆ ಬಟ್ಟೆಯ ತುಂಡಿನಿಂದ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಗೊತ್ತಾದ ತಕ್ಷಣ ಪೊಲೀಸರಿಗೆ ಕರೆ ಮಾಡಲಾಗಿದೆ ಎಂದು ಹೋಟೆಲ್ ಸಿಬ್ಬಂದಿ ತಿಳಿಸಿದ್ದಾರೆ. ಸಹಾಯಕ ಪೊಲೀಸ್ … Continued

ಎಲ್ಲೆ ಮೀರಿದ ಪ್ರೀತಿ..! ಫೇಸ್‌ಬುಕ್ ಸ್ನೇಹಿತನನ್ನು ಮದುವೆಯಾಗಲು ಭಾರತಕ್ಕೆ ಹಾರಿ ಬಂದ ಸ್ವೀಡನ್‌ ಮಹಿಳೆ

ಇಟಾಹ್ (ಉತ್ತರ ಪ್ರದೇಶ): ಪ್ರೀತಿಗೆ ಯಾವುದೇ ಗಡಿಗಳಿಲ್ಲ ಎಂದು ಹೇಳಲಾಗುತ್ತದೆ. ಇತ್ತೀಚೆಗೆ ಸ್ವೀಡನ್ ಮಹಿಳೆಯೊಬ್ಬರು ಸ್ಥಳೀಯ ನಿವಾಸಿಯನ್ನು ವಿವಾಹವಾದಾಗ ಉತ್ತರ ಪ್ರದೇಶದ ಇಟಾಹ್ ಜನರು ಇದೇ ರೀತಿಯ ಘಟನೆಗೆ ಸಾಕ್ಷಿಯಾದರು. ಸ್ವೀಡನ್ನಿನ ಕ್ರಿಸ್ಟನ್ ಲೀಬರ್ಟ್ ಎಂಬವರು ಶುಕ್ರವಾರ ಉತ್ತರ ಪ್ರದೇಶದ ಇಟಾಹ್‌ನಲ್ಲಿರುವ ಶಾಲೆಯೊಂದರಲ್ಲಿ ಹಿಂದೂ ಪದ್ಧತಿಗಳ ಪ್ರಕಾರ ಫೇಸ್‌ಬುಕ್‌ನಲ್ಲಿ ಭೇಟಿಯಾದ ಪವನ್ ಕುಮಾರ್ ಅವರನ್ನು ಮದುವೆಯಾಗಿದ್ದಾರೆ … Continued

ಊಟದಲ್ಲಿ ಕೂದಲು ಸಿಕ್ಕಿತೆಂದು ಹೆಂಡತಿಯ ತಲೆಯನ್ನೇ ಬೋಳಿಸಿದ ಪತಿ ಮಹಾಶಯ..!

ಪಿಲಿಭಿತ್ (ಉತ್ತರ ಪ್ರದೇಶ): ಊಟ ಮಾಡುವಾಗ ಆಹಾರದಲ್ಲಿ ತಲೆಕೂದಲು ಸಿಕ್ಕಿತೆಂದು ಕೋಪಗೊಂಡ ಪತಿ ಮಹಾಶಯನೊಬ್ಬ ಹೆಂಡತಿಯ ತಲೆಯನ್ನೇ ಬೋಳಿಸಿದ ಘಟನೆ ಉತ್ತರ ಪ್ರದೇಶದ ಪಿಲಿಭಿತ್​​ ಜಿಲ್ಲೆಯಲ್ಲಿ ನಡೆದಿದೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಪಿಲಿಭಿತ್ ಜಿಲ್ಲೆಯ ಗಜ್ರೌಲಾ ಪೊಲೀಸ್ ಠಾಣೆ ವ್ಯಾಪ್ತಿಯ ಮಿಲಾಕ್ ಗ್ರಾಮದ ಜಹೀರುದ್ದೀನ್ ಎಂದು ಗುರುತಿಸಲಾಗಿದೆ. ಸಂತ್ರಸ್ತೆ ಶುಕ್ರವಾರ ರಾತ್ರಿ ಮನೆಯಲ್ಲಿ ಅಡುಗೆ … Continued

ಆರತಕ್ಷತೆ ವೇಳೆ ಎಲ್ಲರ ಮುಂದೆಯೇ ವರ ತನಗೆ ಮುತ್ತು ಕೊಟ್ಟಿದ್ದಕ್ಕೆ ಕೋಪಗೊಂಡು ಅಲ್ಲಿಂದಲೇ ಪೊಲೀಸ್ ಠಾಣೆಗೆ ತೆರಳಿ ವರನ ವಿರುದ್ಧ ದೂರು ನೀಡಿದ ವಧು…!

ಸಂಬಲ್‌ : ಉತ್ತರ ಪ್ರದೇಶದ ಸಂಭಾಲ್‌ನಲ್ಲಿ ನಡೆದ ಮದುವೆಯ ಆರತಕ್ಷತೆ ವೇಳೆ ವರ ಮಹಾಶಯ ಎಲ್ಲರ ಸಮ್ಮುಖದಲ್ಲಿಯೇ ತನಗೆ ಮುತ್ತು ಕೊಟ್ಟ ಎಂಬ ಕಾರಣಕ್ಕೆ ವಧು ಪೊಲೀಸ್ ಠಾಣೆಗೆ ಬಂದು ದೂರು ದಾಖಲಿಸಿದ್ದಾಳೆ. ದಂಪತಿ ನವೆಂಬರ್ 26 ರಂದು ಉತ್ತರ ಪ್ರದೇಶದ ಸಾಮೂಹಿಕ ವಿವಾಹ ಯೋಜನೆ -2022ರಲ್ಲಿ ವಿವಾಹವಾದರು. ನವೆಂಬರ್ 28 ರಂದು ಪಾವಾಸಾ ಗ್ರಾಮದಲ್ಲಿ … Continued

ಪತ್ನಿ ಕಾಟಕ್ಕೆ ಬೇಸತ್ತು ಒಂದು ತಿಂಗಳಿನಿಂದ 80 ಅಡಿ ಎತ್ತರದ ತಾಳೆ ಮರದ ಮೇಲೆಯೇ ವಾಸಿಸುತ್ತಿರುವ ಈ ಪತಿ ಮಹಾಶಯ…!

ಲಕ್ನೋ: ಗಂಡ-ಹೆಂಡತಿಯ ಜಗಳ ಉಂಡು ಮಲಗುವ ತನಕ ಎನ್ನುವ ಪ್ರಸಿದ್ಧ ನಾಣ್ಣುಡಿ ಇದೆ. ಆದರೆ ಇಲ್ಲೊಬ್ಬ ಪತಿರಾಯ ಮಾತ್ರ ಪತ್ನಿಯ ಜತೆ ಜಗಳವಾಡಿಕೊಂಡು ತಾಳೆಯ ಮರ ಏರಿದ್ದಾನೆ ಪತ್ನಿಯ ಜಗಳದಿಂದ ಬೇಸತ್ತ ವ್ಯಕ್ತಿಯೊಬ್ಬ ಒಂದು ತಿಂಗಳಿಂದ 80 ಅಡಿ ಎತ್ತರದ ತಾಳೆ ಮರದ ಮೇಲೆ ವಾಸವಾಗಿದ್ದಾನೆ. ಈ ವಿಲಕ್ಷಣ ಘಟನೆ ಉತ್ತರ ಪ್ರದೇಶದ ಮೌ ಜಿಲ್ಲೆಯ … Continued

ಪೆನ್ಸಿಲ್, ಮ್ಯಾಗಿ ಬೆಲೆ ಹೆಚ್ಚಾಗಿದೆ, ಹೊಸ ಪೆನ್ಸಿಲ್‌ ಕೇಳಿದ್ರೆ ಅಮ್ಮ ಹೊಡೆಯುತ್ತಾಳೆ : ಪ್ರಧಾನಿ ಮೋದಿಗೆ ಪತ್ರ ಬರೆದ 1ನೇ ತರಗತಿ ಬಾಲಕಿ..!

ನವದೆಹಲಿ: 1ನೇ ತರಗತಿಯಲ್ಲಿ ಓದುತ್ತಿರುವ ಬಾಲಕಿಯೊಬ್ಬಳು ಪೆನ್ಸಿಲ್ ಮತ್ತು ಮ್ಯಾಗಿ ದುಬಾರಿಯಾಗಿದ್ದರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹೃದಯಸ್ಪರ್ಶಿ ಪತ್ರ ಬರೆದಿದ್ದಾಳೆ. ಉತ್ತರ ಪ್ರದೇಶದ ಕನೌಜ್‌ನ ಛಿಬ್ರಮೌವ್‌ನ ಆರು ವರ್ಷದ ಕೃತಿ ದುಬೆ ಎಂಬ ಬಾಲಕಿ ಹಿಂದಿಯಲ್ಲಿ ಬರೆದಿರುವ ಈ ಪತ್ರದಲ್ಲಿ ತನ್ನ ಕಷ್ಟದ ಬಗ್ಗೆ ಮಾತನಾಡಿದ್ದಾಳೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಪತ್ರದಲ್ಲಿ, … Continued

ಉತ್ತರ ಪ್ರದೇಶದಲ್ಲಿ 6 ಸಾವಿರ ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ತೆರವು, 30 ಸಾವಿರ ಧ್ವನಿವರ್ಧಕಗಳ ಶಬ್ದಗಳಿಗೆ ಮಿತಿ

ಲಕ್ನೋ: ಉತ್ತರ ಪ್ರದೇಶದಲ್ಲಿ ಸುಮಾರು ಆರು ಸಾವಿರ ಧಾರ್ಮಿಕ ಸ್ಥಳಗಳಿಂದ ಧ್ವನಿವರ್ಧಕಗಳನ್ನು ತೆರವುಗೊಳಿಸಲಾಗಿದೆ. ಇತರ 30 ಸಾವಿರ ಧ್ವನಿವರ್ಧಕಗಳ ಶಬ್ದಗಳನ್ನು ಮಿತಿಗೊಳಿಸಲಾಗಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಬುಧವಾರ ಹೇಳಿದ್ದಾರೆ. ಉತ್ತರ ಪ್ರದೇಶ ರಾಜ್ಯಾದ್ಯಂತ ಧಾರ್ಮಿಕ ಸ್ಥಳಗಳಿಂದ ಧ್ವನಿವರ್ಧಕಗಳನ್ನು ತೆರವುಗೊಳಿಸುವ ಮತ್ತು ಶಬ್ದಗಳಲ್ಲಿ ಮಿತಿಗೊಳಿಸುವ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ ಎಂದು ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ (ಕಾನೂನು … Continued