ಬಿಎಂಡಬ್ಲ್ಯು ಕಾರಿನಲ್ಲಿ ಸಿಗ್ನಲ್ ಜಂಪ್ ಮಾಡಿದ ಬಿಜೆಪಿ ಶಾಸಕರ ಮಗಳು: ಪೊಲೀಸರೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪ

ಬೆಂಗಳೂರು: ಬಿಎಂಡಬ್ಲ್ಯು ಕಾರಿನಲ್ಲಿ ಟ್ರಾಫಿಕ್ ಸಿಗ್ನಲ್ ಜಂಪ್ ಮಾಡಿದ ಬಿಜೆಪಿ ಶಾಸಕರ ಪುತ್ರಿ ಬೆಂಗಳೂರಿನ ಪೊಲೀಸರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. ಘಟನೆಯನ್ನು ರೆಕಾರ್ಡ್ ಮಾಡಿದ ವರದಿಗಾರನೊಂದಿಗೂ ಪುತ್ರಿ ಅನುಚಿತವಾಗಿ ವರ್ತಿಸಿದ್ದಾರೆ. ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಅವರ ಪುತ್ರಿ ಬಿಳಿ ಬಣ್ಣದ ಬಿಎಂಡಬ್ಲ್ಯು ಕಾರನ್ನು ಓಡಿಸುತ್ತಿದ್ದರು. ಟ್ರಾಫಿಕ್ ಲೈಟ್ ಕೆಂಪು ಬಣ್ಣಕ್ಕೆ ತಿರುಗಿದಾಗ ಅವರು ಕಾರನ್ನು ನಿಲ್ಲಿಸಲಿಲ್ಲ … Continued

ಇರಾನ್ ವಿದೇಶಾಂಗ ಸಚಿವರೊಂದಿಗಿನ ಭೇಟಿಯಲ್ಲಿ ಪ್ರವಾದಿ ಹೇಳಿಕೆ ವಿಚಾರ ಪ್ರಸ್ತಾಪವಾಗಿಲ್ಲ: ಭಾರತ

ನವದೆಹಲಿ: ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಮತ್ತು ಇರಾನ್ ವಿದೇಶಾಂಗ ಸಚಿವ ಹುಸೇನ್ ಅಮೀರ್-ಅಬ್ದುಲ್ಲಾಹಿಯಾನ್ ನಡುವಿನ ಭೇಟಿಯ ಸಂದರ್ಭದಲ್ಲಿ ಪ್ರವಾದಿ ಮುಹಮ್ಮದ್ ಕುರಿತು ಕೆಲವು ಬಿಜೆಪಿ ನಾಯಕರು ಮಾಡಿದ ವಿವಾದಾತ್ಮಕ ಹೇಳಿಕೆಗಳ ವಿಷಯವನ್ನು ಪ್ರಸ್ತಾಪಿಸಲಾಗಿಲ್ಲ ಎಂದು ಕೇಂದ್ರ ಹೇಳಿದೆ. ಆ ಸಂಭಾಷಣೆಯ ಸಮಯದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಲಾಗಿಲ್ಲ ಎಂಬುದು ನನ್ನ ತಿಳಿವಳಿಕೆ, ”ಎಂದು ವಿದೇಶಾಂಗ … Continued

ಪ್ರವಾದಿ ವಿವಾದ: ಅಜಿತ್ ದೋವಲ್ ಜೊತೆಗಿನ ಸಭೆಯ ತನ್ನ ದೃಷ್ಟಿಕೋನದ ಹೇಳಿಕೆ ಅಳಿಸಿದ ಇರಾನ್‌ ವಿದೇಶಾಂಗ ಸಚಿವ

ನವದೆಹಲಿ: ಆಡಳಿತಾರೂಢ ಬಿಜೆಪಿಯ ಸದಸ್ಯರು ಪ್ರವಾದಿ ಮುಹಮ್ಮದ್ ಕುರಿತು ಮಾಡಿದ ವಿವಾದಾತ್ಮಕ ಕುರಿತು ಭಾರೀ ರಾಜತಾಂತ್ರಿಕ ಗದ್ದಲದ ಮಧ್ಯದಲ್ಲಿ, ಇರಾನ್ ತನ್ನ ವಿದೇಶಾಂಗ ಸಚಿವರು ದೆಹಲಿಯಲ್ಲಿ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರೊಂದಿಗಿನ ಭೇಟಿಯ ಹಿಂದಿನ ಪತ್ರಿಕಾ ಹೇಳಿಕೆಯನ್ನು ಬದಲಾಯಿಸಿದೆ. ಪ್ರವಾದಿ ವಿರುದ್ಧ ವಿವಾದಾತ್ಮಕ ಟೀಕೆಗಳನ್ನು ಮಾಡಿದವರಿಗೆ “ಪಾಠ ಕಲಿಸಲಾಗುವುದು” ಎಂದು ರಾಷ್ಟ್ರೀಯ … Continued

ಕಪ್ಪು ರಣಹದ್ದಿನ ಜೊತೆ ಪ್ಯಾರಾಗ್ಲೈಡಿಂಗ್ ಮಾಡುವ ವ್ಯಕ್ತಿ…ವೀಕ್ಷಿಸಿ

ವ್ಯಕ್ತಿಯೊಬ್ಬ ಕಪ್ಪು ರಣಹದ್ದು ಜೊತೆ ಪ್ಯಾರಾಗ್ಲೈಡಿಂಗ್ ಮಾಡುತ್ತಿರುವ ವೀಡಿಯೊ ಅಂತರ್ಜಾಲದಲ್ಲಿ ಬಿರುಗಾಳಿ ಎಬ್ಬಿಸಿದೆ. ಸಾವಿರಾರು ಅಡಿ ಎತ್ತರದಲ್ಲಿ ಪ್ಯಾರಾಗ್ಲೈಡರ್‌ನೊಂದಿಗೆ ಕಪ್ಪು ರಣಹದ್ದು ಶಾಂತವಾಗಿ ಹಾರುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಹಸಿರು ಕಾಡುಗಳು ಮತ್ತು ಕಟ್ಟಡಗಳು ಕೆಳಗೆ ಗೋಚರಿಸುತ್ತವೆ. ಕ್ಲಿಪ್‌ನಲ್ಲಿ ಹಾರಾಟ ನಡೆಸಿದ ಬೃಹತ್ ಕಪ್ಪು ರಣಹದ್ದು ಪ್ಯಾರಾಗ್ಲೈಡರ್‌ನ ಪಾದಗಳ ಮೇಲೆ ಇಳಿಯುವುದನ್ನು ಕಾಣಬಹುದು, ಆದರೆ ವ್ಯಕ್ತಿಯು ಅದನ್ನು … Continued

ಇವಿ ಚಾರ್ಜಿಂಗ್‌ – ಸ್ವ್ಯಾಪಿಂಗ್‌ ಮೂಲಸೌಕರ್ಯಕ್ಕಾಗಿ ಜಿಯೋ-ಬಿಪಿ ಜೊತೆಗೆ ಒಮ್ಯಾಕ್ಸ್‌ ಪಾಲುದಾರಿಕೆ

ನವದೆಹಲಿ/ಮುಂಬೈ: ಭಾರತದ ಪ್ರಮುಖ ರಿಯಲ್ ಎಸ್ಟೇಟ್‌ ಡೆವಲಪರ್‌ಗಳಾದ ಒಮ್ಯಾಕ್ಸ್‌ ಗುರುವಾರ ಜಿಯೋ-ಬಿಪಿ ಜೊತೆಗೆ ಪಾಲುದಾರಿಕೆ ಮಾಡಿಕೊಂಡಿದ್ದು, ಇದರ ಅಡಿಯಲ್ಲಿ ಎಲೆಕ್ಟ್ರಿಕ್‌ ವಾಹನಗಳಿಗೆ ಬ್ಯಾಟರಿ ಚಾರ್ಜಿಂಗ್‌ ವ್ಯವಸ್ಥೆಯನ್ನು ಸ್ಥಾಪಿಸಲಾಗುತ್ತದೆ. ದೆಹಲಿ, ನೋಯ್ಡಾ, ಗ್ರೇಟರ್ ನೋಯ್ಡಾ, ಫರಿದಾಬಾದ್‌, ಘಾಜಿಯಾಬಾದ್, ನ್ಯೂ ಚಂಡೀಗಢ, ಲೂಧಿಯಾನ, ಪಟಿಯಾಲ, ಅಮೃತಸರ, ಜೈಪುರ, ಸೋನಿಪತ್ತ ಮತ್ತು ಬಹಾದುರ್‌ಗಢದಲ್ಲಿ ಹಂತ ಹಂತವಾಗಿ ಒಮ್ಯಾಕ್ಸ್‌ ಸ್ಥಳದಲ್ಲಿ ಇವಿ … Continued

ಕಾರವಾರ: ರೈಲಿನಲ್ಲಿ ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದ ವ್ಯಕ್ತಿ ಬಳಿ 2 ಕೋಟಿ ರೂ.ಹಣ ಪತ್ತೆ..!

ಕಾರವಾರ: ರೈಲಿನ ಮೂಲಕ ಮುಂಬೈನಿಂದ ಮಂಗಳೂರಿಗೆ ಸಾಗಿಸುತ್ತಿದ್ದ ದಾಖಲೆ ರಹಿತ ಎರಡು ಕೋಟಿ ರೂ.ಗಳ ಹಣವನ್ನು ಕಾರವಾರದ ರೈಲ್ವೆ ಪೊಲೀಸರು ವಶಕ್ಕೆ ಪಡೆದಿದ್ದು, ಆರೋಪಿಯನ್ನು ಬಂಧಿಸಿದ್ದಾರೆ. ದಾಖಲೆ ಇಲ್ಲದೆ ಹಣ ಸಾಗಿಸುತ್ತಿರುವುದರಿಂದ ಇದು ಹವಾಲಾ ಹಣ ಇರಬಹುದು ಎಂದು ಶಂಕಿಸಲಾಗಿದೆ. ಆರೋಪಿಯನ್ನು ರಾಜಸ್ಥಾನ ಮೂಲದ ಮನೋಹರ್ ಸಿಂಗ್ ಅಲಿಯಾಸ್ ಚೇನ್ ಸಿಂಗ್ ಎಂದು ಗುರುತಿಸಲಾಗಿದೆ. ಮಂಗಳೂರು … Continued

ಕರ್ನಾಟಕದಲ್ಲಿ 500ರ ಸನಿಹ ಬಂದ ದೈನಂದಿನ ಕೊರೊನಾ ಪ್ರಕರಣಗಳು

ಬೆಂಗಳೂರು: ರಾಜ್ಯದಲ್ಲಿ ಗುರುವಾರ (ಜೂನ್‌ 9) ದೈನಂದಿನ ಕೊರೊನಾ ಪ್ರಕರಣಗಳಲ್ಲಿ ಹೆಚ್ಚಳವಾಗಿದ್ದು, ಕಳೆದ 24 ಗಂಟೆಯಲ್ಲಿ ಹೊಸದಾಗಿ 471 ಮಂದಿಗೆ ಸೋಂಕು ದೃಢಪಟ್ಟಿದೆ. ಆದರೆ ಯಾವುದೇ ಸಾವು ವರದಿಯಾಗಿಲ್ಲ. ಇದೇವೇಳೆ 214 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಈಗ 2,880 ಸಕ್ರಿಯ ಪ್ರಕರಣಗಳಿವೆ. ಗುರುವಾರದ ಸಕಾರಾತ್ಮಕ ದರ ರೇಟ್ ಶೇ.1.73ರಷ್ಟು ದಾಖಲಾಗಿದ್ದು, ಬೆಂಗಳೂರಿನಲ್ಲಿ 458 … Continued

ಮಲ್ಪೆ ಬೀಚ್‌ನಲ್ಲಿ ಪ್ರವಾಸಿಗರು ನೀರಿಗಳಿಯದಂತೆ ಸುರಕ್ಷತಾ ಬೇಲಿ ನಿರ್ಮಾಣ…!

ಉಡುಪಿ : ಕರ್ನಾಟಕ ಹೆಸರಾಂತ ಕಡಲ ತೀರಗಳಲ್ಲಿ ಒಂದಾಗಿರುವ ಮಲ್ಪೆ ಕಡಲತೀರದಲ್ಲಿ ಮುಳುಗಡೆ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಬೀಚ್ ಅಭಿವೃದ್ಧಿ ಸಮಿತಿಯು ಆಗಮಿಸುವ ಪ್ರವಾಸಿಗರು ನೀರಿಗೆ ಇಳಿಯದಂತೆ ಮಾಡಲು ಬೀಚ್‌ನಲ್ಲಿ ಬಲೆಗಳಿಂದ ಬೇಲಿ ನಿರ್ಮಿಸಿ ಸುರಕ್ಷತಾ ಕ್ರಮ ಕೈಗೊಂಡಿದೆ ಎಂದು ಹೇಳಲಾಗಿದೆ. ಎಷ್ಟೇ ಮನವಿ ಮಾಡಿದರೂ ಪ್ರವಾಸಿಗರು ಕಿವಿಗೊಡದ ಕಾರಣ ಬೀಚ್ ಅಭಿವೃದ್ಧಿ ಸಮಿತಿ ಈಗ … Continued

ಶಿರಸಿ: ವರ್ಧಂತಿ ಉತ್ಸವದಂದು ರಕ್ತದಾನ ಮಾಡಿ ಪ್ರೇರಣೆಯಾದ ಸ್ವರ್ಣವಲ್ಲೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ

ಶಿರಸಿ: ಪರಿಸರ ಸ್ವಾಮೀಜಿ ಎಂದು ಹೆಸರಾದ ಸ್ವರ್ಣವಲ್ಲೀ ಮಠದ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಗಳ ವರ್ಧಂತಿ ಉತ್ಸವದ ಹಿನ್ನಲೆಯಲ್ಲಿ ಶಿರಸಿ ತಾಲೂಕಿನ ಸೋಂದಾದ ಶ್ರೀಮಠದಲ್ಲಿ ಮಠದ ಅಂಗ ಸಂಸ್ಥೆ ಗ್ರಾಮಾಭ್ಯುದಯ ಸಂಸ್ಥೆ ಹಮ್ಮಿಕೊಂಡ ಆರೋಗ್ಯ ತಪಾಸಣೆ ರಕ್ತದಾನ ಶಿಬಿರದಲ್ಲಿ ಶ್ರೀಗಳೇ ರಕ್ತದಾನ ಮಾಡುವ ಮೂಲಕ ಅನೇಕರಿಗೆ ಪ್ರೇರಣೆದಾಯಕರಾಗಿದ್ದಾರೆ. ಜೀವ ಉಳಿಸಿಕೊಳ್ಳುವ ಸಂದರ್ಭದಲ್ಲಿ ರಕ್ತಗಳ ಅಲಭ್ಯತೆ ಆದರೆ … Continued

ಕೊನೆಗೂ ತನ್ನನ್ನು ತಾನೇ ಮದುವೆ ಮಾಡಿಕೊಂಡ ಯುವತಿ ಕ್ಷಮಾ ಬಿಂದು…! ಇದು ಭಾರತದಲ್ಲಿ ಮೊದಲ ಪ್ರಕರಣ

ಗುಜರಾತ್ ವಡೋದ್ರಾ ಯುವತಿ ಕ್ಷಮಾ ಬಿಂದು ಎಂಬ ಯುವತಿಯ ಸ್ವಯಂ ವಿವಾಹ ಗುರುವಾರ ನಿರ್ವಿಘ್ನವಾಗಿ ನೆರವೇರಿದೆ. ಆ ಮೂಲಕ ಭಾರತದಲ್ಲಿ ಇದೇ ಮೊದಲ ಸಲ ತಮ್ಮನ್ನೇ ತಾವು ವಿವಾಹ ಮಾಡಿಕೊಂಡ ವಿದ್ಯಾಮಾನ ನಡೆದಂತಾಗಿದೆ. ಕಳೆದ ಕೆಲವು ದಿನಗಳ ಹಿಂದಷ್ಟೇ ತನ್ನನ್ನು ತಾನೇ ಸಂಪ್ರದಾಯಬದ್ಧವಾಗಿ ವಿವಾಹ ಮಾಡಿಕೊಳ್ಳುವುದಾಗಿ ಘೋಷಿಸಿದ ಕ್ಷಮಾ ಬಿಂದು ದೇಶಾದ್ಯಂತ ಸಂಚಲನ ಉಂಟು ಮಾಡಿದ್ದಳು. … Continued