ಕುಮಟಾ: ಹವ್ಯಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಶಂಕರ ಶಾಸ್ತ್ರೀ ನಿಧನ

ಕುಮಟಾ: ನಗರದ ವಕೀಲ ಹಾಗೂ ಹವ್ಯಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಶಂಕರ ಶಾಸ್ತ್ರೀ (52) ಅವರು ಅನಾರೋಗ್ಯದಿಂದಾಗಿ ಶುಕ್ರವಾರ ಮುಂಜಾನೆ ನಿಧನರಾಗಿದ್ದಾರೆ. ನಗರದಲ್ಲಿ ಟಿವಿಎಸ್ ದ್ವಿಚಕ್ರ ವಾಹನ ಶೋ ರೂ ನಡೆಸುತ್ತಿದ್ದ ಇವರು ಕುಮಟಾ ಹವ್ಯಕ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದರು. ಮೃತ ಶಂಕರ ಶಾಸ್ತ್ರೀಯವರು ಕುಮಟಾದ ಖ್ಯಾತ ವಕೀಲರಾದ ಶ್ರೀಪಾದ ಶಾಸ್ತ್ರೀ ಅವರ … Continued

ಕುಮಟಾ: ಜುಲೈ 17ರಂದು ನಾದೋಪಾಸನೆ ಕಾರ್ಯಕ್ರಮ

ಕುಮಟಾ: ಗುರು ಪೂರ್ಣಿಮೆ ನಿಮಿತ್ತ ಕೂಜಳ್ಳಿ ಪಂಡಿತ ಷಡಕ್ಷರಿ ಗವಾಯಿ ಅಕಾಡೆಮಿ ವತಿಯಿಂದ  ಕುಮಟಾದ ಹವ್ಯಕ ಸಭಾಭವನದಲ್ಲಿ ಜುಲೈ 17ರಂದು ನಾದೋಪಾಸನೆ ಕಾರ್ಯಕ್ರಮ ನಡೆಯಲಿದೆ. ಕುಮಟಾ ಗಂಧರ್ವ ಕಲಾ ಕೇಂದ್ರದ ಸಹಯೋಗದಲ್ಲಿಈ ಕಾರ್ಯಕ್ರಮವು  ಜುಲೈ 17ರಂದು ಭಾನುವಾರ ಬೆಳಿಗ್ಗೆ 9:30ರಿಂದ ಸಂಜೆ 7ರ ವರೆಗೆ ಕುಮಟಾ ಹವ್ಯಕ ಸಭಾಭವನದಲ್ಲಿ  ಈ ಸಂಗೀತ ಕಾರ್ಯಕ್ರಮ ನಡೆಯಲಿದ್ದು, ಗೌರೀಶ … Continued

ಕುಮಟಾ: ಬಾಳಿಗಾ ವಾಣಿಜ್ಯ ಕಾಲೇಜಿನಲ್ಲಿ ಸಿಎ, ಐಬಿಪಿಎಸ್, ಎಂಬಿಎ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಉದ್ಘಾಟನೆ

ಕುಮಟಾ: ವಿದ್ಯಾರ್ಥಿಗಳಿಗೆ ಗುರಿ ಇರಬೇಕು. ಸಮಯದ ಸದುಪಯೋಗದ ಅರಿವಿರಬೇಕು. ಯಾವ ಶಿಕ್ಷಣ ಸಂಸ್ಥೆಗಳೂ ಉದ್ಯೋಗ ಭರವಸೆ ನೀಡ ಬಾರದು, ಬದುಕುವ ದಾರಿ ತೋರಿಸಬೇಕು ಎಂದು ಉಡುಪಿಯ ತ್ರಿಷಾ ಸಂಸ್ಥೆಯ ಸಿಇಒ ಗೋಪಾಲಕೃಷ್ಣ ಭಟ್ಟ ಹೇಳಿದರು. ಅವರು ನಗರದ ಡಾ.ಎ.ವಿ.ಬಾಳಿಗಾ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಆರಂಭವಾದ ಸಿಎ, ಐಬಿಪಿಎಸ್ ಮತ್ತು ಎಂಬಿಎ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಚಟುವಟಿಕೆ ಉದ್ಘಾಟಿಸಿ … Continued

ಕುಮಟಾ: ಭಕ್ತರನ್ನು ವಿಸ್ಮಯಗೊಳಿಸಿದ ಚಂದಾವರ ಹನುಮಂತ ದೇವರು

ಕುಮಟಾ: ಉತ್ತರ ಕನ್ನಡ ಜಿಲ್ಲೆಯ ಚಂದಾವರದ ಹನುಮಂತ ದೇವರು ವಾರ್ಷಿಕ ಸವಾರಿ ಹೋಗುವುದು ಸಂಪ್ರದಾಯ. ಈ ವರ್ಷದ ಸವಾರಿ ಅನೇಕ ವಿಸ್ಮಯಕ್ಕೆ ಕಾರಣವಾಗಿದೆ. ಸುಮಾರು ಒಂದು ತಿಂಗಳ ಸವಾರಿ ಕಾಲದಲ್ಲಿ ಚಂದಾವರದ ಶ್ರೀ ಹನುಮಂತ ದೇವರು ಅನೇಕ ವಿಸ್ಮಯಕ್ಕೆ ಕಾರಣವಾಗಿದ್ದಾರೆ ಎಂದು ಜನರು ಹೇಳುತ್ತಿದ್ದಾರೆ. ಚಂದಾವರದಿಂದ ಸವಾರಿ ಹೊರಟ ಶ್ರೀಹನುಮಂತ ದೇವರು ಕುಮಟಾದ ತಂಡ್ರಕುಳಿಯಲ್ಲಿ ತಂಗಿ … Continued

ಪ್ರವಾಸಿಗರು ಸಮುದ್ರಕ್ಕೆ ಇಳಿಯದಂತೆ ಬೀಚ್‌ ರೆಸಾರ್ಟ್‌ ಮಾಲಕರು ಸೂಕ್ತ ಕ್ರಮ ಕೈಗೊಳ್ಳಬೇಕು: ಎಸ್‌ಪಿ ಖಡಕ್‌ ಸೂಚನೆ

ಕುಮಟಾ: ಕುಮಟಾ: ಉತ್ತರಕನ್ನಡ ಜಿಲ್ಲೆಯ ಅರಬ್ಬಿ ಸಮುದ್ರ ತೀರದಲ್ಲಿ ಪ್ರವಾಸಿಗರು ಸುಮುದ್ರದ ಅಲೆಗೆ ಸಿಲುಕಿ ಅಪಾಯಕ್ಕೆ ಒಳಗಾಗುತ್ತಿರುವುದು ಹೆಚ್ಚುತ್ತಿದೆ. ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯು ಸೂಕ್ತ ಕ್ರಮ ಕೈಗೊಳ್ಳುತ್ತಿದೆ. ಮಳೆಗಾಲದಲ್ಲಿ ಪ್ರವಾಸಿಗರು ಸಮುದ್ರಕ್ಕೆ ಇಳಿಯದಂತೆ ಬೀಚ್‌ಗೆ ಹೊಂದಿಕೊಂಡಿರುವ ರೇಸಾರ್ಟ್‌ ಮಾಲಕರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ. ಇದರ ಬಗ್ಗೆ ರೆಸಾರ್ಟ್‌ ಮಾಲೀಕರೊಂದಿಗೆ ಸಭೆ ನಡೆಸಿದ್ದೇವೆ. … Continued

ಡಾ.ಬಾಳಿಗಾ ಕಾಮರ್ಸ್‌ ಕಾಲೇಜಿನಲ್ಲಿ ʼಕಾಮರ್ಸ್‌ ಫೆಸ್ಟ್’ ಕಾರ್ಯಕ್ರಮ, ವಾಣಿಜ್ಯ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ತೆರೆದ ಬಾಗಿಲು ಎಂದ ಉದ್ಯಮಿ ಮದನ ನಾಯಕ

ಕುಮಟಾ;ಭಾರತ ಬದಲಾಗುತ್ತಿದೆ. ಇಂದು ವಾಣಿಜ್ಯ ವ್ಯವಹಾರದಲ್ಲಿ ಭಾರತವು ಗುರುತಿಸಿಕೊಂಡಿದೆ. ಜಗತ್ತಿನಲ್ಲಿ ದೊಡ್ಡ ಪ್ರಮಾಣದಲ್ಲಿ ತರಬೇತುದಾರ ಉದ್ಯೋಗಿಗಳನ್ನು ಭಾರತ ನೀಡುತ್ತಿದೆ ಎಂದು ಉದ್ಯಮಿ ಮದನ ನಾಯಕ ಹೇಳಿದರು. ಡಾ.ಎ.ವಿ.ಬಾಳಿಗಾ ವಾಣಿಜ್ಯ ಮಹಾವಿದ್ಯಾಲಯದಲ್ಲಿ ವಾಣಿಜ್ಯ ‘ ಫೆಸ್ಟ್’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮಹಾವಿದ್ಯಾಲಯವು ಸಮರ್ಥ ಮಾನವ ಸಂಪನ್ಮೂಲ ಬೆಳೆಸುವಲ್ಲಿ ತನ್ನ ಪ್ರಯತ್ನವನ್ನು ಹೆಚ್ಚಿಸಬೇಕಾಗಿದೆ. ಆರ್ಥಿಕ ವಲಯದಲ್ಲಿ ಬದಲಾವಣೆಯಾಗುತ್ತಿದೆ. … Continued

ಸಿದ್ದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಗಂಗಾಧರ ಕೊಳಗಿ ಆಯ್ಕೆ

ಸಿದ್ದಾಪುರ: ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಮುಂದಿನ ಮೂರು ವರ್ಷದ ಅವಧಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಗಂಗಾಧರ ಕೊಳಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಯಶವಂತ ನಾಯ್ಕ ತ್ಯಾರ್ಸಿ, ಕಾರ್ಯದರ್ಶಿಯಾಗಿ ರಮೇಶ ಹೆಗಡೆ ಹಾರ್ಸಿಮನೆ ಹಾಗೂ ಖಜಾಂಚಿಯಾಗಿ ಶ್ರೀಧರ ಜಿ.ಹೆಗಡೆ ಮದ್ದಿನಕೇರಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಂಘದ ನಿಕಟಪೂರ್ವ ಅಧ್ಯಕ್ಷ ಗಣೇಶ ಭಟ್ಟ ಹೊಸೂರು,ಜಿಲ್ಲಾ ಕಾರ್ಯನಿರತ ಪತ್ರಕರ್ತರ … Continued

ಕುಮಟಾ: ದ್ವಿತೀಯ ಪಿಯುದಲ್ಲಿ ಕನ್ನಡಕ್ಕೆ ನೂರಕ್ಕೆ ನೂರು ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ

ಕುಮಟಾ: ಸಾಧನೆ ಮಾಡಬೇಕಾದರೆ ಕಠಿಣ ಪರಿಶ್ರಮ ಬೇಕಾಗುತ್ತದೆ. ವಿದ್ಯಾಥಿಗಳ ಪರಿಶ್ರಮ ಅವರ ಪರೀಕ್ಷೆಯಲ್ಲಿ ತಿಳಿಯುತ್ತದೆ. ಉತ್ತಮವಾಗಿ ಅಂಕ ಬಂದಾಗ ಪೊಷಕರಷ್ಟೇ ಅಲ್ಲ ನಾಡನ ಜನರು ಸಂತಸ ಪಡುತ್ತಾರೆ ಎಂದು ತಾಲೂಕಾ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಲ್.ಭಟ್ಟ ಹೇಳಿದರು. ಅವರು ಡಾ.ಎ.ವಿ.ಬಾಳಿಗಾ ವಾಣಿಜ್ಯ ಮಹಾವಿದ್ಯಾಲಯದಲ್ಲಿ ತಾಲೂಕಾ ಮಟ್ಟದಲ್ಲಿ ದ್ವಿತೀಯ ಪಿಯುಸಿಯಲ್ಲಿ ಕನ್ನಡದಲ್ಲಿ ಅತೀ ಹೆಚ್ಚು ಅಂಕಗಳಿಸಿದ್ದ ವಿದ್ಯಾರ್ಥಿಗಳಿಗೆ ಕುಮಟಾ … Continued

ದ್ವಿತೀಯ ಪಿಯು ಫಲಿತಾಂಶ: ಕುಮಟಾ ಬಾಳಿಗಾ ಕಲಾ-ವಿಜ್ಞಾನ ಪಿಯು ಕಾಲೇಜ್‌-ವಿಜ್ಞಾನದಲ್ಲಿ ಶುಭಾ ಭಟ್ಟ, ಕಲಾ ವಿಭಾಗದಲ್ಲಿ ಶಾಂಭವಿ ಶೆಟ್ಟಿ ಪ್ರಥಮ

ಕುಮಟಾ: ಡಾ.ಎ.ವಿ.ಬಾಳಿಗಾ ಪದವಿ ಪೂರ್ವ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಉತ್ತಮ ಸಾಧನೆ ಮಾಡಿದೆ. ವಿಜ್ಞಾನ ವಿಭಾಗದಲ್ಲಿ ಒಟ್ಟು ೨೨ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, ೩೩ ವಿದ್ಯಾರ್ಥಿಗಳು ಪ್ರಥಮದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಶುಭಾ ಪರಮೇಶ್ವರ ಭಟ್ಟ ೬೦೦ಕ್ಕೆ ೫೯೦ (೯೮.೩೩%)ಅಂಕಗಳನ್ನು ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಪೂಜಾ ವಿನಾಯಕ ಭಟ್ಟ ೬೦೦ಕ್ಕೆ ೫೮೧(೯೬.೮೩%) … Continued

ಕುಮಟಾ : ದ್ವಿತೀಯ ಪಿಯು ವಿಜ್ಞಾನ, ಸರಸ್ವತಿ ಪಿಯು ಕಾಲೇಜು ರಾಜ್ಯಮಟ್ಟದ ರ‍್ಯಾಂಕ್‌ನೊಂದಿಗೆ ನೂರಕ್ಕೆ ನೂರು ಫಲಿತಾಂಶ

ಕುಮಟಾ: ಕುಮಟಾದ ಕೊಂಕಣ ಎಜ್ಯುಕೇಶ್ಯನ್ ಟ್ರಸ್ಟಿನ ವಿಧಾತ್ರಿ ಅಕಾಡೆಮಿ ಸಂಯೋಗದ ಬಿ.ಕೆ. ಭಂಡಾರ‍್ಕರ್ ಸರಸ್ವತಿ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ದ್ವಿತೀಯ ಪಿಯು ಪರೀಕ್ಷೆಯಲ್ಲಿ ನೂರಕ್ಕೆ ನೂರು ಸಾಧನೆ ಮಾಡಿದೆ. ಈ ಬಾರಿಯು ರಾಜ್ಯ ಮಟ್ಟದ ರ‍್ಯಾಂಕ್‌ನೊಂದಿಗೆ ಶೇಕಡಾ ೧೦೦ಕ್ಕೆ ನೂರು ಫಲಿತಾಂಶ ದಾಖಲಿಸಿದೆ. ಕಾಲೇಜಿನ ವಿದ್ಯಾರ್ಥಿಗಳಾದ ರುಚಿತಾ ಮಂಜುನಾಥ ನಾಯಕ ೯೮.೩೩% … Continued