ನಿಮಗೆ ನಮ್ಮ ಬಾಗಿಲು ತೆರೆದಿದೆ: ಗುಲಾಂ ನಬಿಗೆ ಮೋದಿ

ನವದೆಹಲಿ: ನೀವು ರಾಜ್ಯಸಭೆಯಿಂದ ನಿವೃತ್ತಿಯಾದರೂ ನಮ್ಮ  ಬಾಗಿಲು ನಿಮಗೆ ಯಾವಾಗಲೂ ತೆರೆದಿರುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ರಾಜ್ಯ ಸಭೆಯಿಂದ ನಿವೃತ್ತಿಗೊಂಡ ಗುಲಾಂ ನಬಿ ಆಜಾದ್‌ ಅವರಿಗೆ ಹೇಳಿದರು. ರಾಜ್ಯಸಭೆಯಲ್ಲಿ ಆಜಾದ್‌ರನ್ನು ಬೀಳ್ಕೊಡುವ ಭಾಷಣ ಮಾಡಿದ ಪ್ರಧಾನಿ ಮೋದಿ, ನೀವು ಸದನದಲ್ಲಿ ಇಲ್ಲ ಎಂದು ಭಾವಿಸಬೇಡಿ. ನೀವು ನಿವೃತ್ತಿಯಾಗಲು ನಾನು ಬಿಡುವುದಿಲ್ಲ. ನಿಮ್ಮ ಸಲಹೆ ನಮಗೆ … Continued

ಪೆಟ್ರೋಲ್‌-ಡೀಸೆಲ್‌ ಬೆಲೆ ಗರಿಷ್ಠ

ನವದೆಹಲಿ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ದರ ಏರಿಕೆಯಾಗುತ್ತಿದ್ದು, ಪೆಟ್ರೋಲ್-ಡೀಸೆಲ್ ದರ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿದೆ. ಮಂಗಳವಾರ ಪ್ರತಿ ಲೀಟರ್‌ ಪೆಟ್ರೋಲ್-ಡೀಸೆಲ್‌ಗೆ ೩೫ ಪೈಸೆಯಷ್ಟು ಹೆಚ್ಚಳವಾಗಿದೆ. ದಿನದಿಂದ ದಿನಕ್ಕೆ ಇಂಧನ ದರ ಗಗನಮುಖಿಯಾಗುತ್ತಿದೆ. ಅದರಲ್ಲೂ ಡೀಸೆಲ್ ದರ ಹೆಚ್ಚಳವಾಗುತ್ತಿರುವುದರಿಂದ ಅಗತ್ಯ ವಸ್ತುಗಳ ದರ ಏರಿಕೆಯಾಗಿ ಶ್ರೀಸಾಮಾನ್ಯನ ಜೇಬಿಗೆ ಕತ್ತರಿ ಬಿದ್ದಿದೆ. ದೆಹಲಿಯಲ್ಲಿ ಪೆಟ್ರೋಲ್ ದರ ೮೭.೩೦ರೂ., ಮುಂಬೈನಲ್ಲಿ … Continued

ನಾನು ಭಾರತದ ಮುಸ್ಲಿಂ ಆಗಿರಲು ಹೆಮ್ಮೆ ಪಡುತ್ತೇನೆ: ಗುಲಾಂ ನಬಿ ಆಜಾದ್‌

ನವದೆಹಲಿ: ನಾನು ಭಾರತದ ಮುಸ್ಲಿಂ ಆಗಿರಲು ಹೆಮ್ಮೆ ಪಡುತ್ತೇನೆ ಎಂದು ಕಾಂಗ್ರೆಸ್‌ ಸಂಸದ ಹಾಗೂ ರಾಜ್ಯಸಭೆ ಪ್ರತಿ ಪಕ್ಷದ ನಾಯಕ ಗುಲಾಂ ನಬಿ ಆಜಾದ್‌ ಹೇಳಿದರು. ರಾಜ್ಯಸಭೆಯಲ್ಲಿ ತಮ್ಮ ವಿದಾಯ ಭಾಷಣದಲ್ಲಿ ಅವರು, ವಿಭಜನೆ ನಂತರ ಪಾಕಿಸ್ತಾನಕ್ಕೆ ಹೋಗದ ಅದೃಷ್ಟವಂತ ಜನರಲ್ಲಿ ನಾನೂ ಕೂಡ ಒಬ್ಬ. ಪಾಕಿಸ್ತಾನದ ಸ್ಥಿತಿ-ಗತಿಯನ್ನು ನೋಡಿದಾಗ ನಾನು ಹಿಂದೂಸ್ತಾನದ ಮುಸ್ಲಿಂ ಆಗಿರಲು … Continued

ಗುಲಾಂ ನಬಿ ನಿವೃತ್ತಿ: ರಾಜ್ಯಸಭೆಯಲ್ಲಿ ಪ್ರಧಾನಿ ಕಣ್ಣೀರು

ನವದೆಹಲಿ: ರಾಜ್ಯಸಭೆಯಿಂದ ನಿವೃತ್ತರಾದ ಗುಲಾಂ ನಬಿ ಆಜಾದ್ ಅವರನ್ನು ಗುಣಗಾನ ಮಾಡಿದ ಪ್ರಧಾನಿ ನರೇಂದ್ರ ಮೋದಿ ಭಾವೋದ್ವೇಗರಾಗಿ ಕಣ್ಣೀರು ಹಾಕಿದ್ದಾರೆ. ರಾಜ್ಯಸಭೆ ವಿರೋಧ ಪಕ್ಷದ ನಾಯಕರಾದ ಗುಲಾಂ ನಬಿ ಆಜಾದ್ ಅವರು ಸುದೀರ್ಘ ಸೇವೆ ಬಳಿಕ ನಿವೃತ್ತರಾದರು. ಅವರ ಬೀಳ್ಕೊಡುಗೆ ಸಂದರ್ಭದಲ್ಲಿ ಮಾತನಾಡಿದ ಮೋದಿ ಭಾವೋದ್ವೇಗಕ್ಕೆ ಒಳಗಾದರು. ರಾಜಕೀಯದಲ್ಲಿ ಪಕ್ಷ, ಸಿದ್ದಾಂತಗಳು ಬೇರೆ ಬೇರೆಯಾಗಿದ್ದಾಗ ಸಂಘರ್ಷವಾಗುವುದು, … Continued

ರಾಜಸ್ಥಾನ ರೈತರ ಭೇಟಿಗೆ ರಾಹುಲ್‌ ಪ್ರವಾಸ

ಜೈಪುರ: ಕೇಂದ್ರ ಕೃಷಿ ಕಾನೂನುಗಳ ವಿರುದ್ಧ ಆಂದೋಲನ ನಡೆಸುತ್ತಿರುವ ರಾಜಸ್ಥಾನ ರೈತರಿಗೆ ಬೆಂಬಲ ನೀಡುವುದರೊಂದಿಗೆ ಕಾಂಗ್ರೆಸ್‌ ಪಕ್ಷದ ನೆಲೆಯನ್ನು ಬಲಪಡಿಸುವ ದಿಸೆಯಲ್ಲಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಫೆ. 12 ರಂದು ಎರಡು ದಿನಗಳ ರಾಜಸ್ಥಾನ ಪ್ರವಾಸ ಕೈಗೊಳ್ಳಲಿದ್ದಾರೆ. ಫೆ.೧೨ರಂದು ಹನುಮಾನಗಢ ಜಿಲ್ಲೆಗೆ ಆಗಮಿಸುವ ರಾಹುಲ್‌ ಗಾಂಧಿ ಪಿಲಿಬಂಗ ಮಂಡಿಯಲ್ಲಿ ನಡೆಯುವ ರೈತರ ಸಭೆಯಲ್ಲಿ ಪಾಲ್ಗೊಳ್ಳುವರು. … Continued

ನಿತೀಶ್‌ ಸಂಪುಟ ವಿಸ್ತರಣೆ, ಶಾನವಾಜ್‌ ಹುಸೇನ್ ಸ್ಥಾನ

ಬಿಹಾರ: ಮುಖ್ಯಮಂತ್ರಿ ನಿತೀಶ್‌ ಕುಮಾರ ಸಚಿವ ಸಂಪುಟ ವಿಸ್ತರಣೆಯಾಗಿದ್ದು, ೧೭ಹೊಸ ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅಧಿಕಾರಕ್ಕೆ ಬಂದು ಮೂರು ತಿಂಗಳ ನಂತರ ಸಿಎಂ ನಿತೀಶ್‌ಕುಮಾರ ಸಚಿವ ಸಂಪುಟ ವಿಸ್ತರಣೆ ಮಾಡಿದ್ದು, ಚಿತ್ರನಟ ಸುಶಾಂತ ಸಿಂಗ್‌ ರಜಪೂತ್‌ರ ಸೋದರ ಸಂಬಂಧಿ ನೀರಜ್‌ ಸಿಂಗ್‌ ಬಾಬ್ಲು, ಅಜಯ ರಾಜ್‌, ಮಾಜಿ ಕೇಂದ್ರ ಸಚಿವ ಶಾನವಾಜ್‌ ಹುಸೇನ್‌ ಸಂಪುಟ … Continued

ತಪೋವನ: ಜನರ ರಕ್ಷಣೆಗೆ ಮುಂದುವರಿದ ಪ್ರಯತ್ನ

ಹಿಮಬಂಡೆ ಕುಸಿದಿದ್ದರಿಂದ ಉತ್ತರಾಖಂಡದ ಚಮೋಲಿ ಜಿಲ್ಲೆಯ ತಪೋವನ ಹೈಡ್ರಲ್‌ ಪ್ರಾಜೆಕ್ಟ್‌ ಸುರಂಗದಲ್ಲಿ ಸಿಲುಕಿದ ಜನರನ್ನು ಹೊರತೆಗೆಯುವ ಕಾರ್ಯಾಚರಣೆ ಮುಂದುವರೆದಿದ್ದು, ರಾತ್ರಿಯಿಡಿ ಸರಕು ಅವಶೇಷಗಳನ್ನು ತೆಗೆಯಲಾಗಿದೆ. ೨.೫ ಕಿ.ಮೀ. ಉದ್ದದ ಸುರಂಗದಲ್ಲಿ ಸುಮಾರು ೩೫ ಕಾರ್ಮಿಕರು ಸಿಲುಕಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಚಮೋಲಿಯ ಸುರಂಗದಲ್ಲಿ ಕಾರ್ಯಾಚರಣೆ ನಡೆಯುತ್ತಿದೆ, ಮಂಗಳವಾರ ದಾರಿ ತೆರವುಗೊಳಿಸಲು ಸಾಧ್ಯವಾಗಬಹುದು ಎಂದು ಉತ್ತರಾಖಂಡ ಪೊಲೀಸ್ ಮಹಾನಿರ್ದೇಶಕ … Continued

ಆರು ಪತ್ರಕರ್ತರ ಬಂಧನಕ್ಕೆ ತಡೆಯಾಜ್ಞೆ

ನವದೆಹಲಿ: ರೈತರ ಪ್ರತಿಭಟನೆಯಲ್ಲಿ ಸಿಖ್‌ ವ್ಯಕ್ತಿಯೊಬ್ಬನ ಸಾವಿನ ಕುರಿತ ಟ್ವೀಟ್‌ ಕುರಿತು ದಾಖಲಾದ ಪ್ರಕರಣಗಳಲ್ಲಿ ಕಾಂಗ್ರೆಸ್‌ ಶಾಸಕ ಶಶಿ ತರೂರ್‌ ಹಾಗೂ ರಾಜದೀಪ್‌ ಸರದೇಸಾಯಿ ಸೇರಿದಂತೆ ಆರು ಪತ್ರಕರ್ತರ ಬಂಧನಕ್ಕೆ ಸರ್ವೋಚ್ಚ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ನ್ಯಾಯಮೂರ್ತಿ ಎಸ್‌.ಎ.ಬೊಬ್ಡೆ ನೇತೃತ್ವದ ಮೂವರು ನ್ಯಾಯಾಧೀಶರ ನ್ಯಾಯಪೀಠ ಬಂಧನಕ್ಕೆ ತಡೆಯಾಜ್ಞೆ ನೀಡಿದೆ. ತರೂರ್‌, ರಾಜದೀಪ್‌ ಸರದೇಸಾಯಿ, ಮೃಣಾಲ್‌ ಪಾಂಡೆ, … Continued

ರಾಮ್‌ ತೇರಿ ಗಂಗಾ ಮೈಲಿ ಖ್ಯಾತಿಯ ರಾಜೀವ ಕಪೂರ್‌ ಇನ್ನಿಲ್ಲ

ರಾಮ್‌ ತೇರಿ ಗಂಗಾ ಮೈಲಿ ಖ್ಯಾತ ಹಿಂದಿ ಚಿತ್ರದ ನಟ ರಾಜೀವ ಕಪೂರ ನಿಧನರಾಗಿದ್ದಾರೆ. ೫೮ರ ಹರೆಯದ ರಾಜೀವ ಕಪೂರ್‌ ಮಂಗಳವಾರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ರಾಜಕಪೂರ-ಕೃಷ್ಣಾ ದಂಪತಿಯ ಅವರ ಕಿರಿಯ ಪುತ್ರರಾಗಿದ್ದ ರಾಜೀವ ಕಪೂರ್‌, ರಿಷಿ ಕಪೂರ ಹಾಗೂ ರಣಧೀರ ಕಪೂರ ಅವರ ಸೋದರರಾಗಿದ್ದರು. 1983 ರಲ್ಲಿ ಏಕ್ ಜಾನ್ ಹೈ ಹಮ್ ಚಿತ್ರದೊಂದಿಗೆ ಬಾಲಿವುಡ್‌ಗೆ … Continued

ರಾಕೇಶ ಅಸ್ತಾನೆಗೆ ಸಿಬಿಐ ಕ್ಲೀನ್‌ಚಿಟ್‌

ನವ ದೆಹಲಿ: ಸ್ಟರ್ಲಿಂಗ್ ಬಯೋಟೆಕ್ ಲಂಚ ಪ್ರಕರಣದಲ್ಲಿ ಕೇಂದ್ರ ತನಿಖಾ ದಳ (ಸಿಬಿಐ) ಗುಜರಾತ್ ಕೇಡರ್ ಐಪಿಎಸ್ ಅಧಿಕಾರಿ ಮತ್ತು ಪ್ರಸ್ತುತ ಎನ್‌ಸಿಬಿ ಮುಖ್ಯಸ್ಥ ರಾಕೇಶ್ ಅಸ್ತಾನಾಗೆ ಕ್ಲೀನ್ ಚಿಟ್ ನೀಡಿದೆ. ಸಿಬಿಐ ಮುಖ್ಯಸ್ಥ ಹುದ್ದೆಗೆ ಮುಂಚೂಣಿಯಲ್ಲಿರುವ ಶ್ರೀ ಅಸ್ತಾನಾ, ಸಂದೇಸರ ಸಹೋದರರು ನಿರ್ವಹಿಸುತ್ತಿರುವ ಸ್ಟರ್ಲಿಂಗ್‌ ಬಯೋಟೆಕ್‌ ಅವ್ಯವಹಾರದಲ್ಲಿ ಹಣ ಪಡೆದುಕೊಂಡಿದ್ದಾರೆಂಬ ಆರೋಪ ಎದುರಿಸುತ್ತಿದ್ದಾರೆ. ಕೈಬರಹದ ಡೈರಿಗಳಲ್ಲಿ, … Continued