ವಿಶ್ವದ ಟಾಪ್‌ 15 ಶ್ರೀಮಂತರ ಪಟ್ಟಿಯಿಂದಲೂ ಹೊರಬಿದ್ದ ಗೌತಮ್‌ ಅದಾನಿ…! ಈಗ ಮುಕೇಶ ಅಂಬಾನಿ ಏಷ್ಯಾದ ನಂ.1 ಶ್ರೀಮಂತ

ನವದೆಹಲಿ : ಕಳೆದ ಕೆಲ ದಿನಗಳಿಂದ ಅದಾನಿ ಗ್ರೂಪ್‌ ಷೇರುಗಳು ಭಾರೀ ಕುಸಿತ ಕಾಣುತ್ತಿವೆ. ಅದಾನಿ ಸಮೂಹದ ಕಂಪನಿಗಳ ಮಾರುಕಟ್ಟೆ ಕ್ಯಾಪ್ ಸುಮಾರು $ 100 ಬಿಲಿಯನ್‌ನಷ್ಟು ಕುಸಿದಿದೆ. ಕಳೆದ ವಾರ ಅಮೆರಿಕ (US) ಮೂಲದ ಶಾರ್ಟ್‌ ಸೆಲ್ಲರ್‌ ಸಂಸ್ಥೆ ‘ಹಿಂಡೆನ್‌ಬರ್ಗ್ ರಿಸರ್ಚ್‌’ನ ವರದಿಯು ಅದಾನಿ ಗ್ರೂಪ್ ಸ್ಟಾಕ್ ಮ್ಯಾನಿಪ್ಯುಲೇಷನ್ ಮತ್ತು ಖಾತೆ ವಂಚನೆಯಲ್ಲಿ ತೊಡಗಿಸಿಕೊಂಡಿದೆ … Continued

ಅದಾನಿ ಗ್ರೂಪ್‌ಗೆ ಸಾಲ : ಭಾರತೀಯ ಬ್ಯಾಂಕ್‌ಗಳಿಂದ ಮಾಹಿತಿ ಕೇಳಿದ ಆರ್‌ಬಿಐ

ನವದೆಹಲಿ: ಅಮೆರಿಕದ ಹಿಂಡಬ್‌ಬರ್ಗ್ ವರದಿಯ ಬಳಿಕ ಅದಾನಿ ಗ್ರೂಪ್ ಕಂಪನಿಯ ಷೇರುಗಳು ನಿರಂತರವಾಗಿ ಕುಸಿತ ಕಾಣುತ್ತಿದೆ. ಹಾಗೆಯೇ ಸಂಸ್ಥೆಯು ಬುಧವಾರ ತನ್ನ 20,000 ಕೋಟಿ ರೂಪಾಯಿಗಳ ಎಫ್‌ಪಿಒ ಹಿಂಪಡೆಯುವ ನಿರ್ಧಾರವನ್ನು ಕೂಡಾ ಘೋಷಣೆ ಮಾಡಿದೆ. ಇದೆಲ್ಲದರ ನಡುವೆ ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ, ಅದಾನಿ ಗ್ರೂಪ್‌ಗೆ ಯಾವೆಲ್ಲಾ ಬ್ಯಾಂಕ್‌ಗಳು ಸಾಲ ನೀಡಿವೆ ಹಾಗೂ ಎಷ್ಟು ಪ್ರಮಾಣದ … Continued

ಅದಾನಿ ಷೇರು ಕುಸಿತದ ಬಗ್ಗೆ ಸಂಸದೀಯ ಸಮಿತಿ ತನಿಖೆಗೆ ಪ್ರತಿಪಕ್ಷಗಳ ಒತ್ತಾಯ

ನವದೆಹಲಿ : ಅಮೆರಿಕದ ಆರೋಪಗಳಿಗೆ ಸಂಬಂಧಿಸಿದಂತೆ ಅದಾನಿ ಗ್ರೂಪ್ ವಿರುದ್ಧ ಆಪಾದಿತ “ಆರ್ಥಿಕ ಹಗರಣ” ಕುರಿತು ಸಂಸದೀಯ ಸಮಿತಿ ಅಥವಾ ಭಾರತದ ಮುಖ್ಯ ನ್ಯಾಯಮೂರ್ತಿ ನೇತೃತ್ವದ ಸುಪ್ರೀಂ ಕೋರ್ಟ್ ನೇಮಿಸಿದ ಸಮಿತಿಯಿಂದ ತನಿಖೆ ನಡೆಸಬೇಕೆಂದು ವಿರೋಧ ಪಕ್ಷಗಳು ಗುರುವಾರ ಒತ್ತಾಯಿಸಿವೆ. ಸಂಸತ್ತಿನ ಬಜೆಟ್ ಅಧಿವೇಶನದ ಮೂರನೇ ದಿನದಂದು ಆರಂಭವಾದ ಕೆಲವೇ ಹೊತ್ತಿನಲ್ಲಿ ಲೋಕಸಭೆ ಮತ್ತು ರಾಜ್ಯಸಭೆಯನ್ನು … Continued

ಅಯೋಧ್ಯೆ ರಾಮ ಮಂದಿರ ನಿರ್ಮಾಣ : ನೇಪಾಳದಿಂದ ಅಯೋಧ್ಯೆಗೆ ಬಂತು 6 ಕೋಟಿ ವರ್ಷಗಳಷ್ಟು ಹಳೆಯ ಅಪರೂಪದ ಸಾಲಿಗ್ರಾಮ ಶಿಲೆಗಳು…!

ನವದೆಹಲಿ: ಅಯೋಧ್ಯೆಯ ರಾಮಮಂದಿರದ ಗರ್ಭಗುಡಿಯಲ್ಲಿ ಭಗವಾನ್ ರಾಮ ಮತ್ತು ಜಾನಕಿ ದೇವಿಯ ವಿಗ್ರಹವನ್ನು ಕೆತ್ತಲು ಎರಡು ಅಪರೂಪದ ಸಾಲಿಗ್ರಾಮ ಶಿಲೆಗಳು ಗುರುವಾರ (ಫೆಬ್ರವರಿ 2, 2023) ನೇಪಾಳದಿಂದ ಉತ್ತರ ಪ್ರದೇಶದ ಅಯೋಧ್ಯೆಗೆ ತಲುಪಿದವು. ವಿಶ್ವ ಹಿಂದೂ ಪರಿಷತ್‌ನ ರಾಷ್ಟ್ರೀಯ ಕಾರ್ಯದರ್ಶಿ ರಾಜೇಂದ್ರ ಸಿಂಗ್ ಪಂಕಜ್ ನೇಪಾಳದ ಮುಸ್ತಾಂಗ್ ಜಿಲ್ಲೆಯಿಂದ ಎರಡು ಪವಿತ್ರ ಶಿಲೆಗಳನ್ನು ಬರಮಾಡಿಕೊಂಡರು. ಈ … Continued

‘ಹೂಡಿಕೆದಾರರ ಹಿತಾಸಕ್ತಿ ಅತಿಮುಖ್ಯ…’: 20,000 ಕೋಟಿ ಮೌಲ್ಯದ ಎಫ್‌ಪಿಒ ಹಿಂಪಡೆದ ನಂತರ ಗೌತಮ್ ಅದಾನಿ ವೀಡಿಯೊ ಸಂದೇಶ

ನವದೆಹಲಿ: ಅದಾನಿ ಎಂಟರ್‌ಪ್ರೈಸಸ್ 20,000 ಕೋಟಿ ಮೌಲ್ಯದ ಎಫ್‌ಪಿಒ ರದ್ದುಗೊಳಿಸಿದ ಕೆಲವೇ ಗಂಟೆಗಳ ನಂತರ, ಬಿಲಿಯನೇರ್ ಗೌತಮ್ ಅದಾನಿ ಈ ಬಗ್ಗೆ ವೀಡಿಯೊ ಸಂದೇಶ ಹಂಚಿಕೊಂಡಿದ್ದಾರೆ. ಗೌತಮ್ ಅದಾನಿ ಅವರು ಎಫ್‌ಪಿಒ ರದ್ದುಗೊಳಿಸಲು ಮತ್ತು ಹೂಡಿಕೆದಾರರಿಗೆ ತಮ್ಮ ಹಣವನ್ನು ಹಿಂದಿರುಗಿಸಲು ನಿರ್ಧರಿಸಲು ಕಾರಣವಾದ ಅಂಶಗಳ ಬಗ್ಗೆ ವಿವರಿಸಿದ್ದಾರೆ. “ನನಗೆ ಹೂಡಿಕೆದಾರರ ಹಿತಾಸಕ್ತಿ ಅತ್ಯಂತ ಮಹತ್ವದ್ದಾಗಿದೆ ಮತ್ತು … Continued

ಚಿತ್ರದುರ್ಗ ಸೇರಿ ಭಾರತದ 33 ನಗರಗಳಲ್ಲಿ ಜಿಯೋ ಟ್ರೂ 5ಜಿ ಸೇವೆ ಆರಂಭ

ಚಿತ್ರದುರ್ಗ: ರಿಲಯನ್ಸ್ ಜಿಯೋ ಕರ್ನಾಟಕದ ಚಿತ್ರದುರ್ಗ ಸೇರಿದಂತೆ ಭಾರತದ 33 ಹೆಚ್ಚುವರಿ ನಗರಗಳಲ್ಲಿ ತನ್ನ ಟ್ರೂ 5ಜಿ ಸೇವೆಗಳನ್ನು ಪ್ರಾರಂಭಿಸಿರುವುದಾಗಿ ಘೋಷಿಸಿದೆ. ಇದರೊಂದಿಗೆ, ಭಾರತದ 225 ನಗರಗಳಲ್ಲಿ ಜಿಯೋ ಈಗ ಜಿಯೋ ಟ್ರೂ 5ಜಿ ಸೇವೆಗಳನ್ನು ನೀಡುತ್ತಿದೆ. ರಿಲಯನ್ಸ್ ಜಿಯೋ ಚಿತ್ರದುರ್ಗದಲ್ಲಿ 5ಜಿ ಸೇವೆಗಳನ್ನು ಪ್ರಾರಂಭಿಸಿದ ಮೊದಲ ಮತ್ತು ಏಕೈಕ ಆಪರೇಟರ್ ಆಗಿದೆ. ಇಂದಿನಿಂದ ಪ್ರಾರಂಭವಾಗುವ … Continued

2 ವರ್ಷಗಳ ನಂತರ ಜೈಲಿನಿಂದ ಹೊರಬಂದ ಕೇರಳದ ಪತ್ರಕರ್ತ ಸಿದ್ದಿಕ್ ಕಪ್ಪನ್

ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಅಲಹಾಬಾದ್ ಹೈಕೋರ್ಟ್‌ನಿಂದ ಜಾಮೀನು ಪಡೆದ ಕೇರಳದ ಪತ್ರಕರ್ತ ಸಿದ್ದಿಕ್ ಕಪ್ಪನ್ ಎರಡು ವರ್ಷಗಳ ನಂತರ ಲಕ್ನೋ ಜೈಲಿನಿಂದ ಹೊರಬಂದಿದ್ದಾರೆ. ಎರಡು ವರ್ಷಗಳ ಹಿಂದೆ ಸಿದ್ದಿಕ್ ಕಪ್ಪನ್ ಅವರನ್ನು ಉತ್ತರ ಪ್ರದೇಶದ ಹತ್ರಾಸ್‌ಗೆ ತೆರಳುತ್ತಿದ್ದಾಗ ಬಂಧಿಸಲಾಯಿತು, ಅಲ್ಲಿ ದಲಿತ ಮಹಿಳೆಯೊಬ್ಬರು ಅತ್ಯಾಚಾರಕ್ಕೊಳಗಾದ ನಂತರ ಸಾವಿಗೀಡಾಗಿದ್ದರು. ಅವರು ಮತ್ತು ಇತರ ಮೂವರು … Continued

ಕೇಂದ್ರ ಬಜೆಟ್‌ 2023: ವಿಶ್ವಕರ್ಮರಿಗೆ ವಿಶೇಷ ಯೋಜನೆ ಕೌಶಲ್ ಸಮ್ಮಾನ್ ಪ್ರಕಟ

ನವದೆಹಲಿ: ಬುಧವಾರ ಮಂಡಿಸಲಾದ ಕೇಂದ್ರ ಬಜೆಟ್‌ನಲ್ಲಿ ಭಾರತಾದ್ಯಂತ ನೂರಾರು ವರ್ಷಗಳಿಂದ ಕರಕುಶಲ ಕೆಲಸ, ವಸ್ತುಗಳ ತಯಾರಿಕೆಯಲ್ಲಿ ನಿಷ್ಣಾತರಾಗಿರುವ ವಿಶ್ವಕರ್ಮ ಜನಾಂಗದವರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಲಾಗಿದೆ. ಪಿಎಂ ವಿಕಾಸ್ ಅಡಿ ‘ಪ್ರಧಾನ ಮಂತ್ರಿ ವಿಶ್ವಕರ್ಮ ಕೌಶಲ್ ಸಮ್ಮಾನ್’ ಯೋಜನೆ ಪ್ರಕಟಿಸಲಾಗಿದೆ, ಈ ಯೋಜನೆಯಡಿ ಫಲಾನುಭವಿಗಳು ಸಹಾಯಧನ, ಸಾಲ ಸೌಲಭ್ಯ, ತರಬೇತಿ, ಆಧುನಿಕ ಕೌಶಲ್ಯ ಅಳವಡಿಕೆಗೆ ಬೇಕಾದ … Continued

ಸಂಪೂರ್ಣ ಚಂದಾದಾರಿಕೆ ಆಗಿರುವ 20,000 ರೂ.ಕೋಟಿ ಎಫ್‌ಪಿಒ ರದ್ದುಗೊಳಿಸಿದ ಅದಾನಿ ಎಂಟರ್‌ಪ್ರೈಸಸ್ : ಹೂಡಿಕೆದಾರರಿಗೆ ಹಣ ಹಿಂತಿರುಗಿಸಲು ನಿರ್ಧಾರ

ನವದೆಹಲಿ: ಅದಾನಿ ಎಂಟರ್‌ಪ್ರೈಸಸ್ ತನ್ನ 20,000-ಕೋಟಿ ಫಾಲೋ-ಆನ್ ಸಾರ್ವಜನಿಕ ಕೊಡುಗೆಯನ್ನು (ಎಫ್‌ಪಿಒ) ಹಿಂಪಡೆಯಲು ನಿರ್ಧರಿಸಿದೆ ಮತ್ತು ಹಣವನ್ನು ಹೂಡಿಕೆದಾರರಿಗೆ ಹಿಂತಿರುಗಿಸುವುದಾಗಿ ಬುಧವಾರ ಹೇಳಿದೆ. ಮಂಗಳವಾರ ಆಫರ್‌ನ ಕೊನೆಯ ದಿನದಂದು ಕಂಪನಿಯ ಎಫ್‌ಪಿಒ(FPO)ಕ್ಕೆ ಸಂಪೂರ್ಣವಾಗಿ ಚಂದಾದಾರರಾದ ಒಂದು ದಿನದ ನಂತರ ಈ ಪ್ರಕಟಣೆ ಬಂದಿದೆ. “ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್., (AEL) ಮಂಡಳಿಯು ಸಂಪೂರ್ಣ ಚಂದಾದಾರರಾಗಿರುವ FPO ನೊಂದಿಗೆ … Continued

ಕೇಂದ್ರ ಬಜೆಟ್ 2023: ಹೊಸ ತೆರಿಗೆ ಪದ್ಧತಿ -ಹಳೆಯ ತೆರಿಗೆ ಪದ್ಧತಿ – ಏನು ಬದಲಾಗಿದೆ ಎಂಬುದನ್ನು ನೋಡಿ

ನವದೆಹಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ವೈಯಕ್ತಿಕ ತೆರಿಗೆದಾರರಿಗೆ ವಾರ್ಷಿಕ ₹ 5 ಲಕ್ಷದಿಂದ ₹ 7 ಲಕ್ಷಕ್ಕೆ ರಿಯಾಯಿತಿ ಮಿತಿಯನ್ನು ಹೆಚ್ಚಿಸಿದ್ದಾರೆ. “.. ಪ್ರಸ್ತುತ ₹ 5 ಲಕ್ಷದವರೆಗಿನ ಆದಾಯ ಹೊಂದಿರುವವರು ಹಳೆಯ ಮತ್ತು ಹೊಸ ತೆರಿಗೆ ಪದ್ಧತಿಯಲ್ಲಿ ಯಾವುದೇ ಆದಾಯ ತೆರಿಗೆಯನ್ನು ಪಾವತಿಸಬೇಕಾಗಿಲ್ಲ. ಹೊಸ ತೆರಿಗೆ ಪದ್ಧತಿಯಲ್ಲಿ ರಿಯಾಯಿತಿ ಮಿತಿಯನ್ನು ₹ … Continued