ಚೀನಾ 1962ರಲ್ಲಿ ಭಾರತದ ಭೂಮಿ ಆಕ್ರಮಿಸಿಕೊಂಡಿತ್ತು: ರಾಹುಲ್ ಗಾಂಧಿ ವಿರುದ್ಧ ವಿದೇಶಾಂಗ ಸಚಿವ ಜೈಶಂಕರ್ ವಾಗ್ದಾಳಿ

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ವಿದೇಶಾಂಗ ಸಚಿವ ಎಸ್ ಜೈಶಂಕರ್ ಶನಿವಾರ ವಾಗ್ದಾಳಿ ನಡೆಸಿದ್ದು, ಚೀನಾ ಆಕ್ರಮಿಸಿಕೊಂಡಿದೆ ಎಂದು ವಿರೋಧ ಪಕ್ಷದ ನಾಯಕರು ಹೇಳುವ ಭೂಮಿಯನ್ನು ವಾಸ್ತವವಾಗಿ 1962ರಲ್ಲಿ ಚೀನಾ ಆಕ್ರಮಿಸಿಕೊಂಡಿದೆ ಎಂದು ಹೇಳಿದ್ದಾರೆ. ಕೇವಲ ರಾಜಕೀಯಕ್ಕಾಗಿ ಕೆಲವರು ಉದ್ದೇಶಪೂರ್ವಕವಾಗಿ ಚೀನಾ ವಿಚಾರದಲ್ಲಿ ಜನರಿಗೆ ತಪ್ಪು ಮಾಹಿತಿ ಹರಡುತ್ತಿದ್ದಾರೆ. ಇದು ಇತ್ತೀಚೆಗೆ ನಡೆದಿದೆ … Continued

ಪ್ರಧಾನಿ ಮೋದಿ ಕುರಿತು ಬಿಬಿಸಿ ಸರಣಿ ವಿವಾದ : ಬ್ರಿಟೀಷರ ದೌರ್ಜನ್ಯದ ಕುರಿತು ಬಿಬಿಸಿ ಸಾಕ್ಷ್ಯಚಿತ್ರ ಯಾಕೆ ಮಾಡಿಲ್ಲ-ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಪ್ರಶ್ನೆ

ನವದೆಹಲಿ: ಗುಜರಾತ್ ಗಲಭೆ ಕುರಿತು ಬಿಬಿಸಿ ಸಾಕ್ಷ್ಯಚಿತ್ರವನ್ನು ನಿರ್ಮಿಸಿದವರು ಬ್ರಿಟಿಷರ ದೌರ್ಜನ್ಯದ ಬಗ್ಗೆ ಏಕೆ ಸರಣಿ ಮಾಡಲಿಲ್ಲ ಎಂದು ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಪ್ರಶ್ನಿಸಿದ್ದಾರೆ. ಭಾರತವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಮತ್ತು ವಿದೇಶಿ ಸಾಕ್ಷ್ಯಚಿತ್ರ ತಯಾರಕರು “ನಿರಾಶೆ ಅನುಭವಿಸುತ್ತಿದ್ದಾರೆ” ಎಂದು ಅವರು ಹೇಳಿದರು. “ಭಾರತವು ಪ್ರಪಂಚದಾದ್ಯಂತ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಆದ್ದರಿಂದ ಈ ಜನರು ನಿರಾಶೆ … Continued

ರಾಷ್ಟ್ರಪತಿ ಭವನದ ಐತಿಹಾಸಿಕ ಮೊಘಲ್ ಉದ್ಯಾನವನಕ್ಕೆ ‘ಅಮೃತ ಉದ್ಯಾನ’ ಎಂದು ಮರುನಾಮಕರಣ ಮಾಡಿದ ಸರ್ಕಾರ

ನವದೆಹಲಿ: ದೆಹಲಿಯ ರಾಷ್ಟ್ರಪತಿ ಭವನದಲ್ಲಿರುವ ಮೊಘಲ್ ಗಾರ್ಡನ್ಸ್ ಹೆಸರನ್ನು ಕೇಂದ್ರ ಸರ್ಕಾರ ಶನಿವಾರ ಬದಲಾವಣೆ ಮಾಡಿದ್ದು, ಅದಕ್ಕೆ ‘ಅಮೃತ ಉದ್ಯಾನ’ ಎಂದು ಮರುನಾಮಕರಣ ಮಾಡಿದೆ. ಭಾರತದ ಸ್ವಾತಂತ್ರ್ಯದ 75 ವರ್ಷಗಳನ್ನು ಗುರುತಿಸುವ ‘ಅಮೃತ ಮಹೋತ್ಸವ’ದ ಥೀಮ್‌ಗೆ ಅನುಗುಣವಾಗಿ ಕೇಂದ್ರ ಸರ್ಕಾರವು ಮೊಘಲ್ ಗಾರ್ಡನ್ಸ್ ಹೆಸರನ್ನು ಅಮೃತ ಉದ್ಯಾನ ಎಂದು ಬದಲಾಯಿಸಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ … Continued

ರಾಮಮಂದಿರ ನಿರ್ಮಾಣವಾಗುತ್ತಿದೆ, ಆದರೆ ರಾಮರಾಜ್ಯವೆಲ್ಲಿ?: ಪ್ರವೀಣ್ ತೊಗಾಡಿಯಾ ಪ್ರಶ್ನೆ

ಅಮೇಥಿ: ಅಯೋಧ್ಯಾದಲ್ಲಿ ರಾಮ ಮಂದಿರ ನಿರ್ಮಾಣವಾಗುತ್ತಿದೆ. ಆದರೆ ದೇಶದಲ್ಲಿ ಇನ್ನೂ ರಾಮರಾಜ್ಯ ಮಾತ್ರ ಸ್ಥಾಪನೆಯಾಗಿಲ್ಲ ಎಂದು ಅಂತಾರಾಷ್ಟ್ರೀಯ ಹಿಂದೂ ಪರಿಷದ್ ಮುಖ್ಯಸ್ಥ ಪ್ರವೀಣ್ ತೊಗಾಡಿಯಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶುಕ್ರವಾರ ಸಂಜೆ ಉತ್ತರ ಪ್ರದೇಶ ಅಮೇಥಿಯಲ್ಲಿನ ಪುರೆ ರಾಮದೀನ್ ಗ್ರಾಮದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ತೊಗಾಡಿಯಾ, “ಅಯೋಧ್ಯಾದಲ್ಲಿ ರಾಮಮಂದಿರ ತಲೆ ಎತ್ತುತ್ತಿದೆ. ಆದರೆ ‘ರಾಮರಾಜ್ಯ’ ಮಾತ್ರ ಎಲ್ಲಿಯೂ ಕಾಣಿಸುತ್ತಿಲ್ಲ. … Continued

ಗ್ವಾಲಿಯರ್ ಬಳಿ ಸುಖೋಯ್, ಮಿರಾಜ್ ಫೈಟರ್ ಜೆಟ್ ಪತನ : ಓರ್ವ ಪೈಲಟ್ ಸಾವು

ನವದೆಹಲಿ: ಸುಖೋಯ್ ಸು-30 ಮತ್ತು ಮಿರಾಜ್ 2000 ಎಂಬ ಎರಡು ಯುದ್ಧ ವಿಮಾನಗಳು ಶನಿವಾರ ಮಧ್ಯಪ್ರದೇಶದ ಗ್ವಾಲಿಯರ್ ಬಳಿ ಪತನಗೊಂಡು ಭಾರತೀಯ ವಾಯುಪಡೆಯ ಪೈಲಟ್ ಮೃತಪಟ್ಟಿದ್ದಾರೆ. Su-30 ನಲ್ಲಿದ್ದ ಇಬ್ಬರು ಪೈಲಟ್‌ಗಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದರೆ, ಮಿರಾಜ್‌ನಲ್ಲಿನ ಪೈಲಟ್ ಅಪಘಾತದಲ್ಲಿ ಮಾರಣಾಂತಿಕವಾಗಿ ಗಾಯಗೊಂಡ ನಂತರ ಮೃತಪಟ್ಟಿದ್ದಾರೆ. ಪತನಗೊಂಡ ವಿಮಾನದ ಅವಶೇಷಗಳು ರಾಜಸ್ಥಾನದ ಭರತ್‌ಪುರ ಮತ್ತು ಮಧ್ಯಪ್ರದೇಶದ ಮೊರೆನಾದಲ್ಲಿ … Continued

ದಿನಕ್ಕೆ 500 ರೂ.ದುಡಿಯುವ ರಸ್ತೆ ಬದಿ ಬಟ್ಟೆ ವ್ಯಾಪಾರಿ ಮೇಲೆ 366 ಕೋಟಿ ರೂ. ಜಿಎಸ್‌ಟಿ ವಂಚನೆ ಕೇಸ್‌…!

ಆಗ್ರಾ: ಉತ್ತರ ಪ್ರದೇಶದ ಆಗ್ರಾದಿಂದ ಬೀದಿಬದಿಯಲ್ಲಿ ಬಟ್ಟೆ ಮಾರಿಕೊಂಡು ಜೀವನ ಸಾಗಿಸುತ್ತಿದ್ದ ಬೀದಿಬದಿ ವ್ಯಾಪಾರಿಯೊಬ್ಬರ ಮೇಲೆ 366 ಕೋಟಿ ಜಿಎಸ್‌ಟಿ ವಂಚನೆ ಆರೋಪ ಹೊರಿಸಿದ ಆಘಾತಕಾರಿ ವಿದ್ಯಮಾನವೊಂದು ಬೆಳಕಿಗೆ ಬಂದಿದೆ. ವರದಿಗಳ ಪ್ರಕಾರ, ಬಟ್ಟೆ ಮಾರಾಟಗಾರ ದಿನಕ್ಕೆ 500 ರೂ.ಗಳನ್ನು ದುಡಿಯುತ್ತಾರೆ. ಅವರ ಮೇಲೆ 366 ಕೋಟಿ ರೂ.ಗಳ ಜಿಎಸ್‌ಟಿ ವಂಚನೆ ಆರೋಪ ಹೊರಿಸಲಾಗಿದೆ…! ವ್ಯಕ್ತಿಯನ್ನು … Continued

ಈ 5 ಅದಾನಿ ಷೇರುಗಳಲ್ಲಿ ತೀವ್ರ ಕುಸಿತ: ಎರಡು ದಿನಗಳಲ್ಲಿ ₹16,580 ಕೋಟಿ ಕಳೆದುಕೊಂಡ ಎಲ್‌ಐಸಿ…!

ಮುಂಬೈ: ಸ್ಟಾಕ್ ಮಾರ್ಕೆಟ್ ರಕ್ತಪಾತದ ಮಧ್ಯೆ, ಹಿಂಡೆನ್‌ಬರ್ಗ್ ರಿಸರ್ಚ್ ವರದಿಯು ಅದಾನಿ ಸಮೂಹದ ಷೇರುಗಳಿಗೆ ಮತ್ತಷ್ಟು ಹಾನಿ ಮಾಡಿದೆ. ಕಳೆದ ಎರಡು ಅವಧಿಗಳಲ್ಲಿ, ಅದಾನಿ ಸಮೂಹದ ಷೇರುಗಳು ಪ್ರಮುಖ ಬೆಂಚ್‌ಮಾರ್ಕ್ ಸೂಚ್ಯಂಕಗಳಿಗಿಂತ ಬಹಳ ಕುಸಿದಿದೆ. ಇದು ಅದರ ಚಿಲ್ಲರೆ ಮತ್ತು ಸಾಂಸ್ಥಿಕ ಹೂಡಿಕೆದಾರರಿಗೆ ಭಾರಿ ನಷ್ಟ ಉಂಟು ಮಾಡಲು ಕಾರಣವಾಯಿತು. ಭಾರತದ ಜೀವ ವಿಮಾ ನಿಗಮವು … Continued

ಗಂಡ-ಹೆಂಡತಿ ಜಗಳದ ವೇಳೆ ಗಂಡನ ನಾಲಿಗೆಯನ್ನೇ ಕಚ್ಚಿ ತುಂಡರಿಸಿದ ಪತ್ನಿ…!

ಲಕ್ನೋ: ತವರು ಮನೆಗೆ ಹೋಗಿದ್ದ ಪತ್ನಿಗೆ ಮನೆಗೆ ಬರುವಂತೆ ಮನವೊಲಿಸಲು ಯತ್ನಿಸಿದ ವೇಳೆ ಹಂಡೆ-ಹೆಂಡತಿ ಮಧ್ಯೆ ಮಾತಿಗೆ ಮಾತು ಬೆಳೆದು ಜಗಳವಾಗಿ ಪತ್ನಿಯು ಗಂಡನ ನಾಲಿಗೆಯನ್ನೇ ಕಚ್ಚಿ ತುಂಡರಿಸಿದ ವಿಲಕ್ಷಣ ಘಟನೆ ನಡೆದಿದೆ. ವರದಿಗಳ ಪ್ರಕಾರ, ಸಲ್ಮಾ ಎಂಬ ಮಹಿಳೆ ತನ್ನ ಮಕ್ಕಳೊಂದಿಗೆ ಉತ್ತರ ಪ್ರದೇಶದ ಲಕ್ನೋದ ಠಾಕೂರ್‌ಗಂಜ್ ಪ್ರದೇಶದ ತನ್ನ ತವರು ಮನೆಯಲ್ಲಿ ಸ್ವಲ್ಪ … Continued

ಧನ್‌ಬಾದ್‌ನ ಆಸ್ಪತ್ರೆಯಲ್ಲಿ ಅಗ್ನಿ ದುರಂತ: ವೈದ್ಯ ದಂಪತಿ ಸೇರಿ 6 ಮಂದಿ ಸಾವು

ಧನಬಾದ್‌ : ಶುಕ್ರವಾರ ರಾತ್ರಿ ಜಾರ್ಖಂಡ್‌ನ ಧನ್‌ಬಾದ್‌ನ ಪುರಾನಾ ಬಜಾರ್‌ನಲ್ಲಿರುವ ಹಜ್ರಾ ಆಸ್ಪತ್ರೆಯಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡ ನಂತರ ಇಬ್ಬರು ವೈದ್ಯರು ಸೇರಿದಂತೆ ಕನಿಷ್ಠ ಆರು ಜನರು ಉಸಿರುಗಟ್ಟಿ ಸಾವಿಗೀಡಾಗಿದ್ದಾರೆ ಹಾಗೂ ಒಂಬತ್ತು ಮಂದಿಯನ್ನು ರಕ್ಷಿಸಲಾಗಿದೆ. ಮೃತರನ್ನು ಡಾ.ವಿಕಾಸ್ ಹಜ್ರಾ ಮತ್ತು ಅವರ ಪತ್ನಿ ಡಾ. ಪ್ರೇಮಾ ಹಜ್ರಾ ಮತ್ತು ಆಸ್ಪತ್ರೆಯ ಇತರ ಉದ್ಯೋಗಿಗಳು ಎಂದು … Continued

26000 ಐಸ್ ಕ್ರೀಮ್-ಸ್ಟಿಕ್ ಬಳಸಿ ರಂಗೋಲಿ ಬಿಡಿಸಿ ಸಿಂಗಾಪುರ್ ಬುಕ್ ಆಫ್ ರೆಕಾರ್ಡ್ಸ್‌ಗೆ ಭಾರತೀಯ ತಾಯಿ-ಮಗಳು ಸೇರ್ಪಡೆ

ಸಿಂಗಾಪುರ: ಇಲ್ಲಿನ ಭಾರತೀಯ ತಾಯಿ ಮತ್ತು ಮಗಳ ತಂಡವು 26,000 ಐಸ್‌ಕ್ರೀಂ ಸ್ಟಿಕ್‌ಗಳನ್ನು ಬಳಸಿ 6-6 ಮೀಟರ್‌ನ ರಂಗೋಲಿ ಕಲಾಕೃತಿಯನ್ನು ರಚಿಸುವ ಮೂಲಕ ಸಿಂಗಾಪುರ ಬುಕ್ ಆಫ್ ರೆಕಾರ್ಡ್ಸ್‌ಗೆ ಸೇರ್ಪಡೆಯಾಗಿದ್ದಾರೆ. ಇದು ಗಮನಾರ್ಹ ತಮಿಳು ವಿದ್ವಾಂಸರು-ಕವಿಗಳನ್ನು ಚಿತ್ರಿಸುತ್ತದೆ. 2016ರಲ್ಲಿ ಇಲ್ಲಿ 3,200 ಚದರ ಅಡಿ ವಿಸ್ತೀರ್ಣದ ರಂಗೋಲಿ ರಚಿಸಿ ದಾಖಲೆ ಪುಸ್ತಕದಲ್ಲಿ ದಾಖಲಾಗಿರುವ ಸುಧಾ ರವಿ … Continued