ರಿಯಲ್ ಶಿವಸೇನೆ vs ರೆಬೆಲ್ ಶಿವಸೇನೆ: ಮುಂಬರುವ ಬಿಎಂಸಿ-ಮಹಾನಗರ ಪಾಲಿಕೆ ಚುನಾವಣೆಗಳಲ್ಲಿ ಇದು ಹೇಗೆ ಪರಿಣಾಮ ಬೀರಬಹುದು…?

ಅನೇಕ ಟ್ವಿಸ್ಟ್‌ಗಳ ನಂತರ ಹೊಸ ಮಹಾರಾಷ್ಟ್ರ ಸರ್ಕಾರ ಅಧಿಕಾರಕ್ಕೆ ಬಂದಿದೆ. ಈಗ ಈ ಸರ್ಕಾರಕ್ಕೆ ಅಕ್ಟೋಬರ್-ನವೆಂಬರ್‌ನಲ್ಲಿ ನಡೆಯಲಿರುವ ಬೃಹನ್‌ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಚುನಾವಣೆ ನಿರ್ಣಾಯಕವಾಗಲಿದೆ. ಬಿಎಂಸಿಯಲ್ಲಿ ಮುಖ್ಯಮಂತ್ರಿ ಏಕನಾಥ ಶಿಂಧೆ ನೇತೃತ್ವದ ಆಡಳಿತ ಮೈತ್ರಿಕೂಟ ಅಧಿಕಾರ ಹಿಡಿಯಲು ಸಫಲರಾದರೆ ಇದು ರಾಜ್ಯದ ಬಹಳಷ್ಟು ರಾಜಕೀಯ ಬದಲಾವಣೆಗೆ ಕಾರಣವಾಗಬಹುದು. ಮಹಾರಾಷ್ಟ್ರದಲ್ಲಿ 12ರಿಂದ 15 ಮುನ್ಸಿಪಲ್ … Continued

ತೀಸ್ತಾ ಸೆತಲ್ವಾಡ್, ಶ್ರೀಕುಮಾರ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ ಕೋರ್ಟ್‌

ಅಹಮದಾಬಾದ್: 2002ರ ಗುಜರಾತ್ ಗಲಭೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಾಕ್ಷ್ಯಾಧಾರಗಳನ್ನು ಸೃಷ್ಟಿಸಿದ ಆರೋಪದಲ್ಲಿ ಬಂಧಿತರಾಗಿದ್ದ ಹೋರಾಟಗಾರ್ತಿ ತೀಸ್ತಾ ಸೆತಲ್ವಾಡ್ ಮತ್ತು ಮಾಜಿ ಪೊಲೀಸ್ ಮಹಾನಿರ್ದೇಶಕ ಆರ್.ಬಿ.ಶ್ರೀಕುಮಾರ್ ಅವರನ್ನು ಅಹಮದಾಬಾದ್‌ನ ನ್ಯಾಯಾಲಯವು ಶನಿವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ. ಪೊಲೀಸ್ ಕಸ್ಟಡಿ ಮುಗಿದ ನಂತರ ಇಬ್ಬರನ್ನು ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಎಸ್.ಪಿ.ಪಟೇಲ್ ಮುಂದೆ ಹಾಜರುಪಡಿಸಲಾಯಿತು. ಪೊಲೀಸರು ಅವರನ್ನು ಹೆಚ್ಚಿನ … Continued

ಗೃಹ ಸಚಿವಾಲಯದ ಎಫ್‌ಸಿಆರ್‌ಎ ನಿಯಮ ತಿದ್ದುಪಡಿ: ವಿದೇಶದಲ್ಲಿನ ಸಂಬಂಧಿಕರು ನಿರ್ಬಂಧಗಳಿಲ್ಲದೆ ಭಾರತೀಯರಿಗೆ 10 ಲಕ್ಷ ರೂ.ವರೆಗೆ ಕಳುಹಿಸಲು ಅವಕಾಶ

ನವದೆಹಲಿ: ಕೇಂದ್ರ ಗೃಹ ಸಚಿವಾಲಯವು ವಿದೇಶಿ ಕೊಡುಗೆ (ನಿಯಂತ್ರಣ) ಕಾಯ್ದೆಗೆ (ಎಫ್‌ಸಿಆರ್‌ಎ) ಸಂಬಂಧಿಸಿದ ಕೆಲವು ನಿಯಮಗಳನ್ನು ತಿದ್ದುಪಡಿ ಮಾಡಿದೆ, ಅಧಿಕಾರಿಗಳಿಗೆ ತಿಳಿಸದೆ ವಿದೇಶದಲ್ಲಿರುವ ಸಂಬಂಧಿಕರಿಂದ ಒಂದು ವರ್ಷದಲ್ಲಿ ಭಾರತೀಯರು 10 ಲಕ್ಷ ರೂ.ಗಳ ವರೆಗೆ ಪಡೆಯಬಹುದಾಗಿದೆ. ಹಿಂದಿನ ಮಿತಿ 1 ಲಕ್ಷ ರೂ.ಇತ್ತು. ಅಧಿಸೂಚನೆಯಲ್ಲಿ, ಗೃಹ ಸಚಿವಾಲಯವು ಮೊತ್ತವನ್ನು ಮೀರಿದರೆ, ಸರ್ಕಾರಕ್ಕೆ ತಿಳಿಸಲು ಈ ಮೊದಲಿದ್ದ … Continued

ರೈಲಿನಲ್ಲಿ ಚಹಾ ಕುಡಿದರೆ 20 ರೂ. ಚಹಾಕ್ಕೆ 50 ರೂ. ಸೇವಾ ಶುಲ್ಕ…!

ನವದೆಹಲಿ : ರೈಲು ಪ್ರಯಾಣದ ವೇಳೆ ತಿಂಡಿ-ತಿನಿಸು ದುಬಾರಿಯೇ ? ಇದಕ್ಕೆ ಪುಷ್ಟಿ ನೀಡುವಂತೆ ರೈಲು ಪ್ರಯಾಣಿಕರೊಬ್ಬರು ಚಹಾವೊಂದಕ್ಕೆ 70 ರೂಪಾಯಿ ಪಾವತಿಸಿರುವ ಫೋಟೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಅವರು ಹಂಚಿಕೊಂಡ ಬಿಲ್ ಪ್ರಕಾರ ಒಂದು ಚಹಾದ ಬೆಲೆ 70 ರೂ.ಗಳು. ಅಂದರೆ 20 ರೂ.ಗಳು ಚಹಾ ಹಾಗೂ ಸೇವಾ ಶುಲ್ಕ 50 ರೂಪಾಯಿಯಂತೆ. ದೆಹಲಿಯಿಂದ … Continued

ಆಲ್ಟ್‌ ನ್ಯೂಸ್‌ನ ಜುಬೇರ್ ಜಾಮೀನು ಅರ್ಜಿ ತಿರಸ್ಕರಿಸಿದ ಕೋರ್ಟ್‌: 14 ದಿನ ನ್ಯಾಯಾಂಗ ಬಂಧನ

ನವದೆಹಲಿ : ಹಿಂದೂ ದೇವತೆ ಕುರಿತ ಆಕ್ಷೇಪಾರ್ಹ ಟ್ವೀಟ್‌ಗೆ ಸಂಬಂಧಿಸಿದ ಪ್ರಕರಣದಲ್ಲಿ ಬಂಧತನಾಗಿರುವ ಆಲ್ಟ್‌ ನ್ಯೂಸ್ ಸಹ-ಸಂಸ್ಥಾಪಕ ಮೊಹಮ್ಮದ್ ಜುಬೇರ್‌ಗೆ ದೆಹಲಿ ನ್ಯಾಯಾಲಯವು ಜಾಮೀನು ನಿರಾಕರಿಸಿದೆ ಹಾಗೂ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಆರೋಪಿಯನ್ನು ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಎದುರು ಶನಿವಾರ ಹಾಜರುಪಡಿಸಲಾಯಿತು. ಆತನನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೊಪ್ಪಿಸುವಂತೆ ದೆಹಲಿ ಪೊಲೀಸರು … Continued

ಕೋರ್ಟ್‌ ಹೊರಗೆ ಉದಯಪುರ ಟೈಲರ್‌ ಹತ್ಯೆ ಆರೋಪಿಗಳ ಮೇಲೆ ಕೋಪೋದ್ರಿಕ್ತ ಗುಂಪಿನಿಂದ ಥಳಿತ | ವೀಕ್ಷಿಸಿ

ನವದೆಹಲಿ:ನವದೆಹಲಿ: ಟೈಲರ್ ಕನ್ಹಯ್ಯಾ ಲಾಲ್ ಅವರ ಭೀಕರ ಹತ್ಯೆಯ ಇಬ್ಬರು ಹಂತಕರನ್ನು ಜೈಪುರ ನ್ಯಾಯಾಲಯದ ಹೊರಗೆ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳುವಾಗ ಅವರ ಮೇಲೆ ಹೊರಗೆ ದೊಡ್ಡ ಗುಂಪೊಂದು ಇಂದು, ಶನಿವಾರ ದಾಳಿ ಮಾಡಿದೆ. ಜೈಪುರ ನ್ಯಾಯಾಲಯದ ಹೊರಗೆ ಗುಂಪೊಂದು ಅವರ ಮೇಲೆ ಹಲ್ಲೆ ನಡೆಸಿ, ಬಟ್ಟೆ ಹರಿದು ಹಾಕಿತು. ಆದರೆ ಪೊಲೀಸರು ಕೂಡಲೇ ಅವರನ್ನು ಕಾಯುವ … Continued

ಉದಯ್‌ಪುರದ ಶಿರಚ್ಛೇದ ಘಟನೆ ನಂತರ ಈಗ 2018ರಲ್ಲಿ ಪ್ರವಾದಿ ಹೇಳಿಕೆಗೆ ಕೊಲೆಯಾದ ಕಮಲೇಶ್ ತಿವಾರಿ ಪತ್ನಿಗೆ ಬೆದರಿಕೆ ಪತ್ರ

ಲಕ್ನೋ: ರಾಜಸ್ಥಾನದ ಉದಯ್‌ಪುರದಲ್ಲಿ ಹಾಡಹಗಲೇ ಟೈಲರ್‌ನ ಹತ್ಯೆಯ ನಂತರ, ಈ ಮೊದಲು ಹತ್ಯೆಗೀಡಾದ ಹಿಂದೂ ಸಮಾಜ ಪಕ್ಷದ ಮುಖ್ಯಸ್ಥ ಕಮಲೇಶ್ ತಿವಾರಿ ಅವರ ಪತ್ನಿ ತನಗೆ ಕೊಲೆ ಬೆದರಿಕೆಯ ಅನಾಮಧೇಯ ಪತ್ರ ಬಂದಿದೆ ಎಂದು ಆರೋಪಿಸಿದ್ದಾರೆ. ಕಿರಣ್ ತಿವಾರಿ ಅವರು ಜೂನ್ 22 ರಂದು ತಮ್ಮ ಲಕ್ನೋ ಮನೆಯೊಳಗೆ ಬಿಳಿ ಲಕೋಟೆಯಲ್ಲಿರುವ ಬೆದರಿಕೆ ಪತ್ರವನ್ನು ಪತ್ತೆ … Continued

ಬ್ಯಾಟ್‌ನಲ್ಲಿ ಬುಂ..ಬುಂ.. ಬುಮ್ರಾ…: ENG vs IND ಟೆಸ್ಟ್- ಒಂದೇ ಓವರ್‌ನಲ್ಲಿ 35 ರನ್ ಚಚ್ಚಿ ಲಾರಾ ದಾಖಲೆ ಮುರಿದ ಜಸ್ಪ್ರೀತ್ ಬುಮ್ರಾ | ವೀಕ್ಷಿಸಿ

ಎಡ್ಜ್‌ಬಸ್ಟನ್ (ಇಂಗ್ಲಂಡ್‌): ಶನಿವಾರ ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಐದನೇ ಟೆಸ್ಟ್‌ನ 2ನೇ ದಿನದಂದು ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್ ಬೌಲಿಂಗ್‌ನಲ್ಲಿ ಭರ್ಜರಿ ಬ್ಯಾಟ್‌ ಬೀಸಿದ ಭಾರತ ತಂಡದ ನಾಯಕ ಜಸ್ಪ್ರೀತ್ ಬುಮ್ರಾ ಅವರು ಹಲವು ವರ್ಷಗಳ ಹಿಂದಿನ ಬ್ರಿಯಾನ್ ಲಾರಾ ಅವರ ಟೆಸ್ಟ್ ದಾಖಲೆಯನ್ನು ಮುರಿದಿದ್ದಾರೆ. ಬ್ರಾಡ್ ಅವರ ಒಂದು ಓವರ್‌ನಲ್ಲಿ ಬುಮ್ರಾ 35 ರನ್ ಚಚ್ಚಿದ್ದಾರೆ. … Continued

ನೂಪುರ್ ಶರ್ಮಾ ಬೆಂಬಲಿಸಿ ಪೋಸ್ಟ್‌ ಮಾಡಿದ್ದಕ್ಕೆ ಮತ್ತೊಂದು ಶಂಕಿತ ಹತ್ಯೆ ಪ್ರಕರಣ ಬೆಳಕಿಗೆ: ಪ್ರಕರಣದ ತನಿಖೆ ಎನ್‌ಐಎಗೆ

ಮುಂಬೈ: ಉದಯಪುರದಲ್ಲಿ ಟೈಲರ್ ಕನ್ಹಯ್ಯಾಲಾಲ್ ತೇಲಿಯನ್ನು ಕೊಲ್ಲುವ ಒಂದು ವಾರದ ಮೊದಲು, ಜೂನ್ 21 ರಂದು ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯಲ್ಲಿ 54 ವರ್ಷದ ಕೆಮಿಸ್ಟ್‌ ಉಮೇಶ್ ಪ್ರಹ್ಲಾದರಾವ್ ಕೊಲ್ಹೆ ಕೊಲೆಯಾಗಿದ್ದು, ಟಿವಿ ಚರ್ಚೆಯಲ್ಲಿ ಪ್ರವಾದಿಯ ಬಗ್ಗೆ ವಿವಾದಾತ್ಮಕ ಕಾಮೆಂಟ್‌ ಮಾಡಿದ ಬಿಜೆಪಿಯ ನೂಪುರ್ ಶರ್ಮಾ ಅವರನ್ನು ಬೆಂಬಲಿಸುವ ಸಾಮಾಜಿಕ ಮಾಧ್ಯಮ ಪೋಸ್ಟ್‌ಗೆ ಪ್ರತೀಕಾರವಾಗಿ ಕೊಲ್ಹೆಯನ್ನು ಕೊಲ್ಲಲಾಗಿದೆ … Continued

4ನೇ ಕೋವಿಡ್ ಅಲೆ..?: ಭಾರತದಲ್ಲಿ 17 ಸಾವಿರ ದಾಟಿದ ದೈನಂದಿನ ಕೊರೊನಾ ಸೋಂಕು, ಕೇರಳ, ಮಹಾರಾಷ್ಟ್ರದಲ್ಲಿ ಹೆಚ್ಚು ದಾಖಲು

ನವದೆಹಲಿ: ಭಾರತದಲ್ಲಿ ಶನಿವಾರ ಕಳೆದ 24 ಗಂಟೆಗಳಲ್ಲಿ 17,092 ಹೊಸ ಕೋವಿಡ್ -19 ಪ್ರಕರಣಗಳು ಮತ್ತು 29 ಸಾವುಗಳು ವರದಿಯಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ತಿಳಿಸಿದೆ. ದೇಶದಲ್ಲಿ ಈಗ ಸಕ್ರಿಯ ಪ್ರಕರಣಗಳ ಸಂಖ್ಯೆ 1,09,568 ಆಗಿದೆ. ಕೇಂದ್ರ ಆರೋಗ್ಯ ಸಚಿವಾಲಯವು ಶನಿವಾರ (ಜುಲೈ 2) ಹಂಚಿಕೊಂಡ ಅಂಕಿಅಂಶಗಳ ಪ್ರಕಾರ, ಕಳೆದ 24 ಗಂಟೆಗಳಲ್ಲಿ … Continued