ಅಫ್ಘಾನಿಸ್ತಾನದಲ್ಲಿ ಭೂಕಂಪದ ನಂತರ ನಡುಗಿದ ಜಮ್ಮು-ಕಾಶ್ಮೀರ, ದೆಹಲಿ: ಬೈಕ್‌ನಲ್ಲಿದ್ದವರು ಬಿದ್ದರು, ಚಲಿಸುವ ವಾಹನ ಅಲುಗಾಡಿತು..ದೃಶ್ಯ ವಿಡಿಯೊದಲ್ಲಿ ಸೆರೆ

ನವದೆಹಲಿ: ಶನಿವಾರ ಬೆಳಗ್ಗೆ ಅಫ್ಘಾನಿಸ್ತಾನದಲ್ಲಿ ರಿಕ್ಟರ್ ಮಾಪಕದಲ್ಲಿ 5.7 ರಷ್ಟಿದ್ದ ಭೂಕಂಪದ ನಂತರ ಜಮ್ಮು ಮತ್ತು ಕಾಶ್ಮೀರ, ದೆಹಲಿ-ಎನ್‌ಸಿಆರ್ ಮತ್ತು ಇತರ ಪ್ರದೇಶಗಳಲ್ಲಿ ಬಲವಾದ ಕಂಪನಗಳು ಸಂಭವಿಸಿವೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ತಿಳಿಸಿದೆ. ಭೂಕಂಪವು ಬೆಳಿಗ್ಗೆ 9:46 ರ ಸುಮಾರಿಗೆ ಸಂಭವಿಸಿದೆ ಮತ್ತು ಭೂಮಿಯ ಮೇಲ್ಮೈಯಿಂದ 181 ಕಿಲೋಮೀಟರ್ ಆಳದಲ್ಲಿ ಸಂಭವಿಸಿದೆ. ಇದರ ಕೇಂದ್ರಬಿಂದು … Continued

ಲತಾ ಮಂಗೇಶ್ಕರ್ ಆರೋಗ್ಯ ಸ್ಥಿತಿ ಪುನಃ ಗಂಭೀರ, ಮತ್ತೆ ವೆಂಟಿಲೇಟರ್‌ ಅಳವಡಿಕೆ: ವೈದ್ಯರು

ಮುಂಬೈ: ಖ್ಯಾತ ಹಿನ್ನೆಲೆ ಗಾಯಕಿ ಲತಾ ಮಂಗೇಶ್ಕರ್ ಅವರ ಆರೋಗ್ಯ ಹದಗೆಟ್ಟಿದ್ದು, ಅವರನ್ನು ವೆಂಟಿಲೇಟರ್‌ನಲ್ಲಿ ಇರಿಸಲಾಗಿದೆ ಎಂದು ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಶನಿವಾರ ತಿಳಿಸಿದ್ದಾರೆ. 92 ವರ್ಷದ ಲತಾ ಮಂಗೇಶ್ಕರ್ ಸೌಮ್ಯ ರೋಗಲಕ್ಷಣಗಳೊಂದಿಗೆ ಕೋವಿಡ್‌‌ ಸೋಂಕಿಗೆ ಒಳಗಾದರು ಮತ್ತು ಜನವರಿ 8 ರಂದು ಬ್ರೀಚ್ ಕ್ಯಾಂಡಿ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ (ಐಸಿಯು) ಅವರನ್ನು … Continued

ಮಲೇಷ್ಯಾದಲ್ಲಿನ ಭಾರತೀಯ ರಾಯಭಾರಿ ಕಚೇರಿ ಮೂಲಕ ವಕಾಲತ್‌ನಾಮಾ ಸಲ್ಲಿಸುವಂತೆ ಜಾಕಿರ್ ನಾಯ್ಕ್‌ಗೆ ನಿರ್ದೇಶಿಸಿದ ಯುಎಪಿಎ ನ್ಯಾಯಮಂಡಳಿ

ನವದೆಹಲಿ: ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯಿದೆ (UAPA) ಅಡಿಯಲ್ಲಿ ರಚಿಸಲಾದ ನ್ಯಾಯಮಂಡಳಿಯು ಪರಾರಿಯಾಗಿರುವ ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್ (ಐಆರ್‌ಎಫ್) ಟ್ರಸ್ಟಿ ಝಾಕಿರ್ ನಾಯ್ಕ್ ಸಹಿಗಳ ಪರಿಶೀಲನೆಯ ನಂತರ ಮಲೇಷ್ಯಾದ ಭಾರತೀಯ ರಾಯಭಾರಿ ಕಚೇರಿಯ ಮೂಲಕ ಹೊಸ ವಕಾಲತ್‌ನಾಮಾ ಸಲ್ಲಿಸುವಂತೆ ಅವರಿಗೆ ನಿರ್ದೇಶಿಸಿದೆ. ಐಆರ್‌ಎಫ್ ಅನ್ನು ಕಾನೂನುಬಾಹಿರ ಸಂಘ ಎಂದು ಘೋಷಿಸುವ ಕೇಂದ್ರದ ನಿರ್ಧಾರವನ್ನು ಪರಿಗಣಿಸಲು ನ್ಯಾಯಮಂಡಳಿ … Continued

ಭಾರತದ ಹೆಣ್ಣು ಮಕ್ಕಳ ಭವಿಷ್ಯ ಕಸಿಯಲಾಗುತ್ತಿದೆ: ಉಡುಪಿ ಹಿಜಾಬ್‌ ವಿವಾದದ ಬಗ್ಗೆ ರಾಹುಲ್ ಗಾಂಧಿ ಪ್ರತಿಕ್ರಿಯೆ

ನವದೆಹಲಿ: ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸುವುದರ ಕುರಿತು ಹೆಚ್ಚುತ್ತಿರುವ ವಿವಾದದ ನಡುವೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ರಾಷ್ಟ್ರವು ವಿದ್ಯಾರ್ಥಿನಿಯರ ಭವಿಷ್ಯವನ್ನು ಕಸಿದುಕೊಳ್ಳುತ್ತಿದೆ ಎಂದು ಹೇಳಿದ್ದಾರೆ. ವಿದ್ಯಾರ್ಥಿಗಳ ಹಿಜಾಬ್ ವಿವಾದ ಅವರ ಶಿಕ್ಷಣದ ಹಾದಿಯಲ್ಲಿ ಬರಲು ಬಿಡುವ ಮೂಲಕ ನಾವು ಭಾರತದ ಹೆಣ್ಣುಮಕ್ಕಳ ಭವಿಷ್ಯವನ್ನು ಕಸಿದುಕೊಳ್ಳುತ್ತಿದ್ದೇವೆ. ತಾಯಿ ಸರಸ್ವತಿಯು ಎಲ್ಲರಿಗೂ ಜ್ಞಾನವನ್ನು ನೀಡುತ್ತಾಳೆ. ಆಕೆ ಭಿನ್ನಾಭಿಪ್ರಾಯ … Continued

ಭಾರತದ ಕರಾವಳಿಗೆ ಎಚ್ಚರಿಕೆ ಗಂಟೆ..?: ಹವಾಮಾನ ಬದಲಾವಣೆ ಭಾರತದ ಕರಾವಳಿಯಲ್ಲಿ ತೀವ್ರ ಗಾಳಿ, ಎತ್ತರದ ಅಲೆಗಳಿಗೆ ಕಾರಣವಾಗುತ್ತದೆ: ಅಧ್ಯಯನ

ನವದೆಹಲಿ: ಹವಾಮಾನ ಬದಲಾವಣೆ ಮತ್ತು ಅದರಿಂದ ವಿಪರೀತ ಘಟನೆಗಳು ಪದೇಪದೇ ಸಂಭವಿಸುತ್ತಿರುವ ಬಗ್ಗೆ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಹೊಸ ಅಧ್ಯಯನವು ವಿಶೇಷವಾಗಿ ಭಾರತದ ಕರಾವಳಿ ಪ್ರದೇಶಗಳಿಗೆ ಎಚ್ಚರಿಕೆಯನ್ನು ನೀಡಿದೆ. ಬಂಗಾಳಕೊಲ್ಲಿ, ದಕ್ಷಿಣ ಚೀನಾ ಸಮುದ್ರ ಮತ್ತು ದಕ್ಷಿಣ ಹಿಂದೂ ಮಹಾಸಾಗರದ ಪ್ರದೇಶಗಳ ಕರಾವಳಿ ಪ್ರದೇಶಗಳ ಸಮುದಾಯಗಳು ಭವಿಷ್ಯದಲ್ಲಿ ದೊಡ್ಡ ಅಲೆಗಳಿಂದಾಗಿ ತೊಂದರೆ ಅನುಭವಿಸಬಹುದು ಎಂದು ವಿಜ್ಞಾನಿಗಳು … Continued

ಭಾರತದಲ್ಲಿ 1.27 ಲಕ್ಷ ಹೊಸ ಕೋವಿಡ್ ಪ್ರಕರಣಗಳು ದಾಖಲು, ಸಕಾರಾತ್ಮಕತೆ ದರ 7.9%ಕ್ಕೆ ಇಳಿಕೆ

ನವದೆಹಲಿ: ಕಳೆದ 24 ಗಂಟೆಗಳಲ್ಲಿ ಭಾರತವು 1,27,952 ಹೊಸ ಕೊರೊನಾ ವೈರಸ್ ಪ್ರಕರಣಗಳನ್ನು ದಾಖಲಿಸಿದೆ, ಇದು ನಿನ್ನೆಗಿಂತ 14.4 ಶೇಕಡಾ ಕಡಿಮೆಯಾಗಿದೆ. ದೇಶದಲ್ಲಿ ಒಟ್ಟು ಪ್ರಕರಣ 4,20,80,664 ಕ್ಕೆ ಏರಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 1,059 ಸಾವುಗಳು ವರದಿಯಾಗಿದ್ದು, ಒಟ್ಟು ಸಾವಿನ ಸಂಖ್ಯೆಯನ್ನು 5,01,114 ಕ್ಕೆ ಏರಿದೆ. ಹಾಗೂ ಇದೇ ಸಮಯದಲ್ಲಿ ಒಟ್ಟು 2,30,814 … Continued

ಎಲೆ-ಕಾಂಡಗಳಿಂದ ಗೂಡು ಕಟ್ಟುವ ಈ ಹಕ್ಕಿಯ ನೈಪುಣ್ಯಕ್ಕೆ ತಲೆಬಾಗಿದ ನೆಟ್ಟಿಗರು..! ವೀಕ್ಷಿಸಿ

.ಹಕ್ಕಿಯೊಂದು ಎಲೆಯ ಕಾಂಡದಿಂದ ಗೂಡು ಕಟ್ಟುವ ನೈಪುಣ್ಯತೆಯ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ. ಕ್ಲಿಪ್ ಅನ್ನು ಐಪಿಎಸ್ ಅಧಿಕಾರಿ ದೀಪಾಂಶು ಕಾಬ್ರಾ ಅವರು ಶುಕ್ರವಾರ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಕೊಲಂಬಿಡೆ ಕುಟುಂಬಕ್ಕೆ ಸೇರಿದ ಸುಂದರವಾದ ನೀಲಿ-ಹಸಿರು ಹಕ್ಕಿ ತನ್ನ ಗೂಡು ಕಟ್ಟುತ್ತಿರುವುದನ್ನು ಕಾಣಬಹುದು. ಇಲ್ಲಿ ಹಕ್ಕಿಯ ಗೂಡು ಕಟ್ಟುವ ಕೌಶಲ್ಯಕ್ಕೆ ಬೆರಗಾಗಲೇಬೇಕು. ಹಾಗಿದೆ … Continued

ಪಂಜಾಬ್ ಚುನಾವಣೆ 2022: ಉನ್ನತ ನಾಯಕರು ತಮ್ಮ ತಾಳಕ್ಕೆ ತಕ್ಕಂತೆ ಕುಣಿಯುವ ದುರ್ಬಲ ಸಿಎಂ ಬಯಸುತ್ತಾರೆ-ಕಾಂಗ್ರೆಸ್‌ ಹೈಕಮಾಂಡನ್ನೇ ಟೀಕಿಸಿದ ನವಜೋತ್ ಸಿಧು

ಅಮೃತಸರ: ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿಯ ಮುಖ್ಯಸ್ಥ ನವಜೋತ್ ಸಿಂಗ್ ಸಿಧು, ‘ಮೇಲಿನ ಜನರುʼ (ಹೈಕಮಾಂಡ್‌) ತಮ್ಮ ತಾಳಕ್ಕೆ ತಕ್ಕಂತೆ ಕುಣಿಯುವ ದುರ್ಬಲ ಮುಖ್ಯಮಂತ್ರಿಯನ್ನು ಬಯಸುತ್ತಾರೆ ಎಂದು ಶುಕ್ರವಾರ ಹೇಳಿದ್ದಾರೆ. 2022ರ ಪಂಜಾಬ್ ವಿಧಾನಸಭಾ ಚುನಾವಣೆಗೆ ಸಿಎಂ ಅಭ್ಯರ್ಥಿಯನ್ನು ಕಾಂಗ್ರೆಸ್ ಪಕ್ಷ ಘೋಷಿಸುವ ಎರಡು ದಿನಗಳ ಮೊದಲು ಸಿಧು ಅವರು ಕಾಂಗ್ರೆಸ್‌ ಹೈಕಮಾಂಡ್‌ ಮೇಲೆ ಈ … Continued

ಮುಂದಿನ ಯುಜಿಸಿ ಅಧ್ಯಕ್ಷರಾಗಿ ಜೆಎನ್‌ಯು ಉಪಕುಲಪತಿ ಎಂ ಜಗದೇಶ್ ಕುಮಾರ್ ನೇಮಕ

ನವದೆಹಲಿ: ಜೆಎನ್‌ಯು ಉಪಕುಲಪತಿ ಪ್ರೊಫೆಸರ್ ಎಂ. ಜಗದೇಶಕುಮಾರ್ ಅವರನ್ನು ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಶಿಕ್ಷಣ ಸಚಿವಾಲಯದ ಪ್ರಕಾರ, ಜಗದೇಶಕುಮಾರ್ ಅವರನ್ನು ಐದು ವರ್ಷಗಳ ಅವಧಿಗೆದೇಶದ ಉನ್ನತ ಶಿಕ್ಷಣ ನಿಯಂತ್ರಕ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ. ಕೇಂದ್ರ ಸರ್ಕಾರವು ಎಂ ಜಗದೇಶ್ ಕುಮಾರ್ ಅವರನ್ನು ಯುಜಿಸಿ ಅಧ್ಯಕ್ಷರನ್ನಾಗಿ ಐದು ವರ್ಷಗಳ ಅವಧಿಗೆ ಅಥವಾ ಅವರು 65 … Continued

ಒಂದೇ ದಿನದಲ್ಲಿ ಎರಡು ಮೈಲಿಗಲ್ಲು ಸ್ಥಾಪಿಸಿದ ಗೌತಮ್‌ ಅದಾನಿ; ಏಷ್ಯಾದ ಅತಿ ಶ್ರೀಮಂತ ವ್ಯಕ್ತಿ -ವಿಶ್ವದ 10ನೇ ಸಿರಿವಂತ

ಮುಂಬೈ: ಭಾರತೀಯ ಕೈಗಾರಿಕೋದ್ಯಮಿ ಗೌತಮ್ ಅದಾನಿ ಅವರು ಏಷ್ಯಾದ ಶ್ರೀಮಂತ ವ್ಯಕ್ತಿ ಮತ್ತು ವಿಶ್ವದ 10 ನೇ ಶ್ರೀಮಂತ ವ್ಯಕ್ತಿಯಾಗುವ ಮೂಲಕ ಹೊಸ ಮೈಲಿಗಲ್ಲನ್ನು ಸ್ಥಾಪಿಸಿದ್ದಾರೆ, ಫೆಬ್ರವರಿ 3 ರಂದು ಫೋರ್ಬ್ಸ್‌ ರಿಯಲ್-ಟೈಮ್ ಬಿಲಿಯನೇರ್ ಲೆಕ್ಕಾಚಾರದ ಪ್ರಕಾರ 90.5 ಬಿಲಿಯನ್ ಅಮೆರಿನ್‌ ಡಾಲರ್‌ ನಿವ್ವಳ ಮೌಲ್ಯವನ್ನು ನೋಂದಾಯಿಸಿದ್ದಾರೆ. ಫೋರ್ಬ್ಸ್, ಗೌತಮ್ ಅದಾನಿ ಅವರು ರಿಲಯನ್ಸ್ ಇಂಡಸ್ಟ್ರೀಸ್‌ನ … Continued