ರಾಜ್ಯ ಸರ್ಕಾರದಿಂದ ನೂತನ ಕೋವಿಡ್ ಮಾರ್ಗಸೂಚಿ ಪ್ರಕಟ: ಜನವರಿ 31ರಿಂದ ನೈಟ್‌ ಕರ್ಫ್ಯೂ ಇಲ್ಲ-ಯಾವುದಕ್ಕೆ ಅನುಮತಿ-ಯಾವುದಕ್ಕೆ ಇಲ್ಲ? ಇಲ್ಲಿದೆ ಮಾಹಿತಿ

ಬೆಂಗಳೂರು: ಜನವರಿ 31 ರಿಂದ ರಾಜ್ಯಾದ್ಯಂತ ರಾತ್ರಿ ಕರ್ಫ್ಯೂ ಹಿಂತೆಗೆದುಕೊಳ್ಳಲು ಕರ್ನಾಟಕ ಸರ್ಕಾರ ನಿರ್ಧರಿಸಿದೆ. ಹೊಸ ಕೋವಿಡ್ ಮಾರ್ಗಸೂಚಿ ಪ್ರಕಾರ, ಬೆಂಗಳೂರಿನ ಎಲ್ಲಾ ಶಾಲೆಗಳು ಕೋವಿಡ್-ಸೂಕ್ತ ನಡವಳಿಕೆಯನ್ನು ಕಟ್ಟುನಿಟ್ಟಾಗಿ ಪಾಲಿಸುವುದರೊಂದಿಗೆ ಸೋಮವಾರದಿಂದ ಆಫ್‌ಲೈನ್ ತರಗತಿಗಳನ್ನು ಪ್ರಾರಂಭಿಸಲು ಅನುಮತಿಸಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತಜ್ಞರು ಸರ್ಕಾರದ ಮುಂದೆ ಮಂಡಿಸಿದ ಮಾಹಿತಿ ಮತ್ತು ಪ್ರವೃತ್ತಿಗಳ … Continued

ನಿಯೊಕೋವ್‌ ಎಂದರೇನು? ವುಹಾನ್ ವಿಜ್ಞಾನಿಗಳು ಎಚ್ಚರಿಸುವ ಹೆಚ್ಚಿನ ಸಾವಿನ ಪ್ರಮಾಣದೊಂದಿಗೆ ಹೊಸ ರೀತಿಯ ಕೊರೊನಾ ವೈರಸ್ ಬಗ್ಗೆ ಕೆಲ ಮಾಹಿತಿಗಳು..

ಚೀನಾದ ವುಹಾನ್ ನಗರದಲ್ಲಿ ಮೊದಲು ಪ್ರಾರಂಭವಾದ SARS-CoV2 ವೈರಸ್‌ನಿಂದಾಗಿ ಅಸ್ತಿತ್ವದಲ್ಲಿರುವ ಕೋವಿಡ್‌-19 ಸಾಂಕ್ರಾಮಿಕ ರೋಗಕ್ಕೆ ಜಗತ್ತು ಇನ್ನೂ ಯಾವುದೇ ಪರಿಹಾರವನ್ನು ಕಂಡುಕೊಳ್ಳದಿದ್ದರೂ, ಪ್ರಸಿದ್ಧ ವುಹಾನ್ ವಿಶ್ವವಿದ್ಯಾಲಯ ಮತ್ತು ಚೈನೀಸ್ ಅಕಾಡೆಮಿ ಆಫ್ ಸೈನ್ಸಸ್ ಇನ್‌ಸ್ಟಿಟ್ಯೂಟ್‌ನ ವಿಜ್ಞಾನಿಗಳ ತಂಡ ಈಗ ಮತ್ತೊಂದು ಎಚ್ಚರಿಕೆ ನೀಡಿದೆ. ವುಹಾನ್‌ನಲ್ಲಿರುವ ವಿಜ್ಞಾನಿಗಳು ಹೊಸ ರೀತಿಯ ಕೊರೊನಾ ವೈರಸ್ ‘ನಿಯೋಕೋವಿ’ ಬಗ್ಗೆ ಎಚ್ಚರಿಸಿದ್ದಾರೆ, … Continued

ಝೀ ನ್ಯೂಸ್‌ ಒಪಿನಿಯನ್‌ ಪೋಲ್‌: ಗೋವಾ ವಿಧಾನಸಭೆ ಚುನಾವಣೆ- ಬಿಜೆಪಿ-ಕಾಂಗ್ರೆಸ್‌ ತೀವ್ರ ಜಿದ್ದಾಜಿದ್ದಿ ಸ್ಪರ್ಧೆಯಲ್ಲಿ ಗೆಲ್ಲುವವರು ಯಾರು..?

ಹೊಸದಿಲ್ಲಿ: ಗೋವಾದಲ್ಲಿ ಮುಂಬರುವ ವಿಧಾನಸಭೆ ಚುನಾವಣೆಗೆ ಝೀ ನ್ಯೂಸ್-ಡಿಸೈನ್‌ ಬಾಕ್ಸಡ್ ಒಪಿನಿಯನ್ ಪೋಲ್‌ ಇತ್ತೀಚಿನ ಸಮೀಕ್ಷೆಯು ಆಡಳಿತಾರೂಢ ಭಾರತೀಯ ಜನತಾ ಪಕ್ಷ ಮತ್ತು ಕಾಂಗ್ರೆಸ್ ನಡುವೆ ನಿಕಟ ಹೋರಾಟದ ಭವಿಷ್ಯ ನುಡಿದಿದೆ. ಚುನಾವಣಾ ಪೂರ್ವ ಸಮೀಕ್ಷೆ ಪ್ರಕಾರ, 40 ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿ 15-19, ಕಾಂಗ್ರೆಸ್ 14-18, ಆಮ್ ಆದ್ಮಿ ಪಕ್ಷ (ಎಎಪಿ) 0-2 … Continued

ದೇಶದಲ್ಲಿ ಅತಿ ಹೆಚ್ಚು ಆಸ್ತಿ ಹೊಂದಿರುವ ರಾಜಕೀಯ ಪಕ್ಷ ಬಿಜೆಪಿ, ಯಾವ ಪಕ್ಷದ ಬಳಿ ಎಷ್ಟೆಷ್ಟು ಆಸ್ತಿ.. ಇಲ್ಲಿದೆ ವಿವರ

ನವದೆಹಲಿ : 2019-20ನೇ ಹಣಕಾಸು ವರ್ಷದಲ್ಲಿ ಭಾರತೀಯ ಜನತಾ ಪಾರ್ಟಿ ಬಳಿ 4,847.78 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೊಂದಿರುವುದಾಗಿ ತಿಳಿದು ಬಂದಿದೆ. ಎಲ್ಲ ರಾಜಕೀಯ ಪಕ್ಷಗಳ ಪೈಕಿ ಎರಡನೇ ಸ್ಥಾನದಲ್ಲಿ ಬಿಎಸ್ಪಿ ಇದ್ದು, ಇದರ ಒಟ್ಟು ಆಸ್ತಿಯ ಮೌಲ್ಯ 698.33 ಕೋಟಿ ರೂ.ಗಳು. ಕಾಂಗ್ರೆಸ್​​ 588.16 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದೆ ಎಂದು … Continued

ನವಜೋತ್ ಸಿಧು ಹಣಕ್ಕಾಗಿ ತಾಯಿಯನ್ನೇ ತೊರೆದ ಕ್ರೂರ ವ್ಯಕ್ತಿ: ಸಹೋದರಿ ಸುಮನ್

ಚಂಡೀಗಢ: ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಹಣದ ಆಸೆಗಾಗಿ ವೃದ್ಧಾಪ್ಯದಲ್ಲಿದ್ದ ತಾಯಿಯನ್ನೇ ತೊರೆದಿದ್ದಾರೆ ಎಂದು ಅವರ ಹಿರಿಯ ಸಹೋದರಿ ಸುಮನ್ ತುರ್ ಆರೋಪಿಸಿದ್ದಾರೆ.ಅಮೆರಿಕದಲ್ಲಿರುವ ಸುಮನ್ ತುರ್ ಅವರು ನವಜೋತ್ ಸಿಧು ಅವರನ್ನು “ಕ್ರೂರ ವ್ಯಕ್ತಿ” ಎಂದು ಬಣ್ಣಿಸಿದ್ದಾರೆ. ಸುಮನ್ ತುರ್ ಪ್ರಸ್ತುತ ಚಂಡೀಗಢದಲ್ಲಿದ್ದು, ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 1986ರಲ್ಲಿ ತಮ್ಮ ತಂದೆ … Continued

ಮಹಾರಾಷ್ಟ್ರ ವಿಧಾನಸಭೆಯಲ್ಲಿ 12 ಬಿಜೆಪಿ ಶಾಸಕರ ಅಮಾನತು ಮಾಡಿದ್ದ ಸ್ಪೀಕರ್‌ ಆದೇಶ ರದ್ದು ಮಾಡಿದ ಸುಪ್ರೀಂಕೋರ್ಟ್‌

ನವದೆಹಲಿ: ಮಹಾರಾಷ್ಟ್ರದ ವಿಧಾನಸಭೆಯಲ್ಲಿ ಅಶಿಸ್ತುತೋರಿದ ಆರೋಪದ ಮೇಲೆ ಒಂದು ವರ್ಷಗಳ ಕಾಲ ವಿಧಾನಸಭೆ ಕಲಾಪದಿಂದ ೧೨ ಬಿಜೆಪಿ ಶಾಸಕರನ್ನು ಅಮಾನತು ಮಾಡಿದ ಸ್ಪೀಕರ್ ಕ್ರಮವನ್ನು ಸುಪ್ರೀಂಕೋರ್ಟ್ ರದ್ದು ಮಾಡಿದೆ. ೧೨ ಶಾಸಕರನ್ನು ಒಂದು ವರ್ಷಗಳ ಕಾಲ ಅಮಾನತು ಮಾಡಿರುವ ನಿರ್ಧಾರ ಅಸಾಂವಿಧಾನಿಕ ಮತ್ತು ಅನಿಯಂತ್ರಿತ’ ಎಂದು ಹೇಳಿರುವ ಸುಪ್ರೀಂಕೋರ್ಟ್‌ ಶಾಸಕರ ಮೇಲೆ ವಿಧಿಸಲಾಗಿದ್ದ ಅಮಾನತನ್ನು ರದ್ದು … Continued

ಗೋವಾ- ಶೇ. 53 ಮರಣ ಲಸಿಕೆ ಪಡೆಯದವರು

ಪಣಜಿ: ಗೋವಾ ರಾಜ್ಯದಲ್ಲಿ ಮೂರನೇ ಅಲೆಯಲ್ಲಿ ಕೋವಿಡ್ ಸೋಂಕಿನಿಂದ ಮೃತಪಟ್ಟವರಲ್ಲಿ ಶೇ. 53 ಜನರು ಲಸಿಕೆ ಪಡೆದಿರಲಿಲ್ಲ ಎಂದು ಗೋವಾ ಆರೋಗ್ಯ ಇಲಾಖೆ ಹೇಳಿದೆ. ಮೂರನೇ ಅಲೆಯಲ್ಲಿ ಈ ವರೆಗೆ 91 ಜನರು ಮೃತಪಟ್ಟಿದ್ದು, 49 ಜನರು ಲಸಿಕೆ ಪಡೆಯದವರಾಗಿದ್ದಾರೆ ಎಂದು ಹೇಳಿದೆ. ಎರಡನೇ ಅಲೆಯಲ್ಲಿ ಈ ಪ್ರಮಾಣ ಇನ್ನೂ ಹೆಚ್ಚಿತ್ತು. ಶೇ. 75 ಜನರು … Continued

ಎಲೆಕ್ಟ್ರಾನಿಕ್ ವಸ್ತು ರಫ್ತು ಡಿಸೆಂಬರ್ ತಿಂಗಳಲ್ಲಿ ಶೇ. 33 ಹೆಚ್ಚಳ

ನವದೆಹಲಿ: ಭಾರತದಿಂದ ಎಲೆಕ್ಟ್ರಾನಿಕ್ ವಸ್ತುಗಳ ರಫ್ತು ಡಿಸೆಂಬರ್ ತಿಂಗಳಲ್ಲಿ ಶೇ. 33ರಷ್ಟು ಹೆಚ್ಚಳವಾಗಿದೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯ ಹೇಳಿದೆ. ಡಿಸೆಂಬರ್ ತಿಂಗಳಲ್ಲಿ 1.67 ಬಿಲಿಯನ್ ಯುಎಸ್ ಡಾಲರ್ ಮೊತ್ತದ ವಹಿವಾಟ ದಾಖಲಾಗಿದೆ. ಅದರಲ್ಲಿ ಮೊಬೈಲ್ ಫೋನ್ ವಿಭಾಗದಲ್ಲೇ ಗರಿಷ್ಠ ರಫ್ತು ಆಗಿದೆ. ಅಲ್ಲದೆ ಲ್ಯಾಪ್ ಟಾಪ್, ಟ್ಯಾಬ್ಲೆಟ್, ಟಿವಿ, ಆಡಿಯೋ ಉಪಕರಣಗಳು, ಕೈಗಾರಿಕೆಗೆ ಸಂಬಂಧಿಸಿದ … Continued

ವೈನ್ ಮದ್ಯವಲ್ಲ, ವೈನ್ ಮಾರಾಟ ಹೆಚ್ಚಾದರೆ ರೈತರಿಗೆ ಲಾಭ

ಮುಂಬೈ: ವೈನ್ ಮದ್ಯವಲ್ಲ, ವೈನ್ ಮಾರಾಟ ಹೆಚ್ಚಿದರೆ ರೈತರಿಗೆ ಹೆಚ್ಚಿನ ಲಾಭ ಬರುತ್ತದೆ ಎಂದು ಶಿವಸೇನೆಯ ಮುಖಂಡ ಸಂಜಯ ರಾವತ್ ಹೇಳಿದ್ದಾರೆ. ರಾಜ್ಯದ ಸೂಪರ್ ಮಾರ್ಕೆಟುಗಳಲ್ಲಿ ವೈನ್ ಮಾರಾಟಕ್ಕೆ ಅವಕಾಶ ನೀಡಲು ಮಹಾರಾಷ್ಟ್ರ ಸಚಿವ ಸಂಪುಟ ಅನುಮೋದನೆ ನೀಡಿದ ಬೆನ್ನಲ್ಲಿ ರಾವತ್ ಈ ರೀತಿ ಸಮರ್ಥಿಸಿಕೊಂಡಿದ್ದಾರೆ. ಈ ಕ್ರಮದಿಂದ ರೈತರ ಆದಾಯ ದ್ವಿಗೊಳ್ಳಲಿದೆ. ಆದರೆ ಬಿಜೆಪಿ … Continued

ಝೀ ನ್ಯೂಸ್‌ ಒಪಿನಿಯನ್ ಪೋಲ್‌: ಉತ್ತರ ಪ್ರದೇಶ, ಪಂಜಾಬ್‌, ಉತ್ತರಾಖಂಡ ಚುನಾವಣೆಯಲ್ಲಿ ಗೆಲ್ಲುವವರು ಯಾರು..?

ನವದೆಹಲಿ: ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್, ಗೋವಾ ಮತ್ತು ಮಣಿಪುರದ ಐದು ರಾಜ್ಯಗಳು ವಿಧಾನಸಭಾ ಚುನಾವಣಾ ಕದನಕ್ಕೆ ಸಾಕ್ಷಿಯಾಗಲಿವೆ. ಮಾರ್ಚ್ 10 ರಂದು ಚುನಾವಣಾ ಫಲಿತಾಂಶಗಳು ಪ್ರಕಟವಾಗಲಿದ್ದು, ಝೀ ನ್ಯೂಸ್ ಡಿಸೈನ್‌ಬಾಕ್ಸಡ್‌ ನೊಂದಿಗೆ ಸೇರಿಕೊಂಡು ದೇಶದ ಅತಿದೊಡ್ಡ ಚುನಾವಣಾ ಪೂರ್ವ ಅಭಿಪ್ರಾಯ ಸಂಗ್ರಹ ‘ಜನತಾ ಕಾ ಮೂಡ್’ ಸಮೀಕ್ಷೆ ನಡೆಸಿದೆ. ಝೀ ನ್ಯೂಸ್ -ಡಿಸೈನ್‌ಬಾಕ್ಸಡ್‌ ಸಮೀಕ್ಷೆಯು … Continued