ಉತ್ತರ ಪ್ರದೇಶ ಚುನಾವಣೆ: ಭಾರತದ ಅತಿ ಎತ್ತರದ ವ್ಯಕ್ತಿ ಸಮಾಜವಾದಿ ಪಕ್ಷಕ್ಕೆ ಸೇರ್ಪಡೆ

ಲಕ್ನೋ: ಭಾರತದ ಅತಿ ಎತ್ತರದ ವ್ಯಕ್ತಿ – ಧರ್ಮೇಂದ್ರ ಪ್ರತಾಪ್ ಸಿಂಗ್ – ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಮುನ್ನ ಸಮಾಜವಾದಿ ಪಕ್ಷ(SP)ಕ್ಕೆ ಸೇರ್ಪಡೆಗೊಂಡಿದ್ದಾರೆ. ಸಿಂಗ್ ಅವರನ್ನು ಎಸ್ಪಿಯ ರಾಜ್ಯಾಧ್ಯಕ್ಷ ನರೇಶ್ ಪಟೇಲ್ ಪಕ್ಷಕ್ಕೆ ಸ್ವಾಗತಿಸಿದರು. ಅಖಿಲೇಶ್ ಯಾದವ್ ಸೇರಿದಂತೆ ಪಕ್ಷದ ನಾಯಕರೊಂದಿಗೆ ಧರ್ಮೇಂದ್ರ ಪ್ರತಾಪ್ ಸಿಂಗ್ ಪೋಸ್ ನೀಡಿರುವ ಚಿತ್ರವನ್ನು ಪಕ್ಷ ಪೋಸ್ಟ್ ಮಾಡಿದೆ. … Continued

ಈ ಬಾರಿ ಗಣರಾಜ್ಯೋತ್ಸವ ಪರೇಡಿಗೆ ಸ್ತಬ್ದಚಿತ್ರ ಕರ್ನಾಟಕ ಪಾರಂಪರಿಕ ಕರಕುಶಲ ವಸ್ತುಗಳ ತೊಟ್ಟಿಲು ಆಯ್ಕೆ

ನವದೆಹಲಿ: ಕರ್ನಾಟಕ ಪಾರಂಪರಿಕ ಕರಕುಶಲ ವಸ್ತುಗಳ ತೊಟ್ಟಿಲು ಎಂಬ ವಿಷಯಾಧಾರಿತ ರಾಜ್ಯದ ಸ್ತಬ್ದಚಿತ್ರ ಈ ಬಾರಿಯ ಜನವರಿ 26ರ ಗಣರಾಜ್ಯೋತ್ಸವ ಪರೇಡಿಗೆ ಆಯ್ಕೆಯಾಗಿದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಡಾ ಪಿ. ಎಸ್. ಹರ್ಷ ತಿಳಿಸಿದ್ದಾರೆ. ಆಯ್ಕೆಯಾದ 12 ರಾಜ್ಯಗಳ ಸ್ತಬ್ದಚಿತ್ರಗಳಲ್ಲಿ ದಕ್ಷಿಣ ಭಾರತದಿಂದ ಆಯ್ಕೆಯಾಗಿರುವ ಏಕೈಕ ಸ್ತಬ್ದಚಿತ್ರ ಕರ್ನಾಟಕದ್ದಾಗಿದೆ. ಅಲ್ಲದೆ, … Continued

ಚೆಂಡೆಂದು ಭಾವಿಸಿ ಕಚ್ಚಾ ಬಾಂಬ್​ ಹಾರಿಸಿ ಆಟವಾಡಿದ ಮಕ್ಕಳು; ಸ್ಫೋಟದಿಂದ ಮೂವರಿಗೆ ಗಾಯ

ಕೋಲ್ಕತ್ತಾ: ಕಚ್ಚಾಬಾಂಬ್​​ ಅನ್ನು ಚೆಂಡು ಎಂದು ಭಾವಿಸಿ ಮಕ್ಕಳು ಆಟವಾಡಿದಾಗ ಸ್ಫೋಟಗೊಂಡು ಮೂವರು ಮಕ್ಕಳು ಗಾಯಗೊಂಡ ಘಟನೆ ಪಶ್ಚಿಮ ಬಂಗಾಳದ ಮುರ್ಶಿದಾಬಾದ್​ ಜಿಲ್ಲೆಯಲ್ಲಿ ನಡೆದಿದೆ. ಗಾಯಗೊಂಡ ಮಕ್ಕಳು 11-14 ವರ್ಷದವರಾಗಿದ್ದು, ಮಮುನ್ ಅಲಿ (11), ಆಶಿಕ್​ ಶೇಖ್​ (14) ಮತ್ತು ಜೆವೆಲ್​ ಶೇಖ್​ (12) ಎಂದು ಗುರುತಿಸಲಾಗಿದೆ. ಅವರನ್ನು ಮುರ್ಶಿದಾಬಾದ್​ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. … Continued

ಭೌತಿಕ ಚುನಾವಣಾ ಸಮಾವೇಶಗಳು, ರೋಡ್‌ಶೋಗಳ ಮೇಲಿನ ನಿಷೇಧ ಜನವರಿ 31ರ ವರೆಗೆ ವಿಸ್ತರಿಸಿದ ಚುನಾವಣಾ ಆಯೋಗ

ನವದೆಹಲಿ: ಭಾರತೀಯ ಚುನಾವಣಾ ಆಯೋಗವು ಐದು ರಾಜ್ಯಗಳ ಚುನಾವಣೆಯಲ್ಲಿ ಶನಿವಾರದಂದು ಭೌತಿಕ ರ್ಯಾಲಿಗಳು ಮತ್ತು ರೋಡ್ ಶೋಗಳ ಮೇಲಿನ ನಿಷೇಧವನ್ನು ಜನವರಿ 31 ರವರೆಗೆ ವಿಸ್ತರಿಸಿದೆ. ಕೊರೊನಾ ವೈರಸ್ ಹರಡುವುದನ್ನು ತಡೆಯಲು ಭೌತಿಕ ರ್ಯಾಲಿಗಳು ಮತ್ತು ರೋಡ್‌ಶೋಗಳ ಮೇಲೆ ವಿಧಿಸಿದ ನಿಷೇಧವನ್ನು ಮುಂದುವರಿಸಬೇಕೆ ಎಂದು ನಿರ್ಧರಿಸಲು ಚುನಾವಣಾ ಸಮಿತಿಯು ಇಂದು, ಶನಿವಾರ ಹಲವಾರು ವರ್ಚುವಲ್ ಸಭೆಗಳನ್ನು … Continued

ಮೂರನೇ ಅಲೆಯಲ್ಲಿ ಭಾಗಶಃ ಅಥವಾ ಸಂಪೂರ್ಣ ಲಸಿಕೆ ಹಾಕದವರಲ್ಲಿ 60% ಕೋವಿಡ್ ಸಾವುಗಳು : ಅಧ್ಯಯನ

ನವದೆಹಲಿ: ಸಾಂಕ್ರಾಮಿಕ ರೋಗದ ಮೂರನೇ ಅಲೆಯಲ್ಲಿ ಕೋವಿಡ್ -19 ನಿಂದ ಭಾಗಶಃ ಲಸಿಕೆ ಹಾಕಿದ ಅಥವಾ ಸಂಪೂರ್ಣವಾಗಿ ಲಸಿಕೆ ಹಾಕದ ವ್ಯಕ್ತಿಗಳು ಶೇಕಡಾ 60 ಕ್ಕಿಂತ ಹೆಚ್ಚು ಸಾವುಗಳಿಗೆ ಕಾರಣರಾಗಿದ್ದಾರೆ ಎಂದು ದೆಹಲಿಯ ಖಾಸಗಿ ಆಸ್ಪತ್ರೆಯೊಂದು ನಡೆಸಿದ ಅಧ್ಯಯನವು ಸೂಚಿಸಿದೆ. ಮ್ಯಾಕ್ಸ್ ಹೆಲ್ತ್‌ಕೇರ್‌ನ ಅಧ್ಯಯನವು ಮುಖ್ಯವಾಗಿ 70 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಮತ್ತು ಮೂತ್ರಪಿಂಡ, ಹೃದ್ರೋಗ, ಮಧುಮೇಹ, … Continued

ಗೋವಾ ವಿಧಾನಸಭಾ ಚುನಾವಣೆ 2022: ಟಿಕೆಟ್ ನಿರಾಕರಣೆ, ಮಾಜಿ ಸಿಎಂ ಲಕ್ಷ್ಮೀಕಾಂತ್ ಪರ್ಸೇಕರ್ ಬಿಜೆಪಿಗೆ ರಾಜೀನಾಮೆಗೆ ಘೋಷಣೆ

ಪಣಜಿ(ಗೋವಾ): ಗೋವಾದಲ್ಲಿ ಆಡಳಿತಾರೂಢ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಭಾರಿ ಹಿನ್ನಡೆಯಾಗಿದ್ದು, ರಾಜ್ಯದಲ್ಲಿ ಮುಂಬರುವ ವಿಧಾನಸಭೆ ಚುನಾವಣೆಗೆ ಟಿಕೆಟ್ ನಿರಾಕರಿಸಿದ ನಂತರ ಕೇಸರಿ ಪಕ್ಷಕ್ಕೆ ರಾಜೀನಾಮೆ ನೀಡುವುದಾಗಿ ಮಾಜಿ ಮುಖ್ಯಮಂತ್ರಿ ಲಕ್ಷ್ಮೀಕಾಂತ್ ಪರ್ಸೇಕರ್ ಶನಿವಾರ ಘೋಷಿಸಿದ್ದಾರೆ. ನಾನು ಇಂದು ಸಂಜೆಯೊಳಗೆ ಔಪಚಾರಿಕವಾಗಿ ನನ್ನ ರಾಜೀನಾಮೆಯನ್ನು ಸಲ್ಲಿಸುತ್ತೇನೆ” ಎಂದು ಲಕ್ಷ್ಮೀಕಾಂತ್ ಪರ್ಸೇಕರ್ ತಿಳಿಸಿದ್ದಾರೆ. ಮಾಂಡ್ರೆಮ್ ವಿಧಾನಸಭಾ ಕ್ಷೇತ್ರದಿಂದ … Continued

ಪಂಜಾಬ್ ಚುನಾವಣೆ: ತನ್ನ ವಿರುದ್ಧ ಪಂಜಾಬ್‌ ಎಎಪಿ ಸಿಎಂ ಅಭ್ಯರ್ಥಿ ಭಗವಂತ್ ಮಾನ್ ಸವಾಲು

ಚಂಡೀಗಡ: ಆಮ್ ಆದ್ಮಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಭಗವಂತ್ ಮಾನ್ ಅವರು ಪಂಜಾಬ್ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ನಾಯಕ ಚರಂಜಿತ್ ಸಿಂಗ್ ಚನ್ನಿ ಅವರ ವಿರುದ್ಧ ಧುರಿ ಕ್ಷೇತ್ರದಿಂದ ಸ್ಪರ್ಧಿಸುವಂತೆ ಸವಾಲು ಹಾಕಿದ್ದಾರೆ. ಭಗವಂತ್ ಮಾನ್, “ನಾನು ಚಮಕೌರ್ ಸಾಹಿಬ್ (ಚರಂಜಿತ್ ಚನ್ನಿ ಕ್ಷೇತ್ರ) ಮೀಸಲು ಕ್ಷೇತ್ರದಿಂದ ಸ್ಪರ್ಧಿಸಲು ಸಾಧ್ಯವಿಲ್ಲ, ಆದರೆ ಅವರು ಧುರಿಯಿಂದ ಸ್ಪರ್ಧಿಸಬಹುದು, … Continued

ಕೋವಿಡ್‌-19 ಲಸಿಕೆಗಾಗಿ ಯೋಜಿಸುತ್ತಿರುವಿರಾ? ನೀವು ಈ ವರ್ಗಕ್ಕೆ ಸೇರಿದರೆ ಅದನ್ನು ಮುಂದೂಡಿ

ನವದೆಹಲಿ: ಮುನ್ನೆಚ್ಚರಿಕೆ ಡೋಸ್ (ಬೂಸ್ಟರ್‌ ಡೋಸ್‌) ಸೇರಿದಂತೆ ಕೋವಿಡ್-19 ಲಸಿಕೆಯನ್ನು ತೆಗೆದುಕೊಳ್ಳುವ ಜನರಿಗೆ ಕೇಂದ್ರ ಆರೋಗ್ಯ ಸಚಿವಾಲಯ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ರಾಷ್ಟ್ರೀಯ ಆರೋಗ್ಯ ಮಿಷನ್ (NHM) ಹೊರಡಿಸಿದ ಹೊಸ ನಿರ್ದೇಶನದ ಪ್ರಕಾರ ವ್ಯಕ್ತಿಗಳು ಕೋವಿಡ್‌-19 ಧನಾತ್ಮಕ ಪರೀಕ್ಷೆಯನ್ನು ಹೊಂದಿದ್ದರೆ ಕೊರೊನಾ ವೈರಸ್ ಬೂಸ್ಟರ್‌ ತೆಗೆದುಕೊಳ್ಳುವುದನ್ನು ಮುಂದೂಡಬೇಕು ಎಂದು ಹೇಳಿದೆ. ಹೆಚ್ಚುವರಿ ಕಾರ್ಯದರ್ಶಿ ಮತ್ತು … Continued

ಗೋವಾ ಚುನಾವಣೆ 2022: ಪಣಜಿಯಿಂದ ಬಿಜೆಪಿ ‘ಉತ್ತಮ ಅಭ್ಯರ್ಥಿ’ ಕಣಕ್ಕಿಳಿಸಿದರೆ ಸ್ಪರ್ಧೆಯಿಂದ ಹಿಂದೆ ಸರಿಯಲು ಸಿದ್ಧ-ಉತ್ಪಲ್ ಪರಿಕ್ಕರ್

ನವದೆಹಲಿ: ಪಣಜಿ ಕ್ಷೇತ್ರದಿಂದ ಬಿಜೆಪಿ ಉತ್ತಮ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಚುನಾವಣಾ ಕಣದಿಂದ ಹಿಂದೆ ಸರಿಯಲು ಸಿದ್ಧ ಎಂದು ಗೋವಾದ ಮಾಜಿ ಮುಖ್ಯಮಂತ್ರಿ ದಿವಂಗತ ಮನೋಹರ್ ಪರಿಕ್ಕರ್ ಅವರ ಪುತ್ರ ಉತ್ಪಲ್ ಪರಿಕ್ಕರ್ ಹೇಳಿದ್ದಾರೆ. ಮುಂದಿನ ತಿಂಗಳು ನಡೆಯಲಿರುವ ಗೋವಾ ವಿಧಾನಸಭಾ ಚುನಾವಣೆಯಲ್ಲಿ ಪಣಜಿಯಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಯೋಜನೆಯನ್ನು ಶುಕ್ರವಾರ ಪ್ರಕಟಿಸಿದ ಉತ್ಪಲ್, ಪಕ್ಷವನ್ನು ತೊರೆಯುವುದು … Continued

ಆಸ್ಪತ್ರೆಯಲ್ಲಿ ತಾಯಿ, ಮಗು ಸಾವು; ವೈದ್ಯರ ನಿರ್ಲಕ್ಷ್ಯದ ಆರೋಪ

ಮಂಗಳೂರು: ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಹೆರಿಗೆಗೆ ಬಂದಿದ್ದ ತಾಯಿ ಮತ್ತು ಮಗು ಮೃತಪಟ್ಟ ಘಟನೆ ನಡೆದಿದ್ದು ಇದಕ್ಕೆ ವೈದ್ಯರ ನಿರ್ಲಕ್ಷ್ಯ ಕಾರಣ ಎಂದು ಸಂಬಂಧಿಕರು ಆರೋಪಿಸಿದ್ದಾರೆ. ವಿಟ್ಲ ಕುಂಡಡ್ಕ ಮೂಲದ ಗರ್ಭಿಣಿ ಸವಿತಾ (33) ಹೆರಿಗೆಗಾಗಿ ಶುಕ್ರವಾರ ಬೆಳಗ್ಗೆ ಆಸ್ಪತ್ರೆಗೆ ಬಂದಿದ್ದರು. ಮಗು ಆಸ್ಪತ್ರೆಯಲ್ಲಿ ಮೃತಪಟ್ಟಿದೆ. ಸಂಜೆ ವೇಳೆ ತಾಯಿ ಕೂಡ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆಯವರು … Continued