ಲಖಿಂಪುರ್ ಖೇರಿ ಪ್ರಕರಣದ ಆರೋಪಿ ಮಿಶ್ರಾ ಜಾಮೀನು ಪ್ರಶ್ನಿಸಿದ್ದ ಅರ್ಜಿ ವಿಚಾರಣೆ: ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್‌

ನವದೆಹಲಿ:ರೈತರು ಸೇರಿದಂತೆ ಎಂಟು ಜನರ ಸಾವಿಗೆ ಕಾರಣವಾಗಿದ್ದ ಲಖಿಂಪುರ್‌ ಖೇರಿ ಹಿಂಸಾಚಾರ ಪ್ರಕರಣದ ಮುಖ್ಯ ಆರೋಪಿ ಆಶಿಶ್ ಮಿಶ್ರಾಗೆ ಜಾಮೀನು ಮಂಜೂರು ಮಾಡಿದ್ದ ಅಲಾಹಾಬಾದ್ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಮೃತ ಕುಟುಂಬ ಸದಸ್ಯರು ಸಲ್ಲಿಸಿದ್ದ ಮೇಲ್ಮನವಿಗೆ ಸಂಬಂಧಿಸಿದ ತೀರ್ಪನ್ನು ಸುಪ್ರೀಂ ಕೋರ್ಟ್ ಸೋಮವಾರ ಕಾಯ್ದಿರಿಸಿದೆ. ತೀರ್ಪು ಕಾಯ್ದಿರಿಸುವ ಮುನ್ನ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) … Continued

2019-20ರಲ್ಲಿ ಅತಿ ಹೆಚ್ಚು ಕಾರ್ಪೊರೇಟ್ ದೇಣಿಗೆ ಪಡೆದ ಪಕ್ಷ ಬಿಜೆಪಿ : ರಾಜಕೀಯ ಪಕ್ಷಗಳು ದೇಣಿಗೆ ಪಡೆದ ಮಾಹಿತಿ ಇಲ್ಲಿದೆ…

ನವದೆಹಲಿ: 2019-20ನೇ ಹಣಕಾಸು ವರ್ಷದಲ್ಲಿ ಕಾರ್ಪೊರೇಟ್ ಮತ್ತು ವ್ಯಾಪಾರ ಸಂಸ್ಥೆಗಳು ರಾಷ್ಟ್ರೀಯ ಪಕ್ಷಗಳಿಗೆ 921.95 ಕೋಟಿ ರೂ.ಗಳ ದೇಣಿಗೆ ನೀಡಿದ್ದು, ಇದರಲ್ಲಿ ಬಿಜೆಪಿಯು 720.407 ಕೋಟಿ ರೂ.ಗಳ ದೇಣಿಗೆ ಪಡೆದಿದೆ ಎಂದು ವರದಿಯೊಂದು ತಿಳಿಸಿದೆ. ಆರ್ಥಿಕ ವರ್ಷ 2017-18 ಮತ್ತು 2018-19 ರ ನಡುವೆ ರಾಷ್ಟ್ರೀಯ ಪಕ್ಷಗಳಿಗೆ ಕಾರ್ಪೊರೇಟ್‌ಗಳಿಂದ ದೇಣಿಗೆ 109% ರಷ್ಟು ಹೆಚ್ಚಾಗಿದೆ ಎಂದು … Continued

ಹೊಸ ಮನೆ ಕಟ್ಟಲು, ಚೆಂದವಿಲ್ಲದ ಹುಡುಗಿಯರಿಗೆ ಮದುವೆಯಾಗಲು ವರದಕ್ಷಿಣೆ ಸಹಾಯ ಮಾಡುತ್ತದೆ: ಹೀಗೆಂದು ನರ್ಸಿಂಗ್ ವಿದ್ಯಾರ್ಥಿಗಳ ಪಠ್ಯಪುಸ್ತಕ ಹೇಳುತ್ತದೆ…!

ನವದೆಹಲಿ: ವರದಕ್ಷಿಣೆಯ ಅರ್ಹತೆ” ಅನ್ನು ಒಳಗೊಂಡಿರುವ ಕಾಲೇಜು ಪುಸ್ತಕದ ಪುಟದ ಚಿತ್ರವು ಆನ್‌ಲೈನ್‌ನಲ್ಲಿ ವೈರಲ್ ಆಗಿದೆ. ಈ ಚಿತ್ರವನ್ನು ಅಪರ್ಣಾ ಎಂಬ ಬಳಕೆದಾರರು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ ಮತ್ತು ಇದು ದಾದಿಯರಿಗಾಗಿ ಸಮಾಜಶಾಸ್ತ್ರದ ಪಠ್ಯಪುಸ್ತಕದಲ್ಲಿ ಬಂದಿದೆ ಅವರು ಹೇಳಿದ್ದಾರೆ. ಪೋಸ್ಟ್ ಅನ್ನು ಭಾನುವಾರ ಹಂಚಿಕೊಳ್ಳಲಾಗಿದೆ ಮತ್ತು ನೆಟಿಜನ್‌ಗಳಿಂದ ಆಘಾತಕಾರಿ ಮತ್ತು ಕೋಪದ ಪ್ರತಿಕ್ರಿಯೆಗಳು ಬಂದಿವೆ. ಪಠ್ಯಪುಸ್ತಕವನ್ನು … Continued

ಕಾಶ್ಮೀರ: ಶೋಪಿಯಾನದಲ್ಲಿ ಕಾಶ್ಮೀರಿ ಪಂಡಿತನ ಮೇಲೆ ಉಗ್ರರು ಗುಂಡಿನ ದಾಳಿ

ಕಾಶ್ಮೀರ: ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಚೋಟೋಗಾಮ್ ಪ್ರದೇಶದಲ್ಲಿ ಸೋಮವಾರ ಸಂಜೆ ಭಯೋತ್ಪಾದಕರು ಕಾಶ್ಮೀರಿ ಪಂಡಿತ ಹಾಗೂ ಅಂಗಡಿ ಮಾಲೀಕನ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿ ಗಾಯಗೊಳಿಸಿದ್ದಾರೆ. ಗಾಯಾಳು ಕಾಶ್ಮೀರಿ ಪಂಡಿತ ಸೋನು ಕುಮಾರ್ ಬಲ್ಜಿ ಎಂದು ಗುರುತಿಸಲಾಗಿದೆ ಹಾಗೂ ಗಂಭೀರ ಸ್ಥಿತಿಯಲ್ಲಿ ಶ್ರೀನಗರದ ಸೇನಾ ಆಸ್ಪತ್ರೆಗೆ ಸಾಗಿಸಲಾಗಿದೆ. ಕಳೆದ 24 ಗಂಟೆಗಳಲ್ಲಿ, ಪುಲ್ವಾಮಾದಲ್ಲಿ … Continued

ದೇಶಕ್ಕೆ ಅವರ ಅಗತ್ಯವಿದೆ…: ತನ್ನ ಎಲ್ಲ ಆಸ್ತಿಯನ್ನೂ ರಾಹುಲ್​ ಗಾಂಧಿ ಹೆಸರಿಗೆ ಬರೆದಿಟ್ಟ ಡೆಹ್ರಾಡೂನಿನ 78 ವರ್ಷದ ಮಹಿಳೆ…!

ಡೆಹ್ರಾಡೂನ್‌: ಉತ್ತರಾಖಂಡ್‌ನ ಡೆಹ್ರಾಡೂನ್‌ನ 78 ವರ್ಷದ ಮಹಿಳೆಯೊಬ್ಬರು 50 ಲಕ್ಷ ರೂ.ಗಳ ಮೌಲ್ಯದ ಆಸ್ತಿ ಮತ್ತು 10 ತೊಲೆ ಚಿನ್ನ ಸೇರಿದಂತೆ ತಮ್ಮ ಎಲ್ಲ ಆಸ್ತಿಯನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೆಸರಿಗೆ ಬರೆದಿದ್ದಾರೆ. ಪುಷ್ಪಾ ಮುಂಜಿಯಾಲ್ ಎಂಬ ಮಹಿಳೆ ಡೆಹ್ರಾಡೂನ್ ನ್ಯಾಯಾಲಯಕ್ಕೆ ವಿಲ್ ಸಲ್ಲಿಸಿದ್ದು, ರಾಹುಲ್ ಗಾಂಧಿಗೆ ತಮ್ಮ ಆಸ್ತಿಯ ಮಾಲೀಕತ್ವದ ಕಾಗದಪತ್ರಗಳನ್ನು ನೀಡಿದ್ದಾರೆ. … Continued

ರಾಜಸ್ಥಾನದ ಹಿಂಸಾಚಾರದಲ್ಲಿ ಬೆಂಕಿ ಕೆನ್ನಾಲಿಗೆಗೆ ಸುಡುತ್ತಿರುವ ಕಟ್ಟಡಗಳ ಮಧ್ಯೆ ಪುಟ್ಟ ಮಗು ಎತ್ತಿಕೊಂಡು ಓಡಿ ರಕ್ಷಣೆ ಮಾಡಿದ ಪೊಲೀಸ್‌ ಪೇದೆ.. ಈ ಹೃದಯಸ್ಪರ್ಶಿ ಘಟನೆಗೆ ಎಲ್ಲೆಡೆ ಪ್ರಶಂಸೆ

ನವದೆಹಲಿ: ಒಂದು ಚಿತ್ರ ಸಾವಿರ ಪದಗಳನ್ನು ಹೇಳುತ್ತದೆ ಎಂಬುದಕ್ಕೆ ಈ ಫೋಟೋ ಒಂದು ಉತ್ತಮ ನಿದರ್ಶನ. ರಾಜಸ್ಥಾನದ ಹಿಂಸಾಚಾರ-ಪೀಡಿತ ಕರೌಲಿಯ ಈ ಫೋಟೋವು ಗಲಭೆಕೋರರು ಬೆಂಕಿ ಹಚ್ಚಿದ ನಂತರ ಸುಡುತ್ತಿರುವ ಕಟ್ಟಡಗಳ ಮಧ್ಯೆ ರಾಜಸ್ಥಾನದ ಪೊಲೀಸ್ ಪೇದೆಯೊಬ್ಬರು ಪುಟ್ಟ ಮಗುವನ್ನು ಎತ್ತಿಕೊಂಡು ಕಿರಿದಾದ ಕಾಲುದಾರಿಗಳ ಮೂಲಕ ಓಡುತ್ತ ಹಾನಿಯಿಂದ ರಕ್ಷಣೆ ಮಾಡಿದ್ದಕ್ಕೆ ಸಾಕ್ಷಿಯಾಗಿದ್ದು, ಎಲ್ಲಾ ಪ್ರಶಂಸೆಗೆ … Continued

ಮಡಿಲಲ್ಲಿ ಪುಟ್ಟ ತಂಗಿಯೊಂದಿಗೆ ತರಗತಿಗಳಿಗೆ ಹಾಜರಾಗುವ 10 ವರ್ಷದ ಮಣಿಪುರದ ಹುಡುಗಿ..! ಅರ್ಪಣಾ ಭಾವಕ್ಕೆ ಶ್ಲಾಘಿಸಿ ಅವಳ ಪದವಿ ವರೆಗಿನ ಶಿಕ್ಷಣದ ಹೊಣೆ ಹೊತ್ತ ಸಚಿವರು

ಇಂಫಾಲ್: ಮಣಿಪುರದ 10 ವರ್ಷದ ಬಾಲಕಿ ಮೈನಿಂಗ್‌ಸಿನ್ಲಿಯು ಪಮೇಯ್ ತನ್ನ ಸಹೋದರಿಯನ್ನು ಮಡಿಲಲ್ಲಿ ಕೂರಿಸಿಕೊಂಡು ಶಾಲೆಯಲ್ಲಿ ಕಲಿಯುತ್ತಾಳೆ. 4ನೇ ತರಗತಿಯ ವಿದ್ಯಾರ್ಥಿನಿ, ತನ್ನ ತಂಗಿಯನ್ನು ಮಡಿಲಲ್ಲಿ ಇಟ್ಟುಕೊಂಡು ಪ್ರಾಥಮಿಕ ಶಾಲೆ ತರಗತಿಗಳಿಗೆ ಹಾಜರಾಗುತ್ತಿರುವ ಪಮೇಯ ಫೋಟೋ ಮತ್ತು ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಮಣಿಪುರದ ವಿದ್ಯುತ್, ಅರಣ್ಯ ಮತ್ತು ಪರಿಸರ ಸಚಿವ ಟಿ. ಬಿಸ್ವಜಿತ್ … Continued

ದೇವಸ್ಥಾನದ ಹೊರಗೆ ನಿಲ್ಲಿಸಿದ್ದ ಎನ್​ಫೀಲ್ಡ್​ ಬೈಕ್​ ಬೆಂಕಿ ಹೊತ್ತಿಕೊಂಡು ಸ್ಫೋಟ..!-ದಿಕ್ಕೆಟ್ಟು ಓಡಿದ ಜನ..ವೀಕ್ಷಿಸಿ

ಹೈದರಾಬಾದ್: ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ರಾಯಲ್ ಎನ್‌ಫೀಲ್ಡ್ (Royal Enfield) ಬೈಕ್​ಗೆ ಹಠಾತ್ ಬೆಂಕಿ ಹತ್ತಿಕೊಂಡು ಸ್ಫೋಟಗೊಂಡ ಆಘಾತಕಾರಿ ಘಟನೆ ನಡೆದಿದ್ದು, ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಟ್ವಿಟ್ಟರ್‌ನಲ್ಲಿ ಹಂಚಿಕೊಳ್ಳಲಾದ ವೀಡಿಯೊದಲ್ಲಿ ದೇವಾಲಯದ ಹೊರಗೆ ಜನರ ಗುಂಪು ಜಮಾಯಿಸಿರುವುದನ್ನು ನೋಡಬಹುದು. ಹೊಸ ಬೈಕ್ ಅನ್ನು ದೇವಸ್ಥಾನದ ಹೊರಗೆ ನಿಲ್ಲಿಸಲಾಗಿತ್ತು. ಬೈಕ್‌ಗೆ ಬೆಂಕಿ ಹೊತ್ತಿಕೊಂಡಿದೆ, ನಂತರ ಬೈಕ್‌ ಎಲ್ಲರೂ … Continued

ಆಯುಧದೊಂದಿಗೆ ‘ಅಲ್ಲಾಹು ಅಕ್ಬರ್’ ಎಂದು ಕೂಗುತ್ತ ಗೋರಖನಾಥ ದೇಗುಲ ಪ್ರವೇಶಕ್ಕೆ ಯತ್ನಿಸಿದ ವ್ಯಕ್ತಿ, ಪೊಲೀಸರ ಮೇಲೆ ದಾಳಿ, ದೃಶ್ಯ ವೀಡಿಯೊದಲ್ಲಿ ಸೆರೆ

ಲಕ್ನೋ: ಮುಸ್ಲಿಂ ಯುವಕನೊಬ್ಬ ಹರಿತ ಆಯುಧದೊಂದಿಗೆ ಅಲ್ಲಾಹು ಅಕ್ಬರ್ ಎಂದು ಘೋಷಣೆ ಕೂಗುತ್ತಾ ಬಲವಂತವಾಗಿ ಗೋರಖ್‍ನಾಥ ದೇವಸ್ಥಾನದ ದಕ್ಷಿಣ ದ್ವಾರವನ್ನು ಪ್ರವೇಶಿಲು ಯತ್ನಿಸಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಬಂಧಿತ ಆರೋಪಿಯನ್ನು ಅಹ್ಮದ್ ಮುರ್ತಾಜಾ ಅಬ್ಬಾಸಿ ಎಂದು ಗುರುತಿಸಲಾಗಿದೆ. ಈತ ಗೋರಖ್‍ಪುರದ ನಿವಾಸಿ. ಉತ್ತರ ಪ್ರದೇಶದ ಗೋರಖ್‍ಪುರ ಜಿಲ್ಲೆಯ ಗೋರಖ್‍ನಾಥ ದೇವಸ್ಥಾನದ ದಕ್ಷಿಣ ದ್ವಾರದಲ್ಲಿ ಭಾನುವಾರ … Continued

715 ದಿನಗಳ ನಂತರ ಇದೇ ಮೊದಲ ಬಾರಿಗೆ ಭಾರತದಲ್ಲಿ 1,000ಕ್ಕಿಂತ ಕಡಿಮೆ ದೈನಂದಿನ ಕೋವಿಡ್‌-19 ಪ್ರಕರಣಗಳು ದಾಖಲು…!

ನವದೆಹಲಿ: ಭಾರತದಲ್ಲಿ 715 ದಿನಗಳಲ್ಲಿ ಇದೇ ಮೊದಲ ಬಾರಿಗೆ 1,000 ಕ್ಕಿಂತ ಕಡಿಮೆ ಹೊಸ ಕೋವಿಡ್‌-19 ಪ್ರಕರಣಗಳು ದಾಖಲಾಗಿವೆ. ಏಪ್ರಿಲ್ 18, 2020 ರಿಂದ 991 ಪ್ರಕರಣಗಳು ವರದಿಯಾದ ನಂತರ ಭಾರತವು ಮೊದಲ ಬಾರಿಗೆ 1,000 ಕ್ಕಿಂತ ಕಡಿಮೆ ಕೋವಿಡ್‌-19 ಪ್ರಕರಣಗಳನ್ನು ದಾಖಲಿಸಿದೆ. ವೈರಸ್ ಸಂಖ್ಯೆ 4,30,29,044 ಕ್ಕೆ ಏರಿದೆ, ಆದರೆ ಸಕ್ರಿಯ ಸೋಂಕಿನ ಸಂಖ್ಯೆ … Continued