ಕೊಡಗಿನಲ್ಲಿ ಹುಲಿ ದಾಳಿಗೆ ವ್ಯಕ್ತಿ ಸಾವು

ಮಡಿಕೇರಿ: ದಕ್ಷಿಣ ಕೊಡಗಿನಲ್ಲಿ ಸೋಮವಾರ ಹುಲಿ ದಾಳಿಗೆ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಜಿಲ್ಲೆಯ ವಿರಾಜಪೇಟೆ ತಾಲೂಕಿನ ರುದ್ರಗುಪ್ಪೆ ಗ್ರಾಮದ ತೋಟದಲ್ಲಿ  ಸಮೀಪದ ಕಾಫಿತೋಟದಲ್ಲಿ ಈ ಘಟನೆ ನಡೆದಿದೆ. ಹುಲಿ ದಾಳಿಗೆ ಮೃತ ಪಟ್ಟ ವ್ಯಕ್ತಿಯನ್ನು ಗಣೇಶ (29) ಗುರುತಿಸಲಾಗಿದೆ. ಕಾಫಿತೋಟದಲ್ಲಿ ಯುವಕನು ಕೆಲಸ ಮಾಡುತ್ತಿರುವ ಸಂದರ್ಭದಲ್ಲಿ ಹುಲಿಯೊಂದು ಏಕಾಏಕಿ ದಾಳಿ ನಡೆಸಿದೆ. ಈ ವೇಳೆ … Continued

ಫೋನ್‌ ಕರೆ ಮಾಡಿದಾಗ ಕೇಳುತ್ತಿದ್ದ ಕೊರೊನಾ ಜಾಗೃತಿ ಸಂದೇಶ ಸ್ಥಗಿತಕ್ಕೆ ಸರ್ಕಾರದ ಚಿಂತನೆ: ವರದಿ

ನವದೆಹಲಿ: ಯಾರಿಗಾದರೂ ಫೋನ್‌ ಕರೆ ಮಾಡಿದಾಗ ಕೇಳಿಬರುತ್ತಿದ್ದ ಕೊರೊನಾ ಜಾಗೃತಿ ಸಂದೇಶ ಶೀಘ್ರದಲ್ಲೆ ಸ್ಥಗಿತಗೊಳ್ಳಲಿದೆ. ಸುಮಾರು ಎರಡು ವರ್ಷಗಳ ಕಾಲ ಮೊಬೈಲ್ʼನಲ್ಲಿ ನಿರಂತರವಾಗಿ ಕೇಳಿಬರುತ್ತಿದ್ದ ಕಾಲರ್ ಟ್ಯೂನ್ ಅನ್ನು ತೆಗೆದು ಹಾಕಲು ಸರ್ಕಾರ ಯೋಚಿಸುತ್ತಿದೆ ಎಂದು ವರದಿಗಳು ತಿಳಿಸಿವೆ. ಈ ಹಿಂದೆ ಕೋವಿಡ್ ವೈರಸ್ ಬಗ್ಗೆ ಜಾಗೃತಿ ಮೂಡಿಸಲು ಮೊಬೈಲ್ ಫೋನ್‌ಗಳಲ್ಲಿ ಕೊರೊನಾ ಕಾಲರ್ ಟ್ಯೂನ್‌ಗಳನ್ನ … Continued

ಕೇರಳದ ಭರತನಾಟ್ಯ ಕಲಾವಿದೆ ಹಿಂದೂ ಅಲ್ಲದ ಕಾರಣ ದೇವಸ್ಥಾನದಲ್ಲಿ ಪ್ರದರ್ಶನ ನೀಡಲು ನಿರ್ಬಂಧ..!

ಕೇರಳದ ಜನಪ್ರಿಯ ಭರತನಾಟ್ಯ ಕಲಾವಿದೆ ಮಾನ್ಸಿಯಾ ವಿ.ಪಿ., ಕಲಾ ಪ್ರಕಾರವನ್ನು ಕಲಿಯಲು ಮತ್ತು ಪ್ರದರ್ಶಿಸಲು ಮುಸ್ಲಿಂ ಧರ್ಮಗುರುಗಳಿಂದ ಬಹಿಷ್ಕಾರವನ್ನು ಎದುರಿಸಿದ ನಂತರ ಈಗ ತ್ರಿಶೂರ್ ಜಿಲ್ಲೆಯ ದೇವಾಲಯದ ಆಡಳಿತದಿಂದ ಮತ್ತೊಂದು ಬಹಿಷ್ಕಾರವನ್ನು ಎದುರಿಸಿದ್ದಾರೆ. ಫೇಸ್‌ಬುಕ್ ಪೋಸ್ಟ್‌ನಲ್ಲಿ, ಭರತನಾಟ್ಯದಲ್ಲಿ ಪಿಎಚ್‌ಡಿ ಸಂಶೋಧನಾ ವಿದ್ವಾಂಸರಾದ ಮಾನ್ಸಿಯಾ ಅವರು ತ್ರಿಶೂರ್‌ನ ಕೂಡಲ್ಮಾಣಿಕ್ಯಂ ದೇವಸ್ಥಾನವು ತಾವು ಹಿಂದು ಅಲ್ಲ ಎಂಬ ಕಾರಣಕ್ಕೆ … Continued

ಅಫ್ಘಾನಿಸ್ತಾನದಲ್ಲಿ ಮನೋರಂಜನಾ ಪಾರ್ಕ್‌ಗಳಿಗೆ ಮಹಿಳೆಯರು-ಪುರುಷರು ಒಂದೇ ದಿನ ಹೋಗುವಂತಿಲ್ಲ: ತಾಲಿಬಾನಿಗಳಿಂದ ಹೊಸ ಕಟ್ಟಳೆ..!

ಕಾಬೂಲ್: ಅಫ್ಘಾನಿಸ್ತಾನದ ತಾಲಿಬಾನ್‌ ಆಡಳಿತ ಮಹಿಳೆಯರಿಗೆ ಒಂದಾದ ಮೇಲೊಂದರಂತೆ ಕಠಿಣ ನಿರ್ಬಂಧಗಳನ್ನು ವಿಧಿಸಲು ಮುಂದಾಗಿದೆ. ಈಗ ಅಮ್ಯೂಸ್‌ಮೆಂಟ್ ಪಾರ್ಕ್‌ಗಳಲ್ಲಿ ತಾಲಿಬಾನ್‌ಗಳು ಲಿಂಗ ಪ್ರತ್ಯೇಕತೆಯನ್ನು ಜಾರಿಗೊಳಿಸಿದ್ದಾರೆ ಎಂದು ಹೇಳಲಾಗಿದೆ. ಒಂದೇ ದಿನ ಅಮ್ಯೂಸ್‌ಮೆಂಟ್ ಪಾರ್ಕ್‌ಗಳಿಗೆ ಪುರುಷರು ಮತ್ತು ಮಹಿಳೆಯರು ಒಟ್ಟಿಗೆ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ. ಪುರುಷರಿಗೆ ಬುಧವಾರದಿಂದ ಶನಿವಾರದ ವರೆಗೆ ಉದ್ಯಾನವನಗಳಿಗೆ ಭೇಟಿ ನೀಡಲು ಅವಕಾಶವಿರುತ್ತದೆ. ವಾರದ ಉಳಿದ … Continued

ಬಿರ್ಭೂಮ್ ಹತ್ಯೆಗೆ ಸಂಬಂಧಿಸಿ ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಗದ್ದಲ: ಅಶಿಸ್ತಿನ ವರ್ತನೆಗಾಗಿ 5 ಬಿಜೆಪಿ ಶಾಸಕರ ಅಮಾನತು

ಕೋಲ್ಕತ್ತಾ: ಅಶಿಸ್ತಿನ ವರ್ತನೆಗಾಗಿ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಸೇರಿದಂತೆ ಪಶ್ಚಿಮ ಬಂಗಾಳದ ಐವರು ಬಿಜೆಪಿ ಶಾಸಕರನ್ನು ವಿಧಾನಸಭೆ ಸ್ಪೀಕರ್ ಬಿಮನ್ ಬಂದೋಪಾಧ್ಯಾಯ ಅವರು ಸೋಮವಾರ ಸದನದಲ್ಲಿ ಅಮಾನತುಗೊಳಿಸಿದ್ದಾರೆ. ಬಿರ್ಭೂಮ್ ಹಿಂಸಾಚಾರದ ಬಗ್ಗೆ ಚರ್ಚಿಸಲು ಪ್ರತಿಪಕ್ಷಗಳು ಒತ್ತಾಯಿಸಿದ ನಂತರ ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಗೊಂದಲ ಉಂಟಾದ ನಂತರ ಅಮಾನತುಗಳನ್ನು ಮಾಡಲಾಯಿತು. ಬಿರ್ಭೂಮ್ ಹಿಂಸಾಚಾರದಲ್ಲಿ ಎಂಟು … Continued

ಸರ್ಕಾರಿ ನೌಕರರಿಗೆ ಮುಷ್ಕರದಲ್ಲಿ ಭಾಗವಹಿಸುವ ಹಕ್ಕಿಲ್ಲ: ಕೇರಳ ಹೈಕೋರ್ಟ್

ತಿರುವನಂತಪುರಂ: ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ 48 ಗಂಟೆಗಳ ರಾಷ್ಟ್ರವ್ಯಾಪಿ ಬಂದ್‌ನಲ್ಲಿ ಭಾಗವಹಿಸದಂತೆ ಸರ್ಕಾರಿ ನೌಕರರಿಗೆ ಕೇರಳ ಹೈಕೋರ್ಟ್ ಸೋಮವಾರ ನಿರ್ಬಂಧ ವಿಧಿಸಿದೆ. ಈ ಬಗ್ಗೆ ಕೂಡಲೇ ಆದೇಶ ಹೊರಡಿಸುವಂತೆ ಸರ್ಕಾರಕ್ಕೆ ಸೂಚಿಸಿದೆ. ಸರ್ಕಾರಿ ನೌಕರರು ಕಾರ್ಮಿಕರ ವ್ಯಾಪ್ತಿಗೆ ಬರುವುದಿಲ್ಲ ಮತ್ತು ಅವರು ಮುಷ್ಕರದಲ್ಲಿ ಭಾಗವಹಿಸುವುದು ಸೇವಾ ನಿಯಮಗಳಿಗೆ ವಿರುದ್ಧವಾಗಿದೆ ಎಂದು ನ್ಯಾಯಾಲಯ ಹೇಳಿದೆ. ಕಾರ್ಯಕರ್ತ … Continued

ಮನುಷ್ಯರಷ್ಟೇ ಅಲ್ಲ, ಈಗ ಮರಗಳಿಗೂ ಉಚಿತ ಅಂಬುಲೆನ್ಸ್ ಸೇವೆ…ಸಹಾಯವಾಣಿಯೂ ಆರಂಭ…!!

ನವದೆಹಲಿ: ಹಾನಿಗೊಳಗಾದ ಮರಗಳ ಪುನರುಜ್ಜೀವನಗೊಳಿಸಲು ವಿಶೇಷ ಅಂಬುಲೆನ್ಸ್ ಸೇವೆಯನ್ನು ಪೂರ್ವ ದೆಹಲಿಯಲ್ಲಿ ಗುರುವಾರ ಉದ್ಘಾಟಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪೂರ್ವ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಈ ವಿಭಿನ್ನ ಆಲೋಚನೆಯನ್ನು ಅನುಷ್ಠಾನಕ್ಕೆ ತಂದಿದೆ. ಅನಾರೋಗ್ಯ ಮತ್ತು ದುರ್ಬಲ ಅಥವಾ ಹಾನಿಗೊಳಗಾದ ಮರಗಳ ಚಿಕಿತ್ಸೆಗಾಗಿ ಹೊಸ ಉಪಕ್ರಮವನ್ನು ತೆಗೆದುಕೊಂಡಿದೆ. ಮರಗಳಿಗೆ ಚಿಕಿತ್ಸೆ ನೀಡಲು ಉಚಿತ ಅಂಬುಲೆನ್ಸ್ ಸೇವೆಯನ್ನು ಪ್ರಾರಂಭಿಸಿದೆ. … Continued

ಶ್ರೀಲಂಕಾದ ಹಣಕಾಸು ಸಚಿವರ ಭೇಟಿ ಮಾಡಿದ ಜೈಶಂಕರ; ಆರ್ಥಿಕ ಬಿಕ್ಕಟ್ಟು, ಭಾರತದ ಬೆಂಬಲದ ಬಗ್ಗೆ ಚರ್ಚೆ

ಕೊಲಂಬೊ: ಭಾರತದ ವಿದೇಶಾಂಗ ವ್ಯವಹಾರಗಳ ಖಾತೆ ಸಚಿವ ಎಸ್. ಜೈಶಂಕರ ಸೋಮವಾರ ಶ್ರೀಲಂಕಾದ ಹಣಕಾಸು ಸಚಿವ ಬಸಿಲ್ ರಾಜಪಕ್ಸೆ ಅವರನ್ನು ಭೇಟಿ ಮಾಡಿದರು ಮತ್ತು ದ್ವೀಪ ರಾಷ್ಟ್ರದ ಆರ್ಥಿಕ ಪರಿಸ್ಥಿತಿ ಮತ್ತು ಪ್ರಸ್ತುತ ವಿದೇಶಿ ವಿನಿಮಯ ಬಿಕ್ಕಟ್ಟಿನ ಸಂದರ್ಭದಲ್ಲಿ ಭಾರತದ ಬೆಂಬಲದ ಬಗ್ಗೆ ಚರ್ಚಿಸಿದರು. ವಿದೇಶಿ ವಿನಿಮಯದ ಕೊರತೆಯಿಂದಾಗಿ ಶ್ರೀಲಂಕಾ ತೀವ್ರ ಆರ್ಥಿಕ ಮತ್ತು ಇಂಧನ … Continued

ಎರಡನೇ ಅವಧಿಗೆ ಗೋವಾ ಮುಖ್ಯಮಂತ್ರಿಯಾಗಿ ಪ್ರಮೋದ ಸಾವಂತ್ ಪ್ರಮಾಣ ವಚನ ಸ್ವೀಕಾರ

ಪಣಜಿ: ಎರಡನೇ ಅವಧಿಗೆ ಗೋವಾ ಮುಖ್ಯಮಂತ್ರಿಯಾಗಿ ಪ್ರಮೋದ್ ಸಾವಂತ್ ಅವರು ಸೋಮವಾರ ಪ್ರಮಾಣವಚನ ಸ್ವೀಕರಿಸಿದರು. ಇಲ್ಲಿನ ಶ್ಯಾಮ್‌ಪ್ರಸಾದ್ ಮುಖರ್ಜಿ ಮೈದಾನದಲ್ಲಿ ನಡೆದ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ರಾಜ್ಯಪಾಲ ಪಿ.ಎಸ್.ಶ್ರೀಧರನ್ ಪಿಳ್ಳೈ ಅವರು ಪ್ರಮೋದ ಸಾವಂತ್‌ ಅವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.‍ಪಿ.ನಡ್ಡಾ … Continued

ಕೇವಲ 1 ರೂ. ನಾಣ್ಯಗಳಲ್ಲೇ 2.6 ಲಕ್ಷ ರೂ. ಪಾವತಿಸಿ ಬೈಕ್​ ಖರೀದಿಸಿದ ಯುವಕ..! ಹಣ ಎಣಿಸಿ ಎಣಿಸಿ ಶೋರೂಂ ಸಿಬ್ಬಂದಿ ಸುಸ್ತು-ವೀಕ್ಷಿಸಿ

ಚೆನ್ನೈ: ತಮಿಳುನಾಡಿನ ಸೇಲಂ ಮೂಲದ ಯುವಕನೊಬ್ಬ ಕೇವಲ ರೂಪಾಯಿ ನಾಣ್ಯಗಳನ್ನೇ ನೀಡಿ ಒಟ್ಟು ಹಣ ಪಾವತಿಸಿ 2.6 ಲಕ್ಷ ಮೌಲ್ಯದ ತನ್ನ ಕನಸಿನ ಬೈಕ್​ ಖರೀದಿ ಮಾಡಿದ್ದಾನೆ…! ಅಚ್ಚರಿಯೆಂದರೆ, ಶೋರೂಮಿನವರಿಗೆ ಎಲ್ಲ ನಾಣ್ಯವನ್ನು ಎಣಿಸಲು ಬರೋಬ್ಬರಿ 10 ತಾಸು ಸಮಯ ಹಿಡಿದಿದೆ. ಬೈಕ್​ ಖರೀದಿ ಮಾಡಿದ ಯುವಕನ ಹೆಸರು ವಿ ಭೂಪತಿ. ಮೂರು ವರ್ಷಗಳಿಂದಲೂ ಭೂಪತಿ … Continued