ಟೆಂಪೋ, ದ್ವಿಚಕ್ರ ವಾಹನಕ್ಕೆ ಬಸ್ ಡಿಕ್ಕಿ ; ಒಂದೇ ಕುಟುಂಬದ ಐವರು ಸೇರಿ ಎಂಟು ಜನರು ಸಾವು

ಸೇಲಂ :  ತಮಿಳುನಾಡಿನ ಸೇಲಂ ರಾಷ್ಟ್ರೀಯ ಹೆದ್ದಾರಿಯ ಉತ್ತಮಚೋಳಪುರಂ ಸಮೀಪದ ಅರಿಯನೂರು ಬಳಿ ತಮಿಳುನಾಡು ರಾಜ್ಯ ಸಾರಿಗೆ ಸಂಸ್ಥೆಯ (TNSTC) ಬಸ್ ನಿಯಂತ್ರಣ ತಪ್ಪಿ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ವಾಹನಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಎಂಟು ಜನರು ಸಾವಿಗೀಡಾಗಿದ್ದಾರೆ. 40ಕ್ಕೂ ಹೆಚ್ಚು ಪ್ರಯಾಣಿಕರಿದ್ದ ಈ ಬಸ್ ಕೊಯಮತ್ತೂರಿನಿಂದ ಸೇಲಂಗೆ ಪ್ರಯಾಣಿಸುತ್ತಿತ್ತು. ಚಾಲಕನ ನಿಯಂತ್ರಣ ತಪ್ಪಿದ ಬಸ್, … Continued

ವೀಡಿಯೊ..| ಏಲಿಯನ್ ದೇವಾಲಯ….! ತಮಿಳುನಾಡಿನಲ್ಲಿ ಅನ್ಯಗ್ರಹ ಜೀವಿ ʼಏಲಿಯನ್ ದೇವತೆʼಗೆ ದೇವಸ್ಥಾನ ನಿರ್ಮಾಣ

ಭಾರತದಲ್ಲಿ ಇತಿಹಾಸ, ವಾಸ್ತುಶಿಲ್ಪ ಇತ್ಯಾದಿ ಸಂಗತಿಗಳಿಂದಾಗಿ ವಿಶಿಷ್ಟವಾಗಿ ನಿಲ್ಲುವ ಅನೇಕ ದೇವಾಲಯಗಳಿವೆ. ಆದರೆ, ಭಾರತದಲ್ಲಿ ತಮಿಳುನಾಡಿನ ಸೇಲಂ ಜಿಲ್ಲೆಯಲ್ಲಿ, ಏಲಿಯನ್‌(ಅನ್ಯಗ್ರಹ ಜೀವಿ)ಗಳಿಗೆ ಸಮರ್ಪಿತವಾದ ದೇವಾಲಯವೊಂದು ಗಮನ ಸೆಳೆದಿದೆ. ಇದನ್ನು ಸಾಮಾನ್ಯವಾಗಿ “ಏಲಿಯನ್ ದೇವಾಲಯ” ಅಥವಾ “ಏಲಿಯನ್ ಸಿದ್ಧರ್ ದೇವಾಲಯ” ಎಂದು ಕರೆಯಲಾಗುತ್ತದೆ. ಸಾಮಾನ್ಯ ದೇವಾಲಯಗಳಿಗಿಂತ ಇದು ಸಂಪೂರ್ಣವಾಗಿ ಭಿನ್ನವಾಗಿದೆ. ಸಾಂಪ್ರದಾಯಿಕ ದೇವತೆಯ ಬದಲಿಗೆ, ಈ ದೇವಾಲಯವು … Continued

‘ಅನ್ಯಲೋಕ’ದ ದೇವರಿಗೆ ದೇವಾಲಯ ನಿರ್ಮಿಸಿದ ತಮಿಳುನಾಡಿನ ವ್ಯಕ್ತಿ

ಸೇಲಂ (ತಮಿಳುನಾಡು): ತಮಿಳುನಾಡಿನ ಸೇಲಂನಲ್ಲಿ ವ್ಯಕ್ತಿಯೊಬ್ಬರು ಅನ್ಯಲೋಕದ ದೇವರಿಗಾಗಿ(alien ‘god’) ದೇವಾಲಯವೊಂದನ್ನು ನಿರ್ಮಿಸಿರುವುದಾಗಿ ಹೇಳಿಕೊಂಡಿದ್ದಾರೆ. ಹಾಗೂ ಈ ಅನ್ಯಲೋಕದ ದೇವರಿಗೆ ಭಕ್ತರನ್ನು ನೈಸರ್ಗಿಕ ವಿಕೋಪಗಳಿಂದ ರಕ್ಷಿಸುವ ಶಕ್ತಿ ಇದೆ ಎಂದು ಅವರು ಹೇಳಿದ್ದಾರೆ. ಸೇಲಂನ ಮಲ್ಲಮೂಪಂಬಟ್ಟಿಯ ಲೋಗನಾಥನ್ ಎಂಬವರು ಸುಮಾರು ಮುಕ್ಕಾಲು ಎಕರೆ ಹರಡಿರುವ ಜಾಗದಲ್ಲಿ ಅನ್ಯಗ್ರಹದ ದೇವರನ್ನು ಪ್ರತಿಷ್ಠಾಪಿಸಿದ್ದಾರೆ. “ನಾನು ಅನ್ಯಗ್ರಹ ಜೀವಿಗಳೊಂದಿಗೆ ಮಾತನಾಡಿದ್ದೇನೆ … Continued

ಆಘಾತಕಾರಿ…| ಗಂಡನ ಸಾಲಕ್ಕೆ ಹೆಂಡತಿಯನ್ನು ಒತ್ತೆಯಾಳಾಗಿ ಇರಿಸಿಕೊಂಡ ಬ್ಯಾಂಕ್‌ ; ಹಣದ ಕಂತು ಕೊಟ್ಟ ಬಳಿಕವೇ ಮಹಿಳೆಯ ಬಿಡುಗಡೆ…!

ಆಘಾತಕಾರಿ ವಿದ್ಯಮಾನಕ್ಕೆ ತಮಿಳುನಾಡಿನ ಖಾಸಗಿ ಬ್ಯಾಂಕೊಂದು ಸಾಕ್ಷಿಯಾಗಿದೆ. ಗ್ರಾಹಕನೊಬ್ಬ ತಾನು ಪಡೆದ ಸಾಲ ವಾಪಸ್ ಮಾಡಲಿಲ್ಲವೆಂದು ಬ್ಯಾಂಕ್ ಉದ್ಯೋಗಿ ಆತನ ಹೆಂಡತಿಯನ್ನೇ ಅಡವಾಗಿ ಇಟ್ಟುಕೊಂಡ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ…! ಸೇಲಂ ಜಿಲ್ಲೆಯ ವಝಪ್ಪಾಡಿಯ ಖಾಸಗಿ ಬ್ಯಾಂಕ್‌ನ ಉದ್ಯೋಗಿಯೊಬ್ಬರು ಕೂಲಿ ಕಾರ್ಮಿಕನ ಪತ್ನಿಯನ್ನು ಬ್ಯಾಂಕ್‌ಗೆ ಕರೆದೊಯ್ದು ಪತಿ ತಾನು ಪಡೆದ ಸಾಲದ ಕಂತನ್ನು ಪಾವತಿಸುವ ವರೆಗೂ … Continued

ವೀಡಿಯೊ…| ಚುನಾವಣಾ ರ‍್ಯಾಲಿಯಲ್ಲಿ ಬಿಜೆಪಿ ನಾಯಕನ ನೆನೆದು ಕಣ್ಣೀರಿಟ್ಟ ಪ್ರಧಾನಿ ಮೋದಿ ; ಭಾಷಣ ಕೆಲಕಾಲ ಸ್ಥಗಿತ

ಸೇಲಂ: ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ತಮಿಳುನಾಡಿನ ಸೇಲಂನಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡುತ್ತಿದ್ದಾಗ 2013 ರಲ್ಲಿ ತಮಿಳುನಾಡಿನ ಸೇಲಂನಲ್ಲಿ ಹತ್ಯೆಗೀಡಾದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ‘ಆಡಿಟರ್‌’ ವಿ ರಮೇಶ ಅವರನ್ನು ನೆನಪಿಸಿಕೊಂಡು ಕಣ್ಣೀರು ಹಾಕಿದ ಪ್ರಸಂಗ ನಡೆಯಿತು. “ಇಂದು, ನಾನು ಆಡಿಟರ್ ರಮೇಶ ಅವರನ್ನು ನೆನಪಿಸಿಕೊಳ್ಳುತ್ತೇನೆ” ಎಂದು ಹೇಳಿದ ಪ್ರಧಾನಿ ಮೋದಿ ಭಾವುಕರಾಗಿ ಒಂದು … Continued

ಕೇವಲ 1 ರೂ. ನಾಣ್ಯಗಳಲ್ಲೇ 2.6 ಲಕ್ಷ ರೂ. ಪಾವತಿಸಿ ಬೈಕ್​ ಖರೀದಿಸಿದ ಯುವಕ..! ಹಣ ಎಣಿಸಿ ಎಣಿಸಿ ಶೋರೂಂ ಸಿಬ್ಬಂದಿ ಸುಸ್ತು-ವೀಕ್ಷಿಸಿ

ಚೆನ್ನೈ: ತಮಿಳುನಾಡಿನ ಸೇಲಂ ಮೂಲದ ಯುವಕನೊಬ್ಬ ಕೇವಲ ರೂಪಾಯಿ ನಾಣ್ಯಗಳನ್ನೇ ನೀಡಿ ಒಟ್ಟು ಹಣ ಪಾವತಿಸಿ 2.6 ಲಕ್ಷ ಮೌಲ್ಯದ ತನ್ನ ಕನಸಿನ ಬೈಕ್​ ಖರೀದಿ ಮಾಡಿದ್ದಾನೆ…! ಅಚ್ಚರಿಯೆಂದರೆ, ಶೋರೂಮಿನವರಿಗೆ ಎಲ್ಲ ನಾಣ್ಯವನ್ನು ಎಣಿಸಲು ಬರೋಬ್ಬರಿ 10 ತಾಸು ಸಮಯ ಹಿಡಿದಿದೆ. ಬೈಕ್​ ಖರೀದಿ ಮಾಡಿದ ಯುವಕನ ಹೆಸರು ವಿ ಭೂಪತಿ. ಮೂರು ವರ್ಷಗಳಿಂದಲೂ ಭೂಪತಿ … Continued