ಅಡುಗೆಗೆ ಬಳಸುವ ಎಲ್‌ಪಿಜಿ ಸಿಲಿಂಡರ್‌ ದರದಲ್ಲಿ ಭಾರೀ ಇಳಿಕೆ ಮಾಡಿದ ಕೇಂದ್ರ

ನವದೆಹಲಿ: ಮಂಗಳವಾರ ಕೇಂದ್ರ ಸಚಿವ ಸಂಪುಟವು 14 ಕೆಜಿ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು ₹200 ಕಡಿಮೆ ಮಾಡುವುದಾಗಿ ಪ್ರಕಟಿಸಿದೆ. ಪ್ರಸ್ತುತ, ದೇಶೀಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆ ದೆಹಲಿಯಲ್ಲಿ ₹1053, ಮುಂಬೈನಲ್ಲಿ ₹1052.50, ಚೆನ್ನೈನಲ್ಲಿ ₹1068.50 ಮತ್ತು ಕೋಲ್ಕತ್ತಾದಲ್ಲಿ ₹1079 ಇದೆ. ತೈಲ ಕಂಪನಿಗಳು ಜುಲೈನಲ್ಲಿ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು ₹50 ಹೆಚ್ಚಿಸಿದ್ದವು. ಈ ಹಿಂದೆ … Continued

ಚಂದ್ರಯಾನ-೩ : ಎದುರಾದ ಬೃಹತ್ ಕುಳಿ-ತನ್ನ ದಾರಿ ಬದಲಿಸಿಕೊಂಡು ಮುಂದೆ ಸಾಗಿದ ಪ್ರಗ್ಯಾನ್ ರೋವರ್

ನವದೆಹಲಿ: ಚಂದ್ರನ ಮೇಲ್ಮೈಯಲ್ಲಿ ನಾಲ್ಕು ಮೀಟರ್ ಕುಳಿ ಎದುರಿಗೆ ಕಂಡ ನಂತರ ಭಾರತದ ಚಂದ್ಯಾನ-೩ರ ಪ್ರಗ್ಯಾನ್ ರೋವರ್ ತನ್ನ ದಾರಿ ಬಸಲಿಸಿ ಮುಂದೆ ಸಾಗಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಸೋಮವಾರ ಮಧ್ಯಾಹ್ನ ಟ್ವೀಟ್ ಮಾಡಿ, ರೋವರ್ ಮೂರು ಮೀಟರ್ ದೂರದಲ್ಲಿ ಕುಳಿಯನ್ನು ಗುರುತಿಸಿದೆ ಮತ್ತು ಸುರಕ್ಷಿತ ಮಾರ್ಗಕ್ಕೆ ಹೋಗುವಂತೆ ನಿರ್ದೇಶಿಸಲಾಗಿದೆ ಎಂದು ಹೇಳಿದೆ. ಆರು-ಚಕ್ರಗಳ, … Continued

ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ : ಜಾವೆಲಿನ್ ಚಿನ್ನದ ಪದಕ ಗೆದ್ದ ನೀರಜ ಚೋಪ್ರಾ

2023ರ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಪುರುಷರ ಜಾವೆಲಿನ್ ಫೈನಲ್‌ನಲ್ಲಿ ಭಾರತದ ನೀರಜ್ ಚೋಪ್ರಾ ಅವರು ಚಿನ್ನವನ್ನು ಗೆದ್ದಿದ್ದಾರೆ. ಜಾಗತಿಕ ಅಥ್ಲೆಟಿಕ್ಸ್ ಕೂಟದಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ನೀರಜ್ ಚೋಪ್ರಾ ಈಗ ಒಲಿಂಪಿಕ್ ಚಿನ್ನದ ಪದಕ, ಡೈಮಂಡ್ ಟ್ರೋಫಿ ಮತ್ತು ವಿಶ್ವ ಚಾಂಪಿಯನ್‌ಶಿಪ್ ಚಿನ್ನದ ಪದಕ ಸೇರಿದಂತೆ ಜಾಗತಿಕ ಪದಕಗಳ … Continued

ಚೀನಾದ ಕಾಡಿನಲ್ಲಿ ಡ್ರಗ್ಸ್ ಚೀಲವನ್ನು ಪತ್ತೆ ಮಾಡಿದ ಕಾಡಾನೆ | ವೀಕ್ಷಿಸಿ

ಕಾಡಾನೆಯೊಂದು ದಕ್ಷಿಣ ಚೀನಾದ ಯುನ್ನಾನ್ ಪ್ರಾಂತ್ಯದ ಮೆಂಗ್‌ಮನ್ ಟೌನ್‌ಶಿಪ್‌ನಲ್ಲಿ 2.8 ಕಿಲೋಗ್ರಾಂಗಳಷ್ಟು ಅಫೀಮನ್ನು ಪತ್ತೆಮಾಡಿದೆ ಎಂದು ಸ್ಟ್ರೈಟ್ ಟೈಮ್ಸ್ ವರದಿ ಮಾಡಿದೆ. ಇದರ ವೀಡಿಯೋ ಅಂತರ್ಜಾಲದಲ್ಲಿ ಹರಿದಾಡುತ್ತಿದೆ. ವೀಡಿಯೊದಲ್ಲಿ ನಾಲ್ಕು ಕಾಡು ಆನೆಗಳು ಗ್ರಾಮದಿಂದ ಹೋಗುತ್ತಿರುವುದನ್ನು ಕಂಡುಬರುತ್ತದೆ. ಒಂದು ಆನೆಯು ಆಫಿಮಿದ್ದ ಬ್ಯಾಗ್‌ ಅನ್ನು ಪತ್ತೆ ಮಾಡಿದೆ. ಪತ್ತೆ ಮಾಡಿದ ಅದು ಅದನ್ನು ಎತ್ತಿ ಎಸೆದಿದೆ. … Continued

ವಿಜ್ಞಾನವು ನಮ್ಮ ಬಾಹ್ಯಕ್ಕಾಗಿ, ದೇವಾಲಯಗಳು ನಮ್ಮ ಅಂತರಂಗಕ್ಕಾಗಿ : ಕೇರಳ ದೇವಾಲಯ ಭೇಟಿ ವೇಳೆ ಇಸ್ರೋ ಮುಖ್ಯಸ್ಥ ಸೋಮನಾಥ

ಚಂದ್ರಯಾನ-3 ಯಶಸ್ವಿಯಾಗಿ ಚಂದ್ರನ ಮೇಲೆ ಇಳಿದ ನಂತರ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮುಖ್ಯಸ್ಥ ಎಸ್. ಸೋಮನಾಥ ಅವರು ಕೇರಳದ ತಿರುವನಂತಪುರಂನಲ್ಲಿರುವ ಪೌರ್ಣಮಿಕಾವು ಭದ್ರಕಾಳಿ ದೇವಸ್ಥಾನಕ್ಕೆ ಭೇಟಿ ನೀಡಿದರು. ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿಜ್ಞಾನ ಮತ್ತು ಅಧ್ಯಾತ್ಮ ಎರಡು ವಿಭಿನ್ನ ಕ್ಷೇತ್ರಗಳಾಗಿದ್ದು, ಇವುಗಳನ್ನು ಹೆಣೆಯುವ ಅಗತ್ಯವಿಲ್ಲ ಎಂದು ಪ್ರತಿಪಾದಿಸಿದರು. ಜುಲೈ 13 … Continued

ʼಇಂಡಿಯಾʼ ಮೈತ್ರಿಕೂಟಕ್ಕೆ ಮತ್ತೊಂದು ಆಘಾತ? ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಹೇಳಿದ ಆಮ್‌ ಆದ್ಮಿ ಪಾರ್ಟಿ

ನವದೆಹಲಿ: ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ (ಎಎಪಿ) ಮುಂಬರುವ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಭಾಗವಹಿಸಲು ತನ್ನ ಕಾರ್ಯತಂತ್ರವನ್ನು ಶನಿವಾರ ಅನಾವರಣಗೊಳಿಸಿದೆ. 2024 ರ ಲೋಕಸಭಾ ಚುನಾವಣೆ ಸಮೀಪಿಸುತ್ತಿರುವಾಗ ಎಎಪಿಯ ನಿರ್ಧಾರವು ಪ್ರತಿಪಕ್ಷಗಳ ಮೈತ್ರಿಕೂಟ-ಇಂಡಿಯಾದ ಒಗ್ಗಟ್ಟಿನ ಮೇಲೆ ಕರಿನೆರಳು ಬೀರುವ ಸಾಧ್ಯತೆ ಇದೆ ಎನ್ನಲಾಗಿದೆ. ಎಎಪಿಯ ಪ್ರಧಾನ ಕಾರ್ಯದರ್ಶಿ ಸಂದೀಪ ಪಾಠಕ ಅವರು ಬಿಹಾರ … Continued

ಪ್ರೇಮಿ ವಿರುದ್ಧ ಅತ್ಯಾಚಾರ ಪ್ರಕರಣ : ಸಾಕ್ಷ್ಯ ಹೇಳಲು ನಿರಾಕರಿಸಿದ ಗರ್ಭಿಣಿ ಮಗಳನ್ನು ಸಾಯಿಸಿದ ಪೋಷಕರು

ಮುಜಫ್ಫರನಗರ: ತನ್ನ ಪ್ರೇಮಿಯನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಲು ನಿರಾಕರಿಸಿದ ಕಾರಣಕ್ಕೆ ಎಂಟು ತಿಂಗಳ ಗರ್ಭಿಣಿಯನ್ನು ಆಕೆಯ ಪೋಷಕರೇ ಕತ್ತು ಹಿಸುಕಿ ಸಾಯಿಸಿದ ಆಘಾತಕಾರಿ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಪ್ರೇಮಿಯ ವಿರುದ್ಧ ಅಪಹರಣ ಮತ್ತು ಅತ್ಯಾಚಾರ ಪ್ರಕರಣದಲ್ಲಿ ಸಾಕ್ಷ್ಯ ಹೇಳಲು ಆಕೆ ನ್ಯಾಯಾಲಯಕ್ಕೆ ಹಾಜರಾಗುವ ಮುನ್ನ ಈ ಕೃತ್ಯ ಎಸಗಲಾಗಿದೆ ಎಂದು ಪೊಲೀಸರು … Continued

ಚಂದ್ರಯಾನ 3 ಮಿಷನ್‌ : ಚಂದ್ರನ ಮಣ್ಣಿನ ತಾಪಮಾನದ ಬಗ್ಗೆ ಮೊದಲ ಅವಲೋಕನಗಳನ್ನು ಹಂಚಿಕೊಂಡ ಇಸ್ರೋ ; ಅದು ಏನು ಹೇಳುತ್ತದೆ?

ನವದೆಹಲಿ: ವಿಶ್ವ ಬಾಹ್ಯಾಕಾಶ ವಿಜ್ಞಾನದ ಇತಿಹಾಸದಲ್ಲಿ ಮೊದಲ ಬಾರಿಗೆ ಚಂದ್ರಯಾನ 3 ಬಾಹ್ಯಾಕಾಶ ನೌಕೆ, ಚಂದ್ರನ ದಕ್ಷಿಣ ಧ್ರುವದ ಮೇಲ್ಮೈ ಕೆಳಗೆ 10cm ವರೆಗಿನ ಮಣ್ಣಿನ ತಾಪಮಾನದ ವ್ಯತ್ಯಾಸದ ಬಗ್ಗೆ ವಿವರಿಸಿದೆ. ಆಗಸ್ಟ್ 23 ರಂದು ಇಸ್ರೋದ ಚಂದ್ರಯಾನ ಯಶಸ್ವಿ ಯಶಸ್ವಿಯಾಗಿ ಲ್ಯಾಂಡಿಂಗ್ ಮಾಡಿದ ನಾಲ್ಕು ದಿನಗಳ ನಂತರ, ಚಂದ್ರಯಾನ 3 ಹಂಚಿಕೊಂಡ ಮೊದಲ ಅವಲೋಕನಗಳನ್ನು … Continued

ಜಿ20 ಶೃಂಗಸಭೆಗೆ ಮುನ್ನ ಹಲವಾರು ಮೆಟ್ರೋ ನಿಲ್ದಾಣಗಳಲ್ಲಿ ‘ದೆಹಲಿ ಬನೇಗಾ ಖಲಿಸ್ತಾನ್’ ಗೋಡೆ ಬರಹ ಬರೆದು ವಿರೂಪ

ನವದೆಹಲಿ: ಸೆಪ್ಟೆಂಬರ್ 9-10ರಂದು ನಡೆಯಲಿರುವ ಜಿ20 ಶೃಂಗಸಭೆಗೆ ಮುನ್ನ ದೆಹಲಿಯಾದ್ಯಂತ ಹಲವಾರು ಮೆಟ್ರೋ ನಿಲ್ದಾಣಗಳ ಗೋಡೆಗಳಲ್ಲಿ ಖಲಿಸ್ತಾನ್ ಪರ ಗೀಚುಬರಹ ಬರೆದು ವಿರೂಪಗೊಳಿಸಿರುವುದು ಕಂಡುಬಂದಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ. ಪಂಜಾಬಿ ಬಾಗ್, ಶಿವಾಜಿ ಪಾರ್ಕ್, ಮಾದಿಪುರ್, ಪಶ್ಚಿಮ ವಿಹಾರ್, ಉದ್ಯೋಗ ನಗರ ಮತ್ತು ಮಹಾರಾಜ ಸೂರಜ್ಮಲ್ ಸ್ಟೇಡಿಯಂ ಸೇರಿದಂತೆ ಮೆಟ್ರೋ ನಿಲ್ದಾಣಗಳ ಗೋಡೆಗಳ ಮೇಲೆ … Continued

2024ರ ಲೋಕಸಭೆ ಚುನಾವಣೆಗೆ ರಾಹುಲ್ ಗಾಂಧಿ ಕಾಂಗ್ರೆಸ್ಸಿನ ಪ್ರಧಾನಿ ಅಭ್ಯರ್ಥಿ: ಅಶೋಕ ಗೆಹ್ಲೋಟ್ ಮಹತ್ವದ ಹೇಳಿಕೆ

ನವದೆಹಲಿ : 2024ರ ಲೋಕಸಭೆ ಚುನಾವಣೆಗೆ ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷದ ಪ್ರಧಾನಿ ಅಭ್ಯರ್ಥಿ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಶನಿವಾರ ಹೇಳಿದ್ದಾರೆ. 26 ವಿರೋಧ ಪಕ್ಷಗಳ ಭಾರತ ಮೈತ್ರಿ ಕುರಿತು ಮಾತನಾಡಿದ ಅವರು, ಎಲ್ಲಾ ಪಕ್ಷಗಳು ಚರ್ಚೆ ಮತ್ತು ಸಮಾಲೋಚನೆಯ ನಂತರ ನಿರ್ಧಾರ ತೆಗೆದುಕೊಂಡಿವೆ ಎಂದು ಹೇಳಿದ್ದಾರೆ. ರಾಹುಲ್ ಗಾಂಧಿಯನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ … Continued