ರಾಜ್ಯದಲ್ಲಿಯೂ ಆರ್ಥಿಕ ದುರ್ಬಲರಿಗೆ ಶೇ.೧೦ ಮೀಸಲಾತಿ: ಸರ್ಕಾರದಿಂದ ಶೀಘ್ರ ಅಧಿಸೂಚನೆ

ಬೆಂಗಳೂರು: ರಾಜ್ಯದ ನಾಗರಿಕ ಸೇವೆಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಆರ್ಥಿಕವಾಗಿ ದುರ್ಬಲ ವರ್ಗಗಳ  ಅಥವಾ ಮೇಲ್ಜಾತಿಗಳ ಜನರಿಗೆ ಶೇ.೧೦ರಷ್ಟು ಮೀಸಲಾತಿಯನ್ನು ಜಾರಿಗೆ ತರಲು ಕರ್ನಾಟಕ ಸರ್ಕಾರ ಶೀಘ್ರದಲ್ಲೇ ಅಧಿಸೂಚನೆ ಹೊರಡಿಸಲಿದೆ ಎಂದು ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಆರ್ಥಿಕವಾಗಿ ದುರ್ಬಲವಾಗಿರುವ ಮೇಲ್ವರ್ಜಗದ ಜನರಿಗೆ ಶೇ.೧೦ರಷ್ಟು ಮೀಸಲಾತಿ ನೀಡುವ ಸಂಬಂಧ ಶೀಘ್ರದಲ್ಲೇ … Continued

ಭಾರಿ ಮಳೆಯಿಂದ ಮಹಾರಾಷ್ಟ್ರದಲ್ಲಿ ಸಾವಿನ ಸಂಖ್ಯೆ 136ಕ್ಕೆ ಏರಿಕೆ: 84,000 ಜನರ ಸ್ಥಳಾಂತರ, 6 ಜಿಲ್ಲೆಗಳಿಗೆ ರೆಡ್ ಅಲರ್ಟ್

ಮುಂಬೈ: ಕಳೆದ ಕೆಲವು ದಿನಗಳಿಂದ ಮಹಾರಾಷ್ಟ್ರದಲ್ಲಿ ಭೂಕುಸಿತ ಮತ್ತು ಪ್ರವಾಹ ಸೇರಿದಂತೆ ಮಳೆ ಸಂಬಂಧಿತ ಘಟನೆಗಳಲ್ಲಿ ಕನಿಷ್ಠ 136 ಜನರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಹೆಚ್ಚಿನ ಸಾವುಗಳು ರಾಯ್ಗಡ್ ಮತ್ತು ಸತಾರಾ ಜಿಲ್ಲೆಗಳಿಂದ ಬಂದಿವೆ. ಮಳೆಯು ಹಲವಾರು ಜಿಲ್ಲೆಗಳಲ್ಲಿ ಭೂಕುಸಿತ ಮತ್ತು ಪ್ರವಾಹಕ್ಕೆ ಕಾರಣವಾಗಿದೆ. ಸಶಸ್ತ್ರ ಪಡೆಗಳು ಮತ್ತು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ … Continued

ಭಾರತದಲ್ಲಿ ಪುನಃ ದೈನಂದಿನ ಕೊರೊನಾ ಚೇತರಿಕೆಗಿಂತ ಹೊಸ ಸೋಂಕಿತರೇ ಹೆಚ್ಚು..!

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 39,097 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 3,13,32,159ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ 546 ಜನರು ಮಹಾಮಾರಿಗೆ ಮೃತಪಟ್ಟಿದ್ದಾರೆ. ಇದುವರೆಗೂ ದೇಶದಲ್ಲಿ ಕೊರೊನಾ ಸೋಂಕಿಗೆ ಮೃತಪಟ್ಟವರ ಸಂಖ್ಯೆ 4,20,016ಕ್ಕೆ ಏರಿಕೆಯಾಗಿದೆ. ದೇಶದಲ್ಲಿ 4,08,977 ಕೋವಿಡ್ ಸಕ್ರಿಯ ಪ್ರಕರಣಗಳಿದ್ದು, 24 ಗಂಟೆಯಲ್ಲಿ … Continued

ರಾಜ್ ಕುಂದ್ರಾ ಅಶ್ಲೀಲ ಚಿತ್ರಗಳ ಪ್ರಕರಣ: ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ಪ್ರಶ್ನಿಸಿದ ಮುಂಬೈ ಪೊಲೀಸರು

ಮುಂಬೈ: ಸೋಮವಾರ ರಾತ್ರಿ ಅಶ್ಲೀಲ ಚಿತ್ರಗಳನ್ನು ರಚಿಸಿ ಕೆಲವು ಮೊಬೈಲ್ ಅಪ್ಲಿಕೇಶನ್‌ಗಳ ಮೂಲಕ ಪ್ರಕಟಿಸಿದ ಆರೋಪದ ಮೇಲೆ ರಾಜ್ ಕುಂದ್ರಾ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಮುಂಬೈ ನ್ಯಾಯಾಲಯವು ನಟ ಶಿಲ್ಪಾ ಶೆಟ್ಟಿ ಅವರ ಪತಿ ಮತ್ತು ಉದ್ಯಮಿ ರಾಜ್ ಕುಂದ್ರಾ ಮತ್ತು ಅವರ ಸಹವರ್ತಿ ರಿಯಾನ್ ಥೋರ್ಪ್ ಅವರನ್ನು ಜುಲೈ 27 ರವರೆಗೆ ಪೊಲೀಸ್ … Continued

ಮೂರನೇ ಕೋವಿಡ್ ಅಲೆ ವೈರಸ್ಸಿನ ರೂಪಾಂತರ ಅಥವಾ ಜನಸಂಖ್ಯೆಯಿಂದಾಗಿ ಸಂಭವಿಸಬಹುದು:ಸರ್ಕಾರ

ನವದೆಹಲಿ: ಕೋವಿಡ್‌ -19 ರ ಮೂರನೇ ಅಲೆಯು ವೈರಸ್‌ನ ರೂಪಾಂತರಗಳಿಂದಾಗಿ ಅಥವಾ ಲಭ್ಯವಿರುವ ಜನಸಂಖ್ಯೆಯ ಕಾರಣದಿಂದ ಸಂಭವಿಸಬಹುದು ಎಂದು ಸರ್ಕಾರ ಹೇಳಿದೆ. ಲೋಕಸಭೆಯಲ್ಲಿ ಲಿಖಿತ ಉತ್ತರದಲ್ಲಿ, ಸರ್ಕಾರವು ಮೂರನೇ ಅಲೆಯು ಹಲವಾರು ಔಷಧೀಯ ಮತ್ತು ಔಷಧೇತರ ಮಧ್ಯಸ್ಥಿಕೆಗಳ ಮೇಲೆ ಮತ್ತು ಸಾಂಕ್ರಾಮಿಕ ರೋಗದ ನಿರ್ವಹಣೆಯ ಮೇಲೆ ಅವಲಂಬಿತವಾಗಿದೆ ಎಂದು ಹೇಳಿದೆ. ಮೂರನೆಯ ಅಲೆಯು ವೈರಸ್‌ನಲ್ಲಿನ ರೂಪಾಂತರಗಳಿಂದಾಗಿ … Continued

ಉತ್ತರ ಪ್ರದೇಶ ಚುನಾವಣೆ ಸಮೀಪಿಸುತ್ತಿದ್ದಂತೆ, ಬಿಎಸ್‌ಪಿಯಿಂದ ಅಯೋಧ್ಯೆ ಶ್ರೀರಾಮ ಮಂದಿರ ತ್ವರಿತ ನಿರ್ಮಾಣದ ಭರವಸೆ

ಲಕ್ನೋ: ನಿರ್ಣಾಯಕ 2022ರ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದರೆ ರಾಮ ದೇವಾಲಯದ ನಿರ್ಮಾಣ ಕಾರ್ಯವನ್ನು ಚುರುಕುಗೊಳಿಸುವುದಾಗಿ ಮಾಯಾವತಿಯ ಬಹುಜನ ಸಮಾಜ ಪಕ್ಷ ಭರವಸೆ ನೀಡಿದೆ. ದೇವಾಲಯ ನಿರ್ಮಾಣಕ್ಕಾಗಿ ಮೀಸಲಾದ ಕೋಟ್ಯಂತರ ರೂಪಾಯಿ ಸಂಗ್ರಹಣೆ ಮಾಡುವುದು ಮಾತ್ರ ಬಿಜೆಪಿ ಕೆಲಸವಾಗಿದೆ ಎಂದು ವಾಗ್ದಾಳಿ ನಡೆಸಿದೆ. ಭಾರತದ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯವಾದ ಉತ್ತರ ಪ್ರದೇಶದ ದಲಿತ ಮತಗಳ … Continued

ಮಳೆ: ದೂಧ್‌ಸಾಗರ್-ಸೋನಾಲಿಮ್ ನಡುವೆ ಹಳಿ ತಪ್ಪಿದ ಪ್ರಯಾಣಿಕರ ರೈಲು

ಪಣಜಿ: ಮಂಗಳೂರು ಜಂಕ್ಷನ್‌ನಿಂದ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ಸಿಗೆ ಹೊರಟಿದ್ದ ಪ್ರಯಾಣಿಕರ ರೈಲು ದಕ್ಷಿಣ ಗೋವಾದ ದೂಧ್‌ ಸಾಗರ್ ಮತ್ತು ಸೋನೌಲಿಮ್ ನಡುವೆ ಹಳಿ ತಪ್ಪಿದೆ. ಭಾರೀ ಮಳೆ ಮತ್ತು ಮಹಾರಾಷ್ಟ್ರದ ಚಿಪ್ಲುನ್ ಮತ್ತು ಕಾಮಥೆ ನಡುವೆ ವಶಿಷ್ಠ ನದಿ ಉಕ್ಕಿ ಹರಿದಿದ್ದರಿಂದ ರೈಲು ಹಳಿ ತಪ್ಪಿ ನಿಲ್ಲುವಂತಾಯಿತು. ಘಟನೆಯಲ್ಲಿ ಯಾವುದೇ ಗಾಯ ಅಥವಾ ಸಾವು … Continued

ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಜುಲೈ 27- 28 ರಂದು ಭಾರತಕ್ಕೆ ಭೇಟಿ, ಪಿಎಂ ಮೋದಿ ಭೇಟಿ

ವಾಷಿಂಗ್ಟನ್: ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆಂಟನಿ ಜೆ ಬ್ಲಿಂಕೆನ್ ಜುಲೈ 27 ಮತ್ತು ಜುಲೈ 28 ರಂದು ಭಾರತಕ್ಕೆ ಭೇಟಿ ನೀಡಲಿದ್ದಾರೆ. ಅಮೆರಿಕ ವಿದೇಶಾಂಗ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಇದು ಅವರ ಭಾರತದ ಮೊದಲ ಭೇಟಿಯಾಗಿದೆ. ಭೇಟಿಯ ವೇಳೆ ಅವರು ಜುಲೈ 28 ರಂದು ಪ್ರಧಾನಿ ನರೇಂದ್ರ ಮೋದಿ, ವಿದೇಶಾಂಗ ಸಚಿವ (ಇಎಎಂ) ಎಸ್ … Continued

ಮಹಾರಾಷ್ಟ್ರದಲ್ಲಿ ಭೂಕುಸಿತ, ಮಳೆ ಸಂಬಂಧಿ ಘಟನೆಗಳಲ್ಲಿ 71 ಮಂದಿ ಸಾವು

ಮುಂಬೈ: ಭಾರಿ ಅನಾಹುತಗಳ ಸರಣಿಯಲ್ಲಿ, ಧಾರಾಕಾರ ಮಳೆಯ ನಂತರ ಮಹಾರಾಷ್ಟ್ರದ ರಾಯಗಡ, ರತ್ನಾಗಿರಿ ಮತ್ತು ಸತಾರಾ ಜಿಲ್ಲೆಗಳಲ್ಲಿ ಸಂಭವಿಸಿದ ಬೆಟ್ಟಗುಡ್ಡಗಳ ಕುಸಿತ ಮತ್ತು ಭೂಕುಸಿತಗಳಲ್ಲಿ ಕನಿಷ್ಠ 71 ಗ್ರಾಮಸ್ಥರು ಮಣ್ಣಿನಡಿಗೆ ಸಿಲುಕಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಮೂಲಗಳ ಪ್ರಕಾರ, ಭೂಕುಸಿತದಿಂದ ತಾಲಿಯಾ ಗ್ರಾಮದಲ್ಲಿ (ಮಹಾದ್) 38 ಮತ್ತು ಪೋಲದಪುರದಲ್ಲಿ 11(ಎರಡೂ ರಾಯಗಡ ಜಿಲ್ಲೆಯಲ್ಲಿ), ಸತಾರಾ ಜಿಲ್ಲೆಯಲ್ಲಿ … Continued

ಸಿಎಂ ಅಮರಿಂದರ್‌ ಸಿಂಗ್‌ ಉಪಸ್ಥಿತಿಯಲ್ಲಿ ನೂತನ ಕಾಂಗ್ರೆಸ್ ಅಧ್ಯಕ್ಷರಾಗಿ ಸಿಧು ಪದಗ್ರಹಣ

ಚಂಡಿಗಡ: ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರೊಂದಿಗೆ ಸುಮಾರು ಎರಡು ವರ್ಷಗಳ ಕಾಲ ಉಂಟಾದ ತೀವ್ರ ಬಿಕ್ಕಟ್ಟಿನ ನಂತರ, ಪಂಜಾಬ ಶಾಸಕ ನವಜೋತ್ ಸಿಂಗ್ ಸಿಧು ಶುಕ್ರವಾರ ಪಂಜಾಬಿನ ಹೊಸ ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ರಾಜ್ಯ ಕಾಂಗ್ರೆಸ್ ಕೇಂದ್ರ ಕಚೇರಿಯಲ್ಲಿ ಅಧಿಕಾರ ವಹಿಸಿಕೊಂಡ ನಂತರ, ಪಕ್ಷದ ಸಾಮಾನ್ಯ ಕಾರ್ಯಕರ್ತ ಮತ್ತು ಅದರ ರಾಜ್ಯ … Continued