ಹಾವೇರಿ | ದೇಹ ಮನೆಗೆ ಒಯ್ಯುವಾಗ ‘ಡಾಬಾ ಬಂತು ಊಟ ಮಾಡ್ತೀಯಾ’ ಎಂದು ಗೋಳಾಡಿದ ಪತ್ನಿ ; ಉಸಿರಾಟ ಆರಂಭಿಸಿದ ಮೃತ ವ್ಯಕ್ತಿ…!

ಹಾವೇರಿ : ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ಆತನ ಮೃತದೇಹವನ್ನು ಊರಿಗೆ ಕರೆತರುವ ಹಾದಿಯಲ್ಲಿ ಆತ ಬದುಕಿರುವ ಘಟನೆ ನಡೆದಿದೆ ಎಂದು ವರದಿಯಾಗಿದೆ. ಹಾವೇರಿ ಜಿಲ್ಲೆಯ ಬಂಕಾಪುರದಲ್ಲಿ ಈ ಘಟನೆ ನಡೆದಿದ್ದು, ಆಂಬುಲೆನ್ಸ್‌ನಲ್ಲಿ ದೇಹದ ಪಕ್ಕದಲ್ಲೇ ಕುಳಿತು ಗೋಳಾಡುತ್ತಿದ್ದ ಪತ್ನಿ, ಡಾಬಾ ಬಂತು ನೋಡು ಊಟ ಮಾಡುತ್ತೀಯಾ?’ ಎಂದು ಹೇಳಿ ಕಣ್ಣೀರಿಟ್ಟಿದ್ದಾಳೆ. ಈ ವೇಳೆ ಮೃತ ಗಂಡ … Continued

ಅಂತ್ಯಕ್ರಿಯೆ ನಡೆದ ಕೆಲವೇ ದಿನಗಳ ನಂತರ ಕುಟುಂಬದವರು ತನ್ನದೇ ಸ್ಮರಣಾರ್ಥ ಏರ್ಪಡಿಸಿದ್ದ ಕಾರ್ಯಕ್ರಮಕ್ಕೆ ಆಗಮಿಸಿದ ʼಸತ್ತʼ ವ್ಯಕ್ತಿ…!

ಮೆಹ್ಸಾನಾ (ಗುಜರಾತ್): ಘಟನೆಯ ವಿಲಕ್ಷಣ ತಿರುವಿನಲ್ಲಿ, ವ್ಯಕ್ತಿಯೊಬ್ಬರು ಸತ್ತಿದ್ದಾರೆಂದು ನಂಬಿ ಅವರ ಅಂತ್ಯಕ್ರಿಯೆ ನಡೆಸಿದ ನಂತರ ಕುಟುಂಬದವರು ಅವರ ಸ್ಮರಣಾರ್ಥ ಏರ್ಪಡಿಸಿದ್ದ ಕಾರ್ಯಕ್ರಮಕ್ಕೆ ಅದೇ ವ್ಯಕ್ತಿ ಆಗಮಿಸಿದಾಗ ಅಲ್ಲಿದ್ದ ಎಲ್ಲರೂ ಆಘಾತಕ್ಕೊಳಗಾಗಿದ್ದಾರೆ…! ಗುಜರಾತದ ಮೆಹ್ಸಾನಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಸತ್ತಿದ್ದಾರೆಂದು ಭಾವಿಸಲಾಗಿದ್ದ 43 ವರ್ಷದ ಬ್ರಿಜೇಶ್ ಸುತಾರ್ ಅವರು ತಮ್ಮದೇ ಸ್ಮರಣಾರ್ಥ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ … Continued

ಶವಪರೀಕ್ಷೆಗೆ ಒಯ್ಯುವಾಗ ಎದ್ದು ಕುಳಿತ ʼಸತ್ತʼ ವ್ಯಕ್ತಿ…!

ಬಿಹಾರದಲ್ಲಿ ಗೊಂದಲಕಾರಿ ಘಟನೆಯೊಂದು ತೆರೆದುಕೊಂಡಿದ್ದು, ʼಸತ್ತಿದ್ದಾನೆʼ ಎಂದು ಘೋಷಿಸಿದ್ದ ವ್ಯಕ್ತಿಯೊಬ್ಬ ಕೆಲವು ಗಂಟೆಗಳ ನಂತರ ಇದ್ದಕ್ಕಿದ್ದಂತೆ ಜೀವಂತವಾಗಿ ಎದ್ದು ಕುಳಿತಿದ್ದಾನೆ..! ಇದು ವೈದ್ಯರು ಮತ್ತು ಪೊಲೀಸರನ್ನು ಬೆರಗುಗೊಳಿಸಿತು. ನಂತರ ವ್ಯಕ್ತಿಯನ್ನು ಬಿಹಾರ ಷರೀಫ್‌ ಸದರ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ವರದಿಗಳ ಪ್ರಕಾರ, ವ್ಯಕ್ತಿ ಸ್ನಾನಗೃಹದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಕಂಡುಬಂದಿದೆ. ಇದು ಸ್ವಚ್ಛತಾ ಸಿಬ್ಬಂದಿ ಸ್ನಾನಗೃಹದ ಬಾಗಿಲು … Continued

ತನ್ನ ಶ್ರಾದ್ಧದ ದಿನವೇ ಪ್ರತ್ಯಕ್ಷನಾದ ಸತ್ತು ಹೋಗಿದ್ದ ಮಗ…!

ಅಗರ್ತಲಾ (ತ್ರಿಪುರ): ಸತ್ತು ಹೋಗಿದ್ದ ಮಗ, ತನ್ನ ತಿಥಿ ದಿನವೇ ಮನೆಗೆ ಬಂದ ವಿಲಕ್ಷಣ ಘಟನೆಯೊಂದು ತ್ರಿಪುರದ ಅಗರ್ತಲಾದಲ್ಲಿ ನಡೆದಿದೆ. ಮೋಹನಪುರ್‌ ಕಾಳಿಬಜಾರ್‌ನ ನಿವಾಸಿ ಆಗಿದ್ದ 22 ವರ್ಷದ ಆಕಾಶ ಸರ್ಕಾರ್‌ ಕಳೆದ ತಿಂಗಳು ನಾಪತ್ತೆಯಾಗಿದ್ದ. ಈ ಸಂಬಂಧ ಕುಟುಂಬಸ್ಥರು ಪೊಲೀಸರಿಗೂ ದೂರು ನೀಡಿದ್ದರು. ಜೂನ್ 3ರಂದು ಅಗರ್ತಲಾ ಪೊಲೀಸ್‌ ಠಾಣೆ ವ್ಯಾಪ್ತಿಯ ಮೇಲರ್ಮತ್‌ ಬಳಿಯ … Continued

ಸತ್ತ ವ್ಯಕ್ತಿ ಜೀವಂತ…! ಶವ ಸಮಾಧಿ ಮಾಡಿದ 24 ತಾಸಿನ ನಂತರ ಜೀವಂತ ಮನೆಗೆ ಬಂದ ವ್ಯಕ್ತಿ …!!

ಚೆನ್ನೈ: 55 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆಂದು ಭಾವಿಸಿ, ಅವರ ಕುಟುಂಬದವರು ಸಮಾಧಿ ಮಾಡಿದ್ದು, ಆದರೆ ಸಮಾಧಿ ಮಾಡಿದ ಒಂದು ದಿನದೊಳಗೆ ಅವರು ಮನೆಮುಂದೆ ಪ್ರತ್ಯಕ್ಷರಾಗಿದ್ದಾರೆ..! ಸೋಮವಾರ ಈ ವಿದ್ಯಮಾನ ನಡೆದಿದ್ದು, ಸಮಾಧಿ ಮಾಡಲ್ಪಟ್ಟ ವ್ಯಕ್ತಿ ಮನೆಗೆ ಬಂದಿದ್ದು ನೋಡಿ ಮನೆಯವರು ಕ್ಷಣಕಾಲ ಆಘಾತಕ್ಕೊಳಗಾಗಿದ್ದರು. ಪೂಂಜೈ ತುರೈಯಂಪಾಳ್ಯದ ಮೂರ್ತಿ ಟಿ.ಎನ್. ಪಾಲಯಂ ಬ್ಲಾಕ್, ದಿನಗೂಲಿ, ಅವರು ಕೆಲವು … Continued