ಗ್ರಾಮೀಣದಲ್ಲಿ ಕೋವಿಡ್‌ ಕೇರ್‌ ಸೆಂಟರ್‌ ದಾಖಲು ಕಡ್ಡಾಯ, ಮದುವೆ ಕಾರ್ಯಕ್ರಮಕ್ಕೆ ಕಟ್ಟುನಿಟ್ಟು

ಬೆಂಗಳೂರು:ರಾಜ್ಯದ ಗ್ರಾಮೀಣ ಭಾಗದಲ್ಲಿ ಹೆಚ್ಚಾಗುತ್ತಿರುವ ಕೊರೊನಾ ಸೋಂಕನ್ನು ನಿಯಂತ್ರಿಸಲು ಸರ್ಕಾರ ಮುಂದಾಗಿದ್ದು, ಗ್ರಾಮೀಣ ಭಾಗದಲ್ಲಿ ಸೋಂಕಿಗೆ ಒಳಗಾಗುವವರನ್ನು ಮನೆಯಲ್ಲೇ ಐಸೋಲೇಷನ್‌ಗೆ ಬಿಡದೆ ಕಡ್ಡಾಯವಾಗಿ ಕೋವಿಡ್ ಕೇರ್ ಸೆಂಟರ್‌ಗಳಿಗೆ ದಾಖಲು ಮಾಡುವ ನಿರ್ಧಾರವನ್ನು ಕೊರೊನಾ ಟಾಸ್ಕ್‌ಫೋರ್ಸ್ ಸಭೆಯಲ್ಲಿ ಕೈಗೊಳ್ಳಲಾಗಿದೆ, ರಾಜ್ಯದ ಗ್ರಾಮಾಂತರ ಭಾಗಗಳಲ್ಲಿ ವ್ಯಾಪಕವಾಗುತ್ತಿರುವ ಕೊರೊನಾ ಸೋಂಕಿನ ನಿಗ್ರಹಕ್ಕೆ ಕೈಗೊಳ್ಳಬೇಕಾದ ಕಠಿಣ ಕ್ರಮಗಳ ಬಗ್ಗೆ ಶನಿವಾರ ಟಾಸ್ಕ್‌ಫೋರ್ಸ್‌ನ … Continued

ತೌಕ್ಟೆ ಚಂಡಮಾರುತ ಇಂದು ರಾತ್ರಿ ಕರ್ನಾಟಕದ ಕರಾವಳಿಗೆ ಅಪ್ಪಳಿಸುವ ಸಾಧ್ಯತೆ

ಬೆಂಗಳೂರು: ರಾಜ್ಯದಲ್ಲಿ ತೌಕ್ಟೆ ಚಂಡಮಾರುತದ ಹಿನ್ನೆಲೆಯಲ್ಲಿ ವಿಪತ್ತು ನಿರ್ವಹಣಾ ಇಲಾಖೆ ಅಧಿಕಾರಿಗಳೊಂದಿಗೆ ಕಂದಾಯ ಸಚಿವರಾದ ಆರ್. ಅಶೋಕ್ ಹಾಗೂ ಗೃಹ ಸಚಿವರಾದ ಬಸವರಾಜ ಬೊಮ್ಮಾಯಿ ಸಭೆ ನಡೆಸಿದರು. ತೌಕ್ಟೆ ಚಂಡಮಾರುತದಿಂದ ಹಾನಿಗೊಳಗಾಗುವ ಪ್ರದೇಶದಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳು ಹಾಗೂ ಮುನ್ನೆಚ್ಚರಿಕೆ ಬಗ್ಗೆ ಚರ್ಚೆ ನಡೆಸಲಾಯಿತು. ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಆರ್. ಅಶೋಕ್, ತೌಕ್ಟೆ ಚಂಡಮಾರುತ … Continued

ಅದೆಷ್ಟು ಸಲ ದಾನ… 50 ವರ್ಷದ ಪುಣೆ ಈ ವ್ಯಕ್ತಿ ದೇಶದಲ್ಲಿ ಈಗ ಅತಿಹೆಚ್ಚು ಪ್ಲಾಸ್ಮಾ ದಾನ ಮಾಡಿದವರು..!

ಪುಣೆ: ಅಜಯ್ ಮುನೊಟ್ ಎಂಬ 50 ವರ್ಷದ ವ್ಯಕ್ತಿ ಸುಮಾರು 14 ಸಲ ಪ್ಲಾಸ್ಮಾ ದಾನ ಮಾಡಿದ್ದಾರೆ. ಇದಕ್ಕಾಗಿ ಇತ್ತೀಚೆಗೆ, ಅವರು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಿಂದ ಪ್ರಮಾಣಪತ್ರ ಪಡೆದಿದ್ದಾರೆ, ಅವರು ಪ್ಲಾಸ್ಮಾ ದಾನವನ್ನು ಗರಿಷ್ಠ ಸಂಖ್ಯೆಯಲ್ಲಿ ಮಾಡಿದ ದೇಶದ ಮೊದಲ ವ್ಯಕ್ತಿ ಎಂದು ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ವೃತ್ತಿಯಲ್ಲಿ ಕಾರ್ಯತಂತ್ರದ ಸಲಹೆಗಾರ (Strategic Consultant) ಆಗಿರುವ … Continued

ಮಂಗಳ ಗ್ರಹದ ಮೇಲ್ಮೈಗೆ ಇಳಿದ ಚೀನಾದ ಬಾಹ್ಯಾಕಾಶ ನೌಕೆ..!

ಬೀಜಿಂಗ್‌: ತಿಯಾನ್ವೆನ್ -1 ಬಾಹ್ಯಾಕಾಶ ನೌಕೆ ಮಂಗಳ ಗ್ರಹದ ಯುಟೋಪಿಯಾ ಪ್ಲಾನಿಟಿಯಾ ಎಂದು ಕರೆಯಲ್ಪಡುವ ವಿಶಾಲವಾದ ಬಯಲಿನಲ್ಲಿರುವ ಒಂದು ಸೈಟ್‌ಗೆ ಇಳಿಯಿತು. ಆ ಮೂಲಕ ಮೊದಲ ಬಾರಿಗೆ ಮಂಗಳ ಗ್ರಹದ ಮೇಲೆ ಚೀನಾದ ಹೆಜ್ಜೆಗುರುತನ್ನು ಬಿಟ್ಟಿತು” ಎಂದು ಕ್ಸಿನ್ಹುವಾ ಹೇಳಿದೆ. ಕ್ರಾಫ್ಟ್ ತನ್ನ ನಿಲುಗಡೆ ಕಕ್ಷೆಯನ್ನು ಸುಮಾರು 1700 GMT ಶುಕ್ರವಾರ (0100 ಬೀಜಿಂಗ್ ಸಮಯ … Continued

ಭಾರತದಲ್ಲಿ ಸತತ ಎರಡನೇ ದಿನ ಕೊರೊನಾ ಸೋಂಕಿತರಿಗಿಂತ ಗುಣಮುಖರಾದವರೇ ಹೆಚ್ಚು…

ನವ ದೆಹಲಿ: ಭಾರತವು ಶನಿವಾರ (ಕಳೆದ 24 ಗಂಟೆಗಳಲ್ಲಿ ) 3,26,098 ಹೊಸ ಕೊರೊನಾ ವೈರಸ್ ಸೋಂಕು ದಾಖಲಿಸಿದೆ. ಮತ್ತು 3,890 ಜನರು ಈ ಸೋಂಕಿನಿಂದ ಮೃತಪಟ್ಟಿದ್ದಾರೆ. ಒಟ್ಟು ಪ್ರಕರಣಗಳು ಮತ್ತು ಸಾವಿನ ಸಂಖ್ಯೆ ಕ್ರಮವಾಗಿ 24,3,72,907 ಮತ್ತು 2,66,207 ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ-ಅಂಶ ತಿಳಿಸಿದೆ. ಕಳೆದ 24 ಗಂಟೆಗಳಲ್ಲಿ … Continued

ಕೊರೊನಾದಿಂದ ಬದುಕುಳಿದ ಭಾರತದ ಅತ್ಯಂತ ಹಿರಿಯ ವ್ಯಕ್ತಿ 110 ವರ್ಷದ ಸಾಧು…!

ಹೈದರಾಬಾದ್: ತೆಲಂಗಾಣದಿಂದ 110 ವರ್ಷದ ಸಾಧು ಕೋವಿಡ್‌-19 ವಿರುದ್ಧದ ಹೋರಾಟದಲ್ಲಿ ಜಯಶಾಲಿಯಾಗಿದ್ದಾರೆ..! ರಾಮಾನಂದ ತೀರ್ಥ ಎಂಬ 110 ವರ್ಷದ ಸಾಧು ಕೊರೊನಾ ವೈರಸ್‌ನ್ನು ಸೋಲಿಸಿದ ದೇಶದ ಅತ್ಯಂತ ಹಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ನಗರದ ಗಾಂಧಿ ಆಸ್ಪತ್ರೆಯ ಅಧೀಕ್ಷಕ ಎಂ.ರಾಜರಾವ್ ಅವರು  110 ವರ್ಷ ವಯಸ್ಸಿನ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತರ ಕೋವಿಡ್‌-19ರಿಂದ … Continued

ಪಶ್ಚಿಮ ಕರಾವಳಿಗೆ ಎಚ್ಚರಿಕೆ..175 ಕಿಮೀ ವೇಗದೊಂದಿಗೆ ತೌಕ್ಟೆ ಚಂಡಮಾರುತ ತೀವ್ರಗೊಳ್ಳುವ ಸಾಧ್ಯತೆ: ಐಎಂಡಿ…!

ನವ ದೆಹಲಿ: ತೌಕ್ಟೆ ಚಂಡಮಾರುತವು ‘ಅತ್ಯಂತ ತೀವ್ರವಾದ ಚಂಡಮಾರುತವಾಗಿ ತೀವ್ರಗೊಳ್ಳುವ ಸಾಧ್ಯತೆಯಿದೆ, ಗಾಳಿಯ ವೇಗ 150-160 ಕಿ.ಮೀ ವೇಗದಲ್ಲಿ ಹಾಗೂ ಮೇ 17 ರಂದು 175 ಕಿ.ಮೀ ವೇಗದಲ್ಲಿ ಬೀಸುವ ಸಾಧ್ಯತೆ ಇದೆ ಎಂದು ಎಚ್ಚರಿಸಲಾಗಿದೆ. ಮೇ 18 ರ ಬೆಳಿಗ್ಗೆ ಗುಜರಾತ್ ಕರಾವಳಿಯ ಬಳಿ ಚಂಡಮಾರುತ ತಲುಪುವ ನಿರೀಕ್ಷೆಯಿದೆ. ಅರಬ್ಬೀ ಸಮುದ್ರದಲ್ಲಿ ಲಕ್ಷದ್ವೀಪದಲ್ಲಿ ರೂಪುಗೊಂಡ … Continued

2021ರಲ್ಲಿ ಭಾರತದಲ್ಲಿ ಲಭ್ಯವಾಗಬಹುದಾದ 8 ಕೋವಿಡ್ ಲಸಿಕೆಗಳು.. ಇಲ್ಲಿದೆ ಮಾಹಿತಿ

ಭಾರತದ ಪ್ರಸ್ತುತ ಕೋವಿಡ್ -19 ಸಾಂಕ್ರಾಮಿಕದ ಎರಡನೇ ಅಲೆ ಎದುರಿಸುತ್ತಿದೆ. ಎರಡನೇ ಅಲೆಯು ಆರೋಗ್ಯ ರಕ್ಷಣಾ ವ್ಯವಸ್ಥೆಗೆ ಹೊಡೆತ ನೀಡುತ್ತಿದ್ದರೆ ದೇಶವು ಲಸಿಕೆಗಳ ಬಿಕ್ಕಟ್ಟನ್ನೂ ಎದುರಿಸುತ್ತಿದೆ. ಕೋವಿಡ್ -19 ಲಸಿಕೆ ಡಿಸೆಂಬರ್ ವೇಳೆಗೆ ಸಂಪೂರ್ಣ ಭಾರತೀಯ ಜನಸಂಖ್ಯೆಗೆ ಲಭ್ಯವಾಗಲಿದೆ. ಆಗಸ್ಟ್ ಮತ್ತು ಡಿಸೆಂಬರ್ ನಡುವೆ ಎಂಟು ಕೋವಿಡ್ -19 ಲಸಿಕೆಗಳ ಎರಡು ಬಿಲಿಯನ್ ಡೋಸುಗಳು ಲಭ್ಯವಾಗಲಿದೆ … Continued

ತೌಕ್ಟೆ ಚಂಡಮಾರುತ: ಕೇರಳದಾದ್ಯಂತ ಭಾರಿ ಮಳೆ, ಎರ್ನಾಕುಲಂನ ಕುಟುಂಬಗಳ ಸ್ಥಳಾಂತರ

* ಎನ್‌ಡಿಆರ್‌ಎಫ್‌ನ ಒಂಭತ್ತು ತಂಡಗಳನ್ನು ಕೇರಳಕ್ಕೆ ಕಳುಹಿಸಲಾಗಿದೆ * 87 ಜನರನ್ನು ತಿರುವನಂತಪುರಂ, ಕೊಲ್ಲಂ, ಇಡಕ್ಕಿ ಮತ್ತು ಎರ್ನಾಕುಲಂ ಜಿಲ್ಲೆಗಳಲ್ಲಿ ತೆರೆಯಲಾದ ನಾಲ್ಕು ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ. ನವ ದೆಹಲಿ: ಕೇರಳದ ಹಲವಾರು ಭಾಗಗಳಲ್ಲಿ ಮಳೆ ಸುರಿಯಲಾರಂಭಿಸಿದ್ದರಿಂದ ಸರ್ಕಾರವು ಪರಿಹಾರ ಶಿಬಿರಗಳನ್ನು ತೆರೆಯುವುದು ಮತ್ತು ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವುದರೊಂದಿಗೆ ತೀವ್ರ … Continued

ಮಹಾರಾಷ್ಟ್ರದಲ್ಲಿ ಕಪ್ಪು ಶಿಲೀಂಧ್ರ ಸೋಂಕಿನಿಂದ 52 ಜನರು ಸಾವು.. ಕರ್ನಾಟಕಕ್ಕೂ ಬಂದಿದೆ ಹುಷಾರ್‌..!

ಮುಂಬೈ: ಕೋವಿಡ್‌ ಸಾಂಕ್ರಾಮಿಕ ಉಲ್ಬಣದ ಮಧ್ಯೆಯೇ ಬ್ಲ್ಯಾಕ್‌ ಫಂಗಸ್‌ ಸೋಂಕು ಹಾವಳಿಯೂ ಉಲ್ಬಣಗೊಳ್ಳುತ್ತಿದೆ. ಮಹಾರಾಷ್ಟ್ರದಲ್ಲಿ ಕಪ್ಪು ಶಿಲೀಂಧ್ರ (ಮ್ಯೂಕೋರ್ಮೈಕೋಸಿಸ್ ) ಸೋಂಕಿಗೆ 52 ಜನರು ಮೃತಪಟ್ಟಿದ್ದಾರೆ. ಕರ್ನಾಟಕದ ಮೈಸೂರಿನಲ್ಲಿಯೂ ಇಬ್ಬರಿಗೆ ಈ ಕಪ್ಪು ಶಿಲಿಂಧ್ರ ರೋಗ ಕಾಣಿಸಿಕೊಂಡಿದೆ. ಇದು ಹೆಚ್ಚಾಗಿ ಕೊರೊನಾದಿಂದ ದೀರ್ಘಕಾಲದಿಂದ ಬಳಲುವವರಿಗೆ ಕಾಣಿಸಿಕೊಳ್ಳುತ್ತಿದೆ. ಹೆಚ್ಚು ಕಾಲ ಆಸ್ಪತ್ರೆಗಳಲ್ಲಿ ಉಳಿಯುವ ಕೋವಿಡ್‌ ಸೋಂಕಿತರು ಹಾಗೂ … Continued