ʼವಿಶ್ವಕಪ್ʼ ಕ್ರಿಕೆಟ್ ಅನ್ನು ʼವಿಶ್ವ ಟೆರರ್ ಕಪ್ʼ ಆಗಿ ಬದಲಿಸ್ತೇವೆ ಎಂದು ಬೆದರಿಕೆ : ಖಲಿಸ್ತಾನಿ ಭಯೋತ್ಪಾದಕನ ಪನ್ನುನ್‌ ವಿರುದ್ಧ ಎಫ್‌ ಐ ಆರ್‌ ದಾಖಲು

ಅಹಮದಾಬಾದ್: ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಅಕ್ಟೋಬರ್ 5 ರಿಂದ ಆರಂಭವಾಗಲಿರುವ ಕ್ರಿಕೆಟ್ ವಿಶ್ವಕಪ್ ಅನ್ನು “ವಿಶ್ವ ಭಯೋತ್ಪಾದಕ ಕಪ್” ಎಂದು ಪರಿವರ್ತಿಸುವುದಾಗಿ ಬೆದರಿಕೆ ಹಾಕಿದ್ದಕ್ಕಾಗಿ ನಿಷೇಧಿತ ಸಂಘಟನೆ ಸಿಖ್ಸ್ ಫಾರ್ ಜಸ್ಟಿಸ್ (SFJ) ಮುಖ್ಯಸ್ಥ ಗುರುಪತ್ವಂತ್ ಸಿಂಗ್ ಪನ್ನುನ್ ವಿರುದ್ಧ ಗುಜರಾತ್ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ. ಮೊದಲ ಮಾಹಿತಿ … Continued

ಚಂದ್ರಯಾನ 3ರ ಲ್ಯಾಂಡರ್ ನಾನೇ ವಿನ್ಯಾಸ ಮಾಡಿದ್ದು ಎಂದು ಹೇಳಿಕೊಂಡಿದ್ದ ನಕಲಿ ವಿಜ್ಞಾನಿ ಬಂಧಿಸಿದ ಪೊಲೀಸರು

ಸೂರತ್​: ಇಸ್ರೋದ ಚಂದ್ರಯಾನ 3 ಮಿಷನ್​ಗೆ ವಿಕ್ರಮ್​ ಲ್ಯಾಂಡರ್​ ಮಾಡ್ಯೂಲ್​ ವಿನ್ಯಾಸ ಮಾಡಿದ್ದು ನಾನೇ ಎಂದು ಹೇಳಿಕೊಂಡು ಸ್ಥಳೀಯ ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಿದ್ದ ನಕಲಿ ವಿಜ್ಞಾನಿಯನ್ನು ಗುಜರಾತಿನ ಸೂರತ್​ ನಗರದ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಚಂದ್ರಯಾನ-3ರ ಚಂದ್ರನ ಕಾರ್ಯಾಚರಣೆಗಾಗಿ ಲ್ಯಾಂಡರ್ ಮಾಡ್ಯೂಲ್ ಅನ್ನು ವಿನ್ಯಾಸಗೊಳಿಸುವಲ್ಲಿ ತನ್ನ ಪಾತ್ರವಿದೆ ಎಂದು ಸುಳ್ಳು ಹೇಳಿಕೊಂಡು ಈತ ಸ್ಥಳೀಯ ಮಾಧ್ಯಮಗಳಿಗೆ … Continued

ಬಿಲ್ಕಿಸ್ ಬಾನೊ ಪ್ರಕರಣ: ಆಯ್ದ ಅಪರಾಧಿಗಳಿಗೆ ಮಾತ್ರ ಕ್ಷಮಾದಾನ ಏಕೆ ಎಂದು ಗುಜರಾತ್‌ ಸರ್ಕಾರಕ್ಕೆ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ನವದೆಹಲಿ : 2002ರ ಗಲಭೆಯಲ್ಲಿ ಬಿಲ್ಕಿಸ್ ಬಾನೊ ಮೇಲೆ ಅತ್ಯಾಚಾರವೆಸಗಿ ಆಕೆಯ ಕುಟುಂಬವನ್ನು ಹತ್ಯೆಗೈದ ಅಪರಾಧಿಗಳ ಅಕಾಲಿಕ ಬಿಡುಗಡೆ ಕುರಿತ ಅರ್ಜಿಗಳ ಸರಣಿಯ ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್‌ ಗುರುವಾರ ಗುಜರಾತ್ ಸರ್ಕಾರಕ್ಕೆ ಕೆಲವು ಕಠಿಣ ಪ್ರಶ್ನೆಗಳನ್ನು ಕೇಳಿದೆ. “ಅಪರಾಧಿಗಳ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಗೆ ಪರಿವರ್ತಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ 14 ವರ್ಷಗಳ ಸೇವೆ ಸಲ್ಲಿಸಿದ ನಂತರ … Continued

ನಯಾ ಪೈಸೆ ತೆಗೆದುಕೊಳ್ಳದೆ 138 ದಂಪತಿಗಳ ವಿಚ್ಛೇದನ ತಡೆದಿದ್ದ ವಕೀಲನಿಗೆ ಈಗ ವಿಚ್ಛೇದನ ನೀಡಿದ ಪತ್ನಿ…! ಕಾರಣ ತಿಳಿದರೆ ದಿಗ್ಭ್ರಮೆ…!!

ಅಹಮದಾಬಾದ್: ಒಮ್ಮೊಮ್ಮೆ ಜೀವನದಲ್ಲಿ ನಾವು ಒಂದು ಬಯಸಿದರೆ ದೈವವು ಇನ್ನೊಂದು ಬಗೆಯುತ್ತದೆ. ನಾವು ಏನಾಗಬಾರದು ಎಂದು ಬಯಸುತ್ತೇವೆಯೇ ಒಮ್ಮೊಮ್ಮೇ ಜೀವನದಲ್ಲಿ ಅದೇ ನಡೆಯುತ್ತದೆ. ಗುಜರಾತಿನಲ್ಲೂ ಇಂಥದ್ದೇ ಒಂದು ಘಟನೆ ನಡೆದಿದೆ. 16 ವರ್ಷಗಳಿಗಿಂತ ಹೆಚ್ಚು ವೃತ್ತಿ ಪರ ಅನುಭವ ಇರುವ ವಕೀಲರೊಬ್ಬರು ಈವರೆಗೆ 138 ಜೋಡಿಗಳ ವಿಚ್ಛೇದನ ತಡೆದಿದ್ದಾರೆ. ಒಂದೇ ಒಂದು ಪೈಸೆ ಹಣ ತೆಗೆದುಕೊಳ್ಳದೆ … Continued

ಸಮುದ್ರಕ್ಕೆ ಹಾರಿ ನೀರಿನಲ್ಲಿ ಮುಳುಗುತ್ತಿದ್ದ ಮೂವರು ಯುವಕರನ್ನು ರಕ್ಷಿಸಿದ ಬಿಜೆಪಿ ಶಾಸಕ | ವೀಕ್ಷಿಸಿ

ಗುಜರಾತ್‌ನ ರಾಜುಲಾ ಕ್ಷೇತ್ರದ ಬಿಜೆಪಿ ಶಾಸಕ ಹೀರಾ ಸೋಲಂಕಿ ಅವರು ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಅವರು ಮೂರು ಜೀವಗಳನ್ನ ಉಳಿಸಿದ್ದಾರೆ. ನಾಲ್ವರು ಯುವಕರು ಗುಜರಾತ್‌ನ ರಾಜುಲಾ ಸಮೀಪದ ಪಟ್ವಾ ಗ್ರಾಮದ ಸಮುದ್ರ ತೀರದಲ್ಲಿರುವ ತೊರೆಗೆ ಸ್ನಾನ ಮಾಡಲು ಹೋಗಿದ್ದರು. ಈ ವೇಳೆ ಅವರು ಮುಳುಗುತ್ತಿದ್ದರು. ಘಟನೆಯ ಬಗ್ಗೆ ತಿಳಿದ ರಾಜುಲಾ ಕ್ಷೇತ್ರದ ಬಿಜೆಪಿ ಶಾಸಕ ಹೀರಾ … Continued

ಆಸ್ಪತ್ರೆಯಲ್ಲಿ ಕೋವಿಡ್‌ನಿಂದ ಮೃತಪಟ್ಟ ವ್ಯಕ್ತಿ 2 ವರ್ಷಗಳ ನಂತರ ಮನೆ ಮುಂದೆ ಪ್ರತ್ಯಕ್ಷ..!!

ಧಾರ್ (ಮಧ್ಯಪ್ರದೇಶ) : ಆಸ್ಪತ್ರೆಯಲ್ಲಿ ಕೋವಿಡ್-19 ನಿಂದಾಗಿ “ಮೃತ” ಎಂದು ಘೋಷಿಸಿದ ವ್ಯಕ್ತಿಯೊಬ್ಬನ ಕುಟುಂಬ ಸದಸ್ಯರು ಆತನ ಅಂತ್ಯಕ್ರಿಯೆ ನೆರವೇರಿಸಿದ ಎರಡು ವರ್ಷಗಳ ನಂತರ ಆತ ಮನೆಗೆ ಮರಳಿದ್ದಾನೆ. ಘಟನೆ ಮಧ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿ ನಡೆದಿದೆ. ಕಮಲೇಶ ಪಾಟಿದಾರ್ (35) ಎಂಬ ವ್ಯಕ್ತಿ ತಮ್ಮ ಕುಟುಂಬವರು ತಮ್ಮ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದ ಸುಮಾರು ಎರಡು ವರ್ಷಗಳ … Continued

ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡ 6 ತಿಂಗಳ ಬಳಿಕ ಅದೇ ಪ್ರೇಮಿಗಳಿಗೆ ಮದುವೆ ಮಾಡಿದ ಕುಟುಂಬಸ್ಥರು..!

ತಾಪಿ: ಗುಜರಾತಿನ ತಾಪಿ ಜಿಲ್ಲೆಯಲ್ಲಿ ವಿಚಿತ್ರ ವಿದ್ಯಮಾನವೊಂದು ಬೆಳಕಿಗೆ ಬಂದಿದೆ. ಕಳೆದ ವರ್ಷ ಜಿಲ್ಲೆಯ ನಿಜರ ತಾಲೂಕಿನ ನೇವಾಳ ಗ್ರಾಮದಲ್ಲಿ ತಮ್ಮ ಮದುವೆಗೆ ಮನೆಯವರು ವಿರೋಧ ಮಾಡಿದ್ದರಿಂದ ನೊಂದ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿದ್ದರು. ಕುತೂಹಲಕಾರಿಯಾಗಿ, ಈಗ ಎರಡು ಕುಟುಂಬಗಳು ಈಗ ತಮ್ಮ ತಪ್ಪನ್ನು ಅರಿತುಕೊಂಡು ಸತ್ತ ನಂತರ ಅವರಿಬ್ಬರ ಮದುವೆ ಮಾಡಿದ್ದಾರೆ…! ಆದರೆ ಸತ್ತ ನಂತರ … Continued

ತಲೆಮರೆಸಿಕೊಂಡಿದ್ದ ಸ್ಯಾಂಟ್ರೋ ರವಿ ಗುಜರಾತ್‌ನಲ್ಲಿ ಬಂಧನ

ಬೆಂಗಳೂರು : ಅನೈತಿಕ ದಂಧೆ ಹಾಗೂ ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿ ಸ್ಯಾಂಟ್ರೋ ರವಿ ಅಲಿಯಾಸ್ ಮಂಜುನಾಥನನ್ನು ಪೊಲೀಸರು ಗುಜರಾತಿನಲ್ಲಿ ಬಂಧಿಸಿದ್ದಾರೆ. ಕಳೆದ 11 ದಿನಗಳಿಂದ ಮೈಸೂರು ಪೊಲೀಸರು ಸ್ಯಾಂಟ್ರೋ ರವಿಗಾಗಿಹುಡುಕಾಟ ನಡೆಸಿದ್ದರು. ರಾಜ್ಯದಿಂದ ಪರಾರಿಯಾಗಿ ಗುಜರಾತ್‌ನಲ್ಲಿ ತಲೆಮರೆಸಿಕೊಂಡಿದ್ದ ಸ್ಯಾಂಟ್ರೋ ರವಿಯನ್ನು ಮೈಸೂರು ಪೊಲೀಸರು ಕೊನೆಗೂ ಬಂಧಿಸಿದ್ದಾರೆ. ಸ್ವಂತ ಫೋನ್‌ ಬಳಸದೆ ಪೊಲೀಸರಿಂದ ತಪ್ಪಿಸಿಕೊಂಡಿದ್ದ ಸ್ಯಾಂಟ್ರೋ … Continued

ನಾಯಿಗಳು ಅಟ್ಟಿಸಿಕೊಂಡು ಬಂದ ನಂತರ ಎಟಿಎಂನಲ್ಲಿ ಸಿಕ್ಕಿಬಿದ್ದ ಜಿಂಕೆ | ವೀಕ್ಷಿಸಿ

ಅಂತರ್ಜಾಲದಲ್ಲಿ ಲಭ್ಯವಿರುವ ಹಲವಾರು ವೀಡಿಯೋಗಳು ಪ್ರಾಣಿಗಳಿಗೆ ಮಾನವ ಸಹಾಯದ ಅಗತ್ಯವಿರುವ ಜಿಗುಟಾದ ಸಂದರ್ಭಗಳಲ್ಲಿ ಹೇಗೆ ಸಿಲುಕಿಕೊಳ್ಳುತ್ತವೆ ಎಂಬುದನ್ನು ತೋರಿಸುತ್ತದೆ. ಅಂತಹ ಒಂದು ಘಟನೆ ಗುಜರಾತ್‌ನಲ್ಲಿ ದಾಖಲಾಗಿದ್ದು, ಜಿಂಕೆಯೊಂದು ಎಟಿಎಂ ಒಳಗೆ ಸಿಲುಕಿಕೊಂಡಿದೆ. ಗುಜರಾತ್‌ನ ಧರಿಯ ಅಮ್ರೇಲಿಯಲ್ಲಿ ಈ ಘಟನೆ ನಡೆದಿದ್ದು, ಆದರೆ, ಘಟನೆ ಯಾವಾಗ ನಡೆದಿದೆ ಎಂಬುದು ತಿಳಿದುಬಂದಿಲ್ಲ. ಸ್ಥಳೀಯರು ವಿಡಿಯೋ ರೆಕಾರ್ಡ್ ಮಾಡಿದ್ದಾರೆ. ಅವರ … Continued

‘ಫೈರ್ ಹೇರ್ ಕಟ್’ಮಾಡುವಾಗ ಕ್ಷೌರಿಕನಿಂದ ಎಡವಟ್ಟು, ಯುವಕನ ತಲೆಗೆ ಬೆಂಕಿ | ವೀಕ್ಷಿಸಿ

ಸಲೂನ್‌ನಲ್ಲಿ ಫೈರ್ ಹೇರ್ ಕಟ್ ಮಾಡಿಸಿಕೊಳ್ಳುವ ವೇಳೆ ಕ್ಷೌರಿಕನ ಎಡವಟ್ಟಿನಿಂದ ಯುವಕನೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಗುಜರಾತಿನ ವಲ್ಸಾದ್ ಜಿಲ್ಲೆಯ ವಾಪಿ ಪಟ್ಟಣದಲ್ಲಿ ನಡೆದಿದೆ. ಇತ್ತೀಚಿನ ದಿನಗಳಲ್ಲಿ ಫೈರ್ ಹೇರ್‌ಕಟ್, ಜನಪ್ರಿಯತೆ ಗಳಿಸಿದೆ. ಇದು ಗ್ರಾಹಕರ ಕೂದಲಿನ ಮೇಲೆ ಬೆಂಕಿಯನ್ನು ಬಳಸಿ ವಿಭಿನ್ನವಾಗಿ ಕೇಶ ವಿನ್ಯಾಸ ಮಾಡುವುದಾಗಿದೆ. ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. … Continued