ವಿ.ಕೆ. ಸಕ್ಸೇನಾ ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆ ಪ್ರಕರಣ : ಮೇಧಾ ಪಾಟ್ಕರ ದೋಷಿ ಎಂದು ಕೋರ್ಟ್‌ ತೀರ್ಪು

ನವದೆಹಲಿ: ನರ್ಮದಾ ಬಚಾವೋ ಆಂದೋಲನದ ನಾಯಕಿ ಮೇಧಾ ಪಾಟ್ಕರ್ ವಿರುದ್ಧ ದೆಹಲಿಯ ಎಲ್‌ಜಿ ವಿ.ಕೆ. ಸಕ್ಸೇನಾ ಅವರು ದಾಖಲಿಸಿದ್ದ ಮಾನನಷ್ಟ ಮೊಕದ್ದಮೆಯಲ್ಲಿ ದೆಹಲಿ ನ್ಯಾಯಾಲಯವು ಮೇಧಾ ಪಾಟ್ಕರ್ ಅವರನ್ನು ದೋಷಿ ಎಂದು ಶುಕ್ರವಾರ ತೀರ್ಪು ನೀಡಿದೆ. 23 ವರ್ಷಗಳ ಹಿಂದೆ ದಾಖಲಾದ ಪ್ರಕರಣವೊಂದರಲ್ಲಿ ದೆಹಲಿ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ರಾಘವ ಶರ್ಮಾ ಅವರು ಪಾಟ್ಕರ್ ಅವರ ಹೇಳಿಕೆಗಳನ್ನು … Continued

ಅಹಮದಾಬಾದ್‌ ವಿಮಾನ ನಿಲ್ದಾಣದಲ್ಲಿ ನಾಲ್ವರು ಶಂಕಿತ ಐಸಿಸ್ ಭಯೋತ್ಪಾದಕರ ಬಂಧನ

ಅಹಮದಾಬಾದ್ : ಅಹಮದಾಬಾದ್ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಬಂದ ಕೆಲವು ದಿನಗಳ ನಂತರ ನಾಲ್ವರು ಶಂಕಿತ ಐಸಿಸ್ ಭಯೋತ್ಪಾದಕರನ್ನು ಅದೇ ವಿಮಾನ ನಿಲ್ದಾಣದಿಂದ ಬಂಧಿಸಲಾಗಿದೆ. ಭಯೋತ್ಪಾದಕರು ಶ್ರೀಲಂಕಾದ ನಾಗರಿಕರು ಎಂದು ನಂಬಲಾಗಿದೆ. ಈ ನಾಲ್ವರು ತಮ್ಮ ಹ್ಯಾಂಡ್ಲರ್‌ಗಾಗಿ ವಿಮಾನ ನಿಲ್ದಾಣದಲ್ಲಿ ಕಾಯುತ್ತಿದ್ದಾಗ ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಬಂಧಿಸಿದೆ. ಹ್ಯಾಂಡ್ಲರ್ ಈ ನಾಲ್ವರು … Continued

ನೂಪುರ್ ಶರ್ಮಾ ಸೇರಿದಂತೆ ಹಲವು ಹಿಂದೂ ನಾಯಕರ ಹತ್ಯೆಗೆ ಸಂಚು: ಮೌಲ್ವಿ ಬಂಧನ

ಸೂರತ್: ಪಾಕಿಸ್ತಾನ ಮತ್ತು ನೇಪಾಳದ ಹ್ಯಾಂಡ್ಲರ್‌ಗಳೊಂದಿಗೆ ಶಾಮೀಲಾಗಿ ಬಿಜೆಪಿ ನಾಯಕರನ್ನು ಮತ್ತು ಬಲಪಂಥೀಯ ಸಂಘಟನೆಯ ಪ್ರಮುಖರೊಬ್ಬರನ್ನು ಕೊಲ್ಲಲು ಸಂಚು ರೂಪಿಸಿದ ಆರೋಪದ ಮೇಲೆ 27 ವರ್ಷದ ಮೌಲ್ವಿಯನ್ನು ಗುಜರಾತ್‌ನ ಸೂರತ್‌ನಲ್ಲಿ ಮೇ 3 ರಂದು ಬಂಧಿಸಲಾಗಿದೆ. ಆರೋಪಿ ಮೌಲ್ವಿ ಸೊಹೆಲ್ ಅಬುಬಕರ್ ತಿಮೋಲ್ ಎಂಬಾತ ಹಿಂದಿ ಟಿವಿ ಸುದ್ದಿ ವಾಹಿನಿಯ ಮುಖ್ಯ ಸಂಪಾದಕ, ಬಿಜೆಪಿಯ ತೆಲಂಗಾಣ … Continued

ಭಾರತದಲ್ಲಿತ್ತು 1000 ಕಿಲೋ ತೂಕದ ಜಗತ್ತಿನ ಅತಿದೊಡ್ಡ ಹಾವು ವಾಸುಕಿ..! ಅದರ ಪಳೆಯುಳಿಕೆ ಪತ್ತೆ…ಅದರ ಉದ್ದ ಎಷ್ಟು ಗೊತ್ತೆ..?

ನವದೆಹಲಿ: ಜಗತ್ತಿನ ಅತೀ ದೊಡ್ಡ ಹಾಗೂ ಭಾರೀ ಗಾತ್ರದ ಹಾವು (big snake) ಭಾರತದಲ್ಲಿ ಬದುಕಿತ್ತು ಎಂಬುದು ಸಂಶೋಧನೆಯಿಂದ ಗೊತ್ತಾಗಿದೆ. ಗುಜರಾತಿನಲ್ಲಿ ಪತ್ತೆಯಾದ ಪ್ರಾಚೀನ ಹಾವೊಂದರ ಪಳೆಯುಳಿಕೆಗಳು (follisls) ಅದು ಸುಮಾರು 50 ಅಡಿ ಉದ್ದ ಹಾಗೂ 1,000 ಕೆಜಿ ತೂಕವಿತ್ತು ಎಂಬುದನ್ನು ಸೂಚಿಸಿವೆ. ವಿಜ್ಞಾನಿಗಳು ಇದನ್ನು ‘ವಾಸುಕಿ ಇಂಡಿಕಸ್’ ಎಂದು ಹೆಸರಿಸಿದ್ದು, 2005 ರಲ್ಲಿ … Continued

ಕತ್ತೆ…ಕತ್ತೆ ಎಂದು ಹಂಗಿಸಬೇಡಿ…; ಕತ್ತೆ ಸಾಕಣೆ ಮಾಡಿ ಲೀಟರಿಗೆ 5000 ರೂ.ನಂತೆ ಹಾಲು ಮಾರುತ್ತಿದ್ದಾನೆ ಈ ವ್ಯಕ್ತಿ…!

ಅಹಮದಾಬಾದ್: ಶತಮಾನಗಳಿಂದ, ಅವುಗಳನ್ನು ಗುರುತಿಸದೆ ವಿಡಂಬನೆಯ ರೂಪಕವಾಗಿ ಬಳಸಲಾಗುತ್ತಿದ್ದ ಕತ್ತೆಗೆ ಕೊನೆಗೂ ಬೆಲೆ ಬಂದಿದೆ. ಅದರ ಹಾಲು ಗೋವು, ಕುರಿ ಸೇರಿದಂತೆ ಇತರ ಪ್ರತಿಸ್ಪರ್ಧಿ ಪ್ರಾಣಿಗಳ ಹಾಲಿನ ಬೆಲೆಗಿಂತ 70 ಪಟ್ಟು ಹೆಚ್ಚು ದರದಲ್ಲಿ ಮಾರಾಟವಾಗುತ್ತಿದೆ….! ಗುಜರಾತಿನ ಧೀರೇನ್ ಸೋಲಂಕಿ ಅವರು ಪಟಾನ್ ಜಿಲ್ಲೆಯ ತಮ್ಮ ಗ್ರಾಮದಲ್ಲಿ 42 ಕತ್ತೆಗಳೊಂದಿಗೆ ಕತ್ತೆ ಸಾಕಣೆ ಕೇಂದ್ರವನ್ನು ಸ್ಥಾಪಿಸಿದ್ದಾರೆ … Continued

ಸಂಪತ್ತಿನಿಂದ ತ್ಯಾಗ ಜೀವನಕ್ಕೆ : ಸನ್ಯಾಸಿಗಳಾಗಲು 200 ಕೋಟಿ ರೂಪಾಯಿ ಸಂಪತ್ತು ದಾನ ಮಾಡಿದ ದಂಪತಿ…!

ಗುಜರಾತ್‌ನ ಪ್ರಮುಖ ಉದ್ಯಮಿ ಕುಟುಂಬವು ತಮ್ಮ ಸಂಪೂರ್ಣ ಜೀವಮಾನದ ಗಳಿಕೆಯ 200 ಕೋಟಿ ರೂಪಾಯಿಗಳನ್ನು ದಾನ ಮಾಡುವ ಮೂಲಕ ಅನೇಕರನ್ನು ಬೆರಗುಗೊಳಿಸಿದೆ. ಗುಜರಾತಿನ ಸಬರ್ಕಾಂತ ಜಿಲ್ಲೆಯ ಹಿಮ್ಮತ್‌ನಗರದ ನಿವಾಸಿ ಭವೇಶ ಭಾಯ್ ಭಂಡಾರಿ ಅವರು ತಮ್ಮ ಪತ್ನಿಯೊಂದಿಗೆ ಸನ್ಯಾಸಿ ಜೀವನವನ್ನು ಸ್ವೀಕರಿಸಲು ನಿರ್ಧಾರ ಮಾಡಿದ್ದಾರೆ. ಹೀಗಾಗಿ ಭೌತಿಕ ಸಂಪತ್ತಿನ ಐಷಾರಾಮಿ ಜೀವನಕ್ಕೆ ವಿದಾಯ ಹೇಳಿದ್ದಾರೆ. ಅವರ … Continued

ವೀಡಿಯೊಗಳು…| ಐಪಿಎಲ್ ನಲ್ಲಿ ಕಳಪೆ ಪ್ರದರ್ಶನ : ಸೋಮನಾಥ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ಮುಂಬೈ ಇಂಡಿಯನ್ಸ್‌ ನಾಯಕ ಹಾರ್ದಿಕ್ ಪಾಂಡ್ಯ

ಐಪಿಎಲ್‌ -2024ರ ಋವಿನಲ್ಲಿ ಸತತ ಸೋಲಿನಿಂದ ಹೆಚ್ಚುತ್ತಿರುವ ಒತ್ತಡದ ನಡುವೆ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಅವರು ಗುಜರಾತ್‌ನ ಹೆಸರಾಂತ ಸೋಮನಾಥ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಭಾನುವಾರ ವಾಂಖೆಡೆ ಸ್ಟೇಡಿಯಂನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ನಿರ್ಣಾಯಕ ಪಂದ್ಯಕ್ಕೆ ಮುಂಚಿತವಾಗಿ ಅವರು ಸೋಮನಾಥ ದೇವಾಲಯಕ್ಕೆ ಪ್ರಾರ್ಥನೆ ಸಲ್ಲಿಸಿದರು. X ನಲ್ಲಿ ಹಂಚಿಕೊಳ್ಳಲಾದ … Continued

ಅನಂತ ಅಂಬಾನಿ-ರಾಧಿಕಾ ಮರ್ಚಂಟ್‌ ಅದ್ಧೂರಿ ವಿವಾಹ ಪೂರ್ವ ಕಾರ್ಯಕ್ರಮ : ಪಾಪ್‌ ಐಕಾನ್‌ ರಿಹಾನ್ನಾ ಪಡೆಯುವ ಸಂಭಾವನೆ ಕೇಳಿದ್ರೆ ದಂಗಾಗ್ತೀರಾ..!

ದೇಶದ ಅತೀ ಶ್ರೀಮಂತ ವ್ಯಕ್ತಿಯಾಗಿರುವ ಮುಖೇಶ ಅಂಬಾನಿ ಪುತ್ರ ಅನಂತ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್‌ ಅವರ ವಿವಾಹ ಪೂರ್ವ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆಯಲಿದೆ. ವಿವಾಹ ಪೂರ್ವ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡಲು ಅಂತಾರಾಷ್ಟ್ರೀಯ ಕಲಾವಿದರ ದಂಡೇ ಆಗಮಿಸುತ್ತಿದ್ದು, ಅವರು ವಿವಾಹ ಪೂರ್ವ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡಲು ಭಾರೀ ಹಣ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ. ಪಾಪ್ ಐಕಾನ್ … Continued

ವೀಡಿಯೊ…| ಸಮುದ್ರದಲ್ಲಿ ಮುಳುಗಿ ನೀರಿನೊಳಗಿರುವ ದ್ವಾರಕಾ ನಗರದಲ್ಲಿ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ ಮೋದಿ…!

ಗುಜರಾತಿನ ಸಮುದ್ರದ ಆಳವಾದ ನೀರಿನಲ್ಲಿ ಧುಮುಕುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ದ್ವಾರಕಾದಲ್ಲಿರುವ ದ್ವಾರಕಾಧೀಶ ದೇವಸ್ಥಾನದಪ್ರಾರ್ಥನೆ ಸಲ್ಲಿಸಿದರು. ಇದನ್ನು “ದೈವಿಕ ಅನುಭವ” ಎಂದು ಕರೆದ ಪ್ರಧಾನಿ ಮೋದಿ, “ಆಧ್ಯಾತ್ಮಿಕ ಭವ್ಯತೆಯ ಪುರಾತನ ಯುಗದೊಂದಿಗೆ ಸಂಪರ್ಕ ಹೊಂದಿದ್ದೇನೆ” ಎಂದು ಭಾವಿಸಿರುವುದಾಗಿ ತಿಳಿಸಿದ್ದಾರೆ. “ನೀರಿನಲ್ಲಿ ಮುಳುಗಿರುವ ದ್ವಾರಕಾ ನಗರದಲ್ಲಿ ಪ್ರಾರ್ಥನೆ ಸಲ್ಲಿಸುವುದು ಬಹಳ ದೈವಿಕ ಅನುಭವವಾಗಿತ್ತು. … Continued

ಇದು 22 ವರ್ಷಗಳ ಹಿಂದೆ ನರೇಂದ್ರ ಮೋದಿಯ ರಾಜಕೀಯ ಜೀವನದ ದಿಕ್ಕನ್ನೇ ಬದಲಾಯಿಸಿದ ದಿನದ ವೀಡಿಯೊ | ವೀಕ್ಷಿಸಿ

ನವದೆಹಲಿ: ರಾಜ್‌ಕೋಟಕ್ಕೆ ನನ್ನ ಹೃದಯದಲ್ಲಿ ಯಾವಾಗಲೂ ವಿಶೇಷ ಸ್ಥಾನವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಜಕೋಟ್‌ ನಗರದಲ್ಲಿ ತಮ್ಮ ಮೊದಲ ಚುನಾವಣಾ ಕದನದ ಪ್ರಚಾರದ ಥ್ರೋಬ್ಯಾಕ್ ವೀಡಿಯೊವನ್ನು ಇಂದು, ಶನಿವಾರ ಹಂಚಿಕೊಂಡಿದ್ದಾರೆ. ಇದು ನರೇಂದ್ರ ಮೋದಿಯವರ ರಾಜಕೀಯ ಜೀವನವನ್ನೇ ಬದಲಿಸಿದ ದಿನವಾಗಿದೆ. ಹೀಗಾಗಿಯೇ ಅವರು ಈ ವೀಡಿಯೊ ಹಂಚಿಕೊಂಡಿದ್ದಾರೆ. 2002ರ ಇದೇ ಫೆ.24ರ ದಿನ, … Continued