ಗ್ರಿಲ್‌ಗೆ ಕೈಗಳನ್ನು ಕಟ್ಟಿದ್ದರು…ಬಾಯಿಗೆ ಬಟ್ಟೆ ತುರುಕಿದ್ದರು..: ಕಿಡ್ನ್ಯಾಪ್ ಪ್ರಕರಣ ಬೆನ್ನತ್ತಿದ ಪೊಲೀಸರು-ಕುಟುಂಬಸ್ಥರೇ ಬೆಸ್ತುಬಿದ್ದರು…!

 ಸೂರತ್: ಗುಜರಾತಿನ ಸೂರತ್‌ನಲ್ಲಿ 36 ವರ್ಷದ ಉದ್ಯಮಿಯೊಬ್ಬರು ಹಠಾತ್ತನೆ ನಾಪತ್ತೆಯಾಗಿದ್ದರು. ಇದರಿಂದ ಆತಂಕಗೊಂಡ ಅವರ ಕುಟುಂಬಸ್ಥರು ನಾಪತ್ತೆ ದೂರು ದಾಖಲಿಸಿದ್ದರು. ದೂರು ದಾಖಲಾದ ಬೆನ್ನಲ್ಲೇ, ಕುಟುಂಬ ಸದಸ್ಯರಿಗೆ ಆ ವ್ಯಕ್ತಿಯ ಫೋನ್‌ನಿಂದ ಬೆದರಿಕೆ ಸಂದೇಶಗಳು ಬರಲಾರಂಭಿಸಿದವು. ಅದರಲ್ಲಿ ಆತನನ್ನು ಅಪಹರಿಸಲಾಗಿದೆ ಎಂದು ಹೇಳಲಾಗಿತ್ತು. ಹಾಗೂ ಸುರಕ್ಷಿತವಾಗಿ ಬಿಡಲು  50 ಲಕ್ಷ ರೂ.ಹಣ ನೀಡಬೇಕು ಎಂದು ಬೇಡಿಕೆ … Continued

₹10 ಸಾವಿರ ವಿತ್‌ಡ್ರಾ ಮಾಡಲು ಹೋದವನಿಗೆ ಸಿಕ್ಕಿತು ₹3 ಲಕ್ಷ ! ಇದು ಎಟಿಎಂ ಮ್ಯಾಜಿಕ್ ಅಲ್ಲ, ಬ್ಯಾಂಕ್‌ ಕೊಡಬೇಕಾದ ಪರಿಹಾರ

ಸೂರತ್: ಗುಜರಾತ್‌ನ ಸೂರತ್‌ನಲ್ಲಿ 10,000 ರೂಪಾಯಿ ವಿತ್‌ಡ್ರಾ ಮಾಡಲು ಹೋದ ಗ್ರಾಹಕನೊಬ್ಬನಿಗೆ ಎದುರಾದ ತಾಂತ್ರಿಕ ದೋಷ, ಈಗ ಬ್ಯಾಂಕ್‌ಗೆ ಅತಿ ದೊಡ್ಡ ಮೊತ್ತದ ದಂಡವಾಗಿ ಪರಿಣಮಿಸಿದೆ. ಸುಮಾರು 9 ವರ್ಷಗಳ ಸುದೀರ್ಘ ಹೋರಾಟದ ನಂತರ, ಬ್ಯಾಂಕ್ ಆಫ್ ಬರೋಡಾ (BoB) ಈಗ ಅಸಲು ಮೊತ್ತಕ್ಕಿಂತ ಸುಮಾರು 30 ಪಟ್ಟು ಹೆಚ್ಚು ಹಣವನ್ನು ಗ್ರಾಹಕನಿಗೆ ಪಾವತಿಸಬೇಕಾದ ಪರಿಸ್ಥಿತಿ … Continued

ವೀಡಿಯೊಗಳು…| 10ನೇ ಮಹಡಿಯಿಂದ ಬಿದ್ರೂ ಬದುಕುಳಿದ ಅದೃಷ್ಟವಂತ ; ಕಾಲು 8ನೇ ಮಹಡಿ ಗ್ರಿಲ್‌ ಗೆ ಸಿಲುಕಿದ್ದಕ್ಕೆ ಪಾರು

ಸೂರತ್: ಗುಜರಾತಿನ ಸೂರತ್‌ನಲ್ಲಿ ಗುರುವಾರ (ಡಿಸೆಂಬರ್‌ 25) ಪವಾಡವೊಂದು ನಡೆದಿದೆ. ಹತ್ತನೇ ಮಹಡಿಯಿಂದ ಆಕಸ್ಮಿಕವಾಗಿ ಬಿದ್ದ ವ್ಯಕ್ತಿಯೊಬ್ಬರು ಎಂಟನೇ ಮಹಡಿಯ ಕಿಟಕಿಯ ಗ್ರಿಲ್‌ನಲ್ಲಿ ಸಿಲುಕಿಕೊಳ್ಳುವ ಮೂಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಜಹಾಂಗೀರಾಬಾದ್ ಪ್ರದೇಶದ ‘ಟೈಮ್ ಗ್ಯಾಲಕ್ಸಿ-ಎ’ ಕಟ್ಟಡದಲ್ಲಿ ಗುರುವಾರ ಬೆಳಿಗ್ಗೆ 8 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. 57 ವರ್ಷದ ನಿತಿನ್ ಅಡಿಯಾ ಎಂಬವರು ತಮ್ಮ … Continued

ಮೃತ ತಾಯಿಯ ಕೊನೆಯ ಆಸೆ ಈಡೇರಿಸಿದ ಮಗ ; ಗ್ರಾಮದ 290 ರೈತರ 30 ವರ್ಷದ ಸಾಲ ತೀರಿಸಿದ ಉದ್ಯಮಿ….!

 ಸೂರತ್:  ಹಣದಿಂದ ಭಾವನೆಗಳನ್ನು ಖರೀದಿಸಲು ಸಾಧ್ಯವಿಲ್ಲದೆ ಇರಬಹುದು, ಆದರೆ ಹಣದ ವಿವೇಕಯುತ ಬಳಕೆಯು ತೊಂದರೆಯಲ್ಲಿರುವವರ ಜೀವನವನ್ನು ಬೆಳಗಿಸಬಲ್ಲದು. ಇಂತಹ ಒಂದು ಅಪರೂಪದ ಮಾನವೀಯ ನಿದರ್ಶನವು ಸೂರತ್ತಿನಲ್ಲಿ ನಡೆದಿದೆ ಎಂದು ವರದಿಯಾಗಿದೆ. ಇಲ್ಲಿನ ಉದ್ಯಮಿ ಬಾಬುಭಾಯಿ ಜಿರಾವಾಲಾ (ಚೋಡ್ವಾಡ್ಯಾ) ಅವರು ತಮ್ಮ ತಾಯಿಯ ಪುಣ್ಯತಿಥಿಯ ನೆನಪಿಗಾಗಿ ಅಮ್ರೇಲಿ ಜಿಲ್ಲೆಯ ತಮ್ಮ ಜಿರಾ ಗ್ರಾಮದ 290 ರೈತರ 30 … Continued

19 ವರ್ಷದ ಯುವತಿ ಮೇಲೆ ಅತ್ಯಾಚಾರ ಪ್ರಕರಣ ; ದಿಗಂಬರ ಜೈನಮುನಿಗೆ 10 ವರ್ಷ ಜೈಲು ಶಿಕ್ಷೆ

ಸೂರತ್‌ : ಗುಜರಾತಿನ ಸೂರತ್‌ನ ಸೆಷನ್ಸ್ ನ್ಯಾಯಾಲಯವು 2017 ರಲ್ಲಿ 19 ವರ್ಷದ ಹುಡುಗಿಯ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈನ ದಿಗಂಬರ ಪಂಗಡದ ಸನ್ಯಾಸಿ ಶಾಂತಿಸಾಗರಜಿ ಮಹಾರಾಜಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ನ್ಯಾಯಾಲಯವು ತಪ್ಪಿತಸ್ಥ ಸನ್ಯಾಸಿಗೆ 25,000 ರೂಪಾಯಿ ದಂಡವನ್ನೂ ವಿಧಿಸಿದೆ. ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಎ.ಕೆ. ಶಾಂತಿಸಾಗರಜಿ ಮಹಾರಾಜ … Continued

ಊಟ-ತಿಂಡಿಯ ಬಗ್ಗೆ ಮಂಟಪದಲ್ಲೇ ಮುರಿದುಬಿದ್ದ ಮದುವೆ ; ನಂತ್ರ ಪೊಲೀಸ್‌ ಠಾಣೆಯಲ್ಲಿ ನಡೆಯಿತು ವಿವಾಹ…!

ಸೂರತ್: ಸೂರತ್‌ನಲ್ಲಿ ನಡೆದ ಮದುವೆ ವೇಳೆ ಊಟ ಕಡಿಮೆ ಬಿದ್ದಿದೆ ಎಂಬ ಕಾರಣದಿಂದ ಹಠಾತ್ತನೆ ಸ್ಥಗಿತಗೊಂಡಿದ್ದ ಮದುವೆಯ ವಿಧಿವಿದಾನವನ್ನು ನಂತರ ಪೊಲೀಸರ ಮಧ್ಯಸ್ಥಿಕೆಯಲ್ಲಿ ಪೊಲೀಸ್ ಠಾಣೆಯಲ್ಲಿ ಮದುವೆ ಮಾಡಿಸಿದ ಘಟನೆ ಭಾನುವಾರ ಸೂರತ್‌ನ ವರಾಚಾ ಪ್ರದೇಶದಲ್ಲಿ ನಡೆದಿದೆ. ವರನ ಕುಟುಂಬವು ಮದುವೆ ಮುರಿದುಕೊಳ್ಳುವ ನಿರ್ಧಾರದ ವಿರುದ್ಧ ಪೊಲೀಸರನ್ನು ಮದುಮಗಳು ಸಂಪರ್ಕಿಸಿದ ನಂತರ ಪೊಲೀಸರು ಠಾಣೆಯಲ್ಲಿ ಮದುವೆ … Continued

ಕಂಪ್ಯೂಟರ್ ಆಪರೇಟರ್ ಕೆಲಸದಿಂದ ತಪ್ಪಿಸಿಕೊಳ್ಳಲು ತನ್ನ ಬೆರಳುಗಳನ್ನು ತಾನೇ ಕತ್ತರಿಸಿಕೊಂಡ ವ್ಯಕ್ತಿ…!

ಸೂರತ್ : ತನ್ನ ಸಂಬಂಧಿಕರ ವಜ್ರ ಸಂಸ್ಥೆಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡುವುದಕ್ಕೆ ಅನರ್ಹಗೊಳ್ಳಳು ವ್ಯಕ್ತಿಯೊಬ್ಬ ತನ್ನ ಎಡಗೈಯ ನಾಲ್ಕು ಬೆರಳುಗಳನ್ನು ಹರಿತವಾದ ಚಾಕುವಿನಿಂದ ಕತ್ತರಿಸಿಕೊಂಡಿರುವ ವಿಲಕ್ಷಣ ಘಟನೆ ಗುಜರಾತಿನ ಸೂರತ್ ನಗರದಲ್ಲಿ ಶನಿವಾರ ನಡೆದಿದೆ ಎಂದು ವರದಿಯಾಗಿದೆ. ಮಯೂರ ತಾರಾಪರಾ (32) ಈ ಹಿಂದೆ ರಸ್ತೆಯ ಪಕ್ಕದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದ ನಂತರ … Continued

ಭಾರೀ ಮಳೆಗೆ ಆರು ಅಂತಸ್ತಿನ ಕಟ್ಟಡ ಕುಸಿದು 7 ಮಂದಿ ಸಾವು

ಗಾಂಧಿನಗರ : ಗುಜರಾತಿನ ಸೂರತ್‍ನಲ್ಲಿ ಭಾರೀ ಮಳೆಯಿಂದ ಆರು ಅಂತಸ್ತಿನ ಕಟ್ಟಡ ಕುಸಿದು ಬಿದ್ದು 7 ಜನ ಸಾವಿಗೀಡಾಗಿದ್ದಾರೆ ಹಾಗೂ ಸುಮಾರು 15 ಮಂದಿ ಗಾಯಗೊಂಡಿದ್ದಾರೆ. ಕಟ್ಟಡದ ಅವಶೇಷಗಳ ಅಡಿಯಲ್ಲಿ ಹಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ಅವರ ರಕ್ಷಣೆಗೆ ಎನ್‍ಡಿಆರ್‌ಎಫ್‌ ಸಿಬ್ಬಂದಿ ಶೋಧ ಕಾರ್ಯ ನಡೆಸುತ್ತಿದ್ದಾರೆ.ಶನಿವಾರ ಮಹಿಳೆಯೊಬ್ಬರನ್ನು ಅವಶೇಷಗಳ ಅಡಿಯಿಂದ ರಕ್ಷಿಸಲಾಗಿತ್ತು. ಕುಸಿದು ಬಿದ್ದ ಕಟ್ಟಡದಲ್ಲಿ … Continued

ನೂಪುರ್ ಶರ್ಮಾ ಸೇರಿದಂತೆ ಹಲವು ಹಿಂದೂ ನಾಯಕರ ಹತ್ಯೆಗೆ ಸಂಚು: ಮೌಲ್ವಿ ಬಂಧನ

ಸೂರತ್: ಪಾಕಿಸ್ತಾನ ಮತ್ತು ನೇಪಾಳದ ಹ್ಯಾಂಡ್ಲರ್‌ಗಳೊಂದಿಗೆ ಶಾಮೀಲಾಗಿ ಬಿಜೆಪಿ ನಾಯಕರನ್ನು ಮತ್ತು ಬಲಪಂಥೀಯ ಸಂಘಟನೆಯ ಪ್ರಮುಖರೊಬ್ಬರನ್ನು ಕೊಲ್ಲಲು ಸಂಚು ರೂಪಿಸಿದ ಆರೋಪದ ಮೇಲೆ 27 ವರ್ಷದ ಮೌಲ್ವಿಯನ್ನು ಗುಜರಾತ್‌ನ ಸೂರತ್‌ನಲ್ಲಿ ಮೇ 3 ರಂದು ಬಂಧಿಸಲಾಗಿದೆ. ಆರೋಪಿ ಮೌಲ್ವಿ ಸೊಹೆಲ್ ಅಬುಬಕರ್ ತಿಮೋಲ್ ಎಂಬಾತ ಹಿಂದಿ ಟಿವಿ ಸುದ್ದಿ ವಾಹಿನಿಯ ಮುಖ್ಯ ಸಂಪಾದಕ, ಬಿಜೆಪಿಯ ತೆಲಂಗಾಣ … Continued

ಲೋಕಸಭೆ ಚುನಾವಣೆ: ಮತದಾನಕ್ಕೂ ಮುನ್ನವೇ ಗೆಲುವು ಸಾಧಿಸಿದ ಬಿಜೆಪಿ ಅಭ್ಯರ್ಥಿ…!

ಸೂರತ್‌ : ಕಾಂಗ್ರೆಸ್ ಅಭ್ಯರ್ಥಿಯನ್ನು ಚುನಾವಣಾಧಿಕಾರಿ ಅನರ್ಹಗೊಳಿಸಿದ್ದರಿಂದ ಮತ್ತು ಪಕ್ಷೇತರ ಅಭ್ಯರ್ಥಿಗಳು ತಮ್ಮ ನಾಮಪತ್ರಗಳನ್ನು ಹಿಂಪಡೆದ ನಂತರ ಗುಜರಾತಿನ ಸೂರತ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸೋಮವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮೇ 7 ರಂದು ನಡೆಯಲಿರುವ ಲೋಕಸಭೆ ಚುನಾವಣೆಯ ಎರಡನೇ ಹಂತದ ಮತದಾನಕ್ಕೆ ಎರಡು ವಾರಗಳ ಮೊದಲು ಮುಖೇಶ ದಲಾಲ್ ಅವರನ್ನು ವಿಜಯಿ ಎಂದು ಘೋಷಿಸಲಾಯಿತು. … Continued