ಬಂಕಿಪುರದಲ್ಲಿ ಪ್ರಶಾಂತ ಕಿಶೋರ ಐತಿಹಾಸಿಕ ಗೆಲುವು : ಬಿಜೆಪಿ ಅಧ್ಯಕ್ಷರ ತವರು ಕ್ಷೇತ್ರದಲ್ಲೇ ಅದರ ಭದ್ರಕೋಟೆ ಭೇದಿಸಿದ್ದು ಹೇಗೆ ?

ಭಾರತದ ಅತ್ಯಂತ ಬೇಡಿಕೆಯ ರಾಜಕೀಯ ತಂತ್ರಜ್ಞರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದ ಜನ ಸುರಾಜ್ ಸಂಸ್ಥಾಪಕ ಪ್ರಶಾಂತ ಕಿಶೋರ ಅವರು, ಇದೀಗ ರಾಜಕೀಯ ರಣತಂತ್ರ ರೂಪಿಸುವ ವ್ಯಕ್ತಿಯಿಂದ ನೇರವಾಗಿ ಚುನಾವಣಾ ಕಣಕ್ಕಿಳಿದು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಬಿಜೆಪಿಯು ಸುಮಾರು ಮೂರು ದಶಕಗಳಿಂದ ತನ್ನ ಭದ್ರಕೋಟೆಯಾಗಿ ಉಳಿಸಿಕೊಂಡಿದ್ದ ಬಂಕಿಪುರ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಿದ ಪ್ರಶಾಂತ ಕಿಶೋರ, ಬಿಜೆಪಿ ರಾಷ್ಟ್ರೀಯ … Continued

ಬಿಹಾರ ಚುನಾವಣೆ | ಜನ್ ಸುರಾಜ್ ಪಕ್ಷದ ಬೆಂಬಲಿಗನ ಕೊಲೆ ಪ್ರಕರಣ ; ಜೆಡಿಯು ಅಭ್ಯರ್ಥಿ ಅನಂತ ಸಿಂಗ್ ಬಂಧನ

 ಪಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ ಕುಮಾರ ಅವರ ಜೆಡಿಯು (JD(U)) ಪಕ್ಷದಿಂದ ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿರುವ ಮಾಜಿ ಶಾಸಕ ಅನಂತ ಸಿಂಗ್ ಅವರನ್ನು ಭಾನುವಾರ ಮುಂಜಾನೆ ಬಂಧಿಸಲಾಗಿದೆ. ಜನ ಸುರಾಜ್ ಪಕ್ಷದ ಬೆಂಬಲಿಗ ದುಲಾರ್ ಚಂದ ಯಾದವ್ ಅವರ ಕೊಲೆಗೆ ಸಂಬಂಧಿಸಿದಂತೆ ಈ ಬಂಧನವಾಗಿದೆ. ಯಾದವ್ ಅವರು ಈ ಹಿಂದೆ ಆರ್‌ಜೆಡಿ (RJD) … Continued

ಬಿಹಾರ ಚುನಾವಣೆ 2025 | ಸಿ ವೋಟರ್‌ ಸಮೀಕ್ಷೆ : ಎನ್‌ ಡಿಎ-ಮಹಾ ಮೈತ್ರಿಕೂಟದ ನಡುವೆ ನಿಕಟ ಸ್ಪರ್ಧೆ, ಜನಪ್ರಿಯ ಸಿಎಂ ಅಭ್ಯರ್ಥಿ ಯಾರು…?

ವಿಧಾನಸಭೆ ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ಬಿಹಾರದ ಚುನಾವಣಾ ರಾಜಕೀಯವು ಉತ್ತುಂಗದಲ್ಲಿದೆ. ಎನ್‌ಡಿಎ (NDA) ಮತ್ತು ಆರ್‌ಜೆಡಿ ನೇತೃತ್ವದ ಮಹಾ ಮೈತ್ರಿಕೂಟದ ಎರಡೂ ಪಕ್ಷಗಳಲ್ಲಿ ಸೀಟು ಹಂಚಿಕೆಯ ಬಗ್ಗೆ ಭಿನ್ನಾಭಿಪ್ರಾಯಗಳು ಬೆಳೆಯುತ್ತಿವೆ. ದೆಹಲಿಯಿಂದ ಪಾಟ್ನಾದವರೆಗೆ ಸಭೆಗಳು ನಡೆಯುತ್ತಿವೆ, ಆದರೆ ಎರಡೂ ಮೈತ್ರಿಕೂಟಗಳು ಯಾವುದೇ ಅಂತಿಮ ನಿರ್ಧಾರಕ್ಕೆ ಬಂದಿಲ್ಲ. ಏತನ್ಮಧ್ಯೆ, ನಾಯಕರ ಪಕ್ಷಾಂತರವೂ ತೀವ್ರಗೊಂಡಿದೆ. ಪ್ರಶಾಂತ ಕಿಶೋರ ಫ್ಯಾಕ್ಟರ್‌…. … Continued