ಪ್ರಧಾನಿಯಾದ ಬಳಿಕ ಮೊದಲ ಬಾರಿಗೆ ಆರ್‌ ಎಸ್‌ಎಸ್‌ ಕಚೇರಿಗೆ ಮೋದಿ ಭೇಟಿ; ಸಂಘದ ಸಂಸ್ಥಾಪಕರಿಗೆ ಪುಷ್ಪ ನಮನ

ನಾಗ್ಪುರ : ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಅವರು ಭಾನುವಾರ ನಾಗ್ಪುರದ ಡಾ.ಹೆಡಗೆವಾರ ಸ್ಮೃತಿ ಮಂದಿರಕ್ಕೆ ಭೇಟಿ ನೀಡಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಸಂಸ್ಥಾಪಕ ಕೇಶವ ಬಲಿರಾಮ ಹೆಡಗೆವಾರ ಮತ್ತು ಮಶಧವ ರಾವ್‌ ಗೋಳ್ವಾಲ್ಕರ್ ಅವರ ಸ್ಮಾರಕಗಳಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಆರ್‌ಎಸ್‌ಎಸ್‌ನ ಆಡಳಿತ ಕೇಂದ್ರ ಕಚೇರಿಯಾದ ರೇಶಿಂಬಾಗ್‌ನಲ್ಲಿರುವ ಸ್ಮೃತಿ ಮಂದಿರಕ್ಕೆ ಮೋದಿ ಭೇಟಿ … Continued

ಕಾರು ಅಪಘಾತ: ಬಾಲಿವುಡ್‌ ನಟ ಸೋನು ಸೂದ್ ಪತ್ನಿಗೆ ಗಾಯ

ಮುಂಬೈ: ಬಾಲಿವುಡ್ ನಟ ಸೋನು ಸೂದ್ ಅವರ ಪತ್ನಿ ಸೋನಾಲಿ ಸೂದ್ ಮುಂಬೈ-ನಾಗ್ಪುರ ಹೆದ್ದಾರಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡಿದ್ದಾರೆ. ಸೋಮವಾರ ಅಪಘಾತ ಸಂಭವಿಸಿದೆ ಎಂದು ನಟನ ಆಪ್ತ ಮೂಲಗಳು ತಿಳಿಸಿವೆ. ವರದಿಗಳು ಪ್ರಕಾರ, ಕಾರು ಟ್ರಕ್‌ಗೆ ಡಿಕ್ಕಿ ಹೊಡೆದಾಗ ಕಾರಿನಲ್ಲಿದ್ದ ಸೋನಾಲಿ ಸೂದ್, ಅವರ ಸಹೋದರಿಯ ಮಗ ಮತ್ತು ಮತ್ತೊಬ್ಬ ಸಹೋದರಿ ಎಂದು ಹೇಳಲಾಗಿದೆ. ಸೋನಾಲಿ … Continued

‘ಸಾವಿನ ನಂತರ ಏನಾಗುತ್ತದೆ’ ಎಂದು ಆನ್‌ಲೈನ್‌ ನಲ್ಲಿ ಸರ್ಚ್‌ ಮಾಡಿದ ನಂತರ ಕತ್ತು ಸೀಳಿಕೊಂಡು ಆತ್ಮಹತ್ಯೆ ಮಾಡಿಕೊಂಡ ಅಪ್ರಾಪ್ತ ವಿದ್ಯಾರ್ಥಿನಿ…!

ನಾಗ್ಪುರ: ಮಹಾರಾಷ್ಟ್ರದ ನಾಗ್ಪುರ ನಗರದಲ್ಲಿ 17 ವರ್ಷದ ಹುಡುಗಿಯೊಬ್ಬಳು “ಸಾವಿನ ನಂತರ ಏನಾಗುತ್ತದೆ” ಎಂದು ಆನ್‌ಲೈನ್‌ನಲ್ಲಿ ಸರ್ಚ್‌ ಮಾಡಿದ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಅಪ್ರಾಪ್ತ ಹುಡುಗಿ, ಖಾಸಗಿ ಶಾಲೆಯ 12 ನೇ ತರಗತಿ ವಿದ್ಯಾರ್ಥಿನಿ ಮತ್ತು ನಾಗ್ಪುರದ ಆರ್‌ಬಿಐನಲ್ಲಿ ಪ್ರಾದೇಶಿಕ ನಿರ್ದೇಶಕರ ಏಕೈಕ ಮಗಳು. ಕುಟುಂಬವು ನಾಗ್ಪುರದ ಛತ್ರಪತಿ ನಗರ ಪ್ರದೇಶದಲ್ಲಿ … Continued

ಪರೀಕ್ಷೆಯಲ್ಲಿ ಫೇಲ್‌ ; ಕೋರ್ಸ್‌ ಬದಲಾಯಿಸಲು ಹೇಳಿದ್ದಕ್ಕೆ ತಂದೆ-ತಾಯಿಯನ್ನೇ ಕೊಲೆ ಮಾಡಿದ ವಿದ್ಯಾರ್ಥಿ…!

ನಾಗ್ಪುರ: ಇಲ್ಲಿನ ಖಾಸಗಿ ಇಂಜಿನಿಯರಿಂಗ್ ಕಾಲೇಜೊಂದರ 25 ವರ್ಷದ ವಿದ್ಯಾರ್ಥಿಯೊಬ್ಬ ತನ್ನ ವಿದ್ಯಾಭ್ಯಾಸ ಮತ್ತು ಕೋರ್ಸ್‌ ವಿಚಾರದಲ್ಲಿ ತಂದೆ-ತಾಯಿಯ ಜೊತೆ ಉಂಟಾದ ಭಿನ್ನಾಭಿಪ್ರಾಯದ ನಂತರ ಅವರನ್ನು ಕೊಂದಿದ್ದಾನೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ಪೋಷಕರನ್ನು ಕೊಂದ ನಂತರ, ಭೀಕರ ಹತ್ಯೆಗಳ ಬಗ್ಗೆ ತಿಳಿಯದ ತನ್ನ ಸಹೋದರಿಯೊಂದಿಗೆ ಆತ ಚಿಕ್ಕಪ್ಪನ ಮನೆಗೆ ತೆರಳಿದ್ದ ಎಂದು ಅವರು ಹೇಳಿದ್ದಾರೆ. … Continued

ನಾಗ್ಪುರ ಕಾರ್ಖಾನೆಯಲ್ಲಿ ಸ್ಫೋಟ: 9 ಮಂದಿ ಸಾವು, ಹಲವರಿಗೆ ಗಾಯ

ನಾಗ್ಪುರ : ಮಹಾರಾಷ್ಟ್ರದ ನಾಗ್ಪುರ ಜಿಲ್ಲೆಯ ಸ್ಫೋಟಕ ತಯಾರಿಕಾ ಕಂಪನಿಯಲ್ಲಿ ಭಾನುವಾರ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ ಒಂಬತ್ತು ಜನರು ಸಾವಿಗೀಡಾಗಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ನಾಗ್ಪುರದ ಬಜಾರ್‌ಗಾಂವ್ ಪ್ರದೇಶದಲ್ಲಿ ಸೋಲಾರ್ ಇಂಡಸ್ಟ್ರೀಸ್‌ನ ಕಾಸ್ಟ್ ಬೂಸ್ಟರ್ ಘಟಕದಲ್ಲಿ ಬೆಳಿಗ್ಗೆ 9 ಗಂಟೆಗೆ ಸ್ಫೋಟ ಸಂಭವಿಸಿದೆ. ಸೋಲಾರ್ ಇಂಡಸ್ಟ್ರೀಸ್ ಕಾರ್ಖಾನೆಯ ಪ್ರವೇಶ ದ್ವಾರದಲ್ಲಿ ಹಲವಾರು ಆಂಬ್ಯುಲೆನ್ಸ್‌ಗಳನ್ನು … Continued

ಹೃದಯಾಘಾತದ ನಂತರ 1 ತಾಸು ಕಾಲ ಹೃದಯದ ಬಡಿತ ನಿಂತು ಹೋಗಿತ್ತು… ಆದರೂ ಬದುಕುಳಿದ ಈ ವ್ಯಕ್ತಿ…! ಈ ಪವಾಡ ಹೇಗಾಯ್ತು..?

ನಾಗಪುರ : ಮಹಾರಾಷ್ಟ್ರದ ನಾಗಪುರದ ವ್ಯಕ್ತಿಯೊಬ್ಬರಿಗೆ ಸುಮಾರು ಒಂದು ಗಂಟೆಗಳ ಕಾಲ ಹೃದಯ ಬಡಿತ ನಿಂತು ಹೋಗಿದ್ದರೂ ಅವರು ಜೀವಂತವಾಗಿ ಬದುಕುಳಿದಿದ್ದಾರೆ….! ಈ ಪವಾಡ ಸದೃಶ ಘಟನೆಗೆ ವೈದ್ಯರೇ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, 32 ವರ್ಷದ ರೋಗಿಯು ಆಗಸ್ಟ್ 25 ರಂದು ಹೃದಯಾಘಾತಕ್ಕೊಳಗಾದ ನಂತರ ಅವರನ್ನು ಆಸ್ಪತ್ರೆಗೆ ಕರೆತರಲಾಯಿತು. ಅವರು … Continued

ಸಚಿವ ನಿತಿನ್ ಗಡ್ಕರಿಗೆ ಬೆದರಿಕೆ ಕರೆ : ಬೆಳಗಾವಿಯಿಂದ ಶಂಕಿತನನ್ನು ಕರೆದೊಯ್ದ ನಾಗ್ಪುರ ಪೊಲೀಸರು

ಬೆಳಗಾವಿ :ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಕಚೇರಿಗೆ ಎರಡು ಸಲ ಬೆದರಿಕೆ ಹಾಕಿದ್ದ ವ್ಯಕ್ತಿಯನ್ನು ನಾಗ್ಪುರ ಪೊಲೀಸರು ಬೆಳಗಾವಿ ಹಿಂಡಲಗಾ ಕೇಂದ್ರ ಜೈಲಿನಿಂದ ತಮ್ಮ ವಶಕ್ಕೆ ಪಡೆದು ನಾಗ್ಪುರಕ್ಕೆ ಕರೆದೊಯ್ದಿದ್ದಾರೆ. ಕೇಂದ್ರ ಸಚಿವ ಗಡ್ಕರಿಗೆ ಬೆದರಿಕೆ ಹಾಕಿದ್ದ ಸಂಬಂಧ ಜಯೇಶ್ ಪೂಜಾರಿ ಉರುಫ್‌ ಜಯೇಶ ಕಾಂತ ಎಂಬವನ ವಿರುದ್ಧ ಪ್ರಕರಣ ದಾಖಲಾಗಿದ್ದು ಇಂದು ಮಂಗಳವಾರ … Continued

ಧರ್ಮಾಧಾರಿತ ಜನಸಂಖ್ಯೆ ಅಸಮತೋಲನ ಕಡೆಗಣಿಸುವ ವಿಚಾರವಲ್ಲ, ಎಲ್ಲ ಧರ್ಮಕ್ಕೆ ಅನ್ವಯವಾಗುವ ಜನಸಂಖ್ಯಾ ನೀತಿ ಜಾರಿ ಮಾಡಿ : ಮೋಹನ​ ಭಾಗವತ್​

ನಾಗ್ಪುರ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಮೋಹನ ಭಾಗವತ್ ಅವರು ಜನಸಂಖ್ಯೆಯ ಅಸಮತೋಲನದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ ಮತ್ತು ಇತಿಹಾಸದಲ್ಲಿ ಜನಸಂಖ್ಯೆಯ ಅಸಮತೋಲನದ ತೀವ್ರ ಪರಿಣಾಮಗಳನ್ನು ಭಾರತ ಅನುಭವಿಸಿದೆ ಎಂದು ಹೇಳಿದ್ದಾರೆ. ಜನಸಂಖ್ಯೆಯ ಏರಿಕೆಯನ್ನು ತಡೆಯಲು ಸಮಗ್ರ ನೀತಿಗೆ ಕರೆ ನೀಡಿದ ಅವರು, ಸಮಾಜದ ಎಲ್ಲಾ ವರ್ಗದವರು ಅದನ್ನು ಪಾಲಿಸುವ ಅಗತ್ಯವನ್ನು ಒತ್ತಿ ಹೇಳಿದ್ದಾರೆ. 97 … Continued