ಹೆಂಡತಿಯ ಮೇಲೆ ಸೇಡು ತೀರಿಸಿಕೊಳ್ಳಲು ಟ್ರಾಫಿಕ್ ನಿಯಮ ಪದೇ ಪದೇ ಉಲ್ಲಂಘಿಸಿ ಕಿರುಕುಳ ನೀಡಿದ ಗಂಡ….!

ಪತಿ ಪತ್ನಿಯರ ಜಗಳ ವಿಕೋಪಕ್ಕೆ ಹೋಗಿ ಪತ್ನಿ ನಂತರ ತನ್ನ ತವರು ಮನೆಗೆ ಹೋಗಿದ್ದಳು. ಜಗಳ ವಿಕೋಪಕ್ಕೆ ಹೋದ ನಂತರ ಅವರಿಬ್ಬರ ಸಂಬಂಧ ಹಳಸಿ ಅದು ವಿಚ್ಛೇದನದ ವರೆಗೆ ಬಂದು ನಿಂತಿತು. ವಿಚ್ಛೇದನ ಪ್ರಕರಣ ನ್ಯಾಯಾಲಯದ ಮುಂದೆ ಇದ್ದು, ಈ ವೇಳೆ ಪತಿ ಮಹಾಶಯ ತನ್ನ ಪತ್ನಿಗೆ ಕಿರುಕುಳ ನೀಡಲು ಅಸಾಮಾನ್ಯ ಮಾರ್ವನ್ನು ಅನುಸರಿಸಿದ್ದಾನೆ. ಪತ್ನಿಯ … Continued

ವೀಡಿಯೊ : ಶಾಲೆಗೆ ತೆರಳುತ್ತಿದ್ದ ಶಿಕ್ಷಕನ ಅಪಹರಿಸಿ ಗನ್ ತೋರಿಸಿ ಯುವತಿ ಜೊತೆ ಬಲವಂತದ ಮದುವೆ..!

ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರನ್ನು ಅಪಹರಿಸಿ ‘ಪಕಡುವಾ ವಿವಾಹ’ ಎಂಬ ಪದ್ಧತಿಯಂತೆ ಗನ್‌ ತೋರಿಸಿ ಯುವತಿಯೊಬ್ಬಳ ಜೊತೆ ಬಲವಂತವಾಗಿ ಮದುವೆ ಮಾಡಿದ ಘಟನೆ ಬಿಹಾರದ ಬೇಗುಸರಾಯ್ ಎಂಬಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಗಂಡಸರ ಗುಂಪೊಂದು ತನ್ನನ್ನು ಅಪಹರಿಸಿ ಬಲವಂತವಾಗಿ ಮದುವೆ ಮಾಡಿದ್ದಾರೆ ಎಂದು ಶಿಕ್ಷಕ ಅವ್ನಿಶ್ ಆರೋಪಿಸಿದ್ದಾರೆ. ಆದರೆ ವಧು ಗುಂಜನ್ ಎಂಬವಳು ನಾವಿಬ್ಬರು ನಾಲ್ಕು ವರ್ಷಗಳಿಂದ … Continued

ವೀಡಿಯೊ..| ಬ್ಯಾಂಕಿನ ಮಹಿಳಾ ಮ್ಯಾನೇಜರ್‌ ಜೊತೆ ದುರ್ವರ್ತನೆ; ಬೆದರಿಕೆ ಹಾಕಿ-ಆಕೆಯ ಮೊಬೈಲ್ ಒಡೆದು ಹಾಕಿದ ವ್ಯಕ್ತಿಯ ಬಂಧನ

ಪಾಟ್ನಾ: ಮಹಿಳಾ ಬ್ಯಾಂಕ್ ಮ್ಯಾನೇಜರ್ ಜೊತೆ ವ್ಯಕ್ತಿಯೊಬ್ಬ ಅಸಭ್ಯವಾಗಿ ವರ್ತಿಸಿರುವ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಆಘಾತಕಾರಿ ಘಟನೆ ಬಿಹಾರದ ಪಾಟ್ನಾದ ಕೆನರಾ ಬ್ಯಾಂಕ್ ಶಾಖೆಯೊಂದರಲ್ಲಿ ನಡೆದಿದ್ದು ಈ ಘಟನೆಯದ್ದು ಎನ್ನಲಾದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Viral Video) ಆಗಿದೆ. ತಾನು ತೋರಿದ ದುರ್ವರ್ತನೆ ಕೃತ್ಯ ಸೆರೆ ಹಿಡಿಯುತ್ತಿದ್ದರು ಎನ್ನುವ ಕಾರಣಕ್ಕೆ ವ್ಯಕ್ತಿಯು ಮಹಿಳಾ … Continued

ಪಾಟ್ನಾ ರೈಲ್ವೆ ನಿಲ್ದಾಣದ ಸಮೀಪದ ಹೊಟೇಲ್‌ ನಲ್ಲಿ ಬೆಂಕಿ ಅವಘಡ : 6 ಮಂದಿ ಸಾವು

ಪಾಟ್ನಾ : ಪಾಟ್ನಾ ಜಂಕ್ಷನ್ ರೈಲ್ವೆ ನಿಲ್ದಾಣದ ಸಮೀಪವಿರುವ ಹೊಟೇಲ್‌ನಲ್ಲಿ ಗುರುವಾರ ಸಂಭವಿಸಿದ ಬೆಂಕಿ ಅವಘಡಲ್ಲಿ ಕನಿಷ್ಠ ಆರು ಜನರು ಸಾವಿಗೀಡಾಗಿದ್ದಾರೆ ಮತ್ತು ಅನೇಕರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೇಲ್ನೋಟಕ್ಕೆ, ಸಿಲಿಂಡರ್ ಸ್ಫೋಟದಿಂದ ಬೆಂಕಿ ಹೊತ್ತಿಕೊಂಡಂತೆ ತೋರುತ್ತಿದೆ ಎಂದು ಅಗ್ನಿಶಾಮಕ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ, ಬೆಂಕಿಯನ್ನು ನಂದಿಸಲಾಗಿದೆ. ಮೃತರಲ್ಲಿ ಮೂವರು ಪುರುಷರು ಹಾಗೂ ಮೂವರು … Continued

ಸಿಎಂ ನಿತೀಶಕುಮಾರ ಬೆಂಗಾವಲು ವಾಹನ ಹೋಗಲು ಗಂಭೀರ ಸ್ಥಿಯಲ್ಲಿದ್ದ ಮಗು ಒಯ್ಯುತ್ತಿದ್ದ ಆಂಬ್ಯುಲೆನ್ಸ್‌ ತಡೆದು ನಿಲ್ಲಿಸಿದ ಪೊಲೀಸರು: ವೀಡಿಯೊ

ಪಾಟ್ನಾ: ಶುಕ್ರವಾರ, ಬಿಹಾರ ಮುಖ್ಯಮಂತ್ರಿ ನಿತೀಶಕುಮಾರ ಅವರ ಬೆಂಗಾವಲು ವಾಹನಕ್ಕಾಗಿ ಪೊಲೀಸರು ಸುಮಾರು ಒಂದು ಗಂಟೆ ಕಾಲ ಆಂಬ್ಯುಲೆನ್ಸ್ ಅನ್ನು ತಡೆಹಿಡಿದ ಘಟನೆ ಘಟನೆ ಪಾಟ್ನಾ ಸಮೀಪದ ಫತುಹಾದಲ್ಲಿ ನಡೆದಿದೆ. ಭಾರೀ ಟ್ರಾಫಿಕ್‌ನಲ್ಲಿ ಸಿಲುಕಿದ್ದ ಆಂಬ್ಯುಲೆನ್ಸ್‌ನೊಳಗೆ ಮಹಿಳೆಯೊಬ್ಬರು ತನ್ನ ಮಗುವನ್ನು ಹಿಡಿದುಕೊಂಡಿರುವುದು ವೀಡಿಯೊದಲ್ಲಿ ಕಂಡುಬಂದಿದೆ. ಮಗು ತೀವ್ರ ಅನಾರೋಗ್ಯದಿಂದ ಬಳಲುತ್ತಿತ್ತು. ಮುಖ್ಯಮಂತ್ರಿಗಳ ಬೆಂಗಾವಲು ಪಡೆ ಹೊರಡುವವರೆಗೂ … Continued

ಮರಳು ಗಣಿಗಾರಿಕೆಗಾಗಿ ಎರಡು ಗುಂಪುಗಳ ಘರ್ಷಣೆ, ನಾಲ್ವರ ಸಾವು; ಮೃತ ದೇಹಗಳನ್ನೂ ತಮ್ಮೊಂದಿಗೆ ಹೊತ್ತೊಯ್ದ ಗುಂಪುಗಳು..!

ಪಾಟ್ನಾ: ಪಾಟ್ನಾದ ಬಿಹ್ತಾ ಪ್ರದೇಶದಲ್ಲಿ ಬುಧವಾರ ರಾತ್ರಿ ಎರಡು ಗುಂಪುಗಳ ನಡುವೆ ನಡೆದ ಹಿಂಸಾತ್ಮಕ ಘರ್ಷಣೆಯಲ್ಲಿ ನಾಲ್ವರು ಸಾವಿಗೀಡಾದ್ದಾರೆ ಎಂದು ವರದಿಯಾಗಿದೆ. ಬಿಹ್ತಾ ಪೊಲೀಸ್ ಠಾಣಾ ವ್ಯಾಪ್ತಿಯ ಅಮೀನಾಬಾದ್ ಗ್ರಾಮದ ಸೋನೆ ನದಿ ದಂಡೆಯಲ್ಲಿ ಮರಳು ಗಣಿಗಾರಿಕೆ ವಿಚಾರವಾಗಿ ಘರ್ಷಣೆ ನಡೆದಿದೆ. ನಿರ್ಮಾಣ ಉದ್ದೇಶಗಳಿಗಾಗಿ ಸೋನೆ ನದಿಯ ಮರಳನ್ನು ಉತ್ತಮ ಗುಣಮಟ್ಟವೆಂದು ಪರಿಗಣಿಸಲಾಗಿದೆ. ಆದ್ದರಿಂದ, ಬಿಹಾರ … Continued

ಬಿಟ್ಟುಹೋಗಿದ್ದಕ್ಕೆ ಆತ ವಿಷಾದಿಸುತ್ತಿರಬೇಕು…: ಸಿಬಿಎಸ್‌ಇ 10ನೇ ತರಗತಿಯಲ್ಲಿ 99.4% ಗಳಿಸಿದ ತಾಯಿಯಿಲ್ಲದ-ತಂದೆ ಬಿಟ್ಟುಹೋದ ವಿದ್ಯಾರ್ಥಿನಿ…!

ಪಾಟ್ನಾ: ಇತ್ತೀಚೆಗೆ ಪ್ರಕಟಿಸಲಾದ ಸಿಬಿಎಸ್‌ಇ (CBSE) 10ನೇ ತರಗತಿಯ ಬೋರ್ಡ್ ಫಲಿತಾಂಶದಲ್ಲಿ 99.4% ಗಳಿಸಿದ ಪಾಟ್ನಾದ ಹುಡುಗಿಯ ಕಥೆಯನ್ನು ಬಿಜೆಪಿ ಸಂಸದ ವರುಣ್ ಗಾಂಧಿ ಅವರು ಬೆಳಕಿಗೆ ತಂದಿದ್ದಾರೆ. ತಾಯಿಯ ಮರಣದ ನಂತರ ಶ್ರೀಜಾಳನ್ನು ಆಕೆಯ ತಂದೆ ತೊರೆದಿದ್ದಾರೆ. ನಂತರ ಬಾಲಕಿಯನ್ನು ತನ್ನ ತಾಯಿಯ ಅಜ್ಜಿಯ ಮನೆಗೆ ಕರೆದೊಯ್ಯಲಾಯಿತು. ವರುಣ್‌ ಗಾಂಧಿ ಅವರು ಹುಡುಗಿ ಮತ್ತು … Continued