ಬಾಂಗ್ಲಾದೇಶದಲ್ಲಿ ಭೀಕರ ಕೃತ್ಯ : ಅಂಗಡಿಯಲ್ಲಿ ಮಲಗಿದ್ದ ಹಿಂದೂ ಯುವಕನನ್ನು ಜೀವಂತವಾಗಿ ದಹಿಸಿದ ದುಷ್ಕರ್ಮಿಗಳು

ಢಾಕಾ : ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲಿನ ದೌರ್ಜನ್ಯ ಮುಂದುವರಿದಿದ್ದು, 23 ವರ್ಷದ ಹಿಂದೂ ಯುವಕ ಚಂಚಲ್ ಭೌಮಿಕ್ ಎಂಬುವವರನ್ನು ಅತ್ಯಂತ ಕ್ರೂರವಾಗಿ ಜೀವಂತವಾಗಿ ಸುಟ್ಟು ಕೊಲ್ಲಲಾಗಿದೆ ಎಂದು ವರದಿಯಾಗಿದೆ.  ಜನವರಿ 23ರ ಶುಕ್ರವಾರ ತಡರಾತ್ರಿ ಈ ಭಯಾನಕ ಘಟನೆ ನಡೆದಿದೆ. ನರಸಿಂಗಡಿಯ ಗ್ಯಾರೇಜ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಚಂಚಲ್, ರಾತ್ರಿ ಅಲ್ಲಿಯೇ ಮಲಗಿದ್ದರು. ಈ … Continued

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ 6 ತಿಂಗಳಲ್ಲಿ 71 ಧರ್ಮನಿಂದನೆ ಪ್ರಕರಣ ದಾಖಲು

ಢಾಕಾ/ನವದೆಹಲಿ: ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂ ಸಮುದಾಯದ ವಿರುದ್ಧದ ವ್ಯವಸ್ಥಿತ ದಾಳಿಗಳು ಮುಂದುವರಿದಿವೆ. 2025ರ ಜೂನ್‌ನಿಂದ ಡಿಸೆಂಬರ್ ನಡುವಿನ ಕೇವಲ ಆರು ತಿಂಗಳ ಅವಧಿಯಲ್ಲಿ ಹಿಂದೂಗಳನ್ನು ಗುರಿಯಾಗಿಸಿಕೊಂಡು ಕನಿಷ್ಠ 71 ಧರ್ಮ ನಿಂದನೆ(Blasphemy) ಪ್ರಕರಣಗಳು ವರದಿಯಾಗಿವೆ ಎಂದು ‘ಹ್ಯೂಮನ್ ರೈಟ್ಸ್ ಕಾಂಗ್ರೆಸ್ ಫಾರ್ ಬಾಂಗ್ಲಾದೇಶ ಮೈನಾರಿಟೀಸ್’ (HRCBM) ತನ್ನ ಇತ್ತೀಚಿನ ವರದಿಯಲ್ಲಿ ಆಘಾತಕಾರಿ ಮಾಹಿತಿ ನೀಡಿದೆ. ರಂಗಪುರ, … Continued

ಬಾಂಗ್ಲಾದೇಶದಲ್ಲಿ ಅರಾಜಕತೆ: ಖ್ಯಾತ ಗಾಯಕ ಜೇಮ್ಸ್ ಸಂಗೀತ ಕಾರ್ಯಕ್ರಮದ ಮೇಲೆ ಗುಂಪಿನಿಂದ ದಾಳಿ

ಫರೀದಪುರ: ಬಾಂಗ್ಲಾದೇಶದಲ್ಲಿ ಸಾಂಸ್ಕೃತಿಕ ಚಟುವಟಿಕೆಗಳ ಮೇಲೆ ನಿರಂತರ ದಾಳಿಗಳು ನಡೆಯುತ್ತಿದ್ದು, ಇದೀಗ ಖ್ಯಾತ ರಾಕ್ ಸಂಗೀತಗಾರ ನಗರ ಬಾಲ್ ಜೇಮ್ಸ್ (Nagar Baul James) ಅವರ ಸಂಗೀತ ಕಾರ್ಯಕ್ರಮದ ಮೇಲೆ ಉದ್ರಿಕ್ತ ಗುಂಪೊಂದು ದಾಳಿ ಮಾಡಿದೆ. ಈ ಘಟನೆಯು ದೇಶದಲ್ಲಿ ಕಲಾವಿದರ ಸುರಕ್ಷತೆ ಮತ್ತು ಬೆಳೆಯುತ್ತಿರುವ ಅಸಹಿಷ್ಣುತೆಯ ಬಗ್ಗೆ ಆತಂಕ ಮೂಡಿಸಿದೆ. ಫರಿದಪುರದ ಶಾಲಾ ಆವರಣವೊಂದರಲ್ಲಿ … Continued

ಪ್ರತೀಕಾರದ ಹತ್ಯೆಗಳು ; ಎರಡು ದಿನಗಳಲ್ಲಿ ಸಿರಿಯಾದಲ್ಲಿ1000 ಕ್ಕೂ ಹೆಚ್ಚು ಜನರು ಸಾವು

ಸಿರಿಯಾದ ಭದ್ರತಾ ಪಡೆಗಳು ಮತ್ತು ಪದಚ್ಯುತ ಅಧ್ಯಕ್ಷ ಬಶರ್ ಅಸ್ಸಾದ್ ಅವರ ಬೆಂಬಲಿಗರ ನಡುವಿನ ಎರಡು ದಿನಗಳ ಘರ್ಷಣೆಗಳಲ್ಲಿ ಚ1,000 ಕ್ಕಿಂತ ಹೆಚ್ಚಿನ ಜನರು ಸಾವಿಗೀಡಾಗಿದ್ದಾರೆ ಎಂದು ಯುದ್ಧ ಮೇಲ್ವಿಚಾರಣಾ ಗುಂಪು ಶನಿವಾರ ಹೇಳಿದೆ. ಇದು 14 ವರ್ಷಗಳ ಹಿಂದೆ ಸಿರಿಯಾದಲ್ಲಿ ಸಂಘರ್ಷ ಪ್ರಾರಂಭವಾದ ನಂತರದ ಮಾರಕ ಹಿಂಸಾಚಾರದ ಕೃತ್ಯಗಳಲ್ಲಿ ಒಂದಾಗಿದೆ. ಬ್ರಿಟನ್ ಮೂಲದ ಸಿರಿಯನ್ … Continued

ಮಸೀದಿಯ ಸರ್ವೆಗೆ ವಿರೋಧ ; ಘರ್ಷಣೆಯಲ್ಲಿ ಮೂವರು ಸಾವು

ಲಕ್ನೋ: ಉತ್ತರ ಪ್ರದೇಶದ ಸಂಭಾಲ್‌ನಲ್ಲಿ ಭಾನುವಾರ ಮಸೀದಿಯೊಂದರ ಸಮೀಕ್ಷೆಗೆ ವಿರೋಧಿಸಿದ ಗುಂಪೊಂದು ಪೊಲೀಸರೊಂದಿಗೆ ನಡೆಸಿದ ಹಿಂಸಾತ್ಮಕ ಘರ್ಷಣೆಯಲ್ಲಿ ಮೂವರು ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. ಮೊಘಲರು ಮಸೀದಿ ನಿರ್ಮಿಸಲು ದೇವಾಲಯವನ್ನು ಕೆಡವಿದ್ದಾರೆ ಎಂಬ ದೂರಿನ ಆಧಾರದ ಮೇಲೆ ನ್ಯಾಯಾಲಯವು ಸಮೀಕ್ಷೆ ನಡೆಸಲು ನೀಡಿದ ಆದೇಶದ ಮೇರೆಗೆ ಮಸೀದಿ ಸಮೀಕ್ಷೆಯನ್ನು ಪ್ರಾರಂಭಿಸಲಾಯಿತು. ಸಮೀಕ್ಷಾ ತಂಡ ಆಗಮಿಸುತ್ತಿದ್ದಂತೆ ನೂರಾರು ಸಂಖ್ಯೆಯಲ್ಲಿ … Continued

ತಮಿಳುನಾಡು ದ್ವಿತೀಯ ಪಿಯು ವಿದ್ಯಾರ್ಥಿನಿ ಸಾವು ಪ್ರಕರಣ: ಎರಡನೇ ಶವಪರೀಕ್ಷೆ ನಡೆಸಲು ಮದ್ರಾಸ್ ಹೈಕೋರ್ಟ್ ಆದೇಶ

ಚೆನ್ನೈ: ತಮಿಳುನಾಡಿನ ಸೇಲಂ ಜಿಲ್ಲೆಯ ಕಲ್ಲಕುರಿಚಿಯ ತನ್ನ ಶಾಲೆಯಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡನೇ ಮರಣೋತ್ತರ ಪರೀಕ್ಷೆ ನಡೆಸಲು ಮದ್ರಾಸ್ ಹೈಕೋರ್ಟ್ ಆದೇಶಿಸಿದೆ. ಕಾರ್ಯವಿಧಾನದ ಸಮಯದಲ್ಲಿ ಹುಡುಗಿಯ ತಂದೆಗೆ ಹಾಜರಿರಲು ಅವಕಾಶ ನೀಡಬೇಕೆಂದು ನ್ಯಾಯಾಲಯ ಆದೇಶಿಸಿದೆ. ಈ ಘಟನೆಯು ಜಿಲ್ಲೆಯಲ್ಲಿ ಹಿಂಸಾತ್ಮಕ ಪ್ರತಿಭಟನೆಗಳಿಗೆ ಕಾರಣವಾಯಿತು, ಪ್ರತಿಭಟನಾಕಾರರು ಮೂರು ಪೊಲೀಸ್ ವಾಹನಗಳು … Continued

ಕೆಂಪು ಕೋಟೆಯಲ್ಲಿ ಜನಸಂದಣಿ ಸಮಾಧಾನಿಸಲು ಯತ್ನಿಸುತ್ತಿದ್ದೆ ಎಂದ ಸಿಧು, ನೈಜ ಚಿತ್ರಣ ‌ ಮುಂದೆ ಇಡಿ ಎಂದು ಪೊಲೀಸರಿಗೆ ಸೂಚಿಸಿದ ಕೋರ್ಟ್

ತನಿಖಾ ಅಧಿಕಾರಿ “ಆರೋಪಿಗಳ ತಪ್ಪನ್ನು ಸಾಬೀತುಪಡಿಸಲು ಮಾತ್ರ ಸಾಕ್ಷ್ಯಗಳನ್ನು ಸಂಗ್ರಹಿಸಬೇಕಾಗಿಲ್ಲ, ಬದಲಿಗೆ ಅವನು ನ್ಯಾಯಾಲಯದ ಮುಂದೆ ನಿಜವಾದ ಚಿತ್ರಣವನ್ನು ನೀಡಬೇಕಾಗಿದೆ  ಎಂದು ಹೇಳಿರುವ ದೆಹಲಿ ನ್ಯಾಯಾಲಯವು ದೆಹಲಿ ಪೊಲೀಸರಿಗೆ ತನಿಖೆಯನ್ನು “ನ್ಯಾಯಯುತ ಮತ್ತು ನಿಷ್ಪಕ್ಷಪಾತವಾಗಿ ನಡೆಸುವಂತೆ  ಸೂಚಿಸಿದೆ. ಗಣರಾಜ್ಯೋತ್ಸವದಂದು ಕೆಂಪು ಕೋಟೆಯ ಹಿಂಸಾಚಾರಕ್ಕೆ ಸಂಬಂಧಿಸಿದಂತೆ, ನಟ, ಕಾರ್ಯಕರ್ತ ದೀಪ್‌ ಸಿಧು ಅವರು ಜನವರಿ 26 ರಂದು … Continued

ರಾಜ ಭವನ ಚಲೋ ವೇಳೆ ಕೊಲ್ಕತ್ತಾದಲ್ಲಿ ಹಿಂಸಾಚಾರ

ಕೊಲ್ಕತ್ತ: ಎಡ ಪಕ್ಷಗಳ ವಿದ್ಯಾರ್ಥಿಗಳ ಸಂಘಟನೆ ಆಯೋಜಿಸಿದ್ದ ರಾಜಭವನ ಚಲೋ ಮೆರವಣಿಗೆಯಲ್ಲಿ  ಕೊಲ್ಕತ್ತಾದಲ್ಲಿ ಹಿಂಸಾಚಾರ ನಡೆದಿದೆ. ತೃಣಮೂಲ ಕಾಂಗ್ರೆಸ್ ಸರ್ಕಾರದ ನೀತಿಗಳನ್ನು ವಿರೋಧಿಸಿ ಯುವಕರಿಗೆ “ಉದ್ಯೋಗ” ನೀಡುವಂತೆ ಒತ್ತಾಯಿಸಲು ರಾಜಭವನ ಚಲೋ ಹಮ್ಮಿಕೊಳ್ಳಲಾಗಿತ್ತು.ಅಲ್ಲದೇ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಎದುರು ಕೆಂಪು ಕಾರ್ಡ್‌ ಪ್ರದರ್ಶಿಸುವುದು ಅವರ ಉದ್ದೇಶವಾಗಿತ್ತು. ಕೋಲ್ಕತ್ತದಡೊರಿನಾ ಕ್ರಾಸಿಂಗ್‌ನಲ್ಲಿ ಹಿಂಸಾಚಾರ ಆರಂಭಗೊಂಡ ನಂತರ ಪ್ರತಿಭಟನಾ ನಿರತರನ್ನು … Continued