ಕೆಎಸ್‌ಆರ್‌ಟಿಸಿ ಬಸ್ಸನ್ನೇ ಕದ್ದ ಈ ಐನಾತಿ ಕಳ್ಳರು..!

ತುಮಕೂರು: ಕೆಎಸ್‌ಆರ್‌ಟಿಸಿ ಬಸ್ಸನ್ನೇ ಖದೀಮರು ಕದ್ದಿರುವ ಘಟನೆಯೊಂದು ವರದಿಯಾಗಿದೆ. ತುಮಕೂರು ಜಿಲ್ಲೆಯ ಗುಬ್ಬಿ ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಗುಬ್ಬಿ ಬಸ್ ನಿಲ್ದಾಣದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಕದ್ದ ಕಳ್ಳರು, ಜನ್ನೇನಹಳ್ಳಿ ಎಂಬ ಗ್ರಾಮದ ಬಳಿ ಬಿಟ್ಟು ಹೋಗಿದ್ದಾರೆ. ಬಸ್‌ ಬಿಟ್ಟುಹೋಗುವ ಮೊದಲು ಕಳ್ಳರು ಎಡೆಯೂರು, ಕುಣಿಗಲ್, ಅಮೃತೂರು ಸುತ್ತಾಡಿ ಜನ್ನೆನಹಳ್ಳಿಗಳಲ್ಲಿ ಬಸ್‌ … Continued

ಕರ್ನಾಟಕದಲ್ಲಿ ಅಕ್ಟೋಬರ್‌ 21ರಿಂದ ಬಿಸಿಯೂಟ ಪುನರಾರಂಭ

ಬೆಂಗಳೂರು: ಕೋವಿಡ್ ಕಾರಣದಿಂದ ಸ್ಥಗಿತಗೊಳಿಸಿದ್ದ ಬಿಸಿಯೂಟ ಕಾರ್ಯಕ್ರಮವನ್ನು ಅಕ್ಟೋಬರ್ 21ರಿಂದ ಪುನರಾರಂಭಿಸಲಾಗುತ್ತಿದೆ. ಈ ಸಂಬಂಧ ಸರ್ಕಾರ ಆದೇಶ ಹೊರಡಿಸಿದ್ದು, 2021ರ ಅ.21ರಿಂದ ಮಧ್ಯಾಹ್ನದ ಬಿಸಿಯೂಟದ ಯೋಜನೆಯನ್ನು ಪುನರಾರಂಭಿಸಲು ಸೂಚನೆ ನೀಡಿದೆ. ಈ ಸಂಬಂಧ ಮುಂಜಾಗ್ರತಾ ಕ್ರಮಗಳನ್ನು ತುರ್ತಾಗಿ ಕೈಗೊಳ್ಳುವಂತೆ ಸರ್ಕಾರಿ, ಅನುದಾನಿತ ಶಾಲಾ ಮುಖ್ಯ ಶಿಕ್ಷಕರುಗಳಿಗೆ ಈ ಕೆಳಕಂಡ ಸೂಚನೆ ಕೊಡಲಾಗಿದೆ. ಶಾಲೆಗಳಲ್ಲಿ ಅಡುಗೆ ತಯಾರು … Continued

ಉತ್ತರಾಖಂಡ: ಭೋರ್ಗರೆವ ಪ್ರವಾಹದಲ್ಲಿ ಬಂಡೆಗಳ ಮಧ್ಯೆ ಸಿಲುಕಿದ್ದ ಕಾರಿಲ್ಲಿದ್ದವರ ರಕ್ಷಣೆ; ಸಾಹಸದ ವಿಡಿಯೋ ವೈರಲ್‌

ಡೆಹ್ರಾಡೂನ್‌:ಉತ್ತರಾಖಂಡದಲ್ಲಿ ಸುರಿಯುತ್ತಿರುವ ಮಳೆಗೆ 2 ದಿನದಲ್ಲಿ 17 ಜನರು ಮೃತಪಟ್ಟಿದ್ದಾರೆ. ಅನೇ ಕಡೆ ಭೂ ಕುಸಿತಗಳು ಸಂಭವಿಸಿವೆ. ಒಂದು ಭಯಾನಕ ಘಟನೆಯಲ್ಲಿ ರಸ್ತೆಯಲ್ಲಿ ಸಾಗುತ್ತಿದ್ದ ಕಾರೊಂದು ಏಕಾಏಕಿ ಸುರಿದ ಮಳೆಯಿಂದಾಗಿ ಉಂಟಾದ ಭಾರೀ ಪ್ರವಾಹದಲ್ಲಿ ಕೊಚ್ಚಿ ಹೋಗಿತ್ತು. ಆ ಕಾರಿನಲ್ಲಿದ್ದ ಪ್ರಯಾಣಿಕರು ಪ್ರಾಣದ ಮೇಲಿನ ಆಸೆಯನ್ನು ಬಿಟ್ಟಾಗಿತ್ತು. ಭೂಕುಸಿತದಿಂದ ಕೊರೆದುಹೋಗಿದ್ದ ಜಾಗದಲ್ಲಿನ ಬಂಡೆಗಳ ನಡುವೆ ಆ … Continued

ಕೊಡ್ಲಗದ್ದೆ: ಪೌಷ್ಟಿಕ ಆಹಾರ ಮೇಳ

ಅಂಕೋಲಾ: ಅಂಕೋಲಾ ತಾಲೂಕಿನ ಕೊಡ್ಲಗದ್ದೆ ಗ್ರಾಮದ ಗ್ರಾಮ ಅರಣ್ಯ ಸಮಿತಿ ಸಭಾಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಕೊಡ್ಲಗದ್ದೆ ಜ್ಞಾನೋದಯ ಜ್ಞಾನ ವಿಕಾಸ ಸಂಘದವರಿಂದ ಪೌಷ್ಟಿಕ ಆಹಾರ ಮೇಳ ಸೋಮವಾರ (ಅಕ್ಟೋಬರ್‌ 18) ನಡೆಯಿತು. ಸುಂಕಸಾಳದ ಗ್ರಾಮ ಪಂಚಾಯಿತಿ ಸದಸ್ಯ ನಾಗರಾಜ ಹೆಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಪೌಷ್ಟಿಕ ಆಹಾರಗಳ ಕುರಿತು ಮಾಹಿತಿ … Continued

ಫಿಲಿಪೈನ್ಸ್​ನಲ್ಲಿ ಕುಖ್ಯಾತ ಗ್ಯಾಂಗ್​ಸ್ಟರ್ ಸುರೇಶ್ ಪೂಜಾರಿ ಬಂಧನ

ಫಿಲಿಪೈನ್ಸ್​ನಲ್ಲಿ ಕುಖ್ಯಾತ ಗ್ಯಾಂಗ್​ಸ್ಟರ್ ಸುರೇಶ್ ಪೂಜಾರಿಯನ್ನು ಬಂಧಿಸಲಾಗಿದೆ. ಮಂಗಳೂರು ಮೂಲದ ಸುರೇಶ್ ಪೂಜಾರಿ, ಭೂಗತ ಪಾತಕಿ ಛೋಟಾ ರಾಜನ್ ಹಾಗೂ ರವಿ ಪೂಜಾರಿ ಸಹಚರನಾಗಿದ್ದ. ನಂತರ ತನ್ನದೇ ಗ್ಯಾಂಗ್ ನಡೆಸುತ್ತಿದ್ದ. ಬೆಂಗಳೂರಿನ ಕೆಲವು ಪ್ರಣಗಳಲ್ಲಿಯೂ ಸುರೇಶ್ ಪೂಜಾರಿ ಪ್ರಮುಖ ಆರೋಪಿಯಾಗಿದ್ದಾನೆ. ಇದೀಗ ಫಿಲಿಫೈನ್ಸ್​​ನಲ್ಲಿ ಇಂಟರ್​ಪೋಲ್ ಪೊಲೀಸರು ಈತನನ್ನು ಬಂಧಿಸಲಾಗಿದೆ ಎಂದು ಖಾಸಗಿ ವಾಹಿನಿಯೊಂದು ವರದಿ ಪ್ರಸಾರ … Continued

ಅಯೋಧ್ಯೆಗೆ ಉಚಿತ ವಿಮಾನ ಪ್ರಯಾಣ ಬೇಕೇ? ಮಧ್ಯಪ್ರದೇಶ ಸರ್ಕಾರದ ರಾಮಾಯಣ ರಸಪ್ರಶ್ನೆಯಲ್ಲಿ ಭಾಗವಹಿಸಿ

ಭೋಪಾಲ್​: ರಾಮ ಜನ್ಮ ಭೂಮಿ ಅಯೋಧ್ಯೆಗೆ ಹೋಗಬೇಕು ಜೀವನದಲ್ಲಿ ಒಮ್ಮೆಯಾದರೂ ಎಂಬ ಮನದಾಸೆ ಹಲವರಿಗೆ ಇರುತ್ತದೆ. ಇದಕ್ಕೆ ಅವಕಾಶ ನೀಡಲು ಈಗ ಮಧ್ಯಪ್ರದೇಶದ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರಮುಂದಾಗಿದೆ. ಅಯೋಧ್ಯೆಗೆ ವಿಮಾನದಲ್ಲಿ ಉಚಿತ ಪ್ರಯಾಣ ಮಾಡಲು ಅದು ಅವಕಾಶ ನೀಡಿದೆ. ಹೀಗೆ ಹೋಗಲು ಅದು ಏಪಡಿಸಿರುವ ‘ರಾಮಾಯಣ’ ಕುರಿತು ಸಾಮಾನ್ಯ ಜ್ಞಾನ ರಸಪ್ರಶ್ನೆ ಸ್ಫರ್ಧೆಯಲ್ಲಿ ವಿಜೇತರಾಗಬೇಕು. … Continued

ದೇವಭೂಮಿ ಉತ್ತರಾಖಂಡದಲ್ಲಿ ಮೇಘಸ್ಫೋಟ : 17 ಮಂದಿ ಸಾವು, 20 ಮಂದಿ ನಾಪತ್ತೆ

ಡೆಹ್ರಾಡೂನ್: ಉತ್ತರಾಖಂಡದಲ್ಲಿ ಮಳೆ-ಸಂಬಂಧಿತ ಘಟನೆಗಳಲ್ಲಿ ಸಾವಿನ ಸಂಖ್ಯೆ 17 ಕ್ಕೆ ಏರಿದೆ. ಕೋಮಿ ನದಿಯಿಂದ ನೀರು ತುಂಬಿ ಹರಿಯುತ್ತಿದ್ದಂತೆ ರಾಮನಗರ-ರಾಣಿಖೇತ್ ಮಾರ್ಗದಲ್ಲಿರುವ ನಿಂಬೆ ಮರದ ರೆಸಾರ್ಟ್‌ನಲ್ಲಿ ಸುಮಾರು 100 ಜನರು ಸಿಲುಕಿಕೊಂಡಿದ್ದಾರೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ನೈನಿ ಸರೋವರದ ನೀರುಉಕ್ಕಿ ಐಕಾನ್ ಮಾಲ್ ರಸ್ತೆಯನ್ನು ತುಂಬಿ ಹರಿಯಿತು. ಪ್ರ ಭಾನುವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ಹಿಮಾಲಯ ರಾಜ್ಯದ … Continued

ರಜೌರಿ: 6 ಎಲ್‌ಇಟಿ ಭಯೋತ್ಪಾದಕರ ಹೊಡೆದುರುಳಿಸಿದ ಭಾರತೀಯ ಸೇನೆ

ರಜೌರಿ : 16 ಕಾರ್ಪ್ಸ್ ಪಡೆಗಳು ರಜೌರಿ ಸೆಕ್ಟರಿನ ದಟ್ಟ ಕಾಡಿನಲ್ಲಿ ನಡೆಯುತ್ತಿರುವ ಎನ್ ಕೌಂಟರ್ನಲ್ಲಿ(encounter) ಪಾಕಿಸ್ತಾನ ಮೂಲದ ಲಷ್ಕರ-ಎ-ತೊಯ್ಬಾ (Lashkar e Toiba)ಕ್ಕೆ ಸೇರಿದ ಆರು ಭಯೋತ್ಪಾದಕರನ್ನು ಭಾರತೀಯ ಸೇನೆ ಗುಂಡಿಕ್ಕಿ ಕೊಂದಿದೆ. ಉಳಿದ ಮೂರರಿಂದ ನಾಲ್ಕು ಇಸ್ಲಾಮಿಕ್ ಜಿಹಾದಿಗಳಿಗಾಗಿ ಶೋಧ ನಡೆದಿದೆ. ರಜೌರಿ ಕಾಡಿನಲ್ಲಿ ಭಯೋತ್ಪಾದಕರನ್ನು ಹಿಡಿಯುವ ಪ್ರಯತ್ನದಲ್ಲಿ ಭಾರತೀಯ ಸೇನೆ ಒಂಬತ್ತು … Continued

ಬೆಳಗಾವಿಯಲ್ಲಿ ಅನೈತಿಕ ಪೊಲೀಸ್ ಗಿರಿ: ಪ್ರತ್ಯೇಕ ಘಟನೆಯಲ್ಲಿ ಅನ್ಯಕೋಮಿನ ಯುವಕರ ಜೊತೆ ಕಾಣಿಸಿಕೊಂಡಿದ್ದಕ್ಕೆ ಯುವತಿಯರ ಮೇಲೆ ಹಲ್ಲೆ

ಬೆಳಗಾವಿ: ಈಗ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಅನೈತಿಕ ಪೊಲೀಸ್ ಗಿರಿ ಹೆಚ್ಚುತ್ತಿದ್ದು, ಮೂರು ಪ್ರಕರಣಗಳು ಬೆಳಕಿಗೆ ಬಂದಿದೆ. ಬೆಳಗಾವಿ:ಈಗ ಬೆಳಗಾವಿಯಲ್ಲಿ ನೈತಿಕ ಪೊಲೀಸ್‌ಗಿರಿ ವರದಿಯಾಗಿದೆ. ಅನ್ಯಧರ್ಮದ ಯುವಕನ ಜೊತೆ ಯುವತಿ ಕಾಣಿಸಿಕೊಂಡಿದ್ದಕ್ಕೆ ಪುಂಡರು ಇಬ್ಬರನ್ನು ಥಳಿಸಿದ್ದಾರೆ. ಅಕ್ಟೋಬರ್ 14ರಂದು ರಾಯಭಾಗದ ಯುವಕ ಮತ್ತು ಸಂಕೇಶ್ವರದ ಯುವತಿ ಬೆಳಗಾವಿ ಬಸ್ ನಿಲ್ದಾಣಕ್ಕೆ ಬಂದಿದ್ದರು. ಬಸ್ ನಿಲ್ದಾಣದಲ್ಲಿದ್ದ ಆಟೋ … Continued

ಮಗಳು ತನ್ನ ಇಚ್ಛೆಗೆ ವಿರುದ್ಧವಾಗಿ ಮದುವೆಯಾಗಿದ್ದಕ್ಕೆ ತನ್ನ ಇಬ್ಬರು ಹೆಣ್ಣುಮಕ್ಕಳು, ಮೊಮ್ಮಕ್ಕಳು ಸೇರಿ 7 ಜನರನ್ನು ಜೀವಂತವಾಗಿ ಸುಟ್ಟು ಹಾಕಿದ ವ್ಯಕ್ತಿ..!

ಲಾಹೋರ್‌: ಮಗಳು ತನ್ನ ಇಚ್ಛೆಗೆ ವಿರುದ್ಧವಾಗಿ ವಿವಾಹವಾಗಿದ್ದಾಳೆ ಎಂಬ ಕಾರಣಕ್ಕೆ ಸ್ವತಃ ತಂದೆಯೇ ತನ್ನ ಹೆಣ್ಣುಮಕ್ಕಳಿದ್ದ ಮನೆಗೆ ಬೆಂಕಿ ಹಚ್ಚಿದ ಪರಿಣಾಮ 7 ಮಂದಿ ಸಜೀವ ದಹನವಾದ ಘಟನೆ ಆಘಾತಕಾರಿ ಘಟನೆ ಪಾಕಿಸ್ತಾನದ ಮುಜಾಫರ್​​ಗರ್​ ಜಿಲ್ಲೆಯ ಪೀರ್​ ಜಹನೈನ್​​ ಪಟ್ಟಣದಲ್ಲಿ ವರದಿಯಾಗಿದೆ. ಈ ಸಂಬಂಧ ಆರೋಪಿ ಮಂಜೂರ್​ ಹುಸೇನ್​ ವಿರುದ್ಧ ಪೊಲೀಸರು ಲುಕ್​ಔಟ್​ ನೋಟಿಸ್​ ಜಾರಿ … Continued